ಯುಎಇಸೆಪ್ಟೆಂಬರ್ 21ರಂದು ಕೆಸಿಎಫ್ ದುಬೈ ಸೌತ್ ಝೋನ್ ಆಶ್ರಯದಲ್ಲಿ...

ಸೆಪ್ಟೆಂಬರ್ 21ರಂದು ಕೆಸಿಎಫ್ ದುಬೈ ಸೌತ್ ಝೋನ್ ಆಶ್ರಯದಲ್ಲಿ ‘ಗ್ರ್ಯಾಂಡ್ ಮೀಲಾದ್ ಕಾನ್ಫರೆನ್ಸ್’; ಸ್ವಾಗತ ಸಮಿತಿ ರಚನೆ

ದುಬೈ: ಕೆಸಿಎಫ್ ದುಬೈ ಸೌತ್ ಝೋನ್ ಪ್ರತಿ ವರ್ಷವೂ ನಡೆಸುವ ಗ್ರ್ಯಾಂಡ್ ಮೀಲಾದ್ ಕಾನ್ಫರೆನ್ಸ್ ನ 2025ನೇ ಸಾಲಿನ ಕಾರ್ಯಕ್ರಮದ ಸ್ವಾಗತ ಸಮಿತಿಯ ರಚನೆಯು ದುಬೈ ಬಿಸಿನೆಸ್ ಬೇಯಲ್ಲಿರುವ ಬೇ ಬೈಟ್ಸ್ ಹೋಟೇಲಲ್ಲಿ ರವಿವಾರದಂದು ನಡೆಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಇಬ್ರಾಹಿಂ ಸಖಾಫಿ ಅವರು, ಪ್ರವಾದಿ (ಸ.ಅ) ರವರ 1500ನೇ ಜನ್ಮ ದಿನಾಚರಣೆಯನ್ನು ದುಬೈ ಸೌತ್ ಝೋನ್ ಈ ಬಾರಿ ವಿಜೃಂಭಣೆಯಿಂದ ಆಚರಿಸಲಿದೆ. ಪ್ರವಾದಿ ಕೀರ್ತನೆಗಳು ಮತ್ತು ಮದ್ಹ್ ಪ್ರಭಾಷಣಗಳನ್ನೊಳಗೊಂಡ ಪ್ರಸ್ತುತ ಗ್ರ್ಯಾಂಡ್ ಮಿಲಾದ್ ಕಾನ್ಫರೆನ್ಸ್-2025, ಸೆಪ್ಟೆಂಬರ್ 21 ರವಿವಾರ ದುಬೈ ಊದ್ ಮೇತ ಪಾಕಿಸ್ತಾನ್ ಅಸೋಸಿಯೇಷನ್ ಸಭಾಂಗಣದಲ್ಲಿ ನಡೆಯಲಿದ್ದು, ಕಾರ್ಯಕ್ರಮದ ಯಶಸ್ವಿಗಾಗಿ ಎಲ್ಲರೂ ಕೈಜೊಡಿಸಬೇಕೆಂದು ಮನವಿ ಮಾಡಿದರು.

ಸ್ವಾಗತ ಸಮಿತಿಯ ಚೇರ್ಮ್ಯಾನ್ ಆಗಿ ಇಕ್ಬಾಲ್ ಸಿದ್ದಕಟ್ಟೆ, ವರ್ಕಿಂಗ್ ಚೇರ್ಮ್ಯಾನ್ ನಝೀರ್ ಹಾಜಿ ಕೆಮ್ಮಾರ, ಕನ್ವೀನರ್ ರಜಬ್ ಉಚ್ಚಿಲ, ವರ್ಕಿಂಗ್ ಕನ್ವೀನರ್ ಆಸಿಫ್ ಇಂದ್ರಾಜೆ, ಫಿನಾನ್ಶ್ಯಲ್ ಚೇರ್ಮ್ಯಾನ್ ಇಲ್ಯಾಸ್ ಮೂಳೂರು, ಫಿನಾನ್ಸ್ ಕನ್ವೀನರ್ ರವೂಫ್ ಸಾಗರ, ಅಶ್ಫಾಕ್ ಕೊಡಗು ಹಾಗೂ ಖಾದರ್ ಕಯ್ಯೂರು ಸೇರದಂತೆ ವಿವಿಧ ಸಮಿತಿಗಳಿಗೆ ಪದಾಧಿಕಾರಿಗಳನ್ನು ನೇಮಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಕೆಸಿಎಫ್ ದುಬೈ ಸೌತ್ ಝೊನ್ ಅಧ್ಯಕ್ಷ ಇಲ್ಯಾಸ್ ಮದನಿ ಬರ್ಷಾ ವಹಿಸಿದ್ದರು. ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಶಿಕ್ಷಣ ವಿಭಾಗದ ಅಧ್ಯಕ್ಷ ಶಾಹುಲ್ ಹಮೀದ್ ಸಖಾಫಿ ಉದ್ಘಾಟಿಸಿದರು. ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಕೆಸಿಎಫ್ ಸಂಘಟನಾ ನಾಯಕರಾದ ರಜಬ್ ಉಚ್ಚಿಲ, ಹಮೀದ್ ಹಾಜಿ ಸ್ಟಾರ್ ಲಿಂಕ್, ಇಲ್ಯಾಸ್ ಮೂಳೂರು, ರವೂಫ್ ಸಾಗರ, ನವಾಝ್ ಹಾಜಿ ಕೋಟೆಕಾರ್, ನಝೀರ್ ಹಾಜಿ, ಇಕ್ಬಾಲ್ ಹಾಜಿ ಸಿದ್ದಕಟ್ಟೆ ಸೇರಿದಂತೆ ಝೋನ್, ಸೆಕ್ಟರ್ ಹಾಗೂ ಶಾಖೆಯ ನಾಯಕರು ಭಾಗವಹಿಸಿದ್ದರು. ಝೋನ್ ಕಾರ್ಯದರ್ಶಿ ಮನ್ಸೂರ್ ಹರೇಕಳ ಸ್ವಾಗತಿಸಿದರು, ರಫೀಕ್ ಕಲ್ಲಡ್ಕ ವಂದಿಸಿದರು. ಅಝೀಝ್ ಅಹ್ಸನಿ ಕಾರ್ಯಕ್ರಮ‌ವನ್ನು ನಿರೂಪಿಸಿದರು.

Hot this week

ಬಹರೈನ್; ಆಗಸ್ಟ್ 21ರಂದು ‘ಕೆಸಿಎಫ್’ನಿಂದ ಗ್ರ್ಯಾಂಡ್ ಮೀಲಾದ್ ಕಾನ್ಫರೆನ್ಸ್

ಮನಾಮ: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಬಹರೈನ್ ರಾಷ್ಟ್ರೀಯ ಸಮಿತಿಯ ವತಿಯಿಂದ...

ಭಾರತೀಯ ರಾಯಭಾರ ಕಚೇರಿಯ ಡಾ.ಈಶ್ ಸಿಂಘಾಲ್​​ಗೆ ಭಾವಪೂರ್ಣ ಬೀಳ್ಕೊಡುಗೆ; ಕರ್ನಾಟಕ ಸಂಘ ಖತರ್‌ನಿಂದ ಅಭಿನಂದನೆ

ದೋಹಾ(ಖತರ್): ಖತರ್‌ನಲ್ಲಿ ತಮ್ಮ ಸೇವಾವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಭಾರತೀಯ ರಾಯಭಾರ ಕಚೇರಿಯ...

ವಂದೇ ಮಾತರಂ ಮತ್ತು ಜನಗಣಮನ ಗೀತೆಯೊಂದಿಗೆ ಅಮೇರಿಕದಲ್ಲಿ ಗೃಹಪ್ರವೇಶ

ವರದಿ: ಬೆಂಕಿ ಬಸಣ್ಣ, ನ್ಯೂಯಾರ್ಕ್ 1875ರಲ್ಲಿ ಭಾರತದಲ್ಲಿ ಮೊಳಗಿದ ‘ವಂದೇ ಮಾತರಂ’ 150...

ದುಬೈ; ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ಸಾಮಾಜಿಕ ಸಮ್ಮಿಲನ ಕಾರ್ಯಕ್ರಮ

ದುಬೈ: ಪರಿಸರ ಸಂರಕ್ಷಣೆ, ಸಾಮಾಜಿಕ ಜಾಗೃತಿ ಹಾಗೂ ಸಮಾಜಮುಖಿ ಕಾರ್ಯಗಳಿಗೆ ಬದ್ಧವಾಗಿರುವ...

ನ್ಯೂಯಾರ್ಕ್; ಆಲ್ಬನಿಯಲ್ಲಿ ಸಂಭ್ರಮದ ಕನ್ನಡ ಕಲಿ ಪದವಿ ಪ್ರದಾನ

ವರದಿ: ಬೆಂಕಿ ಬಸಣ್ಣ, ನ್ಯೂಯಾರ್ಕ್ ಆಲ್ಬನಿ(ನ್ಯೂಯಾರ್ಕ್): ಅಮೇರಿಕದಲ್ಲಿ ಹುಟ್ಟಿ ಬೆಳೆಯುತ್ತಿರುವ ಮಕ್ಕಳಿಗೆ ಕನ್ನಡ...

Related Articles

Popular Categories