ಖತರ್ಖತರ್: ಉಡುಪಿ ಪ್ರೀಮಿಯರ್ ಲೀಗ್ ಸೀಸನ್ 1 |...

ಖತರ್: ಉಡುಪಿ ಪ್ರೀಮಿಯರ್ ಲೀಗ್ ಸೀಸನ್ 1 | ಉಡುಪಿ ಲೆಜೆಂಡ್ಸ್ ತಂಡ ಚಾಂಪಿಯನ್

ಖತರ್: ಉಡುಪಿ ರೆಸ್ಟೋರೆಂಟ್ ಖತರ್ ಮತ್ತು ಸ್ಮಾರ್ಟ್ ಕ್ರಿಕೆಟರ್ಸ್ ಖತರ್ ಸಹಯೋಗದೊಂದಿಗೆ ಆಯೋಜಿಸಲಾದ ಉಡುಪಿ ಪ್ರೀಮಿಯರ್ ಲೀಗ್ ಸೀಸನ್ 1 ರ ಸಮಾರೋಪ ಸಮಾರಂಭವು ಅದ್ದೂರಿಯಾಗಿ ಮುಕ್ತಾಯಗೊಂಡಿತು.

ಖತರ್ ನಲ್ಲಿ ನೆಲೆಸಿರುವ ಕರ್ನಾಟಕದ ಆಟಗಾರರನ್ನು ಒಳಗೊಂಡ ಹತ್ತು ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.

ಫೈಸಲ್ ಜಿ ಮಾಲೀಕತ್ವದ ಹಾಗೂ ಇಮ್ರಾನ್ ಶಿರ್ವ ನಾಯಕತ್ವದ ಉಡುಪಿ ಲೆಜೆಂಡ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ಶೇಖ್ ಮೈನುದ್ದೀನ್ ಮಾಲೀಕತ್ವದ ಪರ್ವೇಝ್ (ಪಜ್ಜು) ನೇತೃತ್ವದ ರಾಯಲ್ ಖತರ್ ತಂಡ ರನ್ನರ್ ಅಪ್ ಸ್ಥಾನ ಪಡೆಯಿತು.

ಪಂದ್ಯಾವಳಿಯಲ್ಲಿ ಖತರ್ ನಲ್ಲಿ ಕ್ರಿಕೆಟ್ ಗೆ ನೀಡಿದ ಸಮರ್ಪಣೆ ಮತ್ತು ಕೊಡುಗೆಗಳಿಗಾಗಿ ಖ್ಯಾತ ಆಟಗಾರರಾದ ಇಮ್ರಾನ್ ಕೋಟೇಶ್ವರ, ಅಬ್ದುಲ್ ರವೂಫ್, ಇಮ್ರಾನ್ ಶಿರ್ವ, ದೀಕ್ಷಿತ್ ಆಳ್ವ, ಪರ್ವೇಝ್ (ಪಜ್ಜು), ಅಬ್ದುಲ್ ಸತ್ತಾರ್, ಸುಹೇಲ್ ಬಿಲ್ಲಿ, ಅಬ್ದುಲ್ ಸಲಾಂ, ಮುಹಮ್ಮದ್ ಶೇಖ್ ಮತ್ತು ಮಿರ್ಜಾ ಖಲೀಲ್ ಅವರಿಗೆ ಗೌರವ ಸಲ್ಲಿಸಲಾಯಿತು.

ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಪ್ರಶಸ್ತಿಗಳು:

ಫೈನಲ್ ಪಂದ್ಯಶ್ರೇಷ್ಠ: ಸಫಾನ್ ಪಠಾಣ್

ಸರಣಿ ಶ್ರೇಷ್ಠ : ನಿಝಾರ್ ಅರೆಕ್ಕಲ್

ಅತ್ಯುತ್ತಮ ಬ್ಯಾಟ್ಸ್ಮನ್: ಅಬ್ದುಲ್ ರವೂಫ್

ಅತ್ಯುತ್ತಮ ಬೌಲರ್: ಮೊಹಮ್ಮದ್ ರಬೀಜ್

ಅತ್ಯುತ್ತಮ ಫೀಲ್ಡರ್: ಫರ್ಹಾನ್ ಶಿರ್ವ

ಅತ್ಯುತ್ತಮ ವಿಕೆಟ್ ಕೀಪರ್: ಅಬ್ದುಲ್ ವಹೀದ್

ಜೂನ್ 19, 2024 ರಂದು ನಡೆದ ಉದ್ಘಾಟನಾ ಸಮಾರಂಭವನ್ನು ದೀಪಕ್ ಶೆಟ್ಟಿ ಮತ್ತು ಅಬ್ದುಲ್ ಖಾದರ್ ಉದ್ಘಾಟಿಸಿದರು. ಸಮಾರೋಪ ಸಮಾರಂಭದಲ್ಲಿ ಉಡುಪಿ ರೆಸ್ಟೋರೆಂಟ್ ಖತರ್ ನ ಫೈಸಲ್ ಜಿ, ಮುಸ್ತಫಾ ಜಿ, ಮುಹಮ್ಮದ್ ಜುನೈದ್, ಸ್ಮಾರ್ಟ್ ಕ್ರಿಕೆಟರ್ಸ್ ಖತರ್ ನ ಅಸ್ಮತ್ ಅಲಿ, ಅಬ್ದುಲ್ ಶುಕೂರ್, ಮುಹಮ್ಮದ್ ತೌಫೀಕ್, ಅಕ್ಷಯ ಆಚಾರ್ಯ ಉಪಸ್ಥಿತರಿದ್ದರು.

ಖತರ್ ನಲ್ಲಿ ನೆಲೆಸಿರುವ ಕರ್ನಾಟಕದ ಆಟಗಾರರನ್ನು ಒಳಗೊಂಡ ಹತ್ತು ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.

ಫೈಸಲ್ ಜಿ ಮಾಲೀಕತ್ವದ ಹಾಗೂ ಇಮ್ರಾನ್ ಶಿರ್ವ ನಾಯಕತ್ವದ ಉಡುಪಿ ಲೆಜೆಂಡ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ಶೇಖ್ ಮೈನುದ್ದೀನ್ ಮಾಲೀಕತ್ವದ ಪರ್ವೇಝ್ (ಪಜ್ಜು) ನೇತೃತ್ವದ ರಾಯಲ್ ಕತಾರ್ ತಂಡ ರನ್ನರ್ ಅಪ್ ಸ್ಥಾನ ಪಡೆಯಿತು.

ಪಂದ್ಯಾವಳಿಯಲ್ಲಿ ಖತರ್ ನಲ್ಲಿ ಕ್ರಿಕೆಟ್ ಗೆ ನೀಡಿದ ಸಮರ್ಪಣೆ ಮತ್ತು ಕೊಡುಗೆಗಳಿಗಾಗಿ ಖ್ಯಾತ ಆಟಗಾರರಾದ ಇಮ್ರಾನ್ ಕೋಟೇಶ್ವರ, ಅಬ್ದುಲ್ ರವೂಫ್, ಇಮ್ರಾನ್ ಶಿರ್ವ, ದೀಕ್ಷಿತ್ ಆಳ್ವ, ಪರ್ವೇಝ್ (ಪಜ್ಜು), ಅಬ್ದುಲ್ ಸತ್ತಾರ್, ಸುಹೇಲ್ ಬಿಲ್ಲಿ, ಅಬ್ದುಲ್ ಸಲಾಂ, ಮುಹಮ್ಮದ್ ಶೇಖ್ ಮತ್ತು ಮಿರ್ಜಾ ಖಲೀಲ್ ಅವರಿಗೆ ಗೌರವ ಸಲ್ಲಿಸಲಾಯಿತು.

ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಪ್ರಶಸ್ತಿಗಳು:

ಫೈನಲ್ ಪಂದ್ಯಶ್ರೇಷ್ಠ: ಸಫಾನ್ ಪಠಾಣ್

ಸರಣಿ ಶ್ರೇಷ್ಠ : ನಿಝಾರ್ ಅರೆಕ್ಕಲ್

ಅತ್ಯುತ್ತಮ ಬ್ಯಾಟ್ಸ್ಮನ್: ಅಬ್ದುಲ್ ರವೂಫ್

ಅತ್ಯುತ್ತಮ ಬೌಲರ್: ಮೊಹಮ್ಮದ್ ರಬೀಝ್

ಅತ್ಯುತ್ತಮ ಫೀಲ್ಡರ್: ಫರ್ಹಾನ್ ಶಿರ್ವ

ಅತ್ಯುತ್ತಮ ವಿಕೆಟ್ ಕೀಪರ್: ಅಬ್ದುಲ್ ವಹೀದ್

ಜೂನ್ 19, 2024 ರಂದು ನಡೆದ ಉದ್ಘಾಟನಾ ಸಮಾರಂಭವನ್ನು ದೀಪಕ್ ಶೆಟ್ಟಿ ಮತ್ತು ಅಬ್ದುಲ್ ಖಾದರ್ ಉದ್ಘಾಟಿಸಿದರು. ಸಮಾರೋಪ ಸಮಾರಂಭದಲ್ಲಿ ಉಡುಪಿ ರೆಸ್ಟೋರೆಂಟ್ ಖತರ್ ನ ಫೈಸಲ್ ಜಿ, ಮುಸ್ತಫಾ ಜಿ, ಮುಹಮ್ಮದ್ ಜುನೈದ್, ಸ್ಮಾರ್ಟ್ ಕ್ರಿಕೆಟರ್ಸ್ ಖತರ್ ನ ಅಸ್ಮತ್ ಅಲಿ, ಅಬ್ದುಲ್ ಶುಕೂರ್, ಮುಹಮ್ಮದ್ ತೌಫೀಕ್, ಅಕ್ಷಯ ಆಚಾರ್ಯ ಉಪಸ್ಥಿತರಿದ್ದರು.

Hot this week

ದುಬೈನಲ್ಲಿ ‘ಗಂಧರ್ವ ಗಮಕ ಶಾಲೆ’ ಉದ್ಘಾಟನೆ

ದುಬೈ: ಪದ್ಮಶ್ರೀ ಹೊಸಹಳ್ಳಿ ಕೇಶವಮೂರ್ತಿ ಅವರ ಶಿಷ್ಯ ಪರಂಪರೆಯನ್ನು ಮುಂದುವರಿಸುವ ಮಹತ್ವದ...

ದುಬೈಯಲ್ಲಿ ಸಂಪನ್ನಗೊಂಡ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ವೈಭವ

ದುಬೈ: ಅರಬ್ ಸಂಯುಕ್ತ ಸಂಸ್ಥಾನ ವಾಣಿಜ್ಯ ನಗರಿ ದುಬೈಯಲ್ಲಿ ಸಾಮೂಹಿಕ ಶ್ರೀ...

ಸಲಾಲದಲ್ಲಿ ಅದ್ದೂರಿಯಾಗಿ ನಡೆದ ಕನ್ನಡಿಗರ ‘ಸ್ನೇಹ ಸಂಗಮ’ ಕಾರ್ಯಕ್ರಮ

ಸಲಾಲ(ಒಮಾನ್): ಇಲ್ಲಿನ ಅನಿವಾಸಿ ಕನ್ನಡಿಗರ ಅನ್ನೂರ್ ಎಜುಕೇಶನಲ್ ಸೆಂಟರ್ ವತಿಯಿಂದ 'ಸ್ನೇಹ...

ವಿಶ್ವದಲ್ಲೇ ಮೊದಲ ಬಾರಿ ಜರ್ಮನ್ ಭಾಷೆಯಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಸಿದ್ಧತೆ

ವಿಶೇಷ ಸಂದರ್ಶನ: ಎಂ.ಇಕ್ಬಾಲ್ ಉಚ್ಚಿಲ, ದುಬೈ ಕರಾವಳಿ ಕರ್ನಾಟಕದ ಜನಪ್ರಿಯ ಕಲೆಯಾಗಿರುವ ಯಕ್ಷಗಾನವು...

ಫೆಬ್ರವರಿ 1ರಂದು ಶಾರ್ಜಾದಲ್ಲಿ ‘ಮಾರ್ಗದೀಪ ಪ್ರೀಮಿಯರ್ ಲೀಗ್-4’ ಕ್ರಿಕೆಟ್ ಟೂರ್ನಮೆಂಟ್; ಜರ್ಸಿ ಬಿಡುಗಡೆ

ದುಬೈ: ಮಾರ್ಗದೀಪ ಸಾಂಸ್ಕೃತಿಕ ಸಮಿತಿಯ ವತಿಯಿಂದ ದಿವಂಗತ ವಸಂತ್ ಬೇಕಲ್ ಸ್ಮರಣಾರ್ಥ...

Related Articles

Popular Categories