ಯುಎಇದುಬೈ ಕಾನ್ಸುಲ್ ಜನರಲ್ ಆಫ್ ಇಂಡಿಯಾ ಆಶ್ರಯದಲ್ಲಿ ಶಾರ್ಜಾದ...

ದುಬೈ ಕಾನ್ಸುಲ್ ಜನರಲ್ ಆಫ್ ಇಂಡಿಯಾ ಆಶ್ರಯದಲ್ಲಿ ಶಾರ್ಜಾದ ಪ್ಯಾನ್ ಗಲ್ಫ್ ಲೇಬರ್ ಕ್ಯಾಂಪ್‌ನಲ್ಲಿ ಆರೋಗ್ಯ-ಹಣಕಾಸು ಅರಿವು ಕುರಿತ ಜಾಗೃತಿ ಶಿಬಿರ

ದುಬೈ: ಇಲ್ಲಿನ ಕಾನ್ಸುಲ್ ಜನರಲ್ ಆಫ್ ಇಂಡಿಯಾ ಹಾಗು ಉತ್ತರ ಎಮಿರೇಟ್ಸ್‌, ಏಕತಾ (Unity) ಸಹಭಾಗಿತ್ವದಲ್ಲಿ ಏಮ್ ಇಂಡಿಯಾ ಫೋರಂ ಅವರ ಸಹಯೋಗದಲ್ಲಿ ಶಾರ್ಜಾದ ಪ್ಯಾನ್ ಗಲ್ಫ್ ಲೇಬರ್ ಕ್ಯಾಂಪ್‌ನಲ್ಲಿ ಆರೋಗ್ಯ ಮತ್ತು ಹಣಕಾಸು ಅರಿವು ಕುರಿತ ಜಾಗೃತಿ ಶಿಬಿರವನ್ನು ರವಿವಾರ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಬ್ಲೂ ಕಾಲರ್ ಕಾರ್ಮಿಕರಿಗೆ ಆರೋಗ್ಯ ಮತ್ತು ಹಣಕಾಸು ಸಂಬಂಧಿತ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು. Aim India Forum ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶೇಕ್ ಮುಝಫರ್ ಅವರು ಮಾತನಾಡಿ, ಬ್ಲೂ ಕಾಲರ್ ಕಾರ್ಮಿಕರ ಕಲ್ಯಾಣಕ್ಕಾಗಿ ವೇದಿಕೆ ಒದಗಿಸಿದ್ದಕ್ಕಾಗಿ ಪ್ಯಾನ್ ಗಲ್ಫ್ ಇಂಟರ್‌ನ್ಯಾಷನಲ್ ಮೆಟಲ್ಸ್ ಇಂಡಸ್ಟ್ರೀಸ್ ಯುಎಇಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಅಂಶುಲ್ ಗುಪ್ತ ಅವರಿಗೆ ಮತ್ತು ಉತ್ತಮವಾಗಿ ಕಾರ್ಯಕ್ರಮವನ್ನು ಆಯೋಜಿಸಿರುವ ಅಲ್ ಖಾಸಿಮಿಯಾ ಆಸ್ಪತ್ರೆ ಶಾರ್ಜಾದ ಶಸ್ತ್ರಚಿಕಿತ್ಸಕರಾದ, ಏಕತಾ ಅಧ್ಯಕ್ಷ ಡಾ. ಸತೀಶ್ ಕೃಷ್ಣನ್ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ಇದೇ ವೇಳೆ ಯುಎಇ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್ (BCCI) ಅಧ್ಯಕ್ಷ ಹಿದಾಯತ್ ಅಡ್ಡೂರು ಅವರು ಸಿಮ್ ಕಾರ್ಡ್ ಮೋಸದ ಕುರಿತು ವಿಶೇಷ ಮಾಹಿತಿ ನೀಡಿದರು.

ಕಾರ್ಯಕ್ರಮದ ಕೊನೆಯಲ್ಲಿ ದುಬೈಯ ಡೆಪ್ಯುಟಿ ಕಾನ್ಸುಲ್ ಜನರಲ್ ಆಫ್ ಇಂಡಿಯಾ ಯತಿನ್ ಪಟೇಲ್, ಪಾಸ್‌ಪೋರ್ಟ್ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಿದರು. ಪಾಸ್‌ಪೋರ್ಟ್ ಅನ್ನು ಸಮಯಕ್ಕೆ ಸರಿಯಾಗಿ ನವೀಕರಿಸುವುದು ಮತ್ತು ಗುರುತಿನ ಪ್ರಮಾಣಪತ್ರವಾಗಿ ಪಾಸ್‌ಪೋರ್ಟ್‌ನ ಸುರಕ್ಷತೆಯ ಮಹತ್ವವನ್ನು ಉಲ್ಲೇಖಿಸಿದರು. ಬ್ಲೂ ಕಾಲರ್ ಕಾರ್ಮಿಕರ ಗುರುತನ್ನು ಬಳಸಿಕೊಂಡು ಬ್ಯಾಂಕುಗಳಿಂದ ಕಾನೂನುಬಾಹ್ಯ ಸಾಲ ಪಡೆಯಲು ಮೋಸಗಾರರು ಪ್ರಯತ್ನಿಸುವ ಬಗ್ಗೆ ಎಚ್ಚರಿಕೆ ನೀಡಿದರು ಮತ್ತು ಕಾರ್ಮಿಕರು ಈ ರೀತಿಯ ತಪ್ಪುಗಳಿಂದ ದೂರವಿರಬೇಕು ಎಂದು ತಿಳಿಸಿದರು. ಭಾರತೀಯ ಕಾನ್‌ಸ್ಯುಲೇಟ್‌ನ ಕಾರ್ಮಿಕ ಮತ್ತು ಐಸಿಡಬ್ಲ್ಯೂಎಫ್ ವಿಭಾಗದ ಉಪ ಕಾನ್‌ಸ್ಯುಲ್ ದೀಪಕ್ ಡಾಗರ್ ಈ ಜಾಗೃತಿ ಕಾರ್ಯಕ್ರಮದಲ್ಲಿ ಹಾಜರಿದ್ದರು.

Hot this week

ಬಹರೈನ್: ಯಕ್ಷಗುರು ದೀಪಕ್ ರಾವ್ ಪೇಜಾವರರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ಬಹರೈನ್: ಕಳೆದ ಒಂದು ದಶಕದಿಂದ ಬಹರೈನ್ ದ್ವೀಪರಾಷ್ಟ್ರದಲ್ಲಿ ನೆಲೆಸಿರುವ ಖ್ಯಾತ ಯಕ್ಷಗಾನ...

ನ್ಯೂಯಾರ್ಕ್ ಮೇಯರ್ ಆಗಿ ಭಾರತೀಯ ಮೂಲದ ಝೊಹ್ರಾನ್ ಮಮ್ದಾನಿ ಆಯ್ಕೆ ಸಂಭವ; ಗೆದ್ದರೆ, ಹಲವು ಇತಿಹಾಸ ಸೃಷ್ಟಿ!

ಜೂನ್ 24 ರಂದು ನಡೆದ ನ್ಯೂಯಾರ್ಕ್ ಮೇಯರ್ ಹುದ್ದೆಗೆ ಪಕ್ಷಗಳ ಅಭ್ಯರ್ಥಿಯ...

ಗಲ್ಫ್‌ನಲ್ಲಿ ಮತ್ತೆ ಕವಿದ ಯುದ್ಧದ ಕಾರ್ಮೋಡ; ವಲಸಿಗರನ್ನು ಕಾಡುತ್ತಿವೆ 1991ರ ಕೊಲ್ಲಿ ಯುದ್ಧದ ಕಹಿ ನೆನಪುಗಳು…!

ಇರಾನ್-ಇಸ್ರೇಲ್ ದಾಳಿಯಲ್ಲಿ ಅಮೇರಿಕ ನೇರವಾಗಿ ಭಾಗವಹಿಸುತ್ತಿರುವುದರಿಂದ , ಅಮೇರಿಕದ ಮಿತ್ರ ರಾಷ್ಟ್ರಗಳಾದ...

ಜೂನ್ 29ರಂದು ಯುಎಇ ಯಕ್ಷಗಾನ ಅಭ್ಯಾಸ ಕೇಂದ್ರದ ದಶಮಾನೋತ್ಸವ: 7 ಮಂದಿ ಸಾಧಕರಿಗೆ-ಮೂರು ಸಾಧಕ ಸಂಸ್ಥೆಗಳಿಗೆ ಸನ್ಮಾನ

ದುಬೈ:ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಇದರ ದಶಮಾನೋತ್ಸವ ಕಾರ್ಯಕ್ರಮವು ಜೂನ್ 29ರಂದು...

Related Articles

Popular Categories