ಕುವೈತ್ಕುವೈತ್ ಅಗ್ನಿ ದುರಂತ | ಮೃತ ಬಿನೋಯ್ ಕುಟುಂಬಕ್ಕೆ...

ಕುವೈತ್ ಅಗ್ನಿ ದುರಂತ | ಮೃತ ಬಿನೋಯ್ ಕುಟುಂಬಕ್ಕೆ ವಸತಿ ಯೋಜನೆಯಡಿ ಮನೆ ವಿತರಣೆ: ಕೇರಳ ಸರಕಾರ ಭರವಸೆ

ತ್ರಿಶೂರ್ (ಕೇರಳ): ಇತ್ತೀಚೆಗೆ ಕುವೈತ್ ನಲ್ಲಿ ನಡೆದ ಅಗ್ನಿ ದುರಂತದಲ್ಲಿ ಮೃತಪಟ್ಟಿರುವ ಬಿನೋಯ್ ಥಾಮಸ್ ಕುಟುಂಬದ ಸದಸ್ಯರಿಗೆ ಲೈಫ್ ಮಿಷನ್ ವಸತಿ ಯೋಜನೆಯಡಿ ಮನೆ ವಿತರಿಸುವುದಾಗಿ ರವಿವಾರ ಕೇರಳ ಸರಕಾರ ಭರವಸೆ ನೀಡಿದೆ.

ತನ್ನ ಕುಟುಂಬದ ಸದಸ್ಯರಿಗೆ ಉತ್ತಮ ಮನೆ ನಿರ್ಮಿಸುವ ಹಾಗೂ ಅವರ ಜೀವನ ಮಟ್ಟವನ್ನು ಸುಧಾರಿಸುವ ಕನಸಿನೊಂದಿಗೆ ಅಗ್ನಿ ದುರಂತ ಸಂಭವಿಸಿದ ಕೇವಲ ಒಂದು ದಿನದ ಹಿಂದೆಯಷ್ಟೆ ಚವಕ್ಕಡ್ ನಿವಾಸಿಯಾದ ಬಿನೋಯ್ ಥಾಮಸ್ ಕುವೈತ್ ಗೆ ತೆರಳಿದ್ದರು ಎಂದು ಹೇಳಲಾಗಿದೆ.

ಸದ್ಯ ಮೂರು ಸೆಂಟ್ ಅಳತೆಯ ಜಾಗದಲ್ಲಿ ಥಾಮಸ್ ಕುಟುಂಬವು ತಾತ್ಕಾಲಿಕ ಗುಡಿಸಿಲಿನಲ್ಲಿ ವಾಸಿಸುತ್ತಿದೆ.

ಕೇರಳ ಕಂದಾಯ ಸಚಿವ ಕೆ.ರಾಜನ್ ಹಾಗೂ ಸಾಮಾಜಿಕ ನ್ಯಾಯ ಸಚಿವೆ ಆರ್.ಬಿಂದು ಇಬ್ಬರೂ ರವಿವಾರ ಥಾಮಸ್ ಕುಟುಂಬದ ಸದಸ್ಯರನ್ನು ಭೇಟಿಯಾಗಿ ಅವರಿಗೆ ಸಾಂತ್ವನ ಹೇಳಿದರು.

ಜೂನ್ 12ರಂದು ಕುವೈತ್ ನ ಅಲ್ ಮಂಗಾಫ್ ನಗರದಲ್ಲಿನ ಕಟ್ಟಡವೊಂದರಲ್ಲಿ ನಡೆದ ಅಗ್ನಿ ದುರಂತದಲ್ಲಿ 49 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪೈಕಿ 45 ಮಂದಿ ಭಾರತೀಯರು ಎಂದು ಅವರು ಹೇಳಿದ್ದಾರೆ.

Hot this week

ನಾಳೆ ಒಮಾನಿನಲ್ಲಿ ‘ಮಸ್ಕತ್ ಗಡಿನಾಡ ಉತ್ಸವ-2025’ ಸಾಂಸ್ಕೃತಿಕ ಕಾರ್ಯಕ್ರಮ; ಆಮಂತ್ರಣ ಪತ್ರಿಕೆ ಅನಾವರಣ

ಮಸ್ಕತ್: ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು, ಒಮಾನ್ ಘಟಕ ಮಸ್ಕತ್...

ತವರು ಪ್ರೇಮ ಮೆರೆದ ಹುಬ್ಬಳ್ಳಿ ಮೂಲದ ಕನ್ನಡಿಗ; ಲಂಡನಿನಲ್ಲಿ ತನ್ನ ಹೊಸ ‘ಟೆಸ್ಲಾ’ ಕಾರಿಗೆ ಧಾರವಾಡ ರಿಜಿಸ್ಟ್ರೇಷನ್ ಸಂಖ್ಯೆ!

ಲಂಡನ್: ವಿದೇಶದಲ್ಲಿದ್ದುಕೊಂಡು ತಮ್ಮ ತವರು ನಗರದೊಂದಿಗಿನ ಭಾವನಾತ್ಮಕ ಸಂಪರ್ಕವನ್ನು ಜೀವಂತವಾಗಿಡಲು ಇಲ್ಲೊಬ್ಬ...

Veteran expat Abdulaziz Kushalnagar passes away in Riyadh

Riyadh: Abdulaziz Kushalnagar, a long-time Indian expatriate from Kushalnagar...

ನಾಳೆ ದುಬೈನಲ್ಲಿ ‘ಗ್ಲೋಬಲ್ ಮೀಡಿಯಾ ಐಕನ್ ಪ್ರಶಸ್ತಿ 2025’ ಪ್ರದಾನ; ಭಾಗವಹಿಸಲಿರುವ ಸಚಿವರು-ಸ್ಯಾಂಡಲ್‌ವುಡ್ ತಾರೆಯರ ದಂಡು

ದುಬೈ: ಕರ್ನಾಟಕ ಮೀಡಿಯಾ ಜರ್ನಲಿಸ್ಟ್‌ ಯೂನಿಯನ್‌(KMJU) ಆಶ್ರಯದಲ್ಲಿ 'ಗ್ಲೋಬಲ್ ಮೀಡಿಯಾ ಐಕನ್...

Related Articles

Popular Categories