ಯುಎಸ್‌ಎಅಟ್ಲಾಂಟ ಕನ್ನಡಿಗರಿಂದ ಅದ್ದೂರಿಯ ಯುಗಾದಿ ಸಂಭ್ರಮಾಚರಣೆ; ಸಂಗೀತ ಪ್ರಿಯರನ್ನು...

ಅಟ್ಲಾಂಟ ಕನ್ನಡಿಗರಿಂದ ಅದ್ದೂರಿಯ ಯುಗಾದಿ ಸಂಭ್ರಮಾಚರಣೆ; ಸಂಗೀತ ಪ್ರಿಯರನ್ನು ತಲೆದೂಗುವಂತೆ ಮಾಡಿದ ರಾಜೇಶ್ ಕೃಷ್ಣನ್ ಹಾಡು

ಅಮೆರಿಕಾದ ಅಟ್ಲಾಂಟ ಕನ್ನಡಿಗರು ಮೇ 4ರಂದು ರವಿವಾರ ಅದ್ದೂರಿಯಾಗಿ ಯುಗಾದಿ ಹಾಗೂ ಕನ್ನಡ ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಿಕೊಂಡರು.

ನೃಪತುಂಗ ಕನ್ನಡ ಕೂಟದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಅವರ ಸಂಗೀತ ಸಂಜೆ ಮುಖ್ಯ ಆಕರ್ಷಣೆಯಾಗಿತ್ತು.

ಕನ್ನಡ ಶಾಲೆಯ ಶಿಕ್ಷಕರು ಮತ್ತು ಮಕ್ಕಳು

ಕಾರ್ಯಕ್ರಮದ ಒಂದು ವಾರದ ಮುಂಚೆಯೇ ಟಿಕೆಟ್ “ಸೋಲ್ಡ್ ಔಟ್” ಆಗಿದ್ದು ಕನ್ನಡಿಗರು ತಮ್ಮ ನೆಚ್ಚಿನ ಗಾಯಕನ ಹಾಡುಗಳನ್ನು ಸಂತೋಷದಿಂದ ಆನಂದಿಸಿದರು. ರಾಜೇಶ್ ಕೃಷ್ಣನ್ ತಮ್ಮ ಸುಮಧುರ ಗಾಯನ, ನಗು, ಪ್ರೀತಿಯಿಂದ ಅಭಿಮಾನಿಗಳ ಹೃದಯ ಗೆದ್ದರು. ಅಷ್ಟೇ ಅಲ್ಲದೆ ಪ್ರೋತ್ಸಾಹ ನೀಡಲು ಅಟ್ಲಾಂಟದ ಸ್ಥಳೀಯ ಪ್ರತಿಭೆಗಳನ್ನು ಸಹ ತಮ್ಮ ಜೊತೆ ಹಾಡಿಸಿ ಕನ್ನಡಿಗರ ಮನ ಗೆದ್ದರು.

ಸ್ಥಳೀಯ ಗಾಯಕರೊಂದಿಗೆ ಮನರಂಜಿಸಿದ ರಾಜೇಶ್ ಕೃಷ್ಣನ್

ಸ್ಥಳೀಯ ಪ್ರತಿಭೆಗಳಿಂದ ನೃತ್ಯ, ಗಾಯನ, ನಾಟಕಗಳನ್ನು ಆಯೋಜಿಸಲಾಗಿತ್ತು. ಕನ್ನಡ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಸ್ಥಳೀಯ ಕನ್ನಡಿಗರು ಭಾಗವಹಿಸಿ ಸಂತೋಷಪಟ್ಟರು. ಕೆ.ಆರ್.ಶ್ರೀನಾಥ್ ಅವರು ಕಾರ್ಯಕ್ರಮದಲ್ಲಿ ಕನ್ನಡ ಪ್ರಶ್ನಾವಳಿ ಕಾರ್ಯಕ್ರಮ ನಡೆಸಿಕೊಟ್ಟರು. ಕನ್ನಡ ಕೂಟ ತಂಡದವರು ಶ್ರಮವಹಿಸಿ ಇಡೀ ದಿನದ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಆಯೋಜಿಸಿ ಭರ್ಜರಿ ಭೋಜನದ ವ್ಯವಸ್ಥೆಯನ್ನು ಸಹ ಮಾಡಿದ್ದರು.

ವರದಿ: ಕೆ.ಆರ್.ಶ್ರೀನಾಥ್, ಅಟ್ಲಾಂಟ

Hot this week

ಅಬುಧಾಬಿಗೆ ಸಚಿವ ಡಾ.ಜೈಶಂಕರ್ ಭೇಟಿ; ಕನ್ನಡಿಗರ ಕೂಟ ದುಬೈ-ಅಬುಧಾಬಿ ಕರ್ನಾಟಕ ಸಂಘ ಪ್ರತಿನಿಧಿತ್ವ

ಅಬುಧಾಬಿ: ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು...

ದುಬೈ; ‘ಬ್ಯಾರೀಸ್ ಪ್ರೀಮಿಯರ್ ಲೀಗ್-2026’ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಕ್ರೌನ್ ಹೊನ್ನಾವರ; ನಫೀಸ್ ಗ್ರೂಪ್ ರನ್ನರ್ ಅಪ್

ದುಬೈ: ಶಾರ್ಜಾದ ಬಿಜೋಯ್ಸ್ ಕ್ರಿಕೆಟ್ ಕ್ರೀಡಾಗಂಣದಲ್ಲಿ ರವಿವಾರ ನಡೆದ 'ಬ್ಯಾರೀಸ್ ಪ್ರೀಮಿಯರ್...

ಕರ್ನಾಟಕ ಸಂಘ ಶಾರ್ಜಾದ ನೂತನ ಅಧ್ಯಕ್ಷರಾಗಿ ವಿಶ್ವನಾಥ್ ಶೆಟ್ಟಿ ಆಯ್ಕೆ

ದುಬೈ: ಕರ್ನಾಟಕ ಸಂಘ ಶಾರ್ಜಾ ಇದರ ನೂತನ ಅಧ್ಯಕ್ಷರಾಗಿ ವಿಶ್ವನಾಥ್ ಶೆಟ್ಟಿ...

ರಮಝಾನ್-ಈದುಲ್ ಫಿತ್ರ್ ಅಂಗವಾಗಿ ಕನ್ನಡ ಸಂಘ ಬಹರೈನ್ ವತಿಯಿಂದ ಆಹಾರ ವಸ್ತುಗಳ ಕಿಟ್ ವಿತರಣೆ

ಬಹರೈನ್: ಪವಿತ್ರ ರಮಝಾನ್ ಮತ್ತು ಈದುಲ್ ಫಿತ್ರ್ ಹಬ್ಬದ ಅಂಗವಾಗಿ ಪ್ರಸ್ತುತ...

Related Articles

Popular Categories