ಸೌದಿ ಅರೇಬಿಯಾನಂಬಲಸಾಧ್ಯ ರೀತಿಯಲ್ಲಿ 500 ಕೆಜಿ ತೂಕ ಕಳೆದುಕೊಂಡ ಸೌದಿ...

ನಂಬಲಸಾಧ್ಯ ರೀತಿಯಲ್ಲಿ 500 ಕೆಜಿ ತೂಕ ಕಳೆದುಕೊಂಡ ಸೌದಿ ವ್ಯಕ್ತಿ!

ಹೊಸದಿಲ್ಲಿ: ಜೀವಂತವಿರುವ ಅತಿಹೆಚ್ಚು ತೂಕದ ವ್ಯಕ್ತಿ ಎನಿಸಿಕೊಂಡಿದ್ದ ಸೌದಿ ಅರೇಬಿಯಾದ ಖಾಲಿದ್ ಬಿನ್ ಮೊಹ್ಸೆನ್ ಶಾರಿ 542 ಕೆ.ಜಿ ತೂಕ ಕಳೆದುಕೊಳ್ಳುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. 2013ರಲ್ಲಿ ಖಾಲಿದ್ 610 ಕೆ.ಜಿ ತೂಕ ಹೊಂದಿ ಪ್ರಾಣಾಪಾಯದ ಸ್ಥಿತಿಯಲ್ಲಿದ್ದು, ಮೂರು ವರ್ಷಗಳ ಕಾಲ ಹಾಸಿಗೆ ಹಿಡಿದಿದ್ದರು. ಅಗತ್ಯ ಕೆಲಸಗಳಿಗೆ ಕೂಡಾ ಕುಟುಂಬ ಅಥವಾ ಸ್ನೇಹಿತರ ನೆರವು ಪಡೆಯಬೇಕಾದ ಸ್ಥಿತಿ ತಲುಪಿದ್ದ. ಖಾಲಿದ್ ಸ್ಥಿತಿಯನ್ನು ಕಂಡು ಮಧ್ಯಪ್ರವೇಶಿಸಿದ ದೊರೆ ಅಬ್ದುಲ್ಲಾ, ಅವರ ಜೀವರಕ್ಷಣೆಗೆ ಸಮಗ್ರ ಯೋಜನೆಯನ್ನು ಕೈಗೊಂಡದ್ದು ಈಗ ಫಲ ನೀಡಿದೆ.

ನಿಶುಲ್ಕವಾಗಿ ಖಾಲಿದ್ ಗೆ ಅತ್ಯುತ್ತಮ ಚಿಕಿತ್ಸೆ ದೊರೆಯುವಂತೆ ದೊರೆ ವ್ಯವಸ್ಥೆ ಮಾಡಿದರು. ಖಾಲಿದ್ ಅವರನ್ನು ಜಝಾನ್ ನಲ್ಲಿದ್ದ ಅವರ ಮನೆಯಿಂದ ರಿಯಾದ್ ನಲ್ಲಿರುವ ಕಿಂಗ್ ಫಹದ್ ಮೆಡಿಕಲ್ ಸಿಟಿಗೆ ಕರೆದೊಯ್ದು ಮತ್ತು ವಿಶೇಷವಾಗಿ ವಿನ್ಯಾಸಗೊಳಿಸಿದ ಬೆಡ್ಗೆ ಸ್ಥಳಾಂತರಿಸಲಾಯಿತು. 30 ಮಂದಿ ವೃತ್ತಿಪರ ವೈದ್ಯರ ತಂಡವನ್ನು ರಚಿಸಿ ಅವರಿಗೆ ತೀವ್ರ ಚಿಕಿತ್ಸೆ ಮತ್ತು ಕಡು ಪಥ್ಯಕ್ಕೆ ವ್ಯವಸ್ಥೆ ಮಾಡಲಾಯಿತು.

ಗ್ಯಾಸ್ಟ್ರಿಕ್ ಬೈಪಾಸ್ ಸರ್ಜರಿ, ವಿಶೇಷ ಆಹಾರ ಕ್ರಮ ಮತ್ತು ವ್ಯಾಯಾಮ ಈ ಚಿಕಿತ್ಸೆಯಲ್ಲಿ ಸೇರಿತ್ತು. ಜತೆಗೆ ತೀವ್ರತರ ಫಿಸಿಯೋಥೆರಪಿ ಕೂಡಾ ವ್ಯವಸ್ಥೆ ಮಾಡಿದ ಪರಿಣಾಮ ಖಾಲಿದ್ ನಡೆಯುವಂತಾದರು. ಮಧ್ಯಪ್ರಾಚ್ಯದ ಅಗ್ರಗಣ್ಯ ವಿಜ್ಞಾನಿಗಳ ನೆರವಿನಿಂದಾಗಿ ಖಾಲಿದ್ ನಂಬಲಸಾಧ್ಯ ಫಲಿತಾಂಶ ಪಡೆಯಲು ಸಾಧ್ಯವಾಗಿದೆ. ಕೇವಲ ಆರು ತಿಂಗಳಲ್ಲಿ ದೇಹತೂಕವನ್ನು ಅರ್ಧದಷ್ಟು ಇಳಿಸಿಕೊಳ್ಳಲು ಸಾಧ್ಯವಾಯಿತು.

2023ರ ವೇಳೆಗೆ 542 ಕೆ.ಜಿ ತೂಕ ಕಳೆದುಕೊಂಡ ಖಾಲೀದ್ ಈಗ ಕೇವಲ 63.5 ಕೆ.ಜಿಯೊಂದಿಗೆ ಆರೋಗ್ಯವಂತ ದೇಹತೂಕ ಹೊಂದಿದ್ದಾರೆ. ಅವರ ದೈಹಿಕ ಪರಿವರ್ತನೆ ಎಷ್ಟರ ಮಟ್ಟಿಗೆ ನಾಟಕೀಯವಾಗಿತ್ತು ಎಂದರೆ ದೇಹ ಹೊಸ ಆಕಾರಕ್ಕೆ ಹೊಂದಿಕೊಳ್ಳಲು ಅನುವಾಗುವಂತೆ ಹಲವು ಚರ್ಮ ಹೊರತೆಗೆಯುವ ಶಸ್ತ್ರಚಿಕಿತ್ಸೆಗಳೂ ಬೇಕಾದವು. ಈ ಪವಾಡ ಸದೃಶ ಬದಲಾವಣೆಗೆ ಕಾರಣರಾದ ಇವರಿಗೆ ವೈದ್ಯರು “ದ ಸ್ಮೈಲಿಂಗ್ ಮ್ಯಾನ್” ಎಂಬ ಹೆಸರಿಟ್ಟಿದ್ದಾರೆ.

Hot this week

Al Qamar Moolur Family fest held in Umm Al Quwain

Umm Al Quwain: Al Qamar Moolur Family Fest 2025...

ಕಲಾದರ್ಪಣ 2025: ಕುವೈತ್ ಕನ್ನಡ ಕೂಟದ ಅದ್ದೂರಿ ರಾಜ್ಯೋತ್ಸವ; ಕರ್ನಾಟಕದ ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿಯ ಸಮ್ಮಿಲನ

ಕುವೈತ್: ಕುವೈತ್ ಕನ್ನಡ ಕೂಟ ಒಂದು ಸಾಮಾಜಿಕ-ಸಾಂಸ್ಕೃತಿಕ ಸಂಘಟನೆ, 41 ವರ್ಷಗಳಿಂದ...

ಅಜ್ಮಾನ್; ತುಂಬೆ ಸಮೂಹ ಸಂಸ್ಥೆಯಿಂದ BCF ಅಧ್ಯಕ್ಷ ಡಾ.ಬಿ.ಕೆ.ಯೂಸುಫ್​ಗೆ ʼLIFE TIME ACHIEVEMENT AWARDʼ

ಅಜ್ಮಾನ್: ತುಂಬೆ ಸಂಸ್ಥೆಯ 28ನೇ ವಾರ್ಷಿಕ ಅನಿವಾಸಿ ಕನ್ನಡಿಗರ ಸ್ನೇಹ ಸಮ್ಮಿಳನ...

ದುಬೈ; ‘ಬದ್ರಿಯಾ ಪ್ರೀಮಿಯರ್ ಲೀಗ್(BPL)-ಸೀಸನ್ 8’; ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಅಲ್ ದನಾ XI ತಂಡ; ರಾಯಲ್ ಥಂಡರ್ ಕುಡ್ಲ ರನ್ನರ್ ಅಪ್

ದುಬೈ: ಅನಿವಾಸಿ ಕನ್ನಡಿಗರ ಸಾಮಾಜಿಕ ಸಂಘಟನೆಯಾದ ‘ಬದ್ರಿಯಾ ಫ್ರೆಂಡ್ಸ್ ಯುಎಇ’ ಆಶ್ರಯದಲ್ಲಿ...

ಶೀಘ್ರವೇ ಅನಿವಾಸಿ ಕನ್ನಡಿಗರಿಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪನೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ

ಬೆಳಗಾವಿ: ಅನಿವಾಸಿ ಕನ್ನಡಿಗರ ಬಹುಕಾಲದ ಅತ್ಯಂತ ಪ್ರಮುಖ ಬೇಡಿಕೆಯಾಗಿರುವ ಪ್ರತ್ಯೇಕ ಸಚಿವಾಲಯವನ್ನು...

Related Articles

Popular Categories