ಸಂದೇಶʼಗ್ಲೋಬಲ್‌ ಕನ್ನಡಿಗʼಗೆ ಶುಭಕೋರಿದ ಅನಿವಾಸಿ ಕನ್ನಡಿಗ ಕೆ.ಆರ್.ಶ್ರೀನಾಥ್

ʼಗ್ಲೋಬಲ್‌ ಕನ್ನಡಿಗʼಗೆ ಶುಭಕೋರಿದ ಅನಿವಾಸಿ ಕನ್ನಡಿಗ ಕೆ.ಆರ್.ಶ್ರೀನಾಥ್

ವಾರ್ತಾಭಾರತಿ ಸುದ್ದಿ ಸಂಸ್ಥೆಯು ಅನಿವಾಸಿ ಕನ್ನಡಿಗರಿಗಾಗಿಯೇ ಜಾಗತಿಕ ವೇದಿಕೆಯಾಗಿ ‘globalkannadiga.com’ ವೆಬ್ ಸೈಟ್ ಪ್ರಾರಂಭಿಸುತ್ತಿರುವುದು ಅತಿ ಸಂತೋಷದ ಸಮಾಚಾರ. ಇದು ಕನ್ನಡ ಪತ್ರಿಕೋದ್ಯಮದಲ್ಲಿ ವಿನೂತನ ಪ್ರಯತ್ನ.

‘ವಾರ್ತಾಭಾರತಿ’ ಕನ್ನಡ ದಿನಪತ್ರಿಕೆ ಕರ್ನಾಟಕದ ಜನಪ್ರಿಯ ಪತ್ರಿಕೆಗಳಲ್ಲೊಂದು.  ಪ್ರತಿದಿನದ ತತ್ ಕ್ಷಣದ ಸುದ್ದಿಯನ್ನು Varthabharati.in ನಲ್ಲಿ ಕನ್ನಡದಲ್ಲಿ ಓದಬಹುದು. ಯೂಟ್ಯೂಬ್ ನಲ್ಲೂ ವಾರ್ತಾಭಾರತಿ ಚಾನಲ್ ನಲ್ಲಿ ವೀಡಿಯೊಗಳನ್ನು ನೋಡಬಹುದು. ಇಂಗ್ಲಿಷ್ ಭಾಷೆಯಲ್ಲಿ english.varthabharati.in ನಲ್ಲಿ ಓದಬಹುದು.

ಜಾಗತೀಕರಣ ಪ್ರಪಂಚದಲ್ಲಿ ತಮ್ಮ ವೃತ್ತಿ ಹಾಗೂ ವ್ಯಾಪಾರಗಳನ್ನು ಅರಸಿ ಅಸಂಖ್ಯಾತ ಕನ್ನಡಿಗರು ಇಂದು ವಿದೇಶಗಳಲ್ಲಿ ನೆಲಸಿದ್ದಾರೆ. ಅವರೆಲ್ಲರಿಗೂ ಎಂದೆಂದೂ ತಮ್ಮ ಮಾತೃಭಾಷೆ ಹಾಗೂ ತಾಯ್ನಾಡಿನ ಮೇಲಿನ ಪ್ರೇಮ ಪ್ರತಿಕ್ಷಣವೂ ಮಿಡಿಯುತ್ತಿರುತ್ತದೆ. ಇಂತಹ ಅನಿವಾಸಿ ಕನ್ನಡಿಗರ ಹಂಬಲವನ್ನು ಒಂದೇ ವೇದಿಕೆಯಲ್ಲಿ ಹಂಚಿಕೊಳ್ಳಲು globalkannadiga.com ವೆಬ್ ಸೈಟ್ ಕೊಂಡಿಯಾಗಲಿದೆ.

ಅಮೇರಿಕಾದ ಅಟ್ಲಾಂಟ ನಗರದ ಬಹು ವರ್ಷದ ನಿವಾಸಿಯಾಗಿ ಹಾಗೂ ವಾರ್ತಾಭಾರತಿಯ ಪ್ರಾರಂಭದ ದಿನಗಳಿಂದಲೂ ಓದುಗನಾಗಿ ನಾನು globalkannadiga.com ವೆಬ್ ಸೈಟ್ ಪ್ರಾರಂಭಕ್ಕೆ ನನ್ನ ಹೃತ್ಪೂರ್ವಕ ಶುಭಕಾಮನೆಗಳನ್ನು ಹರಸುತ್ತಿದ್ದೇನೆ. ನಿಮ್ಮ ಈ ಹೊಸ ಪ್ರಯತ್ನ ಅನಿವಾಸಿ ಕನ್ನಡಿಗರ ಮುಖವಾಣಿಯಾಗಲೆಂದು ಕೋರುತ್ತಿದ್ದೇನೆ.

ಕೆ.ಆರ್.ಶ್ರೀನಾಥ್

ಅಟ್ಲಾಂಟ, ಯು ಎಸ್ ಎ

Hot this week

ಅಮೇರಿಕ; ‘ಆಟಾ’ ವತಿಯಿಂದ ‘ಬಿಸು ಪರ್ಬ 2026’ ಆಚರಣೆ: ತುಳು ಲಿಪಿ ತರಗತಿಗೆ ಚಾಲನೆ

ಉತ್ತರ ಅಮೇರಿಕ: ಅಖಿಲ ಅಮೆರಿಕಾ ತುಳು ಅಸೋಸಿಯೇಷನ್ (ಆಟಾ) ವತಿಯಿಂದ ಏಪ್ರಿಲ್...

ಅಟ್ಲಾಂಟ ಕನ್ನಡಿಗರಿಂದ ಯುಗಾದಿ-ಹೊಸ ತೊಡಕು ಆಚರಣೆ

ಅಟ್ಲಾಂಟ ಕನ್ನಡಿಗರು ಯುಗಾದಿಯನ್ನು ಏಪ್ರಿಲ್ 11 ಹಾಗೂ ಹೊಸತೊಡಕು ಹಬ್ಬವನ್ನು ಏಪ್ರಿಲ್...

ಖತರ್‌ ಕರ್ನಾಟಕ ಸಂಘದ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಹೆಬ್ಬಾಗಿಲು ಅಧಿಕಾರ ಸ್ವೀಕಾರ

ದೋಹಾ(ಖತರ್):ಕರ್ನಾಟಕ ಸಂಘ ಖತರ್‌ನ 2026–2028 ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸುಬ್ರಹ್ಮಣ್ಯ ಹೆಬ್ಬಾಗಿಲು...

ಫ್ಲೋರಿಡಾ ತುಳು ಕೂಟದ 5ನೇ ವಾರ್ಷಿಕೋತ್ಸವ: ಸಂಭ್ರಮದ ಪಿಕ್ನಿಕ್‌ನೊಂದಿಗೆ ಸಂಸ್ಕೃತಿಯ ಅನಾವರಣ

ಪೊಂಪಾನೋ ಬೀಚ್(ಫ್ಲೋರಿಡಾ): ಫ್ಲೋರಿಡಾ ತುಳು ಕೂಟವು ತನ್ನ ಐದನೇ ವರ್ಷದ ಸಂಭ್ರಮವನ್ನು...

ಅಬುಧಾಬಿಗೆ ಸಚಿವ ಡಾ.ಜೈಶಂಕರ್ ಭೇಟಿ; ಕನ್ನಡಿಗರ ಕೂಟ ದುಬೈ-ಅಬುಧಾಬಿ ಕರ್ನಾಟಕ ಸಂಘ ಪ್ರತಿನಿಧಿತ್ವ

ಅಬುಧಾಬಿ: ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು...

Related Articles

Popular Categories