ಮನಾಮ: ಕರ್ನಾಟಕ ಕಲ್ಬರಲ್ ಫೌಂಡೇಶನ್ (ಕೆಸಿಎಫ್) ಬಹರೈನ್ ವತಿಯಿಂದ ಪ್ರವಾದಿ ಮುಹಮ್ಮದ್ರವರ 1501ನೇ ಜನ್ಮದಿನಾಚರಣೆಯ ಅಂಗವಾಗಿ ಆಗಸ್ಟ್ 21ರಂದು ಮನಾಮದ ಕನ್ನಡ ಭವನದಲ್ಲಿ ಆಯೋಜಿಸಲಾಗುವ ‘ಅಂತಾರಾಷ್ಟ್ರೀಯ ಗ್ರಾಂಡ್ ಈದ್ ಮೀಲಾದ್ ಕಾನ್ಸರೆನ್ಸ್-2026’ ಕಾರ್ಯಕ್ರಮದ ಸ್ವಾಗತ ಸಮಿತಿ ರಚಿಸಲಾಗಿದೆ.
‘ಪ್ರವಾದಿ ಮುಹಮ್ಮದರ ಜೀವನ ಮಾನವತೆಗೆ ಮಾದರಿ’ ಎಂಬ ಘೋಷವಾಕ್ಯದೊಂದಿಗೆ ನಡೆಯಲಿರುವ ಈ ಕಾರ್ಯಕ್ರಮದ ಸ್ವಾಗತ ಸಮಿತಿ ರಚನಾ ಸಭೆಯು ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಜಮಾಲುದ್ದೀನ್ ವಿಟ್ಲ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಖಲಂದರ್ ಶರೀಫ್ ಕಕ್ಕೆಪದವು ಅವರನ್ನು ಸ್ವಾಗತ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಸಮದ್ ಉಜಿರೆಬೆಟ್ಟು ಹಾಗೂ ಸುಹೈಲ್ ಬಿ.ಸಿ.ರೋಡ್ ಉಪಾಧ್ಯಕ್ಷರಾಗಿ, ಇಕ್ಬಾಲ್ ಮಂಜನಾಡಿ ಕನ್ವಿನರ್ ಆಗಿ, ಹನೀಫ್ ಮುಸ್ಲಿಯಾರ್ ಉಪ ಕನ್ವಿನರ್ ಆಗಿ ಹಾಗೂ ನೌಫಲ್ ವಿಟ್ಲ ಅವರನ್ನು ಕೋಶಾಧಿಕಾರಿಯಾಗಿ ಆಯ್ಕೆ ಮಾಡಲಾಯಿತು.
ಇದೇ ವೇಳೆ ಸಿದ್ದೀಖ್ ಉಸ್ತಾದ್, ಅಹ್ಮದ್ ಉಸ್ತಾದ್, ಔಫ್ ಸಅದಿ, ಶಿಹಾಬ್ ಉಸ್ತಾದ್, ಮುಆಝ್ ಉಜಿರೆ, ಮನ್ಸೂರ್ ಬೆಲ್ಮ, ಅಶ್ರಫ್ ರೆಂಜಾಡಿ, ಲತೀಫ್ ಪೆರೋಲಿ, ತೌಫೀಖ್ ಬೆಳ್ತಂಗಡಿ, ಮಜೀದ್ ಪೈಂಬಚ್ಚಾಲ್, ಶಾಫಿ ಮಾದಾಪುರ, ಮುಹಮ್ಮದ್ ಅಲಿ ವೇಣೂರು, ಹಾರಿಸ್ ಒಕ್ಕೆತ್ತೂರು, ಸಯ್ಯದ್ ಪೆರ್ಲ, ಅಶ್ರಫ್ ಕಿನ್ಯ, ನಿಯಾಝ್ ಕುರ್ನಾಡು ಹಾಗೂ ಅಝೀಝ್ ಸುಳ್ಯ ಸೇರಿದಂತೆ ಹಲವರನ್ನು ಸ್ವಾಗತ ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಖ್ಯಾತ ವಾಗ್ಮಿ ನೌಫಲ್ ಸಖಾಫಿ ಕಳಸ ಉಸ್ತಾದ್ ಭಾಗವಹಿಸಲಿದ್ದಾರೆ. ಜೊತೆಗೆ ಹಲವು ವಿದ್ವಾಂಸರು, ಧಾರ್ಮಿಕ ಮುಖಂಡರು, ಸಮುದಾಯದ ಗಣ್ಯರು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ. ಸುಹೈಲ್ ಬಿ.ಸಿ.ರೋಡ್ ಸ್ವಾಗತಿಸಿ, ಸೂಫಿ ಪೈಂಬಚ್ಚಾಲ್ ವಂದಿಸಿದರು.

