ಯುಎಇಯುಎಇ: ಡಿ.31ಕ್ಕೆ ಸಾರ್ವಜನಿಕ ಕ್ಷಮಾಪಣೆ ಅಂತ್ಯ

ಯುಎಇ: ಡಿ.31ಕ್ಕೆ ಸಾರ್ವಜನಿಕ ಕ್ಷಮಾಪಣೆ ಅಂತ್ಯ

4 ತಿಂಗಳ ಅಭಿಯಾನದಲ್ಲಿ ಹಲವು ಅನಿವಾಸಿಯರಿಗೆ ಲಾಭ


ದುಬೈ/ ಯುಎಇ: ಕಳೆದ ನಾಲ್ಕು ತಿಂಗಳಿನಿಂದ ಯುಎಇಯಲ್ಲಿದ್ದ ಸಾರ್ವಜನಿಕ ಕ್ಷಮಾಪಣೆ ಅಭಿಯಾನ ಡಿ.31ಕ್ಕೆ ಅಂತ್ಯಗೊಳ್ಳಲಿದೆ. ಈ ಅವಧಿಯೊಳಗೆ ಸೂಕ್ತ ದಾಖಲೆಗಳಿಲ್ಲದ ಅನಿವಾಸಿಗರು ಶರಣಾಗುವ ಮೂಲಕ ಸ್ವಂತ ಊರಿಗೆ ಹಿಂದಿರುಗಬಹುದು. ಇಲ್ಲವೇ ದಾಖಲೆಗಳನ್ನು ಸರಿಪಡಿಸಬಹುದು ಎಂದು ದುಬೈಯ ಜಿಡಿಆರ್‌ಎಫ್‌ಎ ನಿರ್ದೇಶಕ ಜ.ಲೆ.ಜ.ಮುಹಮ್ಮದ್ ಅಹ್ಮದ್ ಅಲ್ ಮರಿ ಹೇಳಿದ್ದಾರೆ.
ಸಾರ್ವಜನಿಕ ಕ್ಷಮಾಪಣೆ ಅವಧಿ ಮುಗಿದ ಬಳಿಕ ಕಾನೂನು ಉಲ್ಲಂಘಿಸಿ ನೆಲೆಸಿರುವವರನ್ನು ಪತ್ತೆಹಚ್ಚಿಲು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಅವರು ತಿಳಿಸಿದ್ದಾರೆ.
ಈ ನಾಲ್ಕು ತಿಂಗಳ ಕ್ಷಮಾಪಣ ಕಾಲಾವಧಿಯು ಯುನೈಟಡ್ ಅರಬ್ ಎಮಿರೇಟ್ಸ್‌ನ ಮಾನವೀಯತೆಯ ಉದಾಹರಣೆಯಾಗಿದ್ದು, ಇದರ ಸದುಪಯೋಗವನ್ನು ಹಲವರು ಪಡೆದಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಯುಎಇಯಲ್ಲಿ ಬಹಳಷ್ಟು ಜನರು ಎದುರಿಸುತ್ತಿರುವ ಸಮಸ್ಯೆಗಳ ಹಿನ್ನೆಲೆಯಲ್ಲಿ ಈ ಅಭಿಯಾನವನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ ಅಹ್ಮದ್ ಅಲ್ ಮರಿ, ತಂದೆಯ ಸೂಕ್ತ ದಾಖಲೆಗಳಿಲ್ಲದ ಯುಎಇಯಲ್ಲಿ ಜನಿಸಿದ ಹಲವು ಮಕ್ಕಳ ವ್ಯಾಕ್ಸಿನೇಶನ್ ಸಮಸ್ಯೆ ಸಹಿತ ಹಲವು ಸಮಸ್ಯೆಗಳನ್ನು ಪರಿಹರಿಸಿದೆ ಎಂದು ತಿಳಿಸಿದ್ದಾರೆ.

Hot this week

ಭಾರತದ ನೂತನ ಕಾನ್ಸುಲ್ ಜನರಲ್ ಡಾ.ವಿಷ್ಣುವರ್ಧನ ರೆಡ್ಡಿಗೆ ಕನ್ನಡಿಗರ ಕೂಟ ದುಬೈಯಿಂದ ಸ್ವಾಗತ

ದುಬೈ: ಯುಎಇಯ ಪ್ರತಿಷ್ಠಿತ ಕನ್ನಡ ಸಂಘಟನೆಗಳಲ್ಲಿ ಒಂದಾಗಿರುವ ಕನ್ನಡಿಗರ ಕೂಟ, ದುಬೈ...

ಭಾರತದ 80ನೇ ಸ್ವಾತಂತ್ರೋತ್ಸವದ ಸವಿನೆನಪಿಗಾಗಿ ರಕ್ತದಾನದಿಂದ ಮಾನವೀಯತೆಯ ಸಂದೇಶ ಸಾರಿದ ಕರ್ನಾಟಕ ಸಂಘ ಶಾರ್ಜಾ

ದುಬೈ: ಭಾರತದ 80ನೇ ಸ್ವಾತಂತ್ರೋತ್ಸವದ ಸವಿನೆನಪಿಗಾಗಿ ಕರ್ನಾಟಕ ಸಂಘ ಶಾರ್ಜಾ ಮತ್ತು...

ಸಲಾಲದ ಅಲ್ ನೂರ್ ಎಜುಕೇಶನ್ ಸೆಂಟರ್‌ನಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

ಸಲಾಲ(ಒಮಾನ್): ಸಲಾಲದ ಅಲ್ ನೂರ್ ಎಜುಕೇಶನ್ ಸೆಂಟರ್ ನಲ್ಲಿ ಬ್ಯಾರೀಸ್ ಕಮ್ಯುನಿಟಿ...

ಭಾರತದ 80ನೇ ಸ್ವಾತಂತ್ರ್ಯೋತ್ಸವದಲ್ಲಿ ಕರ್ನಾಟಕ ಸಂಘ ಖತರ್‌ನ ಅದ್ದೂರಿ ಭಾಗವಹಿಸುವಿಕೆ

ದೋಹಾ(ಖತರ್): ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಭಾರತೀಯ ರಾಯಭಾರ ಕಚೇರಿ ದೋಹಾ...

ಬಹರೈನ್; ಆಗಸ್ಟ್ 21ರಂದು ‘ಕೆಸಿಎಫ್’ನಿಂದ ಗ್ರ್ಯಾಂಡ್ ಮೀಲಾದ್ ಕಾನ್ಫರೆನ್ಸ್

ಮನಾಮ: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಬಹರೈನ್ ರಾಷ್ಟ್ರೀಯ ಸಮಿತಿಯ ವತಿಯಿಂದ...

Related Articles

Popular Categories