ಕರ್ನಾಟಕ ಸಂಘ ಖತರ್ (KSQ), ರಮಝಾನ್ ಮಾಸದ ಪವಿತ್ರ ಚಟುವಟಿಕೆಗಳ ಭಾಗವಾಗಿ ತನ್ನ ವಾರ್ಷಿಕ ‘ಇಫ್ತಾರ್ ಆಹಾರ ಕಿಟ್ ವಿತರಣಾ’ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿಟ್ಟು.


ಉಪವಾಸ ನಿರತ ಸಮುದಾಯದ ಸದಸ್ಯರಿಗೆ ಪೌಷ್ಟಿಕ ಆಹಾರದ ಕಿಟ್ಗಳನ್ನು ಒದಗಿಸುವ ಮೂಲಕ ನೆರವಾಗುವುದು ಈ ಉಪಕ್ರಮದ ಮುಖ್ಯ ಉದ್ದೇಶವಾಗಿತ್ತು.
KSQ ವ್ಯವಸ್ಥಾಪಕ ಸಮಿತಿಯ ಸದಸ್ಯರು ಹಾಗೂ ಸಮರ್ಪಿತ ಸ್ವಯಂಸೇವಕರು ರಯಾನ್ ರಸ್ತೆಯ ವಿತರಣಾ ಕೇಂದ್ರದಲ್ಲಿ ಮುಂಚಿತವಾಗಿಯೇ ಸನ್ನದ್ಧರಾಗಿದ್ದರು. ಸೂರ್ಯಾಸ್ತದ ವೇಳೆ ಫಲಾನುಭವಿಗಳು ಸರಿಯಾದ ಸಮಯಕ್ಕೆ ಉಪವಾಸ ಮುರಿಯಲು ಅನುಕೂಲವಾಗುವಂತೆ, ಅತ್ಯಂತ ಶಿಸ್ತು ಮತ್ತು ಸಂಯೋಜನೆಯಿಂದ ಕಿಟ್ಗಳನ್ನು ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಮಕ್ಕಳು ಸಹ ಸ್ವಯಂಸೇವಕರಾಗಿ ಪಾಲ್ಗೊಂಡು ವಿತರಣಾ ಕಾರ್ಯದಲ್ಲಿ ಕೈಜೋಡಿಸಿದ್ದು ಗಮನಾರ್ಹವಾಗಿತ್ತು. ಇದು ಅವರಿಗೆ ಸಮುದಾಯ ಸೇವೆಯ ಮೌಲ್ಯವನ್ನು ಪ್ರಾಯೋಗಿಕವಾಗಿ ಕಲಿಯಲು ಉತ್ತಮ ವೇದಿಕೆಯಾಯಿತು.


ರಮಝಾನ್ನ ಕರುಣೆ ಮತ್ತು ಏಕತೆಯ ಸಂದೇಶವನ್ನು ಸಾರುವ ಈ ಮಾನವೀಯ ಕಾರ್ಯಕ್ಕೆ ಸಹಕರಿಸಿದ ಎಲ್ಲಾ ಹಿತೈಷಿಗಳಿಗೆ KSQ ಅಧ್ಯಕ್ಷರಾದ ರವಿ ಶೆಟ್ಟಿ ಅವರು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು. ಸಂಘದ ಈ ಸಮಯೋಚಿತ ಸಹಾಯಕ್ಕೆ ಫಲಾನುಭವಿಗಳು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾಜಕ್ಕೆ ಅಳಿಲು ಸೇವೆ ಸಲ್ಲಿಸುವ ಮಹತ್ವವನ್ನು ಒತ್ತಿ ಹೇಳಿದ ಸಂಘಟಕರು, ಮುಂಬರುವ ವರ್ಷಗಳಲ್ಲಿಯೂ ಇಂತಹ ಜನಪರ ಕಾರ್ಯಗಳನ್ನು ಮುಂದುವರಿಸುವ ಮತ್ತು ಸಮುದಾಯ ಸೇವೆಗೆ ನಿರಂತರವಾಗಿ ಬದ್ಧರಾಗಿರುವ ಸಂಕಲ್ಪವನ್ನು ಪುನರುಚ್ಚರಿಸಿದರು.

