ಯುಎಸ್‌ಎಅಮೇರಿಕದಲ್ಲಿ ಭಾಗವತ ಕರುಣಾಕರ ಆಚಾರ್ಯರಿಂದ ಯಕ್ಷಗಾನ ತರಬೇತಿ ಕಾರ್ಯಗಾರ;...

ಅಮೇರಿಕದಲ್ಲಿ ಭಾಗವತ ಕರುಣಾಕರ ಆಚಾರ್ಯರಿಂದ ಯಕ್ಷಗಾನ ತರಬೇತಿ ಕಾರ್ಯಗಾರ; ‘ಭೀಷ್ಮೋತ್ಪತ್ತಿ’-‘ಗದಾಯುದ್ಧ’ ಯಕ್ಷಗಾನ ಪ್ರದರ್ಶನ

ಕ್ಯಾಲಿಫೋರ್ನಿಯಾ: ಇತ್ತೀಚಿಗೆ ಅಮೇರಿಕ ಪ್ರವಾಸ ಕೈಗೊಂಡ ಯಕ್ಷಗಾನ ಗುರುಗಳಾದ ಭಾಗವತ ಕರುಣಾಕರ ಆಚಾರ್ಯ ಮತ್ತು ಅವರ ಪತ್ನಿ ಶಾಂತ ಕರುಣಾಕರಾಚಾರ್ಯ ಅಮೆರಿಕದಲ್ಲಿರುವ ಭಾರತೀಯ ಹವ್ಯಾಸಿ ಕಲಾವಿದರಿಗೆ ಯಕ್ಷಗಾನ ತರಬೇತಿ ಕಾರ್ಯಗಾರವನ್ನು ನಡೆಸಿ, ಯಕ್ಷಗಾನ ಪ್ರದರ್ಶನ ನಡೆಸಿಕೊಟ್ಟರು.

ಕ್ಯಾಲಿಫೋರ್ನಿಯಾದ ಸನಾತನ ಧರ್ಮ ಕೇಂದ್ರ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಸ್ಥಳೀಯ ಕಲಾವಿದರಿಂದ ಫೆಬ್ರವರಿ 16ರಂದು ‘ಭೀಷ್ಮೋತ್ಪತ್ತಿ’ ಪ್ರಸಂಗ ಯಕ್ಷಗಾನ ಪ್ರದರ್ಶನಗೊಂಡಿತು.

ಭಾಗವತ ಕರುಣಾಕರ ಆಚಾರ್ಯ ಮತ್ತು ಅವರ ಪತ್ನಿ ಶಾಂತ ಕರುಣಾಕರಾಚಾರ್ಯ ಅವರು ಅಕ್ಟೋಬರ್ 2024ರಲ್ಲಿ ಕಾರ್ಯಗಾರವನ್ನು ಅಮೇರಿಕದಲ್ಲಿ ಆರಂಭಿಸಿದ್ದು, ಫೆಬ್ರವರಿ 15ರಂದು ಸ್ಯಾನ್ ಹ್ಯಾಕ್ವಿನ್ ಕನ್ನಡ ಸಂಘದವರು ಸಂಕ್ರಾಂತಿ ಕಾರ್ಯಕ್ರಮವಾಗಿ ‘ಭೀಷ್ಮೋತ್ಪತ್ತಿ’ ಪ್ರಸಂಗ ಪ್ರದರ್ಶಿಸಿದರು.

ಇದಕ್ಕೂ ಮೊದಲು ಅಮೇರಿಕದ ಡೆಲಿವೇರಾ ಹೊಯ್ಸಳ ಕನ್ನಡ ಸಂಘದ ‘ಯಕ್ಷಾಂಗಣ ಸಂಘ’ದ ಆಶ್ರಯದಲ್ಲಿ ಭಾಗವತ ಕರುಣಾಕರ ಆಚಾರ್ಯ ಮತ್ತು ಅವರ ಪತ್ನಿ ಶಾಂತ ಕರುಣಾಕರಾಚಾರ್ಯ ಸಾರಥ್ಯದಲ್ಲಿ ನವಂಬರ್ ತಿಂಗಳಲ್ಲಿ ‘ಗದಾಯುದ್ಧ’ ಯಕ್ಷಗಾನ ಪ್ರದರ್ಶನಗೊಂಡಿತು.

ಈ ಯಕ್ಷ ಗುರು ದಂಪತಿಗಳನ್ನು ಅಮೇರಿಕಕ್ಕೆ ಕರೆಸಿಕೊಂಡವರಲ್ಲಿ ಸಂದೀಪ್ ನಾರಾಯಣ್, ಶ್ರೀ ಪಾದ ಶಾಂತಿಕ ಹೆಗಡೆ ಪ್ರಮುಖರು. ‘ಭೀಷ್ಮೋತ್ಪತ್ತಿ’ ಹಾಗು ‘ಗದಾಯುದ್ಧ’ ಯಕ್ಷಗಾನದಲ್ಲಿ ಶಾಂತನುವಾಗಿ ಶ್ರೀಪಾದ ಹೆಗಡೆ ತನ್ನ ಮನೋಜ್ಞ ಅಭಿನಯ ಮಾತುಗಾರಿಕೆಯಲ್ಲಿ ಪ್ರೇಕ್ಷಕರನ್ನು ರಂಜಿಸಿದರೆ, ದೇವ ವ್ರತನಾಗಿ ಶಶಿಧರ ಸೋಮಯಾಜಿ ಪುರೋಹಿತರು ಸಂಪ್ರದಾಯ ಶೈಲಿಯ ಕುಣಿತ, ಸಾಹಿತ್ಯ ಪೂರ್ಣ ಅರ್ಥಗರ್ಭಿತ ಮಾತುಗಾರಿಕೆಯಿಂದ ಪಾತ್ರಕ್ಕೆ ಅದ್ಭುತ ಜೀವ ತುಂಬಿದರು. ಕಂದರನಾಗಿ ಅಶ್ವಿನಿ ಬಿಕೆ ಕುಂದ ಕನ್ನಡದಲ್ಲಿ ಹಾಸ್ಯ ಚಟಾಕಿಯಿಂದ ಪ್ರೇಕ್ಷಕರನ್ನು ರಂಜಿಸಿದರು. ಸತ್ಯವತಿಯಾಗಿ ಚೇತನ ಶೆಟ್ಟಿ ಮತ್ತು ವೀಣಾ ಗಿರೀಶ್ ಇಬರಿಬ್ಬರು ಈ ಪಾತ್ರವನ್ನು ನಿರ್ವಹಿಸಿ ವೃತ್ತಿ ಕಲಾವಿದರಿಗೆ ಸರಿ ಸಮಾನರೆಂಬುದನ್ನು ಸಾಬೀತುಪಡಿಸಿದರು. ತಮಾಲ ಕೇತುವಾಗಿ ಮೇಘ ಹೇರೂರು ಅದ್ಭುತವಾಗಿ ರಕ್ಕಸ ಬಣ್ಣದ ವೇಷವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಗಾಲವ ಮುನಿಯಾಗಿ ಧರ್ಮದರ್ಶಿ ಕುಮಾರ್ ಜೋಶಿ ಪುರೋಹಿತರು ಹಾಗೂ ನರೇಶ್ ಕುಮಾರ್ ಪಾತ್ರವನ್ನು ನಿರ್ವಹಿಸಿದರು. ಶಶಾಂಕ್ ಕಾಶಿ ಚಂಡೆಗಾರರಾಗಿ ಹಾಗೂ ದೇವ ವ್ರತ ಪಾತ್ರ ದಾರಿಯಾಗಿ ಕಾಣಿಸಿಕೊಂಡರು.

ಇನ್ನು ಹಿಮ್ಮೆಳದಲ್ಲಿ ಭಾಗವತರಾಗಿ ಗುರು ಕರುಣಾಕರಾಚಾರ್ಯ, ಮದ್ದಳೆಯಲ್ಲಿ ಡಾಕ್ಟರ್ ರಮೇಶ್ ಕೆಕೂಡಾ ಸಹಕರಿಸಿದರು. ಕಾರ್ಯಕ್ರಮದಲ್ಲಿ ಯಕ್ಷ ಗುರುಗಳಾದ ಕರುಣಾಕರ ಆಚಾರ್ಯರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಚ್ಯಾರ್ಮೆನ್ ರೇಣುಕಾ ಆರಾಧ್ಯ, ಸನಾತನ ಧರ್ಮ ಕೇಂದ್ರದ ಧರ್ಮದರ್ಶಿ ಕುಮಾರ ಜೋಷಿ ಹಾಗೂ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

ಅಮೇರಿಕದಲ್ಲಿ ಭಾರತೀಯ ಯಕ್ಷಗಾನ ಕಲೆ ನೆಲೆ ನಿಲ್ಲಲು ಶ್ರಮಿಸುತ್ತಿರುವ ಕಲಾವಿದರಲ್ಲಿ ಪ್ರಮುಖರಾದ ಸಂದೀಪ್ ನಾರಾಯಣ್. ಶ್ರೀ ಪಾದ ಶಾಂತಿಕಾ ಹೆಗಡೆ, ಶ್ವೇತಾ ಆಚಾರ್ಯ, ಶ್ರೀನಿಧಿ ಹೊಳ್ಳ, ರಾಜೇಶ್ ಕುಂದಾಪುರ, ನಂದನ್ ನಾಗಭೂಷಣ್, ಅಶೋಕ ಸತ್ರವೇ, ಪಣಿರಾಜ್ ಸಹಕರಿಸಿದರು.

ಸೌಮ್ಯಾ ಕೆ. ಕುಂದಾಪುರ

Hot this week

ದ್ವೀಪದಲ್ಲಿ ‘ಬಹರೈನ್ ಕುಲಾಲ್ಸ್’ ಸಂಘಟನೆಯಿಂದ ಯಶಸ್ವಿಯಾಗಿ ಜರುಗಿದ ಮಹಿಳೆಯರ ಥ್ರೋ ಬಾಲ್ ಹಾಗು ಪುರುಷರ ವಾಲಿಬಾಲ್ ಪಂದ್ಯಾಟ

ಬಹರೈನ್: ಇಲ್ಲಿನ ಆಲಿ ಪರಿಸರದಲ್ಲಿರುವ ಆಲಿ ಕಲ್ಚರಲ್ ಅಂಡ್ ಸ್ಪೋರ್ಟ್ಸ್ ಕ್ಲಬ್ಬಿನ...

KCF Jubail Zone conducts emergency blood donation drive at Almana Hospital

Jubail, Saudi Arabia: The Karnataka Cultural Foundation (KCF) Jubail...

ಯುಎಇ ಯಕ್ಷಗಾನ ಅಭ್ಯಾಸ ಕೇಂದ್ರದಿಂದ ಜೂನ್ 29ರಂದು ‘ದುಬೈ ಯಕ್ಷೋತ್ಸವ 2025’; ಆಮಂತ್ರಣ ಪತ್ರಿಕೆ, ಟಿಕೆಟ್ ಬಿಡುಗಡೆ

ದುಬೈ: ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಇದರ ದಶಮಾನೋತ್ಸವ ಸಂಭ್ರಮವು ಯಕ್ಷಧ್ರುವ...

‘ಬಹರೈನ್ ಕನ್ನಡ ಸಂಘ’ದ ನೂತನ ಅಧ್ಯಕ್ಷರಾಗಿ ಅಜಿತ್ ಬಂಗೇರ ಆಯ್ಕೆ

ಬಹರೈನ್: 'ಬಹರೈನ್ ಕನ್ನಡ ಸಂಘ'ದ 2025-26ರ ಅವಧಿಗೆ ನೂತನ ಕಾರ್ಯಕಾರಿ ಸಮಿತಿಯನ್ನು...

New committee formed for United Padubidrians UAE new term

Dubai, UAE: The United Padubidrians UAE has officially announced...

Related Articles

Popular Categories