ಯುಎಇದುಬೈ: 'ಬ್ಯಾರೀಸ್ ಕಲ್ಚರಲ್ ಫೋರಮ್'ನಿಂದ ಮಾರ್ಚ್ 8ರಂದು 'BCF...

ದುಬೈ: ‘ಬ್ಯಾರೀಸ್ ಕಲ್ಚರಲ್ ಫೋರಮ್’ನಿಂದ ಮಾರ್ಚ್ 8ರಂದು ‘BCF ಇಫ್ತಾರ್ ಮೀಟ್-2025’

ದುಬೈ: ಕಳೆದ ಸುಮಾರು 25 ವರ್ಷಗಳಿಂದ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಗಣನೀಯ ಸೇವೆಯನ್ನು ಮಾಡುತ್ತಿರುವ ಅನಿವಾಸಿ ಕನ್ನಡಿಗರಲ್ಲಿ ಅತ್ಯಂತ ಜನಪ್ರಿಯ ಸಮಾಜ ಸೇವಾ ಸಂಸ್ಥೆ ‘ಬ್ಯಾರೀಸ್ ಕಲ್ಚರಲ್ ಫೋರಮ್’ (ಬಿಸಿಎಫ್) ವತಿಯಿಂದ ಪ್ರತೀ ವರ್ಷ ನಡೆಯುವಂತೆ ಈ ವರ್ಷವೂ ‘BCF ಇಫ್ತಾರ್ ಮೀಟ್-2025’ ಇಫ್ತಾರ್ ಕೂಟವು ಮುಂದಿನ ತಿಂಗಳ ಮಾರ್ಚ್ 8ರ ಶನಿವಾರ ( 08 / 03 / 2025 ) ದುಬೈ ದೇರಾದ ಅಬು ಹೈಲ್ ನ ಅಲ್ ಜಾಹಿಯ ಬಾಂಕ್ವೆಟ್ ಹಾಲ್ ನಲ್ಲಿ ನಡೆಯಲಿದೆ ಎಂದು ಬ್ಯಾರೀಸ್ ಕಲ್ಚರಲ್ ಫೋರಮ್ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

UAEಯ ಎಲ್ಲ ಕಡೆಯಿಂದ, ಇತರ ಕೊಲ್ಲಿ ನಾಡುಗಳಿಂದ ಮತ್ತು ಕರ್ನಾಟಕದಿಂದ ನೂರಾರು ಸಂಖ್ಯೆಯಲ್ಲಿ ಕನ್ನಡಿಗರು, ಕನ್ನಡೇತರರು ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಈ ಇಫ್ತಾರ್ ಕೂಟದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ದೊಡ್ಡ ಸಂಖ್ಯೆಯಲ್ಲಿ ವಿಶೇಷ ಆಹ್ವಾನಿತರು, ಉಲೇಮಾ ಸದಾತುಗಳು, ಧಾರ್ಮಿಕ, ರಾಜಕೀಯ ಮತ್ತು ಸಾಮಾಜಿಕ ನೇತಾರರು, ಉದ್ಯಮಿಗಳು ಮತ್ತು ಹಲವಾರು ಕನ್ನಡ ಪರ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಮಕ್ಕಳಿಗೆ ಇಸ್ಲಾಮಿಕ್ ರಸ ಪ್ರಶ್ನೆಗಳು, ಕುರಾನ್ ಪಾರಾಯಣ ಮೊದಲಾದ ಸ್ಪರ್ಧೆಗಳೊಂದಿಗೆ ಪ್ರಖ್ಯಾತ ಧಾರ್ಮಿಕ ನಾಯಕರುಗಳ ಧಾರ್ಮಿಕ-ನೈತಿಕ ಪ್ರಭಾಷಣ ನಡೆಯಲಿದೆ. ಅಂದು ವಿಶೇಷ ವಾಗಿ BCFನ ಇನ್ನೊಂದು ವಿಶೇಷ ಸೇವಾ ಕಾರ್ಯವಾದ BCF ಸ್ಕಾಲರ್ ಶಿಪ್ ಬಗ್ಗೆ ಪ್ರಸ್ತಾವನೆ ನೀಡಲಾಗುವುದು. ಸಾಮುದಾಯಿಕ ರಂಗದಲ್ಲಿ ವಿಶೇಷ ಸೇವೆ ಗೈದ ವ್ಯಕ್ತಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಗುವುದು.

BCF ಅಧ್ಯಕ್ಷರಾದ ಡಾ.ಬಿ.ಕೆ.ಯೂಸುಫ್ ಮತ್ತು ಇತರ ನಾಯಕರ ಮುಂದಾಳುತನದಲ್ಲಿ ನಡೆಯುವ ಈ ಇಫ್ತಾರ್ ಕಾರ್ಯಕ್ರಮದಲ್ಲಿ UAE ಯಲ್ಲಿರುವ ಎಲ್ಲ ಕನ್ನಡಿಗರು ತಮ್ಮ ಕುಟುಂಬ ಸ್ನೇಹಿತರ ಸಮೇತ ಭಾಗವಹಿಸಬೇಕಾಗಿ BCF Ifthar Committee Chairman ಅಬ್ದುಲ್ ಲತೀಫ್ ಮುಲ್ಕಿ, Vice Chairman ಅಫೀಕ್ ಹುಸೈನ್ ಮತ್ತು ಅವರ ಸಹವರ್ತಿಗಳು ಬಿಸಿಎಫ್ ಪರವಾಗಿ ಆಹ್ವಾನಿಸಿದ್ದಾರೆ.

Hot this week

ಅಬುಧಾಬಿ ಕರ್ನಾಟಕ ಸಂಘದಿಂದ ಅದ್ದೂರಿಯ ಕರ್ನಾಟಕ ರಾಜ್ಯೋತ್ಸವ; ಸವಿತಾ ನಾಯಕ್​ರಿಗೆ ‘ದ.ರಾ.ಬೇಂದ್ರೆ ಪ್ರಶಸ್ತಿ’ ಪ್ರದಾನ

ಅಬುಧಾಬಿ: ಅಬುಧಾಬಿ ಕರ್ನಾಟಕ ಸಂಘದ ಆಶ್ರಯದಲ್ಲಿ ಇತ್ತೀಚೆಗೆ ಅಬುಧಾಬಿಯ ಗ್ಲೋಬಲ್ ಇಂಡಿಯನ್...

Kuwait: KCWA’s annual family picnic draws over 600 attendees at Mishref Garden

Kuwait: The Kuwait Canara Welfare Association (KCWA) organised its...

ಖತರ್‌ನಲ್ಲಿ ಕರಾವಳಿ ಕನ್ನಡಿಗನ ಸಾಧನೆ; ಅಂಡರ್ 19 ಕ್ರಿಕೆಟ್ ತಂಡಕ್ಕೆ ಮಂಗಳೂರು ಮೂಲದ ಎಸ್ಸಾಮ್ ಮನ್ಸೂರ್ ಆಯ್ಕೆ

ದೋಹಾ: ಕರ್ನಾಟಕದ ಮಂಗಳೂರು ಮೂಲದ ಯುವಕ ಎಸ್ಸಾಮ್ ಮನ್ಸೂರ್, ಖತರ್ ಅಂಡರ್...

ರೊನಾಲ್ಡ್ ಮಾರ್ಟಿಸ್​ಗೆ ಶಾರ್ಜಾ ಕರ್ನಾಟಕ ಸಂಘದಿಂದ ‘ಮಯೂರ-ವಿಶ್ವಮಾನ್ಯ ಕನ್ನಡಿಗ ಅಂತಾರಾಷ್ಟ್ರೀಯ ಪ್ರಶಸ್ತಿ’ ಪ್ರದಾನ

ದುಬೈ: ದುಬೈನಲ್ಲಿ ಇರುವ ಕನ್ನಡ ಪರ ಸಂಘಟನೆಗಳಲ್ಲಿ ಅರ್ಥಪೂರ್ಣ ಕಾರ್ಯಕ್ರಮ ಮಾಡುವುದರಲ್ಲಿ...

Related Articles

Popular Categories