ಇತರೆದಿ. ಮೊಯ್ದೀನ್ ಚೆಯ್ಯಬ್ಬ ಅವರ ಜೀವನ ಕುರಿತ ʼದಿ...

ದಿ. ಮೊಯ್ದೀನ್ ಚೆಯ್ಯಬ್ಬ ಅವರ ಜೀವನ ಕುರಿತ ʼದಿ ಬಂದರ್ ಲೆಗಸಿʼ ಪುಸ್ತಕ ಬಿಡುಗಡೆ

ದುಬೈ: ದಿವಂಗತ ಮೊಯ್ದೀನ್ ಚೆಯ್ಯಬ್ಬ ಅವರ ಜೀವನ ಮತ್ತು ಪರಂಪರೆಯನ್ನು ಒಳಗೊಂಡ “ದಿ ಬಂದರ್ ಲೆಗಸಿ” ಎಂಬ ಹೊಸ ಪುಸ್ತಕ ಬಿಡುಗಡೆಯಾಗಿದೆ ಎಂದು ತುಂಬೆ ಗ್ರೂಪ್ ಸ್ಥಾಪಕ ಮತ್ತು ಅಧ್ಯಕ್ಷ ಡಾ. ತುಂಬೆ ಮೊಯ್ದೀನ್ ಅವರು ತಿಳಿಸಿದ್ದಾರೆ.

ಮೊಯ್ದೀನ್ ಚೆಯ್ಯಬ್ಬ ಅವರು ದಿವಂಗತ ಹಸನ್ ಹಾಜಿ, ಬಿ.ಅಹಮದ್ ಹಾಜಿ, ಬಿ.ಅಬ್ದುಲ್ ಖಾದರ್ ಹಾಜಿ ಅವರ ತಂದೆ ಮತ್ತು ಡಾ.ತುಂಬೆ ಮೊಯ್ದೀನ್ ಅವರ ತಾತ. “ದಿ ಬಂದರ್ ಲೆಗಸಿ” ಪುಸ್ತಕವು ಮೊಯ್ದೀನ್ ಚೆಯ್ಯಬ್ಬ ಅವರ ಪ್ರಾರಂಭಿಕ ದಿನಗಳಿಂದ ಹಿಡಿದು ಬಂದರ್ ನಲ್ಲಿನ ಅವರ ಕ್ರಿಯಾತ್ಮಕ ಜೀವನದ ವರೆಗೆ ಇರುವ ಸಂಪೂರ್ಣ ಚಿತ್ರಣವನ್ನು ಒದಗಿಸುತ್ತದೆ. ದಕ್ಷಿಣ ಕರ್ನಾಟಕದ ಪರಿವರ್ತನೆ ಮತ್ತು ಸಮೃದ್ಧಿಗೆ ಮೊಯ್ದೀನ್ ಚೆಯ್ಯಬ್ಬ ಅವರ ಕೊಡುಗೆ ಬಗ್ಗೆ ಈ ಪುಸ್ತಕ ಬೆಳಕು ಚೆಲ್ಲಿದೆ.

ಈ ಪುಸ್ತಕದಲ್ಲಿ ಮೊಯ್ದೀನ್ ಚೆಯ್ಯಬ್ಬ ಅವರ ಕುಟುಂಬದ ಸದಸ್ಯರು ತಮ್ಮ ನೆನಪುಗಳು ಮತ್ತು ವೈಯಕ್ತಿಕ ಅನುಭವಗಳನ್ನು ಹಂಚಿಕೊಂಡಿದ್ದಾರೆ. ʼದಿ ಬಂದರ್ ಲೆಗಸಿ” ಎಂಬ ಈ ಅತ್ಯಾಸಕ್ತಿಕ ಪಯಣವು, ಓದುಗರಿಗೆ ಮೊಯ್ದೀನ್ ಚೆಯ್ಯಬ್ಬ ಅವರ ಜೀವನ ಮತ್ತು ಸಾಧನೆಗಳ ಬಗ್ಗೆ ಹೆಮ್ಮೆಯುಂಟುಮಾಡುತ್ತದೆ.

ಈ ಪುಸ್ತಕವು ಕರಾವಳಿಯ ಪಟ್ಟಣಗಳಲ್ಲಿ ಮೊಯ್ದೀನ್ ಚೆಯ್ಯಬ್ಬ ಅವರ ಸಹನಶೀಲತೆ, ವ್ಯವಹಾರ ನೈಪುಣ್ಯತೆಯನ್ನು ವಿವರಿಸುತ್ತದೆ. ಅವರು ಅವಕಾಶಗಳನ್ನು ಬಳಸಿಕೊಂಡ ರೀತಿ, ಯುದ್ಧ ಕಾಲದ ಸವಾಲುಗಳನ್ನು, ಮತ್ತು ಬದಲಾವಣೆಯ ಅಗತ್ಯತೆಯನ್ನು ಹೇಗೆ ಎದುರಿಸಿದರು ಎಂಬುದನ್ನು ತಿಳಿಸುತ್ತದೆ.

“ದಿ ಬಂದರ್ ಲೆಗಸಿ” ಪುಸ್ತಕವು ನಮ್ಮ ಕುಟುಂಬದ ಯುವ ಸದಸ್ಯರಿಗೆ ಪ್ರೇರಣಾದಾಯಕ ಬೆಳಕಾಗಿದೆ. ಸಹನೆ, ಸಮರ್ಪಣೆ, ಮತ್ತು ಯಶಸ್ಸಿನ ಕಥೆಗಳ ಮೂಲಕ ನಾವು ಅವರಿಗೆ ತಮ್ಮ ಜೀವನದಲ್ಲಿ ಮಹತ್ವವನ್ನು ಸಾಧಿಸಲು ಪ್ರೇರೇಪಿಸುತ್ತೇವೆ.

ಈ ಪುಸ್ತಕವು ಓದುಗರಿಗೆ ಆಳವಾದ ರಸಮಯತೆಯನ್ನು ತರಬಲ್ಲದು ಎಂಬ ನಂಬಿಕೆಯಲ್ಲಿದ್ದೇವೆ. ಈ ಪುಸ್ತಕವನ್ನು ಯಶಸ್ವಿಯಾಗಿ ಸಿದ್ಧಪಡಿಸಲು ಸಹಕರಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು ಎಂದು ಡಾ. ತುಂಬೆ ಮೊಯ್ದೀನ್ ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Hot this week

Kuwait: KCWA’s annual family picnic draws over 600 attendees at Mishref Garden

Kuwait: The Kuwait Canara Welfare Association (KCWA) organised its...

ಖತರ್‌ನಲ್ಲಿ ಕರಾವಳಿ ಕನ್ನಡಿಗನ ಸಾಧನೆ; ಅಂಡರ್ 19 ಕ್ರಿಕೆಟ್ ತಂಡಕ್ಕೆ ಮಂಗಳೂರು ಮೂಲದ ಎಸ್ಸಾಮ್ ಮನ್ಸೂರ್ ಆಯ್ಕೆ

ದೋಹಾ: ಕರ್ನಾಟಕದ ಮಂಗಳೂರು ಮೂಲದ ಯುವಕ ಎಸ್ಸಾಮ್ ಮನ್ಸೂರ್, ಖತರ್ ಅಂಡರ್...

ರೊನಾಲ್ಡ್ ಮಾರ್ಟಿಸ್​ಗೆ ಶಾರ್ಜಾ ಕರ್ನಾಟಕ ಸಂಘದಿಂದ ‘ಮಯೂರ-ವಿಶ್ವಮಾನ್ಯ ಕನ್ನಡಿಗ ಅಂತಾರಾಷ್ಟ್ರೀಯ ಪ್ರಶಸ್ತಿ’ ಪ್ರದಾನ

ದುಬೈ: ದುಬೈನಲ್ಲಿ ಇರುವ ಕನ್ನಡ ಪರ ಸಂಘಟನೆಗಳಲ್ಲಿ ಅರ್ಥಪೂರ್ಣ ಕಾರ್ಯಕ್ರಮ ಮಾಡುವುದರಲ್ಲಿ...

ಖತರ್‌ನಲ್ಲಿ ಕರ್ನಾಟಕ ರಾಜ್ಯೋತ್ಸವ – ರಜತ ಸಂಭ್ರಮ ಸಮಾರೋಪ: ಗಲ್ಫ್ ನಾಡಿನಲ್ಲಿ ಗಂಧದ ನಾಡಿನ ವೈಭವ

ದೋಹಾ(ಖತರ್‌): ಕರ್ನಾಟಕ ಸಂಘ ಖತರ್‌ (KSQ)ನ ಕರ್ನಾಟಕ ರಾಜ್ಯೋತ್ಸವ – ರಜತ...

ದುಬೈ: ಕನ್ನಡಿಗರ ಕೂಟದಿಂದ ʼಕನ್ನಡ ರಾಜ್ಯೋತ್ಸವ 2025ʼ ಭವ್ಯ ಸಂಭ್ರಮ

ದುಬೈ: ಕನ್ನಡಿಗರ ಕೂಟ – ದುಬೈ ಮತ್ತು ಗಲ್ಫ್ ಕನ್ನಡ ಮೂವೀಸ್...

Related Articles

Popular Categories