ಬಹರೈನ್ಬಹರೈನ್ ಕನ್ನಡ ಸಂಘದ ಸಕ್ರಿಯ ಸದಸ್ಯ ಯಕ್ಷಿತ್ ಶೆಟ್ಟಿಗೆ...

ಬಹರೈನ್ ಕನ್ನಡ ಸಂಘದ ಸಕ್ರಿಯ ಸದಸ್ಯ ಯಕ್ಷಿತ್ ಶೆಟ್ಟಿಗೆ ಬೀಳ್ಕೊಡುಗೆ-ಸನ್ಮಾನ ಸಮಾರಂಭ

ಬಹರೈನ್‌: ಕನ್ನಡ ಸಂಘ ಬಹರೈನ್ ವತಿಯಿಂದ ಸಂಘದ ಸಕ್ರಿಯ ಸದಸ್ಯರಾದ ಯಕ್ಷಿತ್ ಶೆಟ್ಟಿ ಅವರ ಬೀಳ್ಕೊಡುಗೆ ಮತ್ತು ಸನ್ಮಾನ ಸಮಾರಂಭವನ್ನು ಬುಧವಾರದಂದು ಕನ್ನಡ ಭವನದ ಡಾ.ರೊನಾಲ್ಡ್ ಕೊಲಾಸೋ ಲೌಂಜ್ ನಲ್ಲಿ ಆಯೋಜಿಸಲಾಯಿತು.

ಕನ್ನಡ ಸಂಘ ಬಹರೈನ್‌ನ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಸಂಘಟನಾ ಚಟುವಟಿಕೆಗಳಲ್ಲಿ ಯಕ್ಷಿತ್ ಶೆಟ್ಟಿ ಅವರು ನೀಡಿದ ಅಮೂಲ್ಯ ಸೇವೆ, ಸಮರ್ಪಣೆ ಹಾಗೂ ಸಕ್ರಿಯ ಭಾಗವಹಿಸುವಿಕೆಯನ್ನು ಗುರುತಿಸಿ ಈ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಕನ್ನಡ ಸಂಘ ಬಹರೈನ್ ಅಧ್ಯಕ್ಷ ಅಜಿತ್ ಬಂಗೇರ ಹಾಗೂ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು ಯಕ್ಷಿತ್ ಶೆಟ್ಟಿ ಅವರಿಗೆ ಹಾರ, ಶಾಲು, ಸ್ಮರಣಿಕೆಯಿಂದ ಕೃತಜ್ಞತೆಯ ಸಂಕೇತವಾಗಿ ಗೌರವ ಸಲ್ಲಿಸಿದರು.

ಸಮಾರಂಭದಲ್ಲಿ ಮಾತನಾಡಿದ ಅಧ್ಯಕ್ಷ ಅಜಿತ್ ಬಂಗೇರ, ಪದಾಧಿಕಾರಿಗಳು ಮತ್ತು ಸದಸ್ಯರು, ಸಂಘದ ಅಭಿವೃದ್ಧಿಗೆ ಅವರ ಕೊಡುಗೆಯನ್ನು ಸ್ಮರಿಸಿ, ಅವರ ಸೇವಾಭಾವನೆ ಹಾಗೂ ಬದ್ಧತೆಯನ್ನು ಶ್ಲಾಘಿಸಿದರು. ಹಾಜರಿದ್ದ ಸದಸ್ಯರು ಯಕ್ಷಿತ್ ಶೆಟ್ಟಿ ಅವರ ಮುಂದಿನ ವೃತ್ತಿಜೀವನ ಮತ್ತು ವೈಯಕ್ತಿಕ ಜೀವನಕ್ಕೆ ಹಾರ್ದಿಕ ಶುಭಾಶಯಗಳನ್ನು ಕೋರಿದರು.

ವರದಿ: ಕಮಲಾಕ್ಷ ಅಮೀನ್

Hot this week

ಯುಎಇಯಾದ್ಯಂತ ಗುಡುಗು, ಮಿಂಚು ಸಹಿತ ಭಾರೀ ಮಳೆ-ಗಾಳಿ; ರಾಸ್ ಅಲ್ ಖೈಮಾದಲ್ಲಿ ಕೇರಳ ಮೂಲದ ಯುವಕ ಮೃತ್ಯು

ದುಬೈ: ಗುರುವಾರ ಮುಂಜಾನೆಯಿಂದ ಯುಎಇಯಾದ್ಯಂತ ಸುರಿಯುತ್ತಿರುವ ಭಾರಿ ಮಳೆ-ಗಾಳಿಗೆ ಭಾರತೀಯ ಮೂಲದ...

ಬಹರೈನ್‌ನಲ್ಲಿ ಡಿ.19ರಂದು ಉಡುಪಿ ಪ್ರಜ್ಞಾನಂ ತಂಡದಿಂದ ‘ಹೆಜ್ಜಗೊಲಿದ ಬೆಳಕು’ ನಾಟಕ ಪ್ರದರ್ಶನ

ಬಹರೈನ್: ಬಹರೈನ್‌ನ ಕನ್ನಡ ಸಂಘದ ಆಶ್ರಯದಲ್ಲಿ ಉಡುಪಿ ಪ್ರಜ್ಞಾನಂ ಟ್ರಸ್ಟ್ (ರಿ)ನಿರ್ಮಿಸಿದ...

ದುಬೈ; ಅದ್ದೂರಿಯಾಗಿ ನಡೆದ ಯುಎಇ ಬಂಟ್ಸ್‌ನ 48ನೇ ವರ್ಷದ ಕೂಡುಕಟ್ಟ್ ‘ಭಾವೈಕ್ಯ’ ಬಂಟರ ಸಮಾಗಮ

​ದುಬೈ: ಇಲ್ಲಿನ ಶೇಖ್ ಝಾಯೆದ್ ರಸ್ತೆಯಲ್ಲಿರುವ ಮಿಲೆನಿಯಂ ಪ್ಲಾಝಾ ಹೋಟೆಲ್‌ನ ಸಭಾಂಗಣದಲ್ಲಿ...

Al Qamar Moolur Family fest held in Umm Al Quwain

Umm Al Quwain: Al Qamar Moolur Family Fest 2025...

ಕಲಾದರ್ಪಣ 2025: ಕುವೈತ್ ಕನ್ನಡ ಕೂಟದ ಅದ್ದೂರಿ ರಾಜ್ಯೋತ್ಸವ; ಕರ್ನಾಟಕದ ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿಯ ಸಮ್ಮಿಲನ

ಕುವೈತ್: ಕುವೈತ್ ಕನ್ನಡ ಕೂಟ ಒಂದು ಸಾಮಾಜಿಕ-ಸಾಂಸ್ಕೃತಿಕ ಸಂಘಟನೆ, 41 ವರ್ಷಗಳಿಂದ...

Related Articles

Popular Categories