ಯುಎಇದುಬೈಯಲ್ಲಿ ನಾಳೆ 'ಹೆಮ್ಮೆಯ ದುಬೈ ಕನ್ನಡ ಸಂಘ'ದಿಂದ 'ದಸರಾ...

ದುಬೈಯಲ್ಲಿ ನಾಳೆ ‘ಹೆಮ್ಮೆಯ ದುಬೈ ಕನ್ನಡ ಸಂಘ’ದಿಂದ ‘ದಸರಾ ಕಪ್’ ಕ್ರಿಕೆಟ್ ಪಂದ್ಯಾಟ; ಭಾಗವಹಿಸಲಿದೆ ಪುರುಷರ 32 ತಂಡ- 8 ಮಹಿಳಾ ತಂಡಗಳು

ದುಬೈ: ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಪ್ರಯುಕ್ತ ‘ಹೆಮ್ಮೆಯ ದುಬೈ ಕನ್ನಡ ಸಂಘ’ದ ವತಿಯಿಂದ ನಡೆಯಲಿರುವ 7ನೇ ವರ್ಷದ ಯುಎಇ ಕನ್ನಡಿಗರ ‘ದುಬೈ ದಸರಾ ಕ್ರೀಡೋತ್ಸವ ಮತ್ತು ಸಾಂಸ್ಕೃತಿಕೋತ್ಸವ’ದ ಭಾಗವಾಗಿ ‘ದುಬೈ ದಸರಾ ಕಪ್’ ಕ್ರಿಕೆಟ್ ಪಂದ್ಯಾವಳಿ ಡಿಸೆಂಬರ್ 7ರಂದು ದುಬೈಯ ಅಲ್ ಕಿಸೆಸ್ಸ್ ನ MMCT ಮೈದಾನದಲ್ಲಿ ನಡೆಯಲಿದೆ.

ಬೆಳಗ್ಗೆ 9ರಿಂದ ಸಂಜೆ 6ರ ವರಗೆ 3 ಮತ್ತು 5 ಮೈದಾನಗಳಲ್ಲಿ ಒಂದೇ ಸಮಯದಲ್ಲಿ ನಡೆಯಲಿದೆ. ಈ ಕ್ರಿಕೆಟ್ ಪಂದ್ಯಾವಳಿಗಳು ಸಂಯುಕ್ತ ಅರಬ್ ಸಂಸ್ಥಾನ(UAE)ದಲ್ಲಿ ನೆಲಸಿರುವ ಸಮಸ್ತ ಅನಿವಾಸಿ ಪುರುಷ ಮತ್ತು ಮಹಿಳಾ ಕನ್ನಡಿಗರಿಗೆ ಆಯೋಜಿಸಲಾಗಿದೆ. ಈ ದಸರಾ ಕಪ್ ಪಂದ್ಯಾವಳಿಯಲ್ಲಿ ಒಟ್ಟು 32 ಪುರುಷರ ತಂಡ ಮತ್ತು 8 ಮಹಿಳಾ ತಂಡಗಳು ಸೇರಿ ಒಟ್ಟು 40 ತಂಡಗಳು ಪ್ರತಿಷ್ಠಿತ ‘ದುಬೈ ದಸರಾ ಟ್ರೋಫಿ’ಗಾಗಿ ಸೆಣಸಾತ ನಡೆಸಲಿವೆ.

ಪಂದ್ಯಾವಳಿಗಳ ವೇಳಾಪಟ್ಟಿ ತಯಾರಿ ಮತ್ತು ಆಯೋಜಕರೊಂದಿಗೆ ತಂಡದ ನಾಯಕರ ಸಮಾಲೋಚನೆ ಸಭೆ ಹಾಗೂ ತಂಡದ ಜೆರ್ಸಿ ಅನಾವರಣ ಇತ್ತೀಚೆಗೆ ಕರಾಮದಲ್ಲಿರುವ ಯುನಿಕ್ ವರ್ಲ್ಡ್ ಸೆಂಟರ್ ಬೋರ್ಡ್ ರೂಮಿನಲ್ಲಿ ನಡೆಯಿತು. ಎಲ್ಲಾ 40 ತಂಡಗಳ ಪ್ರತಿನಿಧಿ ಆಗಮಿಸಿ ಪಂದ್ಯದಲ್ಲಿ ಪಾಲಿಸಬೇಕಾದ ನೀತಿ ನಿಯಮಗಳನ್ನು ಕ್ರಿಕೆಟ್ ಆಯೋಜಕ ಸಮಿತಿಯ ಕ್ಲಿವನ್ ಅವರಿಂದ ಮಾಹಿತಿ ಪಡೆದರು. ಸಭೆಯಲ್ಲಿ ದಸರಾ ಕಪ್ ಕ್ರಿಕೆಟ್ ಆಯೋಜಕರಾದ ಹೆಮ್ಮೆಯ ದುಬೈ ಕನ್ನಡ ಸಂಘದ ರಫೀಕಲಿ ಕೊಡಗು, ಶಂಕರ್ ಬೆಳಗಾವಿ, ಪ್ರತಾಪ್ ಮಡಿಕೇರಿ, ಅಯೂಬ್ ಶಿವಮೊಗ್ಗ, ನಝೀರ ಮಂಡ್ಯ, ರಂಗ ಬೆಂಗಳೂರು, ಬಾಸಿತ್ ಉಡುಪಿ ಮುಂತಾದವರು ಉಪಸ್ಥಿತರಿದ್ದರು.

ದುಬೈ ದಸರಾದ ಮುಖ್ಯ ಕಾರ್ಯಕ್ರಮವಾದ ಕ್ರೀಡೋತ್ಸವ ಡಿಸೆಂಬರ್ 21ರಂದು ಬೆಳಗ್ಗೆ 8ರಿಂದ ರಾತ್ರಿ 11ರವರೆಗೆ ಬಹಳ ಅದ್ದೂರಿಯಾಗಿ ಎಥಿಸಲಾತ್ ಸ್ಪೋರ್ಟ್ಸ್ ಅಕಾಡೆಮಿ ಲೀಸರ್ ಕ್ಲಬ್ಬಿನಲ್ಲಿ ನಡೆಯಲಿದೆ. ಅಂದು ಮಕ್ಕಳು ಮಹಿಳೆಯರು ಮತ್ತು ಪುರುಷರಿಗೆ ವಿವಿಧ ರೀತಿಯ ಕ್ರೀಡೆ ಮತ್ತು ಸಾಂಸ್ಕ್ರತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ತಾಯಿನಾಡಿನಿಂದ ಖ್ಯಾತ ಕಲಾವಿದರನ್ನು ಕರೆಸಿ ಆಗಮಿಸಿದ ಅನಿವಾಸಿ ದುಬೈ ಕನ್ನಡಿಗರಿಗೆ ಸಂಗೀತ ಸಂಜೆಯ ರಸದೌತಣ ನೀಡಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

Hot this week

ಅಜ್ಮಾನ್; ತುಂಬೆ ಸಮೂಹ ಸಂಸ್ಥೆಯಿಂದ BCF ಅಧ್ಯಕ್ಷ ಡಾ.ಬಿ.ಕೆ.ಯೂಸುಫ್​ಗೆ ʼLIFE TIME ACHIEVEMENT AWARDʼ

ಅಜ್ಮಾನ್: ತುಂಬೆ ಸಂಸ್ಥೆಯ 28ನೇ ವಾರ್ಷಿಕ ಅನಿವಾಸಿ ಕನ್ನಡಿಗರ ಸ್ನೇಹ ಸಮ್ಮಿಳನ...

ದುಬೈ; ‘ಬದ್ರಿಯಾ ಪ್ರೀಮಿಯರ್ ಲೀಗ್(BPL)-ಸೀಸನ್ 8’; ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಅಲ್ ದನಾ XI ತಂಡ; ರಾಯಲ್ ಥಂಡರ್ ಕುಡ್ಲ ರನ್ನರ್ ಅಪ್

ದುಬೈ: ಅನಿವಾಸಿ ಕನ್ನಡಿಗರ ಸಾಮಾಜಿಕ ಸಂಘಟನೆಯಾದ ‘ಬದ್ರಿಯಾ ಫ್ರೆಂಡ್ಸ್ ಯುಎಇ’ ಆಶ್ರಯದಲ್ಲಿ...

ಶೀಘ್ರವೇ ಅನಿವಾಸಿ ಕನ್ನಡಿಗರಿಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪನೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ

ಬೆಳಗಾವಿ: ಅನಿವಾಸಿ ಕನ್ನಡಿಗರ ಬಹುಕಾಲದ ಅತ್ಯಂತ ಪ್ರಮುಖ ಬೇಡಿಕೆಯಾಗಿರುವ ಪ್ರತ್ಯೇಕ ಸಚಿವಾಲಯವನ್ನು...

ಡಿ.12ರಂದು ಬಹರೈನ್ ಕನ್ನಡ ಸಂಘದಿಂದ ‘ಕನ್ನಡ ವೈಭವ’ ಸಾಂಸ್ಕೃತಿಕ ಕಾರ್ಯಕ್ರಮ; ಮುತ್ತುಗಳ ದ್ವೀಪದಲ್ಲಿ ಹಾಡು, ಹಾಸ್ಯ, ನೃತ್ಯಗಳ ಮಹಾ ಸಂಗಮ

ಬಹರೈನ್: ಇಲ್ಲಿನ ರಾಜ್ಯಪ್ರಶಸ್ತಿ ಪುರಸ್ಕೃತ ಕನ್ನಡ ಸಂಘದ ವಾರ್ಷಿಕ ಕಾರ್ಯಕ್ರಮವಾದ "ಕನ್ನಡ...

Related Articles

Popular Categories