ಯುಎಇದುಬೈಯಲ್ಲಿ 'ಭುವನಂ ಗಗನಂ' ಚಿತ್ರದ ಪ್ರೀಮಿಯರ್ ಪ್ರದರ್ಶನ

ದುಬೈಯಲ್ಲಿ ‘ಭುವನಂ ಗಗನಂ’ ಚಿತ್ರದ ಪ್ರೀಮಿಯರ್ ಪ್ರದರ್ಶನ

ದುಬೈ: ದುಬೈಯ ಕನ್ನಡಿಗರು ಒಂದು ಒಳ್ಳೆಯ ಚಿತ್ರವನ್ನು ನೋಡಿ, ಚಿತ್ರವು ಕರುನಾಡಿನಲ್ಲಿ ಯಶಸ್ವಿ ಪ್ರದರ್ಶನ ಕಾಣಲಿ ಎಂದು ಶುಭವನ್ನು ಹಾರೈಸಿ ಚಿತ್ರ ತಂಡಕ್ಕೆ ಬೆನ್ನು ತಟ್ಟಿ ಪೋತ್ಸಾಹಿಸಿದ ಘಟನೆ ಶನಿವಾರ ರವಿವಾರ ನಡೆಯಿತು.

ದುಬೈಯ ಅಲ್ ಘುರೈರ್ ಮಾಲ್ ನಲ್ಲಿ ಪೃಥ್ವಿ ಅಂಬಾರ್ ಮತ್ತು ಪ್ರಮೋದ್ ಪ್ರಮುಖ ಪಾತ್ರಗಳಲ್ಲಿ ನಟನೆಯ “ಭುವನಂ ಗಗನಂ” ಚಿತ್ರದ ಪ್ರೀಮಿಯರ್ ಪ್ರದರ್ಶನ ಫೆ.1 ಮತ್ತು 2ರಂದು ಯಶಸ್ವಿ ಪ್ರದರ್ಶನ ಕಂಡಿತ್ತು. ದುಬೈಯ ಹಲವಾರು ಮಂದಿ ಈ ಚಿತ್ರವನ್ನು ನೋಡಿ, ಚಿತ್ರ ತಂಡಕ್ಕೆ ಬೆನ್ನು ತಟ್ಟಿ ಪೋತ್ಸಾಹಿಸಿದಲ್ಲದೆ ಮತ್ತೊಮ್ಮೆ ಈ ಚಿತ್ರವನ್ನು ನೋಡುತ್ತೇವೆ ಎಂಬ ಭರವಸೆಯನ್ನು ನೀಡಿದ್ದಾರೆ.

‘ಭುವನಂ ಗಗನಂ’ ಒಂದು ಸುಂದರ ಪ್ರೇಮ ಕಹಾನಿ ತುಂಬಿರುವ‌ ಚಿತ್ರದಲ್ಲಿ ಕಾಲೇಜು ಜೀವನ, ತಂದೆ ತಾಯಿಯ ವಾತ್ಸಲ್ಯ, ಗಂಡ ಹೆಂಡತಿ ಪ್ರೀತಿ, ಸ್ವಲ್ಪ ನಗು, ಸ್ವಲ್ಪ ಅಳು ಎಲ್ಲವೂ ಅಡಗಿರುವ ಒಂದು ಸುಂದರ ಕಥೆಯನ್ನು ಒಳಗೊಂಡ ಚಿತ್ರವಾಗಿದೆ.

ರವಿವಾರ ಅಲ್ ಘುರೈರ್ ಚಿತ್ರ ಮಂದಿರದಲ್ಲಿ ಸರಳ ರೀತಿಯಲ್ಲಿ ನಡೆದ ಚಿತ್ರದ ಬಿಡುಗಡೆ ಕಾರ್ಯಕ್ರಮದಲ್ಲಿ ಚಿತ್ರ ನಿರ್ಮಾಪಕರು, ದುಬೈಯ ಯಶಸ್ವಿ ಉದ್ಯಮಿ ಹರೀಶ್ ಶೇರಿಗಾರ್ ಪ್ರೀಮಿಯರ್ ಪ್ರದರ್ಶನವನ್ನು ಉದ್ಘಾಟಿಸಿ ಚಿತ್ರಕ್ಕೆ ಶುಭವನ್ನು ಹಾರೈಸಿದರು.

ಒಕ್ಕಲಿಗರ ಸಂಘ ಯುಎಇಯ ಅಧ್ಯಕ್ಷರಾದ ಕಿರಣ್ ಗೌಡ, ಮಾರ್ಗದೀಪ ಸಮಾಜದ ಸುಗಂದರಾಜ್ ಬೇಕಲ್ ಉಪಸ್ಥಿತರಿದ್ದರು. ಚಿತ್ರದ ನಾಯಕ ನಟರಾದ ಪೃಥ್ವಿ ಅಂಬಾರ್, ಪ್ರಮೋದ್, ಚಿತ್ರದ ನಿರ್ಮಾಪಕರಾದ ಎಂ.ಮುನೇಗೌಡ, ಚಿತ್ರದ ನಿರ್ದೇಶಕ ಗಿರೀಶ್ ಮೂಲಿಮನಿ, ಮಹೇಶ್ ಗೌಡ ಉಪಸ್ಥಿತರಿದ್ದು, ಯುಎಇಯ ಚಿತ್ರ ಪ್ರೇಮಿಗಳೊಂದಿಗೆ ಕುಳಿತು ಚಿತ್ರ ವೀಕ್ಷಿಸಿದರು. OMG ಸಂಸ್ಥೆಯ ಸೆಂತಿಲ್ ಬೆಂಗಳೂರು ತಂಡವು ಚಿತ್ರದ ಪ್ರೀಮಿಯರ್ ಪ್ರದರ್ಶನಕ್ಕೆ ಸಾಥ್ ನೀಡಿತ್ತು. ಸಂತೋಷ್ ಶೆಟ್ಟಿ ಪೊಳಲಿಯವರು ಸರಳ ರೀತಿಯಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮವನ್ನು ನಿರೂಪಿಸಿದರು.

ಫೆಬ್ರವರಿ 14 ರಂದು ಕರ್ನಾಟಕ ಹಾಗೂ ಗಲ್ಫ್ ದೇಶಗಳಲ್ಲಿ ಏಕಕಾಲದಲ್ಲಿ ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಈ ಚಿತ್ರದ ತಾರಾಗಣದಲ್ಲಿ ನಾಯಕಿಯರಾಗಿ ರೆಸೆಲ್ ಡೇವಿಡ್, ಅಶ್ವತಿ, ಅಚ್ಯುತ ಕುಮಾರ್, ಶರತ್ ಲೋಹಿತಾಶ್ವ, ಪ್ರಕಾಶ್ ತೂಮಿನಾಡು ಹಾಗೂ ಕರುನಾಡಿನ ಹಲವಾರು ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ವರದಿ: ವಿಜಯಕುಮಾರ್ ಶೆಟ್ಟಿ ಗಾಣದಮೂಲೆ (ದುಬೈ)

Hot this week

ಕನ್ನಡ ಕಲಿಕೆಯ ಜೊತೆ ಖತರ್‌ನ ಸ್ಥಳೀಯ ಸಮುದಾಯದಲ್ಲಿ ಭಾರತೀಯ ಸಂಸ್ಕೃತಿ ಪ್ರಚಾರಕ್ಕೆ ಆದ್ಯತೆ ನೀಡಿ: ಭಾರತೀಯ ರಾಯಭಾರಿ ವಿಪುಲ್ ಮನವಿ

ದೋಹಾ: ಖತರ್‌ನ ಭಾರತೀಯ ಸಾಂಸ್ಕೃತಿಕ ಕೇಂದ್ರದ (ಐಸಿಸಿ) ಅಂಗಸಂಸ್ಥೆಯಾದ ‘ಕರ್ನಾಟಕ ಸಂಘ...

ಬಹರೈನ್‌; ‘ಕೆಸಿಎಫ್’ನಿಂದ ಈದ್ ಮಿಲಾದ್ ಸಮ್ಮೇಳನಕ್ಕೆ ಸ್ವಾಗತ ಸಮಿತಿ ರಚನೆ

ಮನಾಮ: ಕರ್ನಾಟಕ ಕಲ್ಬರಲ್ ಫೌಂಡೇಶನ್ (ಕೆಸಿಎಫ್) ಬಹರೈನ್‌ ವತಿಯಿಂದ ಪ್ರವಾದಿ ಮುಹಮ್ಮದ್‌ರವರ...

ಅಮೇರಿಕ; ಭಕ್ತಿ, ಬಸವತತ್ವ, ನಾಟಕ-ನೃತ್ಯ ವೈಭವದಿಂದ ಕಂಗೊಳಿಸಿದ VSNA ಮಹಾಸಮ್ಮೇಳನದ ಎರಡನೇ ದಿನ

ವರದಿ: ಬೆಂಕಿ ಬಸಣ್ಣ, ನ್ಯೂಯಾರ್ಕ್ ಸ್ಯಾನ್‌ಫೋರ್ಡ್ (ಉತ್ತರ ಕೆರೊಲಿನಾ: 48ನೇ ವೀರಶೈವ ಸೊಸೈಟಿ...

ಕನ್ನಡ ಸಂಘ ಬಹರೈನ್‌ನ ‘ಯಕ್ಷ ವೈಭವ 2026’ ಮುಹೂರ್ತ ಪೂಜೆ ಸಂಪನ್ನ

ಬಹರೈನ್‌: ಕನ್ನಡ ಸಂಘ ಬಹರೈನ್ ಅರ್ಪಿಸುವ ‘ಯಕ್ಷ ವೈಭವ 2026’ ರ...

ಅಮೇರಿಕ; ಉತ್ತರ ಕೆರೊಲಿನಾದಲ್ಲಿ 48ನೇ ವಿಎಸ್‌ಎನ್‌ಎ ಮಹಾಸಮ್ಮೇಳನಕ್ಕೆ ಅದ್ದೂರಿ ಚಾಲನೆ

-ಬೆಂಕಿ ಬಸಣ್ಣ, ಉತ್ತರ ಕೆರೊಲಿನಾ ಉತ್ತರ ಅಮೇರಿಕದ ವೀರಶೈವ-ಲಿಂಗಾಯತ ಸಮುದಾಯದ ಅತ್ಯಂತ ಹಿರಿಯ...

Related Articles

Popular Categories