ಕುವೈತ್ಕುವೈತ್ ಅಗ್ನಿ ದುರಂತ | ಮೃತ ಬಿನೋಯ್ ಕುಟುಂಬಕ್ಕೆ...

ಕುವೈತ್ ಅಗ್ನಿ ದುರಂತ | ಮೃತ ಬಿನೋಯ್ ಕುಟುಂಬಕ್ಕೆ ವಸತಿ ಯೋಜನೆಯಡಿ ಮನೆ ವಿತರಣೆ: ಕೇರಳ ಸರಕಾರ ಭರವಸೆ

ತ್ರಿಶೂರ್ (ಕೇರಳ): ಇತ್ತೀಚೆಗೆ ಕುವೈತ್ ನಲ್ಲಿ ನಡೆದ ಅಗ್ನಿ ದುರಂತದಲ್ಲಿ ಮೃತಪಟ್ಟಿರುವ ಬಿನೋಯ್ ಥಾಮಸ್ ಕುಟುಂಬದ ಸದಸ್ಯರಿಗೆ ಲೈಫ್ ಮಿಷನ್ ವಸತಿ ಯೋಜನೆಯಡಿ ಮನೆ ವಿತರಿಸುವುದಾಗಿ ರವಿವಾರ ಕೇರಳ ಸರಕಾರ ಭರವಸೆ ನೀಡಿದೆ.

ತನ್ನ ಕುಟುಂಬದ ಸದಸ್ಯರಿಗೆ ಉತ್ತಮ ಮನೆ ನಿರ್ಮಿಸುವ ಹಾಗೂ ಅವರ ಜೀವನ ಮಟ್ಟವನ್ನು ಸುಧಾರಿಸುವ ಕನಸಿನೊಂದಿಗೆ ಅಗ್ನಿ ದುರಂತ ಸಂಭವಿಸಿದ ಕೇವಲ ಒಂದು ದಿನದ ಹಿಂದೆಯಷ್ಟೆ ಚವಕ್ಕಡ್ ನಿವಾಸಿಯಾದ ಬಿನೋಯ್ ಥಾಮಸ್ ಕುವೈತ್ ಗೆ ತೆರಳಿದ್ದರು ಎಂದು ಹೇಳಲಾಗಿದೆ.

ಸದ್ಯ ಮೂರು ಸೆಂಟ್ ಅಳತೆಯ ಜಾಗದಲ್ಲಿ ಥಾಮಸ್ ಕುಟುಂಬವು ತಾತ್ಕಾಲಿಕ ಗುಡಿಸಿಲಿನಲ್ಲಿ ವಾಸಿಸುತ್ತಿದೆ.

ಕೇರಳ ಕಂದಾಯ ಸಚಿವ ಕೆ.ರಾಜನ್ ಹಾಗೂ ಸಾಮಾಜಿಕ ನ್ಯಾಯ ಸಚಿವೆ ಆರ್.ಬಿಂದು ಇಬ್ಬರೂ ರವಿವಾರ ಥಾಮಸ್ ಕುಟುಂಬದ ಸದಸ್ಯರನ್ನು ಭೇಟಿಯಾಗಿ ಅವರಿಗೆ ಸಾಂತ್ವನ ಹೇಳಿದರು.

ಜೂನ್ 12ರಂದು ಕುವೈತ್ ನ ಅಲ್ ಮಂಗಾಫ್ ನಗರದಲ್ಲಿನ ಕಟ್ಟಡವೊಂದರಲ್ಲಿ ನಡೆದ ಅಗ್ನಿ ದುರಂತದಲ್ಲಿ 49 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪೈಕಿ 45 ಮಂದಿ ಭಾರತೀಯರು ಎಂದು ಅವರು ಹೇಳಿದ್ದಾರೆ.

Hot this week

ಅಜ್ಮಾನ್; ತುಂಬೆ ಸಮೂಹ ಸಂಸ್ಥೆಯಿಂದ BCF ಅಧ್ಯಕ್ಷ ಡಾ.ಬಿ.ಕೆ.ಯೂಸುಫ್​ಗೆ ʼLIFE TIME ACHIEVEMENT AWARDʼ

ಅಜ್ಮಾನ್: ತುಂಬೆ ಸಂಸ್ಥೆಯ 28ನೇ ವಾರ್ಷಿಕ ಅನಿವಾಸಿ ಕನ್ನಡಿಗರ ಸ್ನೇಹ ಸಮ್ಮಿಳನ...

ದುಬೈ; ‘ಬದ್ರಿಯಾ ಪ್ರೀಮಿಯರ್ ಲೀಗ್(BPL)-ಸೀಸನ್ 8’; ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಅಲ್ ದನಾ XI ತಂಡ; ರಾಯಲ್ ಥಂಡರ್ ಕುಡ್ಲ ರನ್ನರ್ ಅಪ್

ದುಬೈ: ಅನಿವಾಸಿ ಕನ್ನಡಿಗರ ಸಾಮಾಜಿಕ ಸಂಘಟನೆಯಾದ ‘ಬದ್ರಿಯಾ ಫ್ರೆಂಡ್ಸ್ ಯುಎಇ’ ಆಶ್ರಯದಲ್ಲಿ...

ಶೀಘ್ರವೇ ಅನಿವಾಸಿ ಕನ್ನಡಿಗರಿಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪನೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ

ಬೆಳಗಾವಿ: ಅನಿವಾಸಿ ಕನ್ನಡಿಗರ ಬಹುಕಾಲದ ಅತ್ಯಂತ ಪ್ರಮುಖ ಬೇಡಿಕೆಯಾಗಿರುವ ಪ್ರತ್ಯೇಕ ಸಚಿವಾಲಯವನ್ನು...

ಡಿ.12ರಂದು ಬಹರೈನ್ ಕನ್ನಡ ಸಂಘದಿಂದ ‘ಕನ್ನಡ ವೈಭವ’ ಸಾಂಸ್ಕೃತಿಕ ಕಾರ್ಯಕ್ರಮ; ಮುತ್ತುಗಳ ದ್ವೀಪದಲ್ಲಿ ಹಾಡು, ಹಾಸ್ಯ, ನೃತ್ಯಗಳ ಮಹಾ ಸಂಗಮ

ಬಹರೈನ್: ಇಲ್ಲಿನ ರಾಜ್ಯಪ್ರಶಸ್ತಿ ಪುರಸ್ಕೃತ ಕನ್ನಡ ಸಂಘದ ವಾರ್ಷಿಕ ಕಾರ್ಯಕ್ರಮವಾದ "ಕನ್ನಡ...

Related Articles

Popular Categories