Lead Newsದುಬೈಯಲ್ಲಿ 'ಕುಲಾಲ ಫ್ಯಾಮಿಲಿ'ಯಿಂದ ಯಶಸ್ವಿಯಾಗಿ ನಡೆದ 'ವಿಹಾರ ಕೂಟ...

ದುಬೈಯಲ್ಲಿ ‘ಕುಲಾಲ ಫ್ಯಾಮಿಲಿ’ಯಿಂದ ಯಶಸ್ವಿಯಾಗಿ ನಡೆದ ‘ವಿಹಾರ ಕೂಟ 2025’

ದುಬೈ: ‘ಕುಲಾಲ ಫ್ಯಾಮಿಲಿ ದುಬೈ ಯುಎಇ’ ವತಿಯಿಂದ ಮಂಗಳವಾರ ದುಬೈಯ ಝಬೀಲ್ ಪಾರ್ಕಿನಲ್ಲಿ ಆಯೋಜಿಸಲಾಗಿದ್ದ ‘ವಿಹಾರ ಕೂಟ 2025’ ಯಶಸ್ವಿಯಾಗಿ ನಡೆಯಿತು.

ಸುಮಾರು 130ಕ್ಕೂ ಅಧಿಕ ಸಂಖ್ಯೆಯಲ್ಲಿ ಕುಲಾಲ ಸಮುದಾಯದ ಭಾಂದವರು ಪಾಲುಗೊಂದು ಸಂಭ್ರಮಿಸಿದರು. ಬೆಳಗ್ಗೆ 9 ಗಂಟೆಗೆ ಉಪಹಾರದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಕುಮಾರಿ ದೇಶ್ನ ಪ್ರವೀಣ್ ಕುಲಾಲ್ ಹಾಗೂ ಧನ್ವಿ ಸಚಿನ್ ಕುಲಾಲ್ ಪ್ರಾರ್ಥನೆ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ದುಬೈಯಲ್ಲಿ ಹಲವು ವರುಷಗಳಿಂದ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದುಕೊಂಡು ಹಿರಿಯರು ಹಾಗೂ ಮಾರ್ಗದರ್ಶಕರಾಗಿರುವ ಪದ್ಮನಾಭ ಕುಲಾಲ್ ಎಕ್ಕಾರು ಕಾರ್ಯಕ್ರಮಕ್ಕೆ ಶುಭಹಾರೈಸಿ ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸಿದಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಮಕ್ಕಳಿಗೆ ಹಾಗೂ ದೊಡ್ಡವರಿಗಾಗಿ ವಿವಿಧ ಮೋಜಿನ ಕ್ರೀಡಾ ಸ್ಪರ್ಧೆಗಳನ್ನು ಈ ಸಂದರ್ಭದಲ್ಲಿ ಆಯೋಜಿಸಲಾಗಿತ್ತು. ಮಧ್ಯಾಹ್ನ ಭೋಜನ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು. ಕೊನೆಯಲ್ಲಿ ವಿವಿಧ ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನವನ್ನು ನೀಡಲಾಯಿತು. ವಿಹಾರ ಕೂಟದಲ್ಲಿ ಭಾಗವಹಿಸದವರು ತುಂಬಾ ಉತ್ಸಾಹದಿಂದ ತಮ್ಮ ತಮ್ಮ ಅನುಭವವನ್ನು ಹಂಚಿಕೊಂಡರು. ಅಕ್ಷಯ ಕುಲಾಲ್, ಮುಖೇಶ್ ಕುಲಾಲ್, ಆನಂದ ಸಾಲ್ಯಾನ್, ಪ್ರವೀಣ್ ಕುಲಾಲ್, ನವನೀತ್ ಕುಲಾಲ್ ಹಾಗೂ ದಾಕ್ಷಾಯಿಣಿ ಕುಲಾಲ್ ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ಸಹಕರಿಸಿದರು.

Hot this week

ಅಜ್ಮಾನ್; ತುಂಬೆ ಸಮೂಹ ಸಂಸ್ಥೆಯಿಂದ BCF ಅಧ್ಯಕ್ಷ ಡಾ.ಬಿ.ಕೆ.ಯೂಸುಫ್​ಗೆ ʼLIFE TIME ACHIEVEMENT AWARDʼ

ಅಜ್ಮಾನ್: ತುಂಬೆ ಸಂಸ್ಥೆಯ 28ನೇ ವಾರ್ಷಿಕ ಅನಿವಾಸಿ ಕನ್ನಡಿಗರ ಸ್ನೇಹ ಸಮ್ಮಿಳನ...

ದುಬೈ; ‘ಬದ್ರಿಯಾ ಪ್ರೀಮಿಯರ್ ಲೀಗ್(BPL)-ಸೀಸನ್ 8’; ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಅಲ್ ದನಾ XI ತಂಡ; ರಾಯಲ್ ಥಂಡರ್ ಕುಡ್ಲ ರನ್ನರ್ ಅಪ್

ದುಬೈ: ಅನಿವಾಸಿ ಕನ್ನಡಿಗರ ಸಾಮಾಜಿಕ ಸಂಘಟನೆಯಾದ ‘ಬದ್ರಿಯಾ ಫ್ರೆಂಡ್ಸ್ ಯುಎಇ’ ಆಶ್ರಯದಲ್ಲಿ...

ಶೀಘ್ರವೇ ಅನಿವಾಸಿ ಕನ್ನಡಿಗರಿಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪನೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ

ಬೆಳಗಾವಿ: ಅನಿವಾಸಿ ಕನ್ನಡಿಗರ ಬಹುಕಾಲದ ಅತ್ಯಂತ ಪ್ರಮುಖ ಬೇಡಿಕೆಯಾಗಿರುವ ಪ್ರತ್ಯೇಕ ಸಚಿವಾಲಯವನ್ನು...

ಡಿ.12ರಂದು ಬಹರೈನ್ ಕನ್ನಡ ಸಂಘದಿಂದ ‘ಕನ್ನಡ ವೈಭವ’ ಸಾಂಸ್ಕೃತಿಕ ಕಾರ್ಯಕ್ರಮ; ಮುತ್ತುಗಳ ದ್ವೀಪದಲ್ಲಿ ಹಾಡು, ಹಾಸ್ಯ, ನೃತ್ಯಗಳ ಮಹಾ ಸಂಗಮ

ಬಹರೈನ್: ಇಲ್ಲಿನ ರಾಜ್ಯಪ್ರಶಸ್ತಿ ಪುರಸ್ಕೃತ ಕನ್ನಡ ಸಂಘದ ವಾರ್ಷಿಕ ಕಾರ್ಯಕ್ರಮವಾದ "ಕನ್ನಡ...

Related Articles

Popular Categories