ಯುಎಇದುಬೈನಲ್ಲಿ ಮೇಳೈಸಿದ 'ಅಂತಾರಾಷ್ಟ್ರೀಯ ಜಾನಪದ ಉತ್ಸವ–2025'; ಅದ್ದೂರಿಯಾಗಿ ನಡೆದ...

ದುಬೈನಲ್ಲಿ ಮೇಳೈಸಿದ ‘ಅಂತಾರಾಷ್ಟ್ರೀಯ ಜಾನಪದ ಉತ್ಸವ–2025’; ಅದ್ದೂರಿಯಾಗಿ ನಡೆದ ಕರ್ನಾಟಕ ಜಾನಪದ ಪರಿಷತ್ – ಯುಎಇ ಘಟಕ ಉದ್ಘಾಟನೆ

ದುಬೈ: ಕರ್ನಾಟಕ ಜಾನಪದ ಪರಿಷತ್ ಯುಎಇ ಘಟಕದ ವತಿಯಿಂದ ದುಬೈ ನಾದ್ ಅಲ್ ಶೀಬಾ ಜಿಮ್ಸ್ ಮಾರ್ಡನ್ ಅಕಾಡೆಮಿಯಲ್ಲಿ ಅಂತಾರಾಷ್ಟ್ರೀಯ ‘ಜಾನಪದ ಉತ್ಸವ – 2025’ ಭವ್ಯವಾಗಿ ನೆರವೇರಿತು.

ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ಅವರ ಮಾರ್ಗದರ್ಶನ ಮತ್ತು ಬೆಂಬಲದೊಂದಿಗೆ ಸ್ಥಾಪಿತವಾದ ಯುಎಇ ಘಟಕ, ರಾಜ್ಯದ ಜೀವಂತ ಜಾನಪದ ಪರಂಪರೆಯನ್ನು ಜಾಗತಿಕ ವೇದಿಕೆಯಲ್ಲಿ ಉಳಿಸಿ ಬೆಳೆಸುವ ಕನಸನ್ನು ಈ ಉತ್ಸವದ ಮೂಲಕ ಯಶಸ್ವಿಯಾಗಿ ಅನಾವರಣಗೊಳಿಸಲಾಯಿತು.

ಯುಎಇ ಘಟಕ ಉದ್ಘಾಟನೆ; ಉತ್ಸವಕ್ಕೆ ಚಾಲನೆ-ಪದಗ್ರಹಣ ಸಮಾರಂಭ
ಮೊತ್ತ ಮೊದಲಬಾರಿಗೆ ಕರ್ನಾಟಕ ಜಾನಪದ ಪರಿಷತ್ತಿನ ಘಟಕವೊಂದು ಕರ್ನಾಟಕದಿಂದ ಹೊರಗೆ ಅದೂ ವಿದೇಶದದಲ್ಲಿ ಸ್ಥಾಪನೆಗೊಂಡಿದ್ದು, ಕರ್ನಾಟಕ ಜಾನಪದ ಪರಿಷತ್ ಯುಎಇ ಘಟಕವಾಗಿದೆ. ಜಾನಪದ ಪರಿಷತ್ ಬೆಂಗಳೂರು ಕೇಂದ್ರದ ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜೆರಾಜ್ ಮತ್ತು ಬೆಂಗಳೂರು ಕೇಂದ್ರದ ಅಧ್ಯಕ್ಷರಾದ ಬೋರಲಿಂಗಯ್ಯನವರು ಯುಎಇ ಘಟಕದ ಲಾಂಛನವನ್ನು ಲೋಕಾರ್ಪಣೆ ಗೊಳಿಸುವುದರ ಮೂಲಕ ಘಟಕವನ್ನು ಉದ್ಘಾಟಿಸಿದರು.

ನಂತರ ಮಾತನಾಡುತ್ತಾ ಜಾನಪದ ಪರಿಷತ್ ನ ವಿಸ್ತರಣೆಗೆ ಹರ್ಷ ವ್ಯಕ್ತಪಡಿಸುತ್ತಾ ಕೇಂದ್ರ ಸಂಸ್ಥೆಯಿಂದ ಈ ಘಟಕಕ್ಕೆ ಸರ್ವ ವಿಧದ ಸಹಕಾರ ನೀಡುವುದಾಗಿ ಈರ್ವರು ಭರವಸೆ ನೀಡಿದರು.

ಅಂತಾರಾಷ್ಟ್ರೀಯ ಜಾನಪದ ಉತ್ಸವ 2025 ಅನ್ನು ಸಂಪ್ರಾದಾಯಿಕವಾಗಿ ಸಮೃದ್ಧಿಯ ಸಂಕೇತವಾದ ತೆಂಗಿನ ಸಿಂಗಾರ ಹೂವನ್ನು ಅರಳಿಸುವುದರ ಮೂಲಕ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಮರೆವಿನಂಚಿನಲ್ಲಿರುವ ಜಾನಪದ ಕಲೆಗಳು ಉಳಿಸುವುದು ನಮ್ಮ ಕರ್ತವ್ಯ. ಅದರ ಜೊತೆಯಲ್ಲಿ ಇಂತಹ ಅಂತಾರಾಷ್ಟ್ರೀಯ ಮಟ್ಟದ ಜನಪದ ಕಾರ್ಯಕ್ರಮಗಳು ಪ್ರತಿ ವರ್ಷವು ನಡೆಸುವುದರ ಜೊತೆಗೆ ಉಳಿಸುವ ಪ್ರಯತ್ನ ಮಾಡಬೇಕು ಎಂದರು.

ನಂತರ ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ಇದರ ಅಧ್ಯಕ್ಷ ಎಚ್. ಸಿ.ಬೋರಲಿಂಗಯ್ಯ ಅವರು ನೂತನ ಘಟಕದ ಅಧ್ಯಕ್ಷ ಸದನ್ ದಾಸ್ ಅವರಿಗೆ ಪ್ರಮಾಣವಚನ ಬೋಧಿಸಿದರು. ಬಳಿಕ ಪ್ರಮಾಣ ವಚನ ಸ್ವೀಕರಿಸಿದ ಯುಎಇ ಘಟಕದ ಅಧ್ಯಕ್ಷರು ಘಟಕದ ಇತರ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು.

ಸಭಾಕಾರ್ಯಕ್ರಮ ಉದ್ಘಾಟಿಸಿದ ಯು.ಟಿ.ಖಾದರ್
ಸಂಸ್ಥಾಪಕ ಅಧ್ಯಕ್ಷ ಸದನ್ ದಾಸ್ ಶಿರೂರು ಅವರ ನೇತೃತ್ವದಲ್ಲಿ ಅದ್ದೂರಿಯಾಗಿ ಉದ್ಘಾಟನಾಗೊಂಡ ಘಟಕದ ವತಿಯಿಂದ ಅಂತಾರಾಷ್ಟ್ರೀಯ ಜಾನಪದ ಉತ್ಸವದ ಸಭಾಕಾರ್ಯಕ್ರಮ ನಡೆಯಿತು.

ಸಭಾಕಾರ್ಯಕ್ರಮನ್ನು ದೀಪಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ವಿಧಾನ ಸಭೆಯ ಸಭಾಧ್ಯಕ್ಷರಾದ ಯುಟಿ.ಖಾದರ್, ನೂತನವಾಗಿ ಆರಂಭಗೊಂಡ ಯುಎಇ ಘಟಕಕ್ಕೆ ಶುಭ ಹಾರೈಸುವುದರ ಜೊತೆಗೆ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದೇ ಒಂದು ಭಾಗ್ಯ ಎಂದರು.

ಜಾನಪದ ಕಲೆಗಳ ಬಗ್ಗೆ ಅರಿವು ನಮ್ಮ ಯುವ ಪಿಳಿಗೆಗಳಿಗೆ ತಲುಪಿಸಬೇಕು, ಫೋಷಕರು ಪ್ರತಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡುದರ ಜೊತೆಗೆ ಈ ಶ್ರೀಮಂತ ಕಲೆಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು ಮತ್ತು ಇಂತಹ ಕಾರ್ಯಕ್ರಮಗಳಿಗೆ ಹೆತ್ತವರು ಮಕ್ಕಳನ್ನು ಕರೆತಂದರೆ ಮಕ್ಕಳಿಗೆ ಈ ಕಲೆಗಳ ಬಗ್ಗೆ ಜ್ಞಾನ ಹೆಚ್ಚುತ್ತದೆ ಎಂದರು.

ಮತ್ತೋರ್ವ ಮುಖ್ಯ ಅತಿಥಿ ದುಬೈ ಭಾರತೀಯ ರಾಯಬಾರಿ ಕಛೇರಿಯ ಬ್ರೀಜೆಂದ್ರ ಸಿಂಗ್ ಮಾತನಾಡಿ, ಕಾರ್ಯಕ್ರಮಕ್ಕೆ ಮತ್ತು ನೂತನ ತಂಡ ಶುಭಹಾರೈಸಿ ಇಂತಹ ಉತ್ತಮ ಕಾರ್ಯಗಳಿಗೆ ನಮ್ಮ ಸಹಕಾರ ಸದಾ ಇರುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಚ್.ಸಿ. ಬೋರಲಿಂಗಯ್ಯನವರು ಜಾನಪದ ಪರಿಷತ್ ಘಟಕ ಕರ್ನಾಟಕದ ಪ್ರತಿ ಜಿಲ್ಲೆಯಲ್ಲಿದೆ. ಹೊರ ರಾಜ್ಯದಲ್ಲಿದೆ, ಆದರೆ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉದ್ಘಾಟನೆಗೊಂಡಿರುವ ಈ ಕಲೆಗೆ ಸಿಕ್ಕಿರುವ ನಿಜವಾದ ಗೌರವ ಎಂದರು.

ಈ ಘಟಕವನ್ನು ಇಲ್ಲಿ ಸ್ಥಾಪಿಸಿರುವ ಉದ್ದೇಶವನ್ನು ಎಳೆ ಎಳೆಯಾಗಿ ವಿವರಿಸುತ್ತಾ, ಮುಂದಿನ ದಿನಗಳಲ್ಲಿ ಘಟಕದಿಂದ ಹಲವಾರು ಕಾರ್ಯಕ್ರಮಗಳು ನಡೆಯುವುದರ ಜೊತೆಗೆ ಕರ್ನಾಟಕದಲ್ಲಿರುವ 168 ಜಾನಪದ ಕಲೆಗಳ ಪ್ರಕಾರಗಳ ಜೀವಂತವಾಗಿಡಲು ಘಟಕದ ಪ್ರತಿ ಸದಸ್ಯರು ಕಾರ್ಯನಿರ್ವಹಿಸಬೇಕು ಎಂದರು.

ಉದ್ಯಮಿ ಡಾ.ಬಿ.ಆರ್.ಶೆಟ್ಟಿ, ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ಆದಿತ್ಯ ನಂಜರಾಜ, ಗೋವಿಂದ ಬಾಬು ಪೂಜಾರಿ, ಡಾ.ಕನಕರಾಜ, ಗಣಪತಿ ಭಟ್, ಘಟಕದ ಕಾರ್ಯಾಧ್ಯಕ್ಷ ಅಶ್ರಫ್ ಶಾ ಮಾಂತೂರು, ಕಾರ್ಯದರ್ಶಿ ಆರತಿ ಅಡಿಗ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ವಿವಿಧ ಕನ್ನಡ ಸಂಘಟನೆಗಳ ನಾಯಕರು, ಸಮುದಾಯ ಮುಖಂಡರು ಹಾಗೂ ಕನ್ನಡಾಭಿಮಾನಿಗಳು ಉತ್ಸವಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಗೌರವ – ಪ್ರಶಸ್ತಿ ಪ್ರದಾನ
ಕರ್ನಾಟಕ ಜಾನಪದ ಪರಿಷತ್ ಶಿಫಾರಸಿನ ಮೇರೆಗೆ “ಡಾ.ಎಚ್.ಎಲ್.ನಾಗೇಗೌಡ ಅಂತಾರಾಷ್ಟ್ರೀಯ ಜನಪದ ಪ್ರಶಸ್ತಿ”ಯನ್ನು ಜನಪ್ರಿಯ ಕಲಾವಿದರಾದ ಪದ್ಮಶ್ರೀ ರಾಣಿ ಮಚ್ಚಯ್ಯ (ಕೂರ್ಗ್) ಹಾಗೂ ಮಲವಳ್ಳಿ ಮಹದೇವ ಸ್ವಾಮಿ (ಮೈಸೂರು) ಅವರಿಗೆ ಪ್ರದಾನ ಮಾಡಲಾಯಿತು.
ಪ್ರೊ. ಕೆ. ಇ. ರಾಧಾಕೃಷ್ಣ ಅವರಿಗೆ “ಗುರು ಸಾವ್ಯಸಾಚಿ” ಪ್ರಶಸ್ತಿ, ವರದರಾಜ ಶೆಟ್ಟಿಗೆ ಕನ್ನಡ ಕಲಾಪೋಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಭಾ ಕಾರ್ಯಕ್ರಮಕ್ಕೆ ಘಟಕದ ಅಧ್ಯಕ್ಷ ಸದಾನ್ ದಾಸ್ ಅತಿಥಿಗಳನ್ನ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಆರತಿ ಅಡಿಗ ವಂದಿಸಿದರು ಮತ್ತು ಕಾರ್ಯಕ್ರಮದ ನಿರ್ದೇಶಕ ಬಾಸುಮ ಕೊಡಗು ಕಾರ್ಯಕ್ರಮ ನಿರೂಪಿಸಿದರು.

ಜಾನಪದ ಪರಿಷತ್ – ಯುಎಇ ಘಟಕದ ಅನಿವಾಸಿ ಕಲಾವಿದರ ತಂಡಗಳು ಭಾಗವಹಿಸಿದರು. ಡೊಳ್ಳು ಕುಣಿತ, ಹುಲಿ ವೇಷ, ನೃತ್ಯಸಂಗೀತ, ಬಣ್ಣದ ವೇಷಭೂಷಣಗಳಿಂದ ಮೈಮರೆಸುವ ಶೈಲಿಯಲ್ಲಿ ಕಲಾವಿದರು ತಮ್ಮ ಕಲೆ ತೋರಿದರು. ಕನ್ನಡ ನುಡಿಗಟ್ಟು, ಹಳೆ ನಾಟ್ಯಸಂಗೀತ, ರಂಗಸೂಚನೆಗಳಿಂದ ಕಾರ್ಯಕ್ರಮವು ಜಾನಪದ ಸಾಂಸ್ಕೃತಿಕ ಹಬ್ಬದ ವಾತಾವರಣ ಸೃಷ್ಟಿಸಿತು.

ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ಅಧ್ಯಕ್ಷ ಎಚ್. ಸಿ. ಬೋರಲಿಂಗಯ್ಯ, ಬಾಸುಮ ಕೊಡಗು, ಉತ್ಸವ ನಿರ್ದೇಶಕರು ಮತ್ತು ಘಟಕದ ಅಧ್ಯಕ್ಷ ಸದಾನ್ ದಾಸ್ ಹಾಗೂ ಸಮಿತಿ ಸದಸ್ಯರು ಉತ್ಸವದ ಎಲ್ಲಾ ಹಂತಗಳನ್ನು ಶಿಸ್ತಿನಿಂದ ಅಚ್ಚುಕಟ್ಟಾಗಿ ನಿರ್ವಹಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮ: ಸಭಾಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಕರ್ನಾಟಕದ ವಿವಿಧ ಭಾಗಗಳಿಂದ ಆಗಮಿಸಿದ ಖ್ಯಾತ ಜನಪದ ಕಲಾವಿದರು ಹಾಗೂ ಯುಎಇಯಲ್ಲಿನ ಅನಿವಾಸಿ ಕನ್ನಡಿಗ ಕಲಾವಿದರು ನೀಡಿದ ಮನೋರಂಜನಾತ್ಮಕ ಪ್ರದರ್ಶನಗಳು ಪ್ರೇಕ್ಷಕರ ಮನಗೆದ್ದವು.
ಪ್ರದರ್ಶನದಲ್ಲಿ ಶ್ರೀ ದುರ್ಗಾ ಡಕ್ಕೆ ಕುಣಿತ ತಂಡ – ಭಟ್ಕಳ, ಹುಲಿ ವೇಷ – ನಿತಶ್ರೀ ಜಾನಪದ ಕಲಾ ತಂಡ ಕಾಪು, ಗೌತಮೇಶ್ವರ ಯುವಕ ಡೊಳ್ಳು ಕುಣಿತ ಸಾಗರ , ವನಸುಮ ವೇದಿಕೆ ಕಟಪಾಡಿ.

ಪ್ರಧಾನ ಕಾರ್ಯದರ್ಶಿ ಆರತಿ ಅಡಿಗ ಅವರು ಯುಎಇ ಕನ್ನಡ ಸಂಘಟನೆಗಳು, ಸಾಂಸ್ಕೃತಿಕ ಸಂಘಗಳು, ಪ್ರಾಯೋಜಕರು ಹಾಗೂ ಸ್ವಯಂಸೇವಕರಿಗೆ ಧನ್ಯವಾದ ಸಲ್ಲಿಸಿ, “ಜನಪದ ಪರಂಪರೆಯನ್ನು ಜಾಗತಿಕ ವೇದಿಕೆಯಲ್ಲಿ ಉಳಿಸಲು ಸಮೂಹ ಪ್ರಯತ್ನ ಅವಶ್ಯಕ” ಎಂದು ಹೇಳುತ್ತಾ ಕಾರ್ಯಕ್ರಮಕ್ಕೆ ಮುಕ್ತಾಯಗೊಳಿಸಿದರು.

Hot this week

ಅಮೇರಿಕದಲ್ಲಿ ‘ಕಾಂತಾರ: ಚಾಪ್ಟರ್ 1’ ಯಶಸ್ಸಿನ ಅಬ್ಬರ! ಸಿನೆಮಾ ನೋಡಿದವರು ಏನೆಂದಿದ್ದಾರೆ ನೋಡಿ…!

ನ್ಯೂಯಾರ್ಕ್: ಬಹುನಿರೀಕ್ಷಿತ ‘ಕಾಂತಾರ: ಚಾಪ್ಟರ್ 1’ ಎಲ್ಲೆಡೆ ಬಿಡುಗಡೆಗೊಂಡಿದ್ದು, ಅಮೇರಿಕದ ನ್ಯೂಯಾರ್ಕ್...

ಅದ್ದೂರಿಯಾಗಿ ನಡೆದ ಕರ್ನಾಟಕ ಸಂಘ ಖತರ್‌ನ ‘ಎಂಜಿನಿಯರ್ಸ್ ಡೇ’

ದೋಹಾ(ಖತರ್): ಜಗಮೆಚ್ಚಿದ ಎಂಜಿನಿಯರ್ ಮತ್ತು ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಅವರ...

Related Articles

Popular Categories