ಯುಎಸ್‌ಎಅಟ್ಲಾಂಟ ಕನ್ನಡಿಗರಿಂದ ಸಂಭ್ರಮದ ಸಂಕ್ರಾಂತಿ ಕಾರ್ಯಕ್ರಮ

ಅಟ್ಲಾಂಟ ಕನ್ನಡಿಗರಿಂದ ಸಂಭ್ರಮದ ಸಂಕ್ರಾಂತಿ ಕಾರ್ಯಕ್ರಮ

ಅಟ್ಲಾಂಟ: ಅಟ್ಲಾಂಟಾದ ಕನ್ನಡಿಗರ ನೃಪತುಂಗ ಕನ್ನಡ ಕೂಟ ಆಯೋಜಿಸಿದ್ದ ಸಂಕ್ರಾಂತಿ ಹಬ್ಬದ ಕಾರ್ಯಕ್ರಮಗಳು ಫೆ. 8 ಶನಿವಾರ ಜಾರ್ಜಿಯಾದ ಅಟ್ಲಾಂಟಾದಲ್ಲಿ ನಡೆಯಿತು.    

ರಂಗೋಲಿ ಸ್ಪರ್ಧೆ, ಚಿಣ್ಣರಿಂದ ಚಿತ್ರ ಬಿಡಿಸುವ ಸ್ಪರ್ಧೆ, ಚೆಸ್ ಸ್ಪರ್ಧೆ, ಪ್ರಶ್ನಾವಳಿ ಸ್ಪರ್ಧೆ, ಅಂತಾಕ್ಷರಿ, ಗಾಯನ, ನೃತ್ಯ ಹೀಗೆ ಹಲವು ಸ್ಪರ್ಧೆಗಳಿದ್ದವು.

ಕರ್ನಾಟಕದಿಂದ ಬಂದಿದ್ದ ರಾಘವೇಂದ್ರ ಆಚಾರ್ಯ ಅವರ ಸ್ಟ್ಯಾಂಡ್ ಅಪ್ ಕಾಮೆಡಿ ಹಾಗೂ ಅಟ್ಲಾಂಟದ ಕನ್ನಡತಿ ಮಹಿಮಾ ಹೊಳ್ಳ ಅವರು ಅದ್ಭುತ ಭರತನಾಟ್ಯ ಪ್ರದರ್ಶನ ನಡೆಯಿತು.  

ಇದೇ ಸಂದರ್ಭದಲ್ಲಿ ಅಟ್ಲಾಂಟ ನಗರದ ವಿವಿಧ ಭಾಗದಲ್ಲಿ ಸ್ವಯಂ ಸೇವಾ ಮನೋಭಾವದಿಂದ ವಾರಾಂತ್ಯದಲ್ಲಿ ಮಕ್ಕಳಿಗೆ ಕನ್ನಡ ಕಲಿಸುವ ಸುಮಾರು 10 ಕನ್ನಡ ಶಾಲೆಗಳನ್ನು ನಡೆಸುವ ಎಲ್ಲಾ ಶಿಕ್ಷಕರನ್ನೂ ಗೌರವಿಸಲಾಯಿತು.

ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದ ಕನ್ನಡ ಕೂಟ ತಂಡದಿಂದ ಉತ್ತಮ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

Hot this week

ದುಬೈ; ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ ನಲ್ಲಿ ಓಣಂ ಹಬ್ಬ ಆಚರಣೆ

ದುಬೈ : ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಅವರ ಫಾರ್ಚೂನ್ ಗ್ರೂಪ್...

ಕನ್ನಡಿಗರ ಕೂಟ ದುಬೈ ವತಿಯಿಂದ ಮಾಜಿ ಕ್ರಿಕೆಟಿಗ ಬ್ರಿಜೇಶ್ ಪಟೇಲ್‌ಗೆ ಸನ್ಮಾನ

ಬೆಂಗಳೂರು: ಕನ್ನಡಿಗರ ಕೂಟ, ದುಬೈ ತಂಡವು ಮಾಜಿ ಭಾರತೀಯ ಕ್ರಿಕೆಟಿಗ ಹಾಗೂ...

ಫ್ಲೋರಿಡಾ ತುಳು ಕೂಟದ 2ನೇ ವಾರ್ಷಿಕ ಪೊಟ್ಲಕ್ ಪಿಕ್ನಿಕ್ ಸಂಭ್ರಮ

ಅಮೇರಿಕದ ಫ್ಲೋರಿಡಾ ತುಳು ಕೂಟವು ಇತ್ತೀಚೆಗೆ ಕ್ಯಾಸೆಲ್‌ಬೆರ್ರಿ ಒರ್ಲಾಂಡೊದಲ್ಲಿ ತನ್ನ ಎರಡನೇ...

ಭಾರತದ ನೂತನ ಕಾನ್ಸುಲ್ ಜನರಲ್ ಡಾ.ವಿಷ್ಣುವರ್ಧನ ರೆಡ್ಡಿಗೆ ಕನ್ನಡಿಗರ ಕೂಟ ದುಬೈಯಿಂದ ಸ್ವಾಗತ

ದುಬೈ: ಯುಎಇಯ ಪ್ರತಿಷ್ಠಿತ ಕನ್ನಡ ಸಂಘಟನೆಗಳಲ್ಲಿ ಒಂದಾಗಿರುವ ಕನ್ನಡಿಗರ ಕೂಟ, ದುಬೈ...

Related Articles

Popular Categories