ಯುಎಇ'ಅನಿವಾಸಿಗಳ ಕಾರ್ಯಕ್ರಮಕ್ಕೆ, ಸಾಧನಶೀಲರ ಪರಿಚಯಕ್ಕೆ, ಕಾರ್ಮಿಕರ ಸುಖ ದುಃಖಗಳಿಗೆ...

‘ಅನಿವಾಸಿಗಳ ಕಾರ್ಯಕ್ರಮಕ್ಕೆ, ಸಾಧನಶೀಲರ ಪರಿಚಯಕ್ಕೆ, ಕಾರ್ಮಿಕರ ಸುಖ ದುಃಖಗಳಿಗೆ ವೇದಿಕೆಯಾಗಲಿ’

globalkannadiga.comಗೆ ಇರ್ಷಾದ್ ಮೂಡಬಿದ್ರೆ ಶುಭ ಹಾರೈಕೆ

ಹೊಸ ಪ್ರಯೋಗ…
ಇಂದು ಸಮಸ್ತ ಗಲ್ಫ್ ವಾಸಿಗಳ ಹೆಚ್ಚಿನ ಮೊಬೈಲ್’ಗಳನ್ನು ಅವಲೋಕಿಸಿದರೆ ಅದರಲ್ಲಿ ಕಾಣಸಿಗುವ ಪತ್ರಿಕೆ ಎಂದರೆ ವಾರ್ತಾ ಭಾರತಿ. ಮುಂಜಾನೆ ನಾವು ಎದ್ದೇಳುವ ಮುನ್ನವೇ ಬಿಸಿಬಿಸಿ ಚಹಾದಂತೆ ಸಿದ್ಧವಾಗಿರುವ ಈ ಪತ್ರಿಕೆಯು ಎಲ್ಲರಿಗೂ ಅಚ್ಚುಮೆಚ್ಚು. ಊರಿನ, ರಾಜ್ಯದ, ದೇಶ-ವಿದೇಶಗಳ ಸುದ್ದಿಯನ್ನು ಇಡೀ ದಿನ ಬಿತ್ತರಿಸುವ ಅದು ಎಲ್ಲರ ಆಪ್ತ ಸಂಗಾತಿ. ಆಗಾಗ ‘ವಿಬಿ'(ವಾರ್ತಾ ಭಾರತಿ) ಮೇಲೆ ಕಣ್ಣಾಡಿಸದಿದ್ದರೆ ಸಮಾಧಾನವೇ ಇಲ್ಲ. ಈಗ ಒಂದು ಹೆಜ್ಜೆ ಮುಂದಿಟ್ಟಿರುವ ಅದು ಕನ್ನಡಿಗರಿಗಾಗಿ globalkannadiga.com ಎಂಬ ಹೊಸ ವೆಬ್ ಸೈಟನ್ನು ಆರಂಭಿಸುವ ಸಿಹಿ ಸುದ್ದಿಯನ್ನು ನೀಡಿದೆ. ಆರಂಭದ ದಿನಗಳಿಂದಲೇ ಅದು ವಿದೇಶ ಭಾಗದಲ್ಲಿ ಗಲ್ಫ್ ರಾಷ್ಟ್ರಗಳ ಮುಖ್ಯ ಸುದ್ದಿಗಳಿಗೆ ಪ್ರಾಮುಖ್ಯತೆ ನೀಡುತ್ತಾ ಇತ್ತು. ಅಂದಿನ ದಿನಗಳಲ್ಲಿ ಅದು ಯಾವ ಪತ್ರಿಕೆಯು ಮಾಡದ ಹೊಸ ಹಾಗು ಉಪಯುಕ್ತ ಪ್ರಯೋಗವಾಗಿತ್ತು. ಇದರಿಂದ ನಾಡಿನ ಜನತೆಗೆ ಹಲವು ವಿಚಾರಗಳು ತಿಳಿಯುವ ಅವಕಾಶ ದೊರೆಯಿತು. ಮುಂದೆ ಗಲ್ಫ್ ನಾಡಿನ ಅನಿವಾಸಿಗಳ ಆಗುಹೋಗುಗಳ ಕುರಿತಾಗಿ ದುಬೈಯಿಂದ ನಾನು ಅದರಲ್ಲಿ ‘ಮರಳ ಹೆಜ್ಜೆಗಳು’ ಎನ್ನುವ ಅಂಕಣವನ್ನೂ ಬರೆಯುತ್ತಿದ್ದೆ. ಈಗ ಜಗತ್ತಿನಾದ್ಯಂತ ಇರುವ ಸಮಸ್ತ ಅನಿವಾಸಿ ಕನ್ನಡಿಗರಿಗೆ ಹೊಸ ವೇದಿಕೆ ನೀಡುವ globalkannadiga.com ವೆಬ್ ಸೈಟ್ ಬರಲಿದೆ ಎಂದು ಕೇಳಿದೆ. ತುಂಬಾ ಸಂತೋಷಕರ ಸುದ್ದಿ. ಇದು ಅನಿವಾಸಿಗಳ ಕಾರ್ಯಕ್ರಮಗಳಿಗೆ, ಸಾಧನಶೀಲರ ಪರಿಚಯಕ್ಕೆ, ಕಾರ್ಮಿಕರ ಸುಖ ದುಃಖಗಳಿಗೆ, ಸಭೆ-ಸಮಾರಂಭಗಳ ಮುನ್ನೋಟಕ್ಕೆ ವೇದಿಕೆಯಾಗಲಿ. ವಿಬಿ ಇದರಲ್ಲೂ ಜಾಗತಿಕ ಯಶಸ್ಸು ಕಾಣಲಿ, ಎಲ್ಲರ ಮನಸ್ಸು ಗೆಲ್ಲಲಿ, ನನ್ನ ಶುಭ ಹಾರೈಕೆಗಳು.

ಇರ್ಷಾದ್ ಮೂಡಬಿದ್ರೆ ದುಬೈ,(ಬರಹಗಾರ)

Hot this week

ಭಾರತದ ನೂತನ ಕಾನ್ಸುಲ್ ಜನರಲ್ ಡಾ.ವಿಷ್ಣುವರ್ಧನ ರೆಡ್ಡಿಗೆ ಕನ್ನಡಿಗರ ಕೂಟ ದುಬೈಯಿಂದ ಸ್ವಾಗತ

ದುಬೈ: ಯುಎಇಯ ಪ್ರತಿಷ್ಠಿತ ಕನ್ನಡ ಸಂಘಟನೆಗಳಲ್ಲಿ ಒಂದಾಗಿರುವ ಕನ್ನಡಿಗರ ಕೂಟ, ದುಬೈ...

ಭಾರತದ 80ನೇ ಸ್ವಾತಂತ್ರೋತ್ಸವದ ಸವಿನೆನಪಿಗಾಗಿ ರಕ್ತದಾನದಿಂದ ಮಾನವೀಯತೆಯ ಸಂದೇಶ ಸಾರಿದ ಕರ್ನಾಟಕ ಸಂಘ ಶಾರ್ಜಾ

ದುಬೈ: ಭಾರತದ 80ನೇ ಸ್ವಾತಂತ್ರೋತ್ಸವದ ಸವಿನೆನಪಿಗಾಗಿ ಕರ್ನಾಟಕ ಸಂಘ ಶಾರ್ಜಾ ಮತ್ತು...

ಸಲಾಲದ ಅಲ್ ನೂರ್ ಎಜುಕೇಶನ್ ಸೆಂಟರ್‌ನಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

ಸಲಾಲ(ಒಮಾನ್): ಸಲಾಲದ ಅಲ್ ನೂರ್ ಎಜುಕೇಶನ್ ಸೆಂಟರ್ ನಲ್ಲಿ ಬ್ಯಾರೀಸ್ ಕಮ್ಯುನಿಟಿ...

ಭಾರತದ 80ನೇ ಸ್ವಾತಂತ್ರ್ಯೋತ್ಸವದಲ್ಲಿ ಕರ್ನಾಟಕ ಸಂಘ ಖತರ್‌ನ ಅದ್ದೂರಿ ಭಾಗವಹಿಸುವಿಕೆ

ದೋಹಾ(ಖತರ್): ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಭಾರತೀಯ ರಾಯಭಾರ ಕಚೇರಿ ದೋಹಾ...

ಬಹರೈನ್; ಆಗಸ್ಟ್ 21ರಂದು ‘ಕೆಸಿಎಫ್’ನಿಂದ ಗ್ರ್ಯಾಂಡ್ ಮೀಲಾದ್ ಕಾನ್ಫರೆನ್ಸ್

ಮನಾಮ: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಬಹರೈನ್ ರಾಷ್ಟ್ರೀಯ ಸಮಿತಿಯ ವತಿಯಿಂದ...

Related Articles

Popular Categories