ಯುಎಇದುಬೈ: 'ಪ್ರವಾಸಿ ನಾಖುದಾ ಶಿರೂರು' ಸಂಘಟನೆಯಿಂದ ದುಬೈಯ ಅಲ್...

ದುಬೈ: ‘ಪ್ರವಾಸಿ ನಾಖುದಾ ಶಿರೂರು’ ಸಂಘಟನೆಯಿಂದ ದುಬೈಯ ಅಲ್ ರಶೀದಿಯಾ ಪಾರ್ಕ್‌ನಲ್ಲಿ ‘ರಮಝಾನ್ ಕುಟುಂಬ ಸ್ನೇಹ ಸಮ್ಮಿಲನ ಕೂಟ’

ದುಬೈ: ಉಡುಪಿ ಜಿಲ್ಲೆಯ ಶಿರೂರು ಮೂಲದ ನಾಖುದಾ ಸಮುದಾಯದವರ “ಪ್ರವಾಸಿ ನಾಖುದಾ ಶಿರೂರು” ಸಂಘಟನೆಯು ಪ್ರಥಮ ವಾರ್ಷಿಕೋತ್ಸವ ಹಾಗೂ ಮರಹಬಾ ರಮಝಾನ್ ಕುಟುಂಬ ಸ್ನೇಹ ಸಮ್ಮಿಲನ ಕೂಟವನ್ನು ರವಿವಾರ ದುಬೈಯ ಅಲ್ ರಶೀದಿಯಾ ಪಾರ್ಕ್‌ನಲ್ಲಿ ಅದ್ಧೂರಿಯಾಗಿ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮವು ನಾಖುದಾ ಸಾಂಸ್ಕೃತಿಕ ಪರಂಪರೆಯನ್ನು ಮರುಕಳಿಸುವಂತೆ ಮಾಡಿತು. ಸ್ನೇಹ ಸಮ್ಮಿಲನ ಕೂಟದಲ್ಲಿ ನಾಖುದಾ ಸಮುದಾಯದ ಸಾಂಸ್ಕೃತಿಕ, ಮನರಂಜನೆ, ವಿವಿಧ ಕ್ರೀಡೆಗಳು ಮತ್ತು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಸರಿಸುಮಾರು 200 ನಾಖುದಾ ಸಮುದಾಯದ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಸಾಂಸ್ಕೃತಿಕ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಪುರುಷರಿಗಾಗಿ, ಮಹಿಳೆಯರಿಗಾಗಿ ಮತ್ತು ಮಕ್ಕಳಿಗಾಗಿ ಕ್ರೀಡೆ ಮತ್ತು ಮನೋರಂಜನೆ, ಮೋಜಿನ ಚಟುವಟಿಕೆಗಳಿಂದ ತುಂಬಿತ್ತು. ಎಲ್ಲಾ ವಿಜೇತರರಿಗೆ ಮತ್ತು ಭಾಗವಹಿಸಿದವರಿಗೆ ಬಹುಮಾನ ನೀಡಿ ಗೌರವಿಸಲಾಯಿತು ಮತ್ತು ಮಕ್ಕಳಿಗೆ ವಿಶೇಷ ಉಡುಗೊರೆಗಳನ್ನು ನೀಡಲಾಯಿತು.

ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಕರ್ನಾಟಕ ಕಲ್ಚರಲ್ ಫೌಂಡೇಶನ್’ನ ನಾಯಕರು ಮತ್ತು ಶಿರೂರು ಅಸೋಸಿಯೇಷನ್ ನಾಯಕರು ಹಾಗು ಮುರ್ಡೇಶ್ವರ ಮತ್ತು ತೆಂಗಿನಗುಂಡಿ ಜಮಾಅತಿನ ನಾಯಕರು ಭಾಗವಹಿಸಿದ್ದರು. ಅತಿಥಿಗಣ್ಯರು ಪ್ರವಾಸಿ ನಾಖುದಾ ಸಮುದಾಯದ ಕಾರ್ಯಕ್ರಮದ ಕಾರ್ಯ ವೈಖರಿ ಮತ್ತು ಶಿಸ್ತುನ್ನು ಶ್ಲಾಘಿಸಿದರು.

ಭಾರತದ 78ನೇ ಸ್ವಾತಂತ್ರ್ಯ ದಿವಸ ಆಚರಣೆದಂದು ” Solidarity is in our blood – ಒಗ್ಗಟ್ಟು ನಮ್ಮ ರಕ್ತದಲ್ಲಿದೆ” ಎಂದು ಪ್ರಮಾಣ ವಚನ ಸ್ವೀಕರಿಸಿದವರು ಹಾಗು ಕರ್ನಾಟಕ ರಾಜ್ಯೋತ್ಸವದಂದು ರಕ್ತದಾನ ಮಾಡಿ ಮಾನವೀಯತೆ ಮೆರೆದವರಿಗೆ ಕಾರ್ಯಕ್ರಮದಲ್ಲಿ ಅತಿಥಿಗಳಿಂದ ಸನ್ಮಾನಿಸಲಾಯಿತು.

ನಾಖುದಾ ಸಮುದಾಯದ ಸದಸ್ಯರು ಸಾಮಾಜಿಕ-ಕಲ್ಯಾಣ, ಸಂಪರ್ಕಗಳನ್ನು ಬೆಳೆಸುವ ಮತ್ತು ಸಹೋದರ ಸಂಬಂಧಗಳನ್ನು ಬಲಪಡಿಸುವ ಆಲೋಚನೆಗಳು ಚರ್ಚಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ವೇಳೆ ಸಮುದಾಯದ ಎಲ್ಲಾ ಸದಸ್ಯರು ವಿಶೇಷವಾಗಿ ಹಿರಿಯ ಸದಸ್ಯರು ತಮ್ಮ ಸಂತೋಷ ಭಾವನೆಗಳನ್ನು ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸಿದರು.

Hot this week

ಅಬುಧಾಬಿಗೆ ಸಚಿವ ಡಾ.ಜೈಶಂಕರ್ ಭೇಟಿ; ಕನ್ನಡಿಗರ ಕೂಟ ದುಬೈ-ಅಬುಧಾಬಿ ಕರ್ನಾಟಕ ಸಂಘ ಪ್ರತಿನಿಧಿತ್ವ

ಅಬುಧಾಬಿ: ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು...

ದುಬೈ; ‘ಬ್ಯಾರೀಸ್ ಪ್ರೀಮಿಯರ್ ಲೀಗ್-2026’ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಕ್ರೌನ್ ಹೊನ್ನಾವರ; ನಫೀಸ್ ಗ್ರೂಪ್ ರನ್ನರ್ ಅಪ್

ದುಬೈ: ಶಾರ್ಜಾದ ಬಿಜೋಯ್ಸ್ ಕ್ರಿಕೆಟ್ ಕ್ರೀಡಾಗಂಣದಲ್ಲಿ ರವಿವಾರ ನಡೆದ 'ಬ್ಯಾರೀಸ್ ಪ್ರೀಮಿಯರ್...

ಕರ್ನಾಟಕ ಸಂಘ ಶಾರ್ಜಾದ ನೂತನ ಅಧ್ಯಕ್ಷರಾಗಿ ವಿಶ್ವನಾಥ್ ಶೆಟ್ಟಿ ಆಯ್ಕೆ

ದುಬೈ: ಕರ್ನಾಟಕ ಸಂಘ ಶಾರ್ಜಾ ಇದರ ನೂತನ ಅಧ್ಯಕ್ಷರಾಗಿ ವಿಶ್ವನಾಥ್ ಶೆಟ್ಟಿ...

ರಮಝಾನ್-ಈದುಲ್ ಫಿತ್ರ್ ಅಂಗವಾಗಿ ಕನ್ನಡ ಸಂಘ ಬಹರೈನ್ ವತಿಯಿಂದ ಆಹಾರ ವಸ್ತುಗಳ ಕಿಟ್ ವಿತರಣೆ

ಬಹರೈನ್: ಪವಿತ್ರ ರಮಝಾನ್ ಮತ್ತು ಈದುಲ್ ಫಿತ್ರ್ ಹಬ್ಬದ ಅಂಗವಾಗಿ ಪ್ರಸ್ತುತ...

Related Articles

Popular Categories