ಯುಎಸ್‌ಎಅಟ್ಲಾಂಟ ಕನ್ನಡಿಗರಿಂದ ಸಂಭ್ರಮದ ಸಂಕ್ರಾಂತಿ ಕಾರ್ಯಕ್ರಮ

ಅಟ್ಲಾಂಟ ಕನ್ನಡಿಗರಿಂದ ಸಂಭ್ರಮದ ಸಂಕ್ರಾಂತಿ ಕಾರ್ಯಕ್ರಮ

ಅಟ್ಲಾಂಟ: ಅಟ್ಲಾಂಟಾದ ಕನ್ನಡಿಗರ ನೃಪತುಂಗ ಕನ್ನಡ ಕೂಟ ಆಯೋಜಿಸಿದ್ದ ಸಂಕ್ರಾಂತಿ ಹಬ್ಬದ ಕಾರ್ಯಕ್ರಮಗಳು ಫೆ. 8 ಶನಿವಾರ ಜಾರ್ಜಿಯಾದ ಅಟ್ಲಾಂಟಾದಲ್ಲಿ ನಡೆಯಿತು.    

ರಂಗೋಲಿ ಸ್ಪರ್ಧೆ, ಚಿಣ್ಣರಿಂದ ಚಿತ್ರ ಬಿಡಿಸುವ ಸ್ಪರ್ಧೆ, ಚೆಸ್ ಸ್ಪರ್ಧೆ, ಪ್ರಶ್ನಾವಳಿ ಸ್ಪರ್ಧೆ, ಅಂತಾಕ್ಷರಿ, ಗಾಯನ, ನೃತ್ಯ ಹೀಗೆ ಹಲವು ಸ್ಪರ್ಧೆಗಳಿದ್ದವು.

ಕರ್ನಾಟಕದಿಂದ ಬಂದಿದ್ದ ರಾಘವೇಂದ್ರ ಆಚಾರ್ಯ ಅವರ ಸ್ಟ್ಯಾಂಡ್ ಅಪ್ ಕಾಮೆಡಿ ಹಾಗೂ ಅಟ್ಲಾಂಟದ ಕನ್ನಡತಿ ಮಹಿಮಾ ಹೊಳ್ಳ ಅವರು ಅದ್ಭುತ ಭರತನಾಟ್ಯ ಪ್ರದರ್ಶನ ನಡೆಯಿತು.  

ಇದೇ ಸಂದರ್ಭದಲ್ಲಿ ಅಟ್ಲಾಂಟ ನಗರದ ವಿವಿಧ ಭಾಗದಲ್ಲಿ ಸ್ವಯಂ ಸೇವಾ ಮನೋಭಾವದಿಂದ ವಾರಾಂತ್ಯದಲ್ಲಿ ಮಕ್ಕಳಿಗೆ ಕನ್ನಡ ಕಲಿಸುವ ಸುಮಾರು 10 ಕನ್ನಡ ಶಾಲೆಗಳನ್ನು ನಡೆಸುವ ಎಲ್ಲಾ ಶಿಕ್ಷಕರನ್ನೂ ಗೌರವಿಸಲಾಯಿತು.

ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದ ಕನ್ನಡ ಕೂಟ ತಂಡದಿಂದ ಉತ್ತಮ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

Hot this week

ನ್ಯೂಯಾರ್ಕ್ ಮೇಯರ್ ಆಗಿ ಭಾರತೀಯ ಮೂಲದ ಝೊಹ್ರಾನ್ ಮಮ್ದಾನಿ ಆಯ್ಕೆ ಸಂಭವ; ಗೆದ್ದರೆ, ಹಲವು ಇತಿಹಾಸ ಸೃಷ್ಟಿ!

ಜೂನ್ 24 ರಂದು ನಡೆದ ನ್ಯೂಯಾರ್ಕ್ ಮೇಯರ್ ಹುದ್ದೆಗೆ ಪಕ್ಷಗಳ ಅಭ್ಯರ್ಥಿಯ...

ಗಲ್ಫ್‌ನಲ್ಲಿ ಮತ್ತೆ ಕವಿದ ಯುದ್ಧದ ಕಾರ್ಮೋಡ; ವಲಸಿಗರನ್ನು ಕಾಡುತ್ತಿವೆ 1991ರ ಕೊಲ್ಲಿ ಯುದ್ಧದ ಕಹಿ ನೆನಪುಗಳು…!

ಇರಾನ್-ಇಸ್ರೇಲ್ ದಾಳಿಯಲ್ಲಿ ಅಮೇರಿಕ ನೇರವಾಗಿ ಭಾಗವಹಿಸುತ್ತಿರುವುದರಿಂದ , ಅಮೇರಿಕದ ಮಿತ್ರ ರಾಷ್ಟ್ರಗಳಾದ...

ಜೂನ್ 29ರಂದು ಯುಎಇ ಯಕ್ಷಗಾನ ಅಭ್ಯಾಸ ಕೇಂದ್ರದ ದಶಮಾನೋತ್ಸವ: 7 ಮಂದಿ ಸಾಧಕರಿಗೆ-ಮೂರು ಸಾಧಕ ಸಂಸ್ಥೆಗಳಿಗೆ ಸನ್ಮಾನ

ದುಬೈ:ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಇದರ ದಶಮಾನೋತ್ಸವ ಕಾರ್ಯಕ್ರಮವು ಜೂನ್ 29ರಂದು...

ದುಬೈಯ ಕರಾನಿ ಇಂಟೀರಿಯರ್’ನಲ್ಲಿ ಕಾರ್ಮಿಕ ಜಾಗೃತಿ ಅಭಿಯಾನ

ದುಬೈ: ದುಬೈಯ ಭಾರತೀಯ ರಾಯಭಾರಿ ಕಚೇರಿ ಮತ್ತು ಏಮ್ ಇಂಡಿಯಾ ಫೋರಂ...

Related Articles

Popular Categories