ಇತರೆಜರ್ಮನಿ; ರೈನ್ ಮೈನ್ ಕನ್ನಡ ಸಂಘದ ನೂತನ ಅಧ್ಯಕ್ಷರಾಗಿ...

ಜರ್ಮನಿ; ರೈನ್ ಮೈನ್ ಕನ್ನಡ ಸಂಘದ ನೂತನ ಅಧ್ಯಕ್ಷರಾಗಿ ಲೋಕನಾಥ ರಾವ್ ಚೌಹಾಣ್ ಆಯ್ಕೆ

ಜರ್ಮನಿ: ರೈನ್ ಮೈನ್ ಕನ್ನಡ ಸಂಘದ ವಾರ್ಷಿಕ ಸಭೆಯು ಇತ್ತೀಚೆಗೆ ಜರ್ಮನಿಯ ಫ್ರಾಂಕ್ಫರ್ಟ್ ನ ಸಾಲ್ಬೌ ರೋನೆಬರ್ಗ್ ನಲ್ಲಿ ನಡೆಯಿತು.

ಪ್ರತಿ 2 ವರ್ಷಕ್ಕೊಮ್ಮೆ ಸಂಘದ ಉಸ್ತುವಾರಿಯನ್ನು, ಹೊಸ ಸಮಿತಿಯನ್ನು ರಚಿಸಿ ಅವರಿಗೆ ಜವಾಬ್ದಾರಿಯನ್ನು ವರ್ಗಾಯಿಸುವುದು ನಿಯಮವಾಗಿದ್ದು, ಅದರಂತೆ ರೈನ್ ಮೈನ್ ಕನ್ನಡ ಸಂಘದ ನೂತನ ಸಮಿತಿಯ ಅಧ್ಯಕ್ಷರಾಗಿ ಲೋಕನಾಥ ರಾವ್ ಚೌಹಾಣ್ ಆಯ್ಕೆಯಾದರು.

ಸುಮಾರು 70ಕ್ಕಿಂತಲೂ ಅಧಿಕ ಸದಸ್ಯರು ಒಟ್ಟುಗೂಡಿ ಕಳೆದ 2 ವರ್ಷಗಳ ಕಾರ್ಯಕ್ರಮಗಳ ಬಗ್ಗೆ ಅವಲೋಕಿಸಿ, ಸುಂದರ ನೆನಪುಗಳ ಮೆಲುಕು ಹಾಕಿದರು. ಕಾರ್ಯಕ್ರಮಗಳ ಖರ್ಚು ವೆಚ್ಚಗಳ ಲೆಕ್ಕಾಚಾರದ ಚರ್ಚೆ ಮುಖ್ಯವಾಗಿ ನಡೆಯಿತು. ಹೊಸ ಸಮಿತಿಯ ಆಯ್ಕೆಗಾಗಿ ಮತದಾನದ ಮೇಲ್ವಿಚಾರಣೆ ವಿಶ್ವಾಸ್ ಭಟ್, ಸುನೀಲ್ ಪಾಟೀಲ್ ವಹಿಸಿಕೊಂಡಿದ್ದರು. ವಿರಾಜ್ ಬೇಕಲ್ ಹಾಗೂ ಪ್ರಿಯಾಂಕ ವಿನಯ್ ಅವರು ಮತ ಎಣಿಕೆಗೆ ಸಹಕರಿಸಿದರು.

ರೈನ್ ಮೈನ್ ಕನ್ನಡ ಸಂಘದ ನೂತನ ಉಪಾಧ್ಯಕ್ಷರಾಗಿ ಗುರುರಾಜ್ ಚಂದ್ರಶೇಖರ್, ಕಾರ್ಯದರ್ಶಿಯಾಗಿ ಮಂಜುನಾಥ್ ಷಡಕ್ಷರಯ್ಯ, ಜಂಟಿ ಕಾರ್ಯದರ್ಶಿಯಾಗಿ ವಿಜಯ್ ಹುಗ್ಗಿ, ಖಜಾಂಚಿಯಾಗಿ ಭರತ್ ಗಿರಿಯಾಪುರ, ಮಂಡಳಿಯ ಸದಸ್ಯರಾಗಿ ಗುಂಡು ರಾವ್ ಮತ್ತು ರಕ್ಷಿತ್ ಗೊಟ್ಟಕುಂಟೆ ಆಯ್ಕೆಯಾದರು.

ಸಮಿತಿಯ ನಿಕಟ ಪೂರ್ವ ಪದಾಧಿಕಾರಿಗಳಾದ ವೇದಕುಮಾರ್, ರಿಯಾಜ್ ಶಿರಸಂಗಿ, ಅಕ್ಷಯ್ ಕಬಾಡಿ, ಲೋಕನಾಥ್, ವಿಶ್ವನಾಥ್ ಬಾಳೆಕಾಯಿ, ಜಯಂತ್ ಬದ್ರಿ, ಸಹಕಾರ್ಯಕಾರಿ ಸಮಿತಿಯ ಪೂಜಾ ಚಿರಂತ್, ವಿಶ್ವಾಸ್ ಭಟ್, ವೆಂಕಟೇಶ್ ಬಿರಾದರ್, ಗಣೇಶ್ ಇಟಗಿ, ಗುಂಡು ರಾವ್ ಅವರು ಉಪಸ್ಥಿತರಿದ್ದು, ವಾರ್ಷಿಕ ಸಭೆಯು ಯಶಸ್ವಿಯಾಗಿ ಪೂರ್ಣಗೊಳಿಸಲು ಸಹಕರಿಸಿದರು.

ಪ್ರತೀ 2 ವರ್ಷಕ್ಕೊಮೆ ಹೊಸದೊಂದು ತಂಡ ಮುಂದೆ ಬಂದು ತನ್ನ ನಿರಂತರತೆಯನ್ನು ಸದಾ ಸದಸ್ಯರ ಬೇಡಿಕೆಗಳಂತೆ ಮುಂದುವರೆಸಿಕೊಂಡು ಬರುತ್ತಿದೆ. ಹೊಸ ಹುರುಪು, ಹುಮ್ಮಸ್ಸಿನಿಂದ ಬಂದ ತಂಡಕ್ಕೆ ಶುಭ ಹಾರೈಸಿ ಎಲ್ಲರು ವರ್ಗಾಯಿಸಿಕೊಟ್ಟರು

ವರದಿ: ಶೋಭಾ ಚೌಹಾಣ್, ಫ್ರಾಂಕ್ಫರ್ಟ್, ಜರ್ಮನಿ

Hot this week

ಶಾಲೆಯ ಕ್ರೀಡಾಂಗಣದಿಂದ ಮುಖ್ಯಮಂತ್ರಿ ಕಚೇರಿವರೆಗೆ; ತಮ್ಮ ವಿದ್ಯಾರ್ಥಿ ಡಿ.ಕೆ. ಶಿವಕುಮಾರ್ ಕುರಿತು ನಿವೃತ್ತ ಶಿಕ್ಷಕ ಪಾಂಡು ಅವರ ನೆನಪುಗಳು

ಲೇಖನ: ಬೆಂಕಿ ಬಸಣ್ಣ, ನ್ಯೂಯಾರ್ಕ್ ಇತಿಹಾಸವು ಮಹಾನ್ ನಾಯಕರನ್ನು ನೆನಪಿಸಿಕೊಳ್ಳುತ್ತದೆ. ಆದರೆ ಪ್ರತಿಯೊಬ್ಬ...

ಬ್ಯಾರೀಸ್ ಕಲ್ಚರಲ್ ಫೋರಮ್ (ಬಿಸಿಎಫ್) ವಾರ್ಷಿಕ ಮಹಾಸಭೆ

ದುಬೈ: ಬ್ಯಾರೀಸ್ ಕಲ್ಚರಲ್ ಫೋರಮ್ (ಬಿಸಿಎಫ್) ಇದರ 28ನೇ ವಾರ್ಷಿಕ ಮಹಾಸಭೆ...

ದುಬೈಯಲ್ಲಿ ಕನ್ನಡ ಭಾಷೆಯನ್ನು ಎತ್ತಿ ಹಿಡಿದ ಕ್ರಿಯಾತ್ಮಕ ಕಲಾ ನಿರ್ದೇಶಕ ಬಿ.ಕೆ.ಗಣೇಶ್ ರೈ

ಜಗತ್ತಿನ ನಾನಾ ಮೂಲೆಗಳಲ್ಲಿ ನೆಲೆಸಿರುವ ಕನ್ನಡಿಗರು ಕನ್ನಡ ನಾಡು-ನುಡಿ, ಸಂಸ್ಕೃತಿ, ಪರಂಪರೆಗಾಗಿ...

ಜರ್ಮನಿ; ನಾಟ್ಯಫೆಸ್ಟ್ 2026: ಸಂಸ್ಕೃತಿ ಮತ್ತು ಸೃಜನಾತ್ಮಕತೆಯ ರಂಜಕ ವೇದಿಕೆ

ಫ್ರಾಂಕ್‌ಫರ್ಟ್‌ (ಜರ್ಮನಿ): ಇತ್ತೀಚೆಗೆ ಮ್ಯೂನಿಕ್‌ನ ಐನ್‌ಸ್ಟೈನ್ ಕಲ್ಚರ್ ವೇದಿಕೆ ನಾಟ್ಯಫೆಸ್ಟ್ 2026...

ಕರ್ನಾಟಕ ಸಂಘ ಖತರ್‌ನಿಂದ ಯಶಸ್ವಿಯಾಗಿ ನಡೆದ ರಕ್ತದಾನ ಶಿಬಿರ

ದೋಹಾ(ಖತರ್‌): ಭಾರತೀಯ ಸಾಂಸ್ಕೃತಿಕ ಕೇಂದ್ರ (ICC) ಹಾಗೂ ಭಾರತೀಯ ರಾಯಭಾರ ಕಚೇರಿ...

Related Articles

Popular Categories