ಯುಎಇಫೆಬ್ರವರಿ 1ರಂದು ಶಾರ್ಜಾದಲ್ಲಿ 'ಮಾರ್ಗದೀಪ ಪ್ರೀಮಿಯರ್ ಲೀಗ್-4' ಕ್ರಿಕೆಟ್...

ಫೆಬ್ರವರಿ 1ರಂದು ಶಾರ್ಜಾದಲ್ಲಿ ‘ಮಾರ್ಗದೀಪ ಪ್ರೀಮಿಯರ್ ಲೀಗ್-4’ ಕ್ರಿಕೆಟ್ ಟೂರ್ನಮೆಂಟ್; ಜರ್ಸಿ ಬಿಡುಗಡೆ

ದುಬೈ: ಮಾರ್ಗದೀಪ ಸಾಂಸ್ಕೃತಿಕ ಸಮಿತಿಯ ವತಿಯಿಂದ ದಿವಂಗತ ವಸಂತ್ ಬೇಕಲ್ ಸ್ಮರಣಾರ್ಥ ನಡೆಯುವ ಮಾರ್ಗದೀಪ ಪ್ರೀಮಿಯರ್ ಲೀಗ್-4 (MPL-Season-4) ಕ್ರಿಕೆಟ್ ಟೂರ್ನಮೆಂಟ್ ನ ಜರ್ಸಿ ಬಿಡುಗಡೆ ಇತ್ತೀಚೆಗೆ ನಡೆಯಿತು.

ದುಬೈನ ಎಂ.ಎಂ.ಸಿ.ಟಿ.ಗ್ರೌಂಡ್ ನಲ್ಲಿ ನಡೆದ ಜರ್ಸಿ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಉದ್ಯಮಿ ರೋಷನ್ ಕಂಪ, ರಾಮಕ್ಷತ್ರಿಯ ಸಂಘ ಯುಎಇ ಅಧ್ಯಕ್ಷರಾದ ಈಶ್ವರ್ ಬಲ್ಕಿ, ರಕ್ಷಿತ್ ಪುತ್ತೂರು, ರೇಷ್ಮಾ ಹಾಗೂ ವೇದ, ಸಂತೋಷ್ ಶೆಟ್ಟಿ ಪೊಳಲಿ ಬಿಡುಗಡೆಗೊಳಿಸಿದರು.

ಮಹೇಶ್ ಚಂದ್ರಗಿರಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಸುಗಂಧರಾಜ ಬೇಕಲ್ ಸ್ವಾಗತಿಸಿದರು. ಸ್ಪೋರ್ಟ್ಸ್ ಕಾರ್ಯದರ್ಶಿ ಸುಬ್ರಹ್ಮಣ್ಯ ಕುದುರೆಕೋಡು ಕಾರ್ಯಕ್ರಮದ ಜವಾಬ್ದಾರಿಯನ್ನು ವಹಿಸಿದರು. ಫೆಬ್ರವರಿ 1ರಂದು ಶಾರ್ಜಾದ ಬತಾಯ ಮೈದಾನದಲ್ಲಿ ಪಂದ್ಯಾಟ ನಡೆಯಲಿದೆ.

ಬಿಡುಗಡೆ ಕಾರ್ಯಕ್ರಮವನ್ನು ಹರಿಕೋಟೆ ನಿರೂಪಿಸಿದರು. ಮಾರ್ಗದೀಪ ಸಾಂಸ್ಕೃತಿಕ ಸಮಿತಿಯ ಉಪಾಧ್ಯಕ್ಷರಾದ ಪ್ರವೀಣ್ ಉಪ್ಪೂರು, ಕಾರ್ಯದರ್ಶಿ ಸುನೀಲ್ ರಾವ್, ರಾಜೇಶ್ ರಾವ್, ಅಜೀತ್ ಕೊರಕಾಡ್ ಹಾಗೂ ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

Hot this week

Yakshagana staged in English for the first time in Europe, show held in Belgium

Brussels: Yakshagana, the traditional theatre form from coastal Karnataka,...

ದಮ್ಮಾಮ್‌ನಲ್ಲಿ ‘ಅಖ್ವಾ’ದಿಂದ ಅದ್ಧೂರಿ ‘ಫ್ಯಾಮಿಲಿ ಮುಲಾಖಾತ್’; ಸಂಭ್ರಮಿಸಿದ ಮಕ್ಕಳು, ಹಿರಿಯರು

ದಮ್ಮಾಮ್ (ಸೌದಿ ಅರೇಬಿಯಾ): ಇಲ್ಲಿನ ಮುಳೂರು ಜಮಾತ್‌ನ ಅನಿವಾಸಿ ಕನ್ನಡಿಗರ ಒಕ್ಕೂಟವಾದ...

ಅಮೇರಿಕ; ‘ಆಟಾ’ ವತಿಯಿಂದ ‘ಬಿಸು ಪರ್ಬ 2026’ ಆಚರಣೆ: ತುಳು ಲಿಪಿ ತರಗತಿಗೆ ಚಾಲನೆ

ಉತ್ತರ ಅಮೇರಿಕ: ಅಖಿಲ ಅಮೆರಿಕಾ ತುಳು ಅಸೋಸಿಯೇಷನ್ (ಆಟಾ) ವತಿಯಿಂದ ಏಪ್ರಿಲ್...

ಅಟ್ಲಾಂಟ ಕನ್ನಡಿಗರಿಂದ ಯುಗಾದಿ-ಹೊಸ ತೊಡಕು ಆಚರಣೆ

ಅಟ್ಲಾಂಟ ಕನ್ನಡಿಗರು ಯುಗಾದಿಯನ್ನು ಏಪ್ರಿಲ್ 11 ಹಾಗೂ ಹೊಸತೊಡಕು ಹಬ್ಬವನ್ನು ಏಪ್ರಿಲ್...

ಖತರ್‌ ಕರ್ನಾಟಕ ಸಂಘದ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಹೆಬ್ಬಾಗಿಲು ಅಧಿಕಾರ ಸ್ವೀಕಾರ

ದೋಹಾ(ಖತರ್):ಕರ್ನಾಟಕ ಸಂಘ ಖತರ್‌ನ 2026–2028 ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸುಬ್ರಹ್ಮಣ್ಯ ಹೆಬ್ಬಾಗಿಲು...

Related Articles

Popular Categories