ಯುಎಇ'ಅನಿವಾಸಿಗಳ ಕಾರ್ಯಕ್ರಮಕ್ಕೆ, ಸಾಧನಶೀಲರ ಪರಿಚಯಕ್ಕೆ, ಕಾರ್ಮಿಕರ ಸುಖ ದುಃಖಗಳಿಗೆ...

‘ಅನಿವಾಸಿಗಳ ಕಾರ್ಯಕ್ರಮಕ್ಕೆ, ಸಾಧನಶೀಲರ ಪರಿಚಯಕ್ಕೆ, ಕಾರ್ಮಿಕರ ಸುಖ ದುಃಖಗಳಿಗೆ ವೇದಿಕೆಯಾಗಲಿ’

globalkannadiga.comಗೆ ಇರ್ಷಾದ್ ಮೂಡಬಿದ್ರೆ ಶುಭ ಹಾರೈಕೆ

ಹೊಸ ಪ್ರಯೋಗ…
ಇಂದು ಸಮಸ್ತ ಗಲ್ಫ್ ವಾಸಿಗಳ ಹೆಚ್ಚಿನ ಮೊಬೈಲ್’ಗಳನ್ನು ಅವಲೋಕಿಸಿದರೆ ಅದರಲ್ಲಿ ಕಾಣಸಿಗುವ ಪತ್ರಿಕೆ ಎಂದರೆ ವಾರ್ತಾ ಭಾರತಿ. ಮುಂಜಾನೆ ನಾವು ಎದ್ದೇಳುವ ಮುನ್ನವೇ ಬಿಸಿಬಿಸಿ ಚಹಾದಂತೆ ಸಿದ್ಧವಾಗಿರುವ ಈ ಪತ್ರಿಕೆಯು ಎಲ್ಲರಿಗೂ ಅಚ್ಚುಮೆಚ್ಚು. ಊರಿನ, ರಾಜ್ಯದ, ದೇಶ-ವಿದೇಶಗಳ ಸುದ್ದಿಯನ್ನು ಇಡೀ ದಿನ ಬಿತ್ತರಿಸುವ ಅದು ಎಲ್ಲರ ಆಪ್ತ ಸಂಗಾತಿ. ಆಗಾಗ ‘ವಿಬಿ'(ವಾರ್ತಾ ಭಾರತಿ) ಮೇಲೆ ಕಣ್ಣಾಡಿಸದಿದ್ದರೆ ಸಮಾಧಾನವೇ ಇಲ್ಲ. ಈಗ ಒಂದು ಹೆಜ್ಜೆ ಮುಂದಿಟ್ಟಿರುವ ಅದು ಕನ್ನಡಿಗರಿಗಾಗಿ globalkannadiga.com ಎಂಬ ಹೊಸ ವೆಬ್ ಸೈಟನ್ನು ಆರಂಭಿಸುವ ಸಿಹಿ ಸುದ್ದಿಯನ್ನು ನೀಡಿದೆ. ಆರಂಭದ ದಿನಗಳಿಂದಲೇ ಅದು ವಿದೇಶ ಭಾಗದಲ್ಲಿ ಗಲ್ಫ್ ರಾಷ್ಟ್ರಗಳ ಮುಖ್ಯ ಸುದ್ದಿಗಳಿಗೆ ಪ್ರಾಮುಖ್ಯತೆ ನೀಡುತ್ತಾ ಇತ್ತು. ಅಂದಿನ ದಿನಗಳಲ್ಲಿ ಅದು ಯಾವ ಪತ್ರಿಕೆಯು ಮಾಡದ ಹೊಸ ಹಾಗು ಉಪಯುಕ್ತ ಪ್ರಯೋಗವಾಗಿತ್ತು. ಇದರಿಂದ ನಾಡಿನ ಜನತೆಗೆ ಹಲವು ವಿಚಾರಗಳು ತಿಳಿಯುವ ಅವಕಾಶ ದೊರೆಯಿತು. ಮುಂದೆ ಗಲ್ಫ್ ನಾಡಿನ ಅನಿವಾಸಿಗಳ ಆಗುಹೋಗುಗಳ ಕುರಿತಾಗಿ ದುಬೈಯಿಂದ ನಾನು ಅದರಲ್ಲಿ ‘ಮರಳ ಹೆಜ್ಜೆಗಳು’ ಎನ್ನುವ ಅಂಕಣವನ್ನೂ ಬರೆಯುತ್ತಿದ್ದೆ. ಈಗ ಜಗತ್ತಿನಾದ್ಯಂತ ಇರುವ ಸಮಸ್ತ ಅನಿವಾಸಿ ಕನ್ನಡಿಗರಿಗೆ ಹೊಸ ವೇದಿಕೆ ನೀಡುವ globalkannadiga.com ವೆಬ್ ಸೈಟ್ ಬರಲಿದೆ ಎಂದು ಕೇಳಿದೆ. ತುಂಬಾ ಸಂತೋಷಕರ ಸುದ್ದಿ. ಇದು ಅನಿವಾಸಿಗಳ ಕಾರ್ಯಕ್ರಮಗಳಿಗೆ, ಸಾಧನಶೀಲರ ಪರಿಚಯಕ್ಕೆ, ಕಾರ್ಮಿಕರ ಸುಖ ದುಃಖಗಳಿಗೆ, ಸಭೆ-ಸಮಾರಂಭಗಳ ಮುನ್ನೋಟಕ್ಕೆ ವೇದಿಕೆಯಾಗಲಿ. ವಿಬಿ ಇದರಲ್ಲೂ ಜಾಗತಿಕ ಯಶಸ್ಸು ಕಾಣಲಿ, ಎಲ್ಲರ ಮನಸ್ಸು ಗೆಲ್ಲಲಿ, ನನ್ನ ಶುಭ ಹಾರೈಕೆಗಳು.

ಇರ್ಷಾದ್ ಮೂಡಬಿದ್ರೆ ದುಬೈ,(ಬರಹಗಾರ)

Hot this week

ಬಹರೈನ್ ಕನ್ನಡ ಸಂಘದಿಂದ 79ನೇ ಸ್ವಾತಂತ್ರ್ಯ ದಿನಾಚರಣೆ

ಬಹರೈನ್: ಭಾರತದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಗಸ್ಟ್ 15ರಂದು ಬೆಳಗ್ಗೆ 8:30ಕ್ಕೆ...

ಬಹರೈನ್ ರೇಡಿಯೋ ಆರ್ ಜೆ ಕಮಲಾಕ್ಷ ಅಮೀನ್​ಗೆ ‘ಗೋಲ್ಡನ್ ಐಕಾನಿಕ್ ಅವಾರ್ಡ್’ ಗೌರವ ಪ್ರಶಸ್ತಿ

ಮಂಗಳೂರು: ಬಹರೈನ್ ನ ಕಸ್ತೂರಿ ಕನ್ನಡ ಎಫ್ಎಂ ರೇಡಿಯೋ ಆರ್ ಜೆ...

ಮಸ್ಕತ್‌ನಲ್ಲಿ ‘ಕನ್ನಡ ಭವನ’ ನಿರ್ಮಾಣಕ್ಕೆ ಕರ್ನಾಟಕ ಸರಕಾರದಿಂದ ಆರ್ಥಿಕ ನೆರವು ಬೇಕು: ‘ಮಸ್ಕತ್ ಕನ್ನಡ ಸಂಘ’ದ ಅಧ್ಯಕ್ಷ ಮಂಜುನಾಥ್ ಸಂಗಟಿ

ವಿಶೇಷ ಸಂದರ್ಶನ; ಎಂ.ಇಕ್ಬಾಲ್ ಉಚ್ಚಿಲ, ದುಬೈ ನಿಸರ್ಗ ನಿರ್ಮಿತ ರಮ್ಯ ಮನೋಹರ ತಾಣವಾಗಿರುವ...

Related Articles

Popular Categories