ಬಹರೈನ್ಬಹರೈನ್‌ನಲ್ಲಿ ಡಿ.19ರಂದು ಉಡುಪಿ ಪ್ರಜ್ಞಾನಂ ತಂಡದಿಂದ 'ಹೆಜ್ಜಗೊಲಿದ ಬೆಳಕು'...

ಬಹರೈನ್‌ನಲ್ಲಿ ಡಿ.19ರಂದು ಉಡುಪಿ ಪ್ರಜ್ಞಾನಂ ತಂಡದಿಂದ ‘ಹೆಜ್ಜಗೊಲಿದ ಬೆಳಕು’ ನಾಟಕ ಪ್ರದರ್ಶನ

ಬಹರೈನ್: ಬಹರೈನ್‌ನ ಕನ್ನಡ ಸಂಘದ ಆಶ್ರಯದಲ್ಲಿ ಉಡುಪಿ ಪ್ರಜ್ಞಾನಂ ಟ್ರಸ್ಟ್ (ರಿ)ನಿರ್ಮಿಸಿದ ವಿಶಿಷ್ಟ ಏಕವ್ಯಕ್ತಿ ನಾಟಕ “ಹೆಜ್ಜೆ ಗೊಲಿದ ಬೆಳಕು” ಬಹರೈನ್‌ನ ಮನಾಮಾದ ಕನ್ನಡ ಭವನದಲ್ಲಿ ಡಿಸೆಂಬರ್ 19ರ ಶುಕ್ರವಾರದಂದು ಅದ್ದೂರಿಯಾಗಿ ಪ್ರದರ್ಶನಗೊಳ್ಳಲಿದೆ.

ನೃತ್ಯ ವಿದುಷಿ ಸಂಸ್ಕೃತಿ ಅಭಿನಯದ ಈ ನಾಟಕ ಅಮೋಘ ನೃತ್ಯ ಮತ್ತು ಅಭಿನಯ, ಮಾತುಗಾರಿಕೆ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದು, ರಂಗಕರ್ಮಿ ಗಣೇಶ್ ರಾವ್ ಎಲ್ಲೂರು ಈ ನಾಟಕ ನಿರ್ದೇಶನ ನೀಡಿದ್ದಾರೆ. ಬೆಳಕು ವಿನ್ಯಾಸ ಶಂಕರ್ ಕೆ ಶಿವಮೊಗ್ಗ ಮಾಡಿದ್ದು, ಸಂಗೀತ ನಿರ್ವಹಣೆ ಸಂಹಿತಾ ಜಿಪಿ ಮಾಡಲಿದ್ದಾರೆ. ಖ್ಯಾತ ಸಾಹಿತಿ ಸುಧಾ ಆಡುಕಳ ನಾಟಕ ರಚನೆ ಮಾಡಿದ್ದಾರೆ.

ಬಹರೈನ್‌ ಕನ್ನಡ ಸಂಘ ಮತ್ತು ಬಹರೈನ್‌ನಲ್ಲಿ ಉದ್ಯೋಗಿಗಳಾಗಿದ್ದು ಪ್ರಜ್ಞಾನಂ ಟ್ರಸ್ಟ್ ಬಂಧುಗಳಾಗಿರುವ ಸುರೇಶ್ ಸಿದ್ದಕೆರೆ, ಶ್ರೀನಾಥ ಚೆಕ್ಕೆ, ಕವಿತಾ ಸುರೇಶ, ರಾಮ ಪ್ರಸಾದ್ ಅಮ್ಮೆನಡ್ಕ ಈ ನಾಟಕ ಪ್ರದರ್ಶನ ಪ್ರಾಯೋಜಿಸಿದ್ದಾರೆ ಎಂದು ಉಡುಪಿ ಪ್ರಜ್ಞಾನಂ ಟ್ರಸ್ಟ್ ಅಧ್ಯಕ್ಷ ಜಿ ಪಿ ಪ್ರಭಾಕರ್ ತುಮರಿ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

Hot this week

ದುಬೈ; ಅದ್ದೂರಿಯಾಗಿ ನಡೆದ ಯುಎಇ ಬಂಟ್ಸ್‌ನ 48ನೇ ವರ್ಷದ ಕೂಡುಕಟ್ಟ್ ‘ಭಾವೈಕ್ಯ’ ಬಂಟರ ಸಮಾಗಮ

​ದುಬೈ: ಇಲ್ಲಿನ ಶೇಖ್ ಝಾಯೆದ್ ರಸ್ತೆಯಲ್ಲಿರುವ ಮಿಲೆನಿಯಂ ಪ್ಲಾಝಾ ಹೋಟೆಲ್‌ನ ಸಭಾಂಗಣದಲ್ಲಿ...

Al Qamar Moolur Family fest held in Umm Al Quwain

Umm Al Quwain: Al Qamar Moolur Family Fest 2025...

ಕಲಾದರ್ಪಣ 2025: ಕುವೈತ್ ಕನ್ನಡ ಕೂಟದ ಅದ್ದೂರಿ ರಾಜ್ಯೋತ್ಸವ; ಕರ್ನಾಟಕದ ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿಯ ಸಮ್ಮಿಲನ

ಕುವೈತ್: ಕುವೈತ್ ಕನ್ನಡ ಕೂಟ ಒಂದು ಸಾಮಾಜಿಕ-ಸಾಂಸ್ಕೃತಿಕ ಸಂಘಟನೆ, 41 ವರ್ಷಗಳಿಂದ...

ಅಜ್ಮಾನ್; ತುಂಬೆ ಸಮೂಹ ಸಂಸ್ಥೆಯಿಂದ BCF ಅಧ್ಯಕ್ಷ ಡಾ.ಬಿ.ಕೆ.ಯೂಸುಫ್​ಗೆ ʼLIFE TIME ACHIEVEMENT AWARDʼ

ಅಜ್ಮಾನ್: ತುಂಬೆ ಸಂಸ್ಥೆಯ 28ನೇ ವಾರ್ಷಿಕ ಅನಿವಾಸಿ ಕನ್ನಡಿಗರ ಸ್ನೇಹ ಸಮ್ಮಿಳನ...

ದುಬೈ; ‘ಬದ್ರಿಯಾ ಪ್ರೀಮಿಯರ್ ಲೀಗ್(BPL)-ಸೀಸನ್ 8’; ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಅಲ್ ದನಾ XI ತಂಡ; ರಾಯಲ್ ಥಂಡರ್ ಕುಡ್ಲ ರನ್ನರ್ ಅಪ್

ದುಬೈ: ಅನಿವಾಸಿ ಕನ್ನಡಿಗರ ಸಾಮಾಜಿಕ ಸಂಘಟನೆಯಾದ ‘ಬದ್ರಿಯಾ ಫ್ರೆಂಡ್ಸ್ ಯುಎಇ’ ಆಶ್ರಯದಲ್ಲಿ...

Related Articles

Popular Categories