ಸಂದೇಶ́ಗ್ಲೋಬಲ್‌ ಕನ್ನಡಿಗʼಗೆ ಶುಭ ಹಾರೈಸಿದ ʼಅಕ್ಕʼದ ಡಾ.ಅಮರನಾಥ ಗೌಡ

́ಗ್ಲೋಬಲ್‌ ಕನ್ನಡಿಗʼಗೆ ಶುಭ ಹಾರೈಸಿದ ʼಅಕ್ಕʼದ ಡಾ.ಅಮರನಾಥ ಗೌಡ

́ಗ್ಲೋಬಲ್‌ ಕನ್ನಡಿಗʼಗೆ ಶುಭ ಹಾರೈಸಿದ ʼಅಕ್ಕʼ

ವಾರ್ತಾಭಾರತಿ ಕನ್ನಡ ದೈನಿಕ ಸಮೂಹ ಅನಿವಾಸಿ ಕನ್ನಡಿಗರಿಗಾಗಿಯೇ ಮೀಸಲಾಗಿರುವ ಹೊಸ ವೆಬ್ ತಾಣ globalkannadiga.com ವನ್ನು ರೂಪಿಸಿರುವುದು ಅದ್ಬುತ ಕೆಲಸ. ಇದಕ್ಕಾಗಿ ನಾನು ವಾರ್ತಾಭಾರತಿ ಬಳಗವನ್ನು ಅಭಿನಂದಿಸುತ್ತೇನೆ.

ಈ ವೆಬ್ ತಾಣವನ್ನು ಕರ್ನಾಟಕದ ಜನತೆ ಹಾಗು ಜಗತ್ತಿನ ಎಲ್ಲ ದೇಶಗಳಲ್ಲಿರುವ ಕನ್ನಡಿಗರು ಸದುಪಯೋಗಪಡಿಸಿಕೊಳ್ಳಬೇಕಾಗಿದೆ. ಅನಿವಾಸಿ ಕನ್ನಡಿಗರು ಹಾಗು ಕರ್ನಾಟಕ ಸರಕಾರದ ನಡುವೆ ಸೇತುವೆಯಾಗಿ ಈ ಹೊಸ ವೆಬ್ ಸೈಟ್ ರೂಪುಗೊಳ್ಳಲಿ. ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆ ಹಾಗು ಕನ್ನಡಿಗರ ಬದುಕು ಬವಣೆಗಳ ಕುರಿತು ಇದರ ಮೂಲಕ ಚರ್ಚೆ, ಸಂವಾದ ನಡೆಯುವಂತಾಗಲಿ.

ವಿದೇಶದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದರೆ ಕೇವಲ ಇಂಗ್ಲೀಷ್ ಮತ್ತು ಹಿಂದಿ ಭಾಷೆಯನ್ನೇ ಕೇಳುವ ಪರಿಸ್ಥಿತಿಯಿದೆ. ತಮಿಳುನಾಡಿನ ವಿಮಾನ ನಿಲ್ದಾಣಗಳಲ್ಲಿ ಉದ್ಯೋಗಿಗಳು ತಮಿಳು ಕಲಿತಿರಬೇಕು, ಮಾತಾಡಬೇಕು ಎಂಬ ನಿಯಮವಿದೆ. ಪ್ರಪಂಚದ ಎಲ್ಲ ದೇಶಗಳಿಂದ ಜನ ಕರ್ನಾಟಕಕ್ಕೆ ಬರುತ್ತಾರೆ. ಆಗ ಅವರಿಗೆ ಕನ್ನಡದ ಪರಿಚಯ ಆಗುವ ಹಾಗೆ ಸರಕಾರ ಕ್ರಮ ಕೈಗೊಳ್ಳಬೇಕು. ಆ ನಿಟ್ಟಿನಲ್ಲಿ ವಾರ್ತಾಭಾರತಿ ಹಾಗು  globalkannadiga.com ಪ್ರಯತ್ನಿಸಲಿ.

ಹಿಂದಿ ಹೇರಿಕೆಯನ್ನು ತಡೆಯುವಲ್ಲಿ ವಾರ್ತಾಭಾರತಿಯಂತಹ ಮಾಧ್ಯಮಗಳ ಪಾತ್ರ ಮುಖ್ಯವಾಗಿದೆ.  ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಬೆಳೆಸಲು ಹಾಗು ಜಾಗತಿಕ ಕನ್ನಡಿಗರ ಬದುಕು ಬೆಳಗಲು ಈ ಹೊಸ ವೆಬ್ ಸೈಟ್ ವೇದಿಕೆಯಾಗಲಿ ಎಂದು ಹಾರೈಸುತ್ತೇನೆ.

ಡಾ. ಅಮರನಾಥ ಗೌಡ , ಸ್ಥಾಪಕರು ಹಾಗು ಅಧ್ಯಕ್ಷರು,

ಅಮೇರಿಕದ ಕನ್ನಡ ಕೂಟಗಳ ಒಕ್ಕೂಟ (AKKA)

Hot this week

ಬಹರೈನ್: ಯಕ್ಷಗುರು ದೀಪಕ್ ರಾವ್ ಪೇಜಾವರರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ಬಹರೈನ್: ಕಳೆದ ಒಂದು ದಶಕದಿಂದ ಬಹರೈನ್ ದ್ವೀಪರಾಷ್ಟ್ರದಲ್ಲಿ ನೆಲೆಸಿರುವ ಖ್ಯಾತ ಯಕ್ಷಗಾನ...

ನ್ಯೂಯಾರ್ಕ್ ಮೇಯರ್ ಆಗಿ ಭಾರತೀಯ ಮೂಲದ ಝೊಹ್ರಾನ್ ಮಮ್ದಾನಿ ಆಯ್ಕೆ ಸಂಭವ; ಗೆದ್ದರೆ, ಹಲವು ಇತಿಹಾಸ ಸೃಷ್ಟಿ!

ಜೂನ್ 24 ರಂದು ನಡೆದ ನ್ಯೂಯಾರ್ಕ್ ಮೇಯರ್ ಹುದ್ದೆಗೆ ಪಕ್ಷಗಳ ಅಭ್ಯರ್ಥಿಯ...

ಗಲ್ಫ್‌ನಲ್ಲಿ ಮತ್ತೆ ಕವಿದ ಯುದ್ಧದ ಕಾರ್ಮೋಡ; ವಲಸಿಗರನ್ನು ಕಾಡುತ್ತಿವೆ 1991ರ ಕೊಲ್ಲಿ ಯುದ್ಧದ ಕಹಿ ನೆನಪುಗಳು…!

ಇರಾನ್-ಇಸ್ರೇಲ್ ದಾಳಿಯಲ್ಲಿ ಅಮೇರಿಕ ನೇರವಾಗಿ ಭಾಗವಹಿಸುತ್ತಿರುವುದರಿಂದ , ಅಮೇರಿಕದ ಮಿತ್ರ ರಾಷ್ಟ್ರಗಳಾದ...

ಜೂನ್ 29ರಂದು ಯುಎಇ ಯಕ್ಷಗಾನ ಅಭ್ಯಾಸ ಕೇಂದ್ರದ ದಶಮಾನೋತ್ಸವ: 7 ಮಂದಿ ಸಾಧಕರಿಗೆ-ಮೂರು ಸಾಧಕ ಸಂಸ್ಥೆಗಳಿಗೆ ಸನ್ಮಾನ

ದುಬೈ:ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಇದರ ದಶಮಾನೋತ್ಸವ ಕಾರ್ಯಕ್ರಮವು ಜೂನ್ 29ರಂದು...

Related Articles

Popular Categories