ಬಹರೈನ್ಕನ್ನಡ ಸಂಘ ಬಹರೈನ್‌ನ ‘ಯಕ್ಷ ವೈಭವ 2026’ ಮುಹೂರ್ತ...

ಕನ್ನಡ ಸಂಘ ಬಹರೈನ್‌ನ ‘ಯಕ್ಷ ವೈಭವ 2026’ ಮುಹೂರ್ತ ಪೂಜೆ ಸಂಪನ್ನ

ಬಹರೈನ್‌: ಕನ್ನಡ ಸಂಘ ಬಹರೈನ್ ಅರ್ಪಿಸುವ ‘ಯಕ್ಷ ವೈಭವ 2026’ ರ ಅಂಗವಾಗಿ ಪ್ರದರ್ಶನಗೊಳ್ಳಲಿರುವ ‘ಲಕ್ಷ್ಮೀ ಸ್ವಯಂವರ – ವಾಲಿ ಮೋಕ್ಷ’ ಯಕ್ಷಗಾನ ಪ್ರಸಂಗದ ಪೂರ್ವಾಭ್ಯಾಸಕ್ಕೆ ಮುಹೂರ್ತ ಪೂಜೆ ಶುಕ್ರವಾರ ಜುಲೈ 3 ರಂದು ಕನ್ನಡಭವನದ ಯೋಗ ಕೇಂದ್ರದಲ್ಲಿ ಭಕ್ತಿಭಾವದಿಂದ ನೆರವೇರಿತು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಅಜಿತ್ ಬಂಗೇರ ಹಾಗೂ ಗಣ್ಯ ಅತಿಥಿಗಳು ಯಕ್ಷ ವೈಭವ 2026ರ ಭಿತ್ತಿಪತ್ರ ಮತ್ತು ಆಹ್ವಾನ ಪತ್ರಿಕೆಯನ್ನು ಅನಾವರಣಗೊಳಿಸಿದರು. ಬಳಿಕ ಮಾತನಾಡಿದ ಅಜಿತ್ ಬಂಗೇರ ಅವರು, ಯಕ್ಷಗಾನವನ್ನು ಬಹರೈನ್‌ನಲ್ಲಿ ಮತ್ತಷ್ಟು ಉತ್ತುಂಗಕ್ಕೇರಿಸುವ ನಿಟ್ಟಿನಲ್ಲಿ ಎಲ್ಲ ಕಲಾಭಿಮಾನಿಗಳ ಸಹಕಾರ ಅಗತ್ಯವೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಕನ್ನಡ ಸಂಘದ ಮಾಜಿ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಶೆಟ್ಟಿ ಮತ್ತು ಅಮರನಾಥ್ ರೈ, ಯಕ್ಷಧ್ರುವ ಪಟ್ಲ ಫೌಂಡೇಶನ್ ಬಹರೈನ್–ಸೌದಿ ಘಟಕದ ಗೌರವಾಧ್ಯಕ್ಷ ಸುಭಾಷ್ ಚಂದ್ರ, ದಮ್ಮಾಮ್ ಬಿಲ್ಲವಾಸ್ ಅಧ್ಯಕ್ಷ ಸತೀಶ್ ಬಜಾಲ್, ಸೌದಿಯ ಕಲಾಪೋಷಕರಾದ ನರೇಂದ್ರ ಶೆಟ್ಟಿ ಮತ್ತು ನವೀನ್ ಭಂಡಾರಿ, ಅಂಕಣಕಾರ ಕಿರಣ್ ಉಪಾಧ್ಯಾಯ, ವಿಶ್ವಕರ್ಮ ಸೇವಾ ಬಳಗದ ಅಧ್ಯಕ್ಷ ಸತೀಶ್ ಉಳ್ಳಾಲ್, ಪತ್ರಿಕಾ ಪ್ರತಿನಿಧಿ ಕಮಲಾಕ್ಷ ಅಮೀನ್, ಬಹರೈನ್ ಬಿಲ್ಲವಾಸ್ ಉಪಾಧ್ಯಕ್ಷ ಸೀತಾರಾಮ್ ಪೂಜಾರಿ, ಮೊಗವೀರ್ಸ್ ಬಹರೈನ್ ಮಾಜಿ ಅಧ್ಯಕ್ಷ ಸಿ.ಎಲ್. ಮೆಂಡನ್, ಹಿರಿಯ ಕಲಾವಿದ ಮೋಹನ್ ಎಡನೀರು, ಯಕ್ಷಶಿಕ್ಷಣದ ಶಿಕ್ಷಕ ಜೀವಿತ್ ಪೂಂಜ, ಉಪಾಧ್ಯಕ್ಷ ನಿತಿನ್ ಶೆಟ್ಟಿ ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿ ಹರಿಣಿ ಉತ್ಕರ್ಷ್ ಶೆಟ್ಟಿ ಸೇರಿದಂತೆ ಹಲವರು ಶುಭ ಹಾರೈಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಯಕ್ಷಗಾನ ಸಂಚಾಲಕ ರಾಮಪ್ರಸಾದ್ ಅಮ್ಮೆನಡ್ಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ,ಕಾರ್ಯಕ್ರಮ ನಿರೂಪಿಸಿದರು.

ಬರುವ ಸೆಪ್ಟೆಂಬರ್ 25ರಂದು ಕನ್ನಡಭವನ ಸಭಾಂಗಣದಲ್ಲಿ ನಡೆಯಲಿರುವ ಯಕ್ಷ ವೈಭವ 2026ರಲ್ಲಿ ತಾಯ್ನಾಡಿನ ಖ್ಯಾತ ಮಹಿಳಾ ಭಾಗವತರಾದ ಕಾವ್ಯಶ್ರೀ ನಾಯಕ್ ಆಜೇರು, ಹಿಮ್ಮೇಳ ಕಲಾವಿದರಾದ ಸತ್ಯಜಿತ್ ರಾವ್ ಹಾಗೂ ಸವಿನಯ ನೆಲ್ಲಿತೀರ್ಥ (ಯುಎಇ), ಮುಮ್ಮೇಳ ಕಲಾವಿದರಾಗಿ ಯಕ್ಷಗುರು ಶೇಖರ್ ಶೆಟ್ಟಿಗಾರ್ (ಯುಎಇ) ಅವರೊಂದಿಗೆ ಸಂಘದ ಸದಸ್ಯ ಕಲಾವಿದರು ಹಾಗೂ ಯಕ್ಷಶಿಕ್ಷಣದ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

ಮುಹೂರ್ತ ಪೂಜೆಯಲ್ಲಿ ನೂರಾರು ಸದಸ್ಯರು ಹಾಗೂ ಕಲಾಭಿಮಾನಿಗಳು ಪಾಲ್ಗೊಂಡಿದ್ದರು. ನಾರಾಯಣ ಪಂಜತೊಟ್ಟಿ ಅವರ ಭಾಗವತಿಕೆಯಲ್ಲಿ ಮೋಹನ್ ಎಡನೀರು, ಭಾಸ್ಕರ ಆಚಾರ್ಯ, ಸಚಿನ್ ಪಾಟಾಳಿ ಹಾಗೂ ರಾಜೇಶ್ ಮಾವಿನಕಟ್ಟೆ ಅವರು ಹಿಮ್ಮೇಳ ಸಹಕಾರ ನೀಡಿದರು. ಛಾಯಾಗ್ರಹಣದ ಸಹಕಾರವನ್ನು ಕೌಶಿಕ್ ಸುವರ್ಣ ಒದಗಿಸಿದರು. ಕಾರ್ಯಕ್ರಮದ ಬಳಿಕ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.

Hot this week

ಭಾರತದ 80ನೇ ಸ್ವಾತಂತ್ರ್ಯೋತ್ಸವದಲ್ಲಿ ಕರ್ನಾಟಕ ಸಂಘ ಖತರ್‌ನ ಅದ್ದೂರಿ ಭಾಗವಹಿಸುವಿಕೆ

ದೋಹಾ(ಖತರ್): ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಭಾರತೀಯ ರಾಯಭಾರ ಕಚೇರಿ ದೋಹಾ...

ಬಹರೈನ್; ಆಗಸ್ಟ್ 21ರಂದು ‘ಕೆಸಿಎಫ್’ನಿಂದ ಗ್ರ್ಯಾಂಡ್ ಮೀಲಾದ್ ಕಾನ್ಫರೆನ್ಸ್

ಮನಾಮ: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಬಹರೈನ್ ರಾಷ್ಟ್ರೀಯ ಸಮಿತಿಯ ವತಿಯಿಂದ...

ಭಾರತೀಯ ರಾಯಭಾರ ಕಚೇರಿಯ ಡಾ.ಈಶ್ ಸಿಂಘಾಲ್​​ಗೆ ಭಾವಪೂರ್ಣ ಬೀಳ್ಕೊಡುಗೆ; ಕರ್ನಾಟಕ ಸಂಘ ಖತರ್‌ನಿಂದ ಅಭಿನಂದನೆ

ದೋಹಾ(ಖತರ್): ಖತರ್‌ನಲ್ಲಿ ತಮ್ಮ ಸೇವಾವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಭಾರತೀಯ ರಾಯಭಾರ ಕಚೇರಿಯ...

ವಂದೇ ಮಾತರಂ ಮತ್ತು ಜನಗಣಮನ ಗೀತೆಯೊಂದಿಗೆ ಅಮೇರಿಕದಲ್ಲಿ ಗೃಹಪ್ರವೇಶ

ವರದಿ: ಬೆಂಕಿ ಬಸಣ್ಣ, ನ್ಯೂಯಾರ್ಕ್ 1875ರಲ್ಲಿ ಭಾರತದಲ್ಲಿ ಮೊಳಗಿದ ‘ವಂದೇ ಮಾತರಂ’ 150...

ದುಬೈ; ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ಸಾಮಾಜಿಕ ಸಮ್ಮಿಲನ ಕಾರ್ಯಕ್ರಮ

ದುಬೈ: ಪರಿಸರ ಸಂರಕ್ಷಣೆ, ಸಾಮಾಜಿಕ ಜಾಗೃತಿ ಹಾಗೂ ಸಮಾಜಮುಖಿ ಕಾರ್ಯಗಳಿಗೆ ಬದ್ಧವಾಗಿರುವ...

Related Articles

Popular Categories