ಯುಎಸ್‌ಎಅಟ್ಲಾಂಟ ಕನ್ನಡಿಗರಿಂದ ಅದ್ದೂರಿಯ ಯುಗಾದಿ ಸಂಭ್ರಮಾಚರಣೆ; ಸಂಗೀತ ಪ್ರಿಯರನ್ನು...

ಅಟ್ಲಾಂಟ ಕನ್ನಡಿಗರಿಂದ ಅದ್ದೂರಿಯ ಯುಗಾದಿ ಸಂಭ್ರಮಾಚರಣೆ; ಸಂಗೀತ ಪ್ರಿಯರನ್ನು ತಲೆದೂಗುವಂತೆ ಮಾಡಿದ ರಾಜೇಶ್ ಕೃಷ್ಣನ್ ಹಾಡು

ಅಮೆರಿಕಾದ ಅಟ್ಲಾಂಟ ಕನ್ನಡಿಗರು ಮೇ 4ರಂದು ರವಿವಾರ ಅದ್ದೂರಿಯಾಗಿ ಯುಗಾದಿ ಹಾಗೂ ಕನ್ನಡ ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಿಕೊಂಡರು.

ನೃಪತುಂಗ ಕನ್ನಡ ಕೂಟದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಅವರ ಸಂಗೀತ ಸಂಜೆ ಮುಖ್ಯ ಆಕರ್ಷಣೆಯಾಗಿತ್ತು.

ಕನ್ನಡ ಶಾಲೆಯ ಶಿಕ್ಷಕರು ಮತ್ತು ಮಕ್ಕಳು

ಕಾರ್ಯಕ್ರಮದ ಒಂದು ವಾರದ ಮುಂಚೆಯೇ ಟಿಕೆಟ್ “ಸೋಲ್ಡ್ ಔಟ್” ಆಗಿದ್ದು ಕನ್ನಡಿಗರು ತಮ್ಮ ನೆಚ್ಚಿನ ಗಾಯಕನ ಹಾಡುಗಳನ್ನು ಸಂತೋಷದಿಂದ ಆನಂದಿಸಿದರು. ರಾಜೇಶ್ ಕೃಷ್ಣನ್ ತಮ್ಮ ಸುಮಧುರ ಗಾಯನ, ನಗು, ಪ್ರೀತಿಯಿಂದ ಅಭಿಮಾನಿಗಳ ಹೃದಯ ಗೆದ್ದರು. ಅಷ್ಟೇ ಅಲ್ಲದೆ ಪ್ರೋತ್ಸಾಹ ನೀಡಲು ಅಟ್ಲಾಂಟದ ಸ್ಥಳೀಯ ಪ್ರತಿಭೆಗಳನ್ನು ಸಹ ತಮ್ಮ ಜೊತೆ ಹಾಡಿಸಿ ಕನ್ನಡಿಗರ ಮನ ಗೆದ್ದರು.

ಸ್ಥಳೀಯ ಗಾಯಕರೊಂದಿಗೆ ಮನರಂಜಿಸಿದ ರಾಜೇಶ್ ಕೃಷ್ಣನ್

ಸ್ಥಳೀಯ ಪ್ರತಿಭೆಗಳಿಂದ ನೃತ್ಯ, ಗಾಯನ, ನಾಟಕಗಳನ್ನು ಆಯೋಜಿಸಲಾಗಿತ್ತು. ಕನ್ನಡ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಸ್ಥಳೀಯ ಕನ್ನಡಿಗರು ಭಾಗವಹಿಸಿ ಸಂತೋಷಪಟ್ಟರು. ಕೆ.ಆರ್.ಶ್ರೀನಾಥ್ ಅವರು ಕಾರ್ಯಕ್ರಮದಲ್ಲಿ ಕನ್ನಡ ಪ್ರಶ್ನಾವಳಿ ಕಾರ್ಯಕ್ರಮ ನಡೆಸಿಕೊಟ್ಟರು. ಕನ್ನಡ ಕೂಟ ತಂಡದವರು ಶ್ರಮವಹಿಸಿ ಇಡೀ ದಿನದ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಆಯೋಜಿಸಿ ಭರ್ಜರಿ ಭೋಜನದ ವ್ಯವಸ್ಥೆಯನ್ನು ಸಹ ಮಾಡಿದ್ದರು.

ವರದಿ: ಕೆ.ಆರ್.ಶ್ರೀನಾಥ್, ಅಟ್ಲಾಂಟ

Hot this week

Kuwait: KCWA’s annual family picnic draws over 600 attendees at Mishref Garden

Kuwait: The Kuwait Canara Welfare Association (KCWA) organised its...

ಖತರ್‌ನಲ್ಲಿ ಕರಾವಳಿ ಕನ್ನಡಿಗನ ಸಾಧನೆ; ಅಂಡರ್ 19 ಕ್ರಿಕೆಟ್ ತಂಡಕ್ಕೆ ಮಂಗಳೂರು ಮೂಲದ ಎಸ್ಸಾಮ್ ಮನ್ಸೂರ್ ಆಯ್ಕೆ

ದೋಹಾ: ಕರ್ನಾಟಕದ ಮಂಗಳೂರು ಮೂಲದ ಯುವಕ ಎಸ್ಸಾಮ್ ಮನ್ಸೂರ್, ಖತರ್ ಅಂಡರ್...

ರೊನಾಲ್ಡ್ ಮಾರ್ಟಿಸ್​ಗೆ ಶಾರ್ಜಾ ಕರ್ನಾಟಕ ಸಂಘದಿಂದ ‘ಮಯೂರ-ವಿಶ್ವಮಾನ್ಯ ಕನ್ನಡಿಗ ಅಂತಾರಾಷ್ಟ್ರೀಯ ಪ್ರಶಸ್ತಿ’ ಪ್ರದಾನ

ದುಬೈ: ದುಬೈನಲ್ಲಿ ಇರುವ ಕನ್ನಡ ಪರ ಸಂಘಟನೆಗಳಲ್ಲಿ ಅರ್ಥಪೂರ್ಣ ಕಾರ್ಯಕ್ರಮ ಮಾಡುವುದರಲ್ಲಿ...

ಖತರ್‌ನಲ್ಲಿ ಕರ್ನಾಟಕ ರಾಜ್ಯೋತ್ಸವ – ರಜತ ಸಂಭ್ರಮ ಸಮಾರೋಪ: ಗಲ್ಫ್ ನಾಡಿನಲ್ಲಿ ಗಂಧದ ನಾಡಿನ ವೈಭವ

ದೋಹಾ(ಖತರ್‌): ಕರ್ನಾಟಕ ಸಂಘ ಖತರ್‌ (KSQ)ನ ಕರ್ನಾಟಕ ರಾಜ್ಯೋತ್ಸವ – ರಜತ...

ದುಬೈ: ಕನ್ನಡಿಗರ ಕೂಟದಿಂದ ʼಕನ್ನಡ ರಾಜ್ಯೋತ್ಸವ 2025ʼ ಭವ್ಯ ಸಂಭ್ರಮ

ದುಬೈ: ಕನ್ನಡಿಗರ ಕೂಟ – ದುಬೈ ಮತ್ತು ಗಲ್ಫ್ ಕನ್ನಡ ಮೂವೀಸ್...

Related Articles

Popular Categories