ಯುಎಇglobalkannadiga.com ಅನಿವಾಸಿಗಳ ಸಮಸ್ಯೆ, ಸವಾಲು, ಸುಖದುಃಖಕ್ಕೆ ಸ್ಪಂದಿಸುವ ತಾಣವಾಗಲಿ:...

globalkannadiga.com ಅನಿವಾಸಿಗಳ ಸಮಸ್ಯೆ, ಸವಾಲು, ಸುಖದುಃಖಕ್ಕೆ ಸ್ಪಂದಿಸುವ ತಾಣವಾಗಲಿ: ಹಿದಾಯತ್ ಅಡ್ಡೂರು ಶುಭ ಹಾರೈಕೆ

ಇಂಟರ್ ನ್ಯಾಷನಲ್ ಕನ್ನಡಿಗಾಸ್ ಫೆಡೆರೇಶನ್'ನಿಂದ ಶುಭಾಶಯ

ಕನ್ನಡಿಗರ ಅಚ್ಚುಮೆಚ್ಚಿನ ಮಾಧ್ಯಮ ಸಂಸ್ಥೆ ವಾರ್ತಾಭಾರತಿ ಈಗ ಇನ್ನೊಂದು ವಿನೂತನ ಸಾಹಸಕ್ಕೆ ಅಣಿಯಾಗಿದೆ. ಜಾಗತಿಕ ಕನ್ನಡಿಗರಿಗಾಗಿಯೇ ಒಂದು ವಿಶೇಷ ವೆಬ್ ಸೈಟ್ globalkannadiga.com ಎಂಬ ಹೆಸರಲ್ಲಿ ಪ್ರಾರಂಭಿಸುತ್ತಿದೆ. ಇದು ಅತ್ಯಂತ ಶ್ಲಾಘನೀಯ ಕೆಲಸವಾಗಿದೆ. ವಾರ್ತಾಭಾರತಿ ಪ್ರಾರಂಭದಿಂದಲೂ ಅನಿವಾಸಿ ಕನ್ನಡಿಗರಿಗೆ ವಿಶೇಷ ಆದ್ಯತೆ ನೀಡುತ್ತಾ ಬಂದಿರುವ ಪತ್ರಿಕೆ. ಅನಿವಾಸಿಗಳ ಸಮಸ್ಯೆಗಳಿಗೆ ಧ್ವನಿಯಾಗುತ್ತಾ ಬಂದಿದೆ. ಈಗ ಡಿಜಿಟಲ್ ಹಾಗು ವಿಶುವಲ್ ಮೀಡಿಯಾಗಳಲ್ಲೂ ಛಾಪು ಮೂಡಿಸಿರುವ ವಾರ್ತಾಭಾರತಿ ಅನಿವಾಸಿ ಕನ್ನಡಿಗರ ಬಗ್ಗೆ ವಿಶೇಷ ಪ್ರೀತಿ ಹಾಗು ಕಾಳಜಿಯಿಂದ ರೂಪಿಸಿರುವ ಹೊಸ ವೆಬ್ ತಾಣ globalkannadiga.com ಭರ್ಜರಿ ಯಶಸ್ಸು ಕಾಣಲಿ. ಇದು ಜಗತ್ತಿನ ಎಲ್ಲ ದೇಶಗಳ ಕನ್ನಡಿಗರು ಒಟ್ಟು ಸೇರುವ ವೇದಿಕೆಯಾಗಲಿ. ಅನಿವಾಸಿಗಳ ಸಮಸ್ಯೆ, ಸವಾಲು, ಸುಖದುಃಖಕ್ಕೆ ಸ್ಪಂದಿಸುವ ತಾಣವಾಗಲಿ, ಕರ್ನಾಟಕ ಸರಕಾರ ಹಾಗು ಅನಿವಾಸಿ ಕನ್ನಡಿಗರ ನಡುವಿನ ಸೇತುವೆಯಾಗಲಿ ಎಂದು ಹಾರೈಸುತ್ತೇನೆ.

ಹಿದಾಯತ್ ಅಡ್ಡೂರು
ಸಂಚಾಲಕರು, ಇಂಟರ್ ನ್ಯಾಷನಲ್ ಕನ್ನಡಿಗಾಸ್ ಫೆಡೆರೇಶನ್
32 ದೇಶಗಳ 128 ಕನ್ನಡ ಸಂಘಟನೆಗಳ ಒಕ್ಕೂಟ

Hot this week

ಅಬುಧಾಬಿಗೆ ಸಚಿವ ಡಾ.ಜೈಶಂಕರ್ ಭೇಟಿ; ಕನ್ನಡಿಗರ ಕೂಟ ದುಬೈ-ಅಬುಧಾಬಿ ಕರ್ನಾಟಕ ಸಂಘ ಪ್ರತಿನಿಧಿತ್ವ

ಅಬುಧಾಬಿ: ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು...

ದುಬೈ; ‘ಬ್ಯಾರೀಸ್ ಪ್ರೀಮಿಯರ್ ಲೀಗ್-2026’ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಕ್ರೌನ್ ಹೊನ್ನಾವರ; ನಫೀಸ್ ಗ್ರೂಪ್ ರನ್ನರ್ ಅಪ್

ದುಬೈ: ಶಾರ್ಜಾದ ಬಿಜೋಯ್ಸ್ ಕ್ರಿಕೆಟ್ ಕ್ರೀಡಾಗಂಣದಲ್ಲಿ ರವಿವಾರ ನಡೆದ 'ಬ್ಯಾರೀಸ್ ಪ್ರೀಮಿಯರ್...

ಕರ್ನಾಟಕ ಸಂಘ ಶಾರ್ಜಾದ ನೂತನ ಅಧ್ಯಕ್ಷರಾಗಿ ವಿಶ್ವನಾಥ್ ಶೆಟ್ಟಿ ಆಯ್ಕೆ

ದುಬೈ: ಕರ್ನಾಟಕ ಸಂಘ ಶಾರ್ಜಾ ಇದರ ನೂತನ ಅಧ್ಯಕ್ಷರಾಗಿ ವಿಶ್ವನಾಥ್ ಶೆಟ್ಟಿ...

ರಮಝಾನ್-ಈದುಲ್ ಫಿತ್ರ್ ಅಂಗವಾಗಿ ಕನ್ನಡ ಸಂಘ ಬಹರೈನ್ ವತಿಯಿಂದ ಆಹಾರ ವಸ್ತುಗಳ ಕಿಟ್ ವಿತರಣೆ

ಬಹರೈನ್: ಪವಿತ್ರ ರಮಝಾನ್ ಮತ್ತು ಈದುಲ್ ಫಿತ್ರ್ ಹಬ್ಬದ ಅಂಗವಾಗಿ ಪ್ರಸ್ತುತ...

Related Articles

Popular Categories