ಬಹರೈನ್ಬಹರೈನ್; ಆಗಸ್ಟ್ 21ರಂದು 'ಕೆಸಿಎಫ್'ನಿಂದ ಗ್ರ್ಯಾಂಡ್ ಮೀಲಾದ್ ಕಾನ್ಫರೆನ್ಸ್

ಬಹರೈನ್; ಆಗಸ್ಟ್ 21ರಂದು ‘ಕೆಸಿಎಫ್’ನಿಂದ ಗ್ರ್ಯಾಂಡ್ ಮೀಲಾದ್ ಕಾನ್ಫರೆನ್ಸ್

ಮನಾಮ: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಬಹರೈನ್ ರಾಷ್ಟ್ರೀಯ ಸಮಿತಿಯ ವತಿಯಿಂದ ಆಗಸ್ಟ್ 21ರಂದು ಮನಾಮದ ಕನ್ನಡ ಭವನದಲ್ಲಿ ‘ಪ್ರವಾದಿ ﷺ ಅವರ ಜೀವನ ಮಾನವತೆಗೆ ಮಾದರಿ’ ಎಂಬ ಸಂದೇಶದೊಂದಿಗೆ ಬೃಹತ್ ಮೀಲಾದ್ ಸಮ್ಮೇಳನ ನಡೆಯಲಿದೆ.

ಈ ಬಗ್ಗೆ ಬಹರೈನ್ ನ ಕೆಸಿಎಫ್ ಸೆಂಟರ್ ನಲ್ಲಿ ಆಟೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಘಟಕರು, ಸಮಾರಂಭವು ಆಗಸ್ಟ್ 21 ಶುಕ್ರವಾರ ಸಂಜೆ 6.30ಕ್ಕೆ ಕನ್ನಡ ಭವನ, ಮನಾಮದಲ್ಲಿ ನಡೆಯಲಿದೆ. ಪ್ರಸಿದ್ದ ವಾಗ್ಮಿ ಝಿಕ್ರಾ ಥಿಯಾಲಾಜಿಕಲ್ ಅಕಾಡೆಮಿ, ಮೂಡಬಿದ್ರಿಯ ಪ್ರಿನ್ಸಿಪಾಲ್ ನೌಫಲ್ ಸಖಾಫಿ ಕಳಸ ಉಸ್ತಾದರು ಮುಖ್ಯ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ ಎಂದರು.

ಸಮ್ಮೇಳನದ ಉದ್ದೇಶ, ಕಾರ್ಯಕ್ರಮದ ವಿಶೇಷತೆಗಳು ಹಾಗೂ ಸಮಾಜದಲ್ಲಿ ಪ್ರವಾದಿ ಮುಹಮ್ಮದ್ ﷺ ಅವರ ಮಾನವೀಯ ಆದರ್ಶಗಳ ಸಂದೇಶವನ್ನು ಸಾರುವ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಕೆಸಿಎಫ್ ಬಹರೈನ್ ವತಿಯಿಂದ ಕರೆ ನೀಡಲಾಯಿತು.

ಪತ್ರಿಕಾಗೋಷ್ಟಿಯಲ್ಲಿ ಮೀಲಾದ್ ಸ್ವಾಗತ ಸಮಿತಿ ಚೇರ್ಮ್ಯಾನ್ ಕಲಂದರ್ ಮುಸ್ಲಿಯಾರ್, ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ವಿಠ್ಠಲ್ ಜಮಾಲುದ್ದೀನ್, ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯ, ರಾಷ್ಟ್ರೀಯ ನಾಯಕರಾದ ಮನ್ಸೂರ್ ಬೆಲ್ಮ, ಅಶ್ರಫ್ ರೆಂಜಾಡಿ, ಮೂಸಾ ಪೈಬಂಚಾಲ್, ತೌಫೀಕ್ ಬೆಳ್ತಂಗಡಿ, ಲತೀಫ್ ಪೇರೋಲಿ, ಶಾಫಿ ಮಾದಾಪುರ, ಝೋನ್ ನಾಯಕರರಾದ ಅಬೂಬಕ್ಕರ್ ಪೆರುವಾಯಿ, ವೇಣೂರ್ ಮುಹಮ್ಮದ್ ಅಲಿ ಮುಸ್ಲಿಯಾರ್, ನಿಯಾಝ್ ಕೂರ್ನಾಡ್, ಮಜೀದ್ ಪೈಂಬಚಾಲ್ ಉಪಸ್ಥಿತರಿದ್ದರು.

Hot this week

ಭಾರತೀಯ ರಾಯಭಾರ ಕಚೇರಿಯ ಡಾ.ಈಶ್ ಸಿಂಘಾಲ್​​ಗೆ ಭಾವಪೂರ್ಣ ಬೀಳ್ಕೊಡುಗೆ; ಕರ್ನಾಟಕ ಸಂಘ ಖತರ್‌ನಿಂದ ಅಭಿನಂದನೆ

ದೋಹಾ(ಖತರ್): ಖತರ್‌ನಲ್ಲಿ ತಮ್ಮ ಸೇವಾವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಭಾರತೀಯ ರಾಯಭಾರ ಕಚೇರಿಯ...

ವಂದೇ ಮಾತರಂ ಮತ್ತು ಜನಗಣಮನ ಗೀತೆಯೊಂದಿಗೆ ಅಮೇರಿಕದಲ್ಲಿ ಗೃಹಪ್ರವೇಶ

ವರದಿ: ಬೆಂಕಿ ಬಸಣ್ಣ, ನ್ಯೂಯಾರ್ಕ್ 1875ರಲ್ಲಿ ಭಾರತದಲ್ಲಿ ಮೊಳಗಿದ ‘ವಂದೇ ಮಾತರಂ’ 150...

ದುಬೈ; ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ಸಾಮಾಜಿಕ ಸಮ್ಮಿಲನ ಕಾರ್ಯಕ್ರಮ

ದುಬೈ: ಪರಿಸರ ಸಂರಕ್ಷಣೆ, ಸಾಮಾಜಿಕ ಜಾಗೃತಿ ಹಾಗೂ ಸಮಾಜಮುಖಿ ಕಾರ್ಯಗಳಿಗೆ ಬದ್ಧವಾಗಿರುವ...

ನ್ಯೂಯಾರ್ಕ್; ಆಲ್ಬನಿಯಲ್ಲಿ ಸಂಭ್ರಮದ ಕನ್ನಡ ಕಲಿ ಪದವಿ ಪ್ರದಾನ

ವರದಿ: ಬೆಂಕಿ ಬಸಣ್ಣ, ನ್ಯೂಯಾರ್ಕ್ ಆಲ್ಬನಿ(ನ್ಯೂಯಾರ್ಕ್): ಅಮೇರಿಕದಲ್ಲಿ ಹುಟ್ಟಿ ಬೆಳೆಯುತ್ತಿರುವ ಮಕ್ಕಳಿಗೆ ಕನ್ನಡ...

Related Articles

Popular Categories