ಸೌದಿ ಅರೇಬಿಯಾಹಜ್ ಯಾತ್ರೆ ವೇಳೆ 1301 ಮಂದಿ ಮೃತ್ಯು: ನೋಂದಾಯಿಸದ...

ಹಜ್ ಯಾತ್ರೆ ವೇಳೆ 1301 ಮಂದಿ ಮೃತ್ಯು: ನೋಂದಾಯಿಸದ ಯಾತ್ರಿಗಳೇ ಅಧಿಕ; ವರದಿ


ರಿಯಾದ್: ಈ ಬಾರಿಯ ಹಜ್ ಯಾತ್ರೆ ವೇಳೆ 1301 ಯಾತ್ರಾರ್ಥಿಗಳು ಬಿಸಿಲ ಝಳದಿಂದ ಮೃತಪಟ್ಟಿದ್ದಾರೆ ಎಂದು ಸೌದಿ ಅರೇಬಿಯಾ ಅಧಿಕೃತವಾಗಿ ಪ್ರಕಟಿಸಿದೆ. ಮೃತಪಟ್ಟವರಲ್ಲಿ ಶೇಕಡ 83ರಷ್ಟು ಮಂದಿ ಅನಧಿಕೃತ ಹಜ್ ಯಾತ್ರಿಗಳಾಗಿದ್ದು, ಹಜ್ ಯಾತ್ರೆ ಕೈಗೊಳ್ಳಲು ಅನುಮತಿ ಪಡೆದಿರಲಿಲ್ಲ. ಯಾವುದೇ ಸೂಕ್ತ ಆಸರೆ ಪಡೆಯದೇ ಸುಧೀರ್ಘ ಅಂತರವನ್ನು ಸುಡು ಬಿಸಿಲಲ್ಲಿ ಕಾಲ್ನಡಿಗೆಯಲ್ಲಿ ಕ್ರಮಿಸಿದ್ದರು ಎಂದು ಸೌದಿ ಪ್ರೆಸ್ ಏಜೆನ್ಸಿ ಹೇಳಿದೆ. ಕಳೆದ ವಾರ ಸಾವಿನ ಸಂಖ್ಯೆ 1100ನ್ನು ಮೀರಿದೆ ಎಂದು ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿತ್ತು.

ಈ ವರ್ಷದ ಹಜ್ ಯಾತ್ರೆಯನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ ಎಂದು ಸೌದಿ ಆರೋಗ್ಯ ಸಚಿವ ಫಹದ್ ಅಲ್ ಜಲಾಜಿಲ್ ಹೇಳಿದ್ದಾರೆ. ಸೌದಿ ಆರೋಗ್ಯ ಸೇವಾ ವಿಭಾಗ 4.65 ಲಕ್ಷ ಮಂದಿಗೆ ಸೇವೆ ಒದಗಿಸಿದೆ. ಹಜ್ ಯಾತ್ರೆ ಕೈಗೊಳ್ಳಲು ಅಧಿಕೃತ ಅನುಮತಿಯನ್ನು ಪಡೆಯದ 1.41 ಲಕ್ಷ ಮಂದಿಗೂ ಚಿಕಿತ್ಸಾ ಸೇವೆ ಒದಗಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಈ ಬಾರಿ 18 ಲಕ್ಷ ಮಂದಿ ಯಾತ್ರೆ ಕೈಗೊಂಡಿದ್ದು, ಈ ಪೈಕಿ 16 ಲಕ್ಷ ಮಂದಿ ಹೊರದೇಶದವರು. ಈ ಬಾರಿ ಮಕ್ಕಾದಲ್ಲಿ ತಾಪಮಾನ 51.8 ಡಿಗ್ರಿ ತಲುಪಿತ್ತು ಎಂದು ಸೌದಿ ಅಧಿಕಾರಿಗಳು ಹೇಳಿದ್ದಾರೆ.

ಏತನ್ಮಧ್ಯೆ ಮಕ್ಕಾಗೆ ಅಕ್ರಮ ಯಾತ್ರೆ ಆಯೋಜಿಸದ್ದ ಆರೋಪದಲ್ಲಿ 16 ಪ್ರವಾಸೋದ್ಯಮ ಕಂಪನಿಗಳ ಲೈಸನ್ಸ್ ರದ್ದುಪಡಿಸಲಾಗಿದೆ ಎಂದು ಈಜಿಪ್ಟ್ ಪ್ರಧಾನಿ ಮುಸ್ತಾಫಾ ಮದ್ಬೋಲಿ ಪ್ರಕಟಿಸಿದ್ದಾರೆ. ಜತೆಗೆ ಈ ಸಂಸ್ಥೆಗಳ ವ್ಯವಸ್ಥಾಪಕರನ್ನು ಸಾರ್ವಜನಿಕ ಅಭಿಯೋಜಕರಿಗೆ ಒಪ್ಪಿಸಲಾಗಿದೆ ಎಂದು ವಿವರಿಸಿದ್ದಾರೆ.

Hot this week

ಅಮೇರಿಕ; ‘ಆಟಾ’ ವತಿಯಿಂದ ‘ಬಿಸು ಪರ್ಬ 2026’ ಆಚರಣೆ: ತುಳು ಲಿಪಿ ತರಗತಿಗೆ ಚಾಲನೆ

ಉತ್ತರ ಅಮೇರಿಕ: ಅಖಿಲ ಅಮೆರಿಕಾ ತುಳು ಅಸೋಸಿಯೇಷನ್ (ಆಟಾ) ವತಿಯಿಂದ ಏಪ್ರಿಲ್...

ಅಟ್ಲಾಂಟ ಕನ್ನಡಿಗರಿಂದ ಯುಗಾದಿ-ಹೊಸ ತೊಡಕು ಆಚರಣೆ

ಅಟ್ಲಾಂಟ ಕನ್ನಡಿಗರು ಯುಗಾದಿಯನ್ನು ಏಪ್ರಿಲ್ 11 ಹಾಗೂ ಹೊಸತೊಡಕು ಹಬ್ಬವನ್ನು ಏಪ್ರಿಲ್...

ಖತರ್‌ ಕರ್ನಾಟಕ ಸಂಘದ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಹೆಬ್ಬಾಗಿಲು ಅಧಿಕಾರ ಸ್ವೀಕಾರ

ದೋಹಾ(ಖತರ್):ಕರ್ನಾಟಕ ಸಂಘ ಖತರ್‌ನ 2026–2028 ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸುಬ್ರಹ್ಮಣ್ಯ ಹೆಬ್ಬಾಗಿಲು...

ಫ್ಲೋರಿಡಾ ತುಳು ಕೂಟದ 5ನೇ ವಾರ್ಷಿಕೋತ್ಸವ: ಸಂಭ್ರಮದ ಪಿಕ್ನಿಕ್‌ನೊಂದಿಗೆ ಸಂಸ್ಕೃತಿಯ ಅನಾವರಣ

ಪೊಂಪಾನೋ ಬೀಚ್(ಫ್ಲೋರಿಡಾ): ಫ್ಲೋರಿಡಾ ತುಳು ಕೂಟವು ತನ್ನ ಐದನೇ ವರ್ಷದ ಸಂಭ್ರಮವನ್ನು...

ಅಬುಧಾಬಿಗೆ ಸಚಿವ ಡಾ.ಜೈಶಂಕರ್ ಭೇಟಿ; ಕನ್ನಡಿಗರ ಕೂಟ ದುಬೈ-ಅಬುಧಾಬಿ ಕರ್ನಾಟಕ ಸಂಘ ಪ್ರತಿನಿಧಿತ್ವ

ಅಬುಧಾಬಿ: ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು...

Related Articles

Popular Categories