ಯುಎಇದುಬೈಯಲ್ಲಿ 'ಭುವನಂ ಗಗನಂ' ಚಿತ್ರದ ಪ್ರೀಮಿಯರ್ ಪ್ರದರ್ಶನ

ದುಬೈಯಲ್ಲಿ ‘ಭುವನಂ ಗಗನಂ’ ಚಿತ್ರದ ಪ್ರೀಮಿಯರ್ ಪ್ರದರ್ಶನ

ದುಬೈ: ದುಬೈಯ ಕನ್ನಡಿಗರು ಒಂದು ಒಳ್ಳೆಯ ಚಿತ್ರವನ್ನು ನೋಡಿ, ಚಿತ್ರವು ಕರುನಾಡಿನಲ್ಲಿ ಯಶಸ್ವಿ ಪ್ರದರ್ಶನ ಕಾಣಲಿ ಎಂದು ಶುಭವನ್ನು ಹಾರೈಸಿ ಚಿತ್ರ ತಂಡಕ್ಕೆ ಬೆನ್ನು ತಟ್ಟಿ ಪೋತ್ಸಾಹಿಸಿದ ಘಟನೆ ಶನಿವಾರ ರವಿವಾರ ನಡೆಯಿತು.

ದುಬೈಯ ಅಲ್ ಘುರೈರ್ ಮಾಲ್ ನಲ್ಲಿ ಪೃಥ್ವಿ ಅಂಬಾರ್ ಮತ್ತು ಪ್ರಮೋದ್ ಪ್ರಮುಖ ಪಾತ್ರಗಳಲ್ಲಿ ನಟನೆಯ “ಭುವನಂ ಗಗನಂ” ಚಿತ್ರದ ಪ್ರೀಮಿಯರ್ ಪ್ರದರ್ಶನ ಫೆ.1 ಮತ್ತು 2ರಂದು ಯಶಸ್ವಿ ಪ್ರದರ್ಶನ ಕಂಡಿತ್ತು. ದುಬೈಯ ಹಲವಾರು ಮಂದಿ ಈ ಚಿತ್ರವನ್ನು ನೋಡಿ, ಚಿತ್ರ ತಂಡಕ್ಕೆ ಬೆನ್ನು ತಟ್ಟಿ ಪೋತ್ಸಾಹಿಸಿದಲ್ಲದೆ ಮತ್ತೊಮ್ಮೆ ಈ ಚಿತ್ರವನ್ನು ನೋಡುತ್ತೇವೆ ಎಂಬ ಭರವಸೆಯನ್ನು ನೀಡಿದ್ದಾರೆ.

‘ಭುವನಂ ಗಗನಂ’ ಒಂದು ಸುಂದರ ಪ್ರೇಮ ಕಹಾನಿ ತುಂಬಿರುವ‌ ಚಿತ್ರದಲ್ಲಿ ಕಾಲೇಜು ಜೀವನ, ತಂದೆ ತಾಯಿಯ ವಾತ್ಸಲ್ಯ, ಗಂಡ ಹೆಂಡತಿ ಪ್ರೀತಿ, ಸ್ವಲ್ಪ ನಗು, ಸ್ವಲ್ಪ ಅಳು ಎಲ್ಲವೂ ಅಡಗಿರುವ ಒಂದು ಸುಂದರ ಕಥೆಯನ್ನು ಒಳಗೊಂಡ ಚಿತ್ರವಾಗಿದೆ.

ರವಿವಾರ ಅಲ್ ಘುರೈರ್ ಚಿತ್ರ ಮಂದಿರದಲ್ಲಿ ಸರಳ ರೀತಿಯಲ್ಲಿ ನಡೆದ ಚಿತ್ರದ ಬಿಡುಗಡೆ ಕಾರ್ಯಕ್ರಮದಲ್ಲಿ ಚಿತ್ರ ನಿರ್ಮಾಪಕರು, ದುಬೈಯ ಯಶಸ್ವಿ ಉದ್ಯಮಿ ಹರೀಶ್ ಶೇರಿಗಾರ್ ಪ್ರೀಮಿಯರ್ ಪ್ರದರ್ಶನವನ್ನು ಉದ್ಘಾಟಿಸಿ ಚಿತ್ರಕ್ಕೆ ಶುಭವನ್ನು ಹಾರೈಸಿದರು.

ಒಕ್ಕಲಿಗರ ಸಂಘ ಯುಎಇಯ ಅಧ್ಯಕ್ಷರಾದ ಕಿರಣ್ ಗೌಡ, ಮಾರ್ಗದೀಪ ಸಮಾಜದ ಸುಗಂದರಾಜ್ ಬೇಕಲ್ ಉಪಸ್ಥಿತರಿದ್ದರು. ಚಿತ್ರದ ನಾಯಕ ನಟರಾದ ಪೃಥ್ವಿ ಅಂಬಾರ್, ಪ್ರಮೋದ್, ಚಿತ್ರದ ನಿರ್ಮಾಪಕರಾದ ಎಂ.ಮುನೇಗೌಡ, ಚಿತ್ರದ ನಿರ್ದೇಶಕ ಗಿರೀಶ್ ಮೂಲಿಮನಿ, ಮಹೇಶ್ ಗೌಡ ಉಪಸ್ಥಿತರಿದ್ದು, ಯುಎಇಯ ಚಿತ್ರ ಪ್ರೇಮಿಗಳೊಂದಿಗೆ ಕುಳಿತು ಚಿತ್ರ ವೀಕ್ಷಿಸಿದರು. OMG ಸಂಸ್ಥೆಯ ಸೆಂತಿಲ್ ಬೆಂಗಳೂರು ತಂಡವು ಚಿತ್ರದ ಪ್ರೀಮಿಯರ್ ಪ್ರದರ್ಶನಕ್ಕೆ ಸಾಥ್ ನೀಡಿತ್ತು. ಸಂತೋಷ್ ಶೆಟ್ಟಿ ಪೊಳಲಿಯವರು ಸರಳ ರೀತಿಯಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮವನ್ನು ನಿರೂಪಿಸಿದರು.

ಫೆಬ್ರವರಿ 14 ರಂದು ಕರ್ನಾಟಕ ಹಾಗೂ ಗಲ್ಫ್ ದೇಶಗಳಲ್ಲಿ ಏಕಕಾಲದಲ್ಲಿ ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಈ ಚಿತ್ರದ ತಾರಾಗಣದಲ್ಲಿ ನಾಯಕಿಯರಾಗಿ ರೆಸೆಲ್ ಡೇವಿಡ್, ಅಶ್ವತಿ, ಅಚ್ಯುತ ಕುಮಾರ್, ಶರತ್ ಲೋಹಿತಾಶ್ವ, ಪ್ರಕಾಶ್ ತೂಮಿನಾಡು ಹಾಗೂ ಕರುನಾಡಿನ ಹಲವಾರು ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ವರದಿ: ವಿಜಯಕುಮಾರ್ ಶೆಟ್ಟಿ ಗಾಣದಮೂಲೆ (ದುಬೈ)

Hot this week

DKSC ಕುವೈತ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾಗಿ ಅನ್ವರ್ ಸಾಹೇಬ್ ಕುಂಜಾಲ್ ಆಯ್ಕೆ

ಕುವೈತ್: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (DKSC), ಇದರ ಕುವೈತ್ ರಾಷ್ಟ್ರೀಯ...

ಕರ್ನಾಟಕ ಸಂಘ ಖತರ್‌ನಿಂದ ರಮಝಾನ್‌ ಸೇವಾ ಕಾರ್ಯ: ಇಫ್ತಾರ್ ಆಹಾರ ಕಿಟ್‌ಗಳ ವಿತರಣೆ

ಕರ್ನಾಟಕ ಸಂಘ ಖತರ್‌ (KSQ), ರಮಝಾನ್‌ ಮಾಸದ ಪವಿತ್ರ ಚಟುವಟಿಕೆಗಳ ಭಾಗವಾಗಿ...

ಅಟ್ಲಾಂಟ ಒಕ್ಕಲಿಗರ ಕೂಟದಿಂದ ಪ್ರಥಮ ಸಮಾವೇಶ

ಕೆ. ಆರ್. ಶ್ರೀನಾಥ್, ಅಟ್ಲಾಂಟ ಅಟ್ಲಾಂಟ: ಫೆಬ್ರವರಿ 22ರ ರವಿವಾರದಂದು ಅಟ್ಲಾಂಟದಲ್ಲಿ ನೆಲಸಿರುವ...

AIM India Forum Delegation Meets Indian Ambassador to UAE

Abu Dhabi: A delegation from AIM India Forum met...

Konkani movie ‘My Dear Father’ thrills audience in Kuwait with double premiere shows

Kuwait: The Konkani film My Dear Father was screened...

Related Articles

Popular Categories