ಸೌದಿ ಅರೇಬಿಯಾನಂಬಲಸಾಧ್ಯ ರೀತಿಯಲ್ಲಿ 500 ಕೆಜಿ ತೂಕ ಕಳೆದುಕೊಂಡ ಸೌದಿ...

ನಂಬಲಸಾಧ್ಯ ರೀತಿಯಲ್ಲಿ 500 ಕೆಜಿ ತೂಕ ಕಳೆದುಕೊಂಡ ಸೌದಿ ವ್ಯಕ್ತಿ!

ಹೊಸದಿಲ್ಲಿ: ಜೀವಂತವಿರುವ ಅತಿಹೆಚ್ಚು ತೂಕದ ವ್ಯಕ್ತಿ ಎನಿಸಿಕೊಂಡಿದ್ದ ಸೌದಿ ಅರೇಬಿಯಾದ ಖಾಲಿದ್ ಬಿನ್ ಮೊಹ್ಸೆನ್ ಶಾರಿ 542 ಕೆ.ಜಿ ತೂಕ ಕಳೆದುಕೊಳ್ಳುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. 2013ರಲ್ಲಿ ಖಾಲಿದ್ 610 ಕೆ.ಜಿ ತೂಕ ಹೊಂದಿ ಪ್ರಾಣಾಪಾಯದ ಸ್ಥಿತಿಯಲ್ಲಿದ್ದು, ಮೂರು ವರ್ಷಗಳ ಕಾಲ ಹಾಸಿಗೆ ಹಿಡಿದಿದ್ದರು. ಅಗತ್ಯ ಕೆಲಸಗಳಿಗೆ ಕೂಡಾ ಕುಟುಂಬ ಅಥವಾ ಸ್ನೇಹಿತರ ನೆರವು ಪಡೆಯಬೇಕಾದ ಸ್ಥಿತಿ ತಲುಪಿದ್ದ. ಖಾಲಿದ್ ಸ್ಥಿತಿಯನ್ನು ಕಂಡು ಮಧ್ಯಪ್ರವೇಶಿಸಿದ ದೊರೆ ಅಬ್ದುಲ್ಲಾ, ಅವರ ಜೀವರಕ್ಷಣೆಗೆ ಸಮಗ್ರ ಯೋಜನೆಯನ್ನು ಕೈಗೊಂಡದ್ದು ಈಗ ಫಲ ನೀಡಿದೆ.

ನಿಶುಲ್ಕವಾಗಿ ಖಾಲಿದ್ ಗೆ ಅತ್ಯುತ್ತಮ ಚಿಕಿತ್ಸೆ ದೊರೆಯುವಂತೆ ದೊರೆ ವ್ಯವಸ್ಥೆ ಮಾಡಿದರು. ಖಾಲಿದ್ ಅವರನ್ನು ಜಝಾನ್ ನಲ್ಲಿದ್ದ ಅವರ ಮನೆಯಿಂದ ರಿಯಾದ್ ನಲ್ಲಿರುವ ಕಿಂಗ್ ಫಹದ್ ಮೆಡಿಕಲ್ ಸಿಟಿಗೆ ಕರೆದೊಯ್ದು ಮತ್ತು ವಿಶೇಷವಾಗಿ ವಿನ್ಯಾಸಗೊಳಿಸಿದ ಬೆಡ್ಗೆ ಸ್ಥಳಾಂತರಿಸಲಾಯಿತು. 30 ಮಂದಿ ವೃತ್ತಿಪರ ವೈದ್ಯರ ತಂಡವನ್ನು ರಚಿಸಿ ಅವರಿಗೆ ತೀವ್ರ ಚಿಕಿತ್ಸೆ ಮತ್ತು ಕಡು ಪಥ್ಯಕ್ಕೆ ವ್ಯವಸ್ಥೆ ಮಾಡಲಾಯಿತು.

ಗ್ಯಾಸ್ಟ್ರಿಕ್ ಬೈಪಾಸ್ ಸರ್ಜರಿ, ವಿಶೇಷ ಆಹಾರ ಕ್ರಮ ಮತ್ತು ವ್ಯಾಯಾಮ ಈ ಚಿಕಿತ್ಸೆಯಲ್ಲಿ ಸೇರಿತ್ತು. ಜತೆಗೆ ತೀವ್ರತರ ಫಿಸಿಯೋಥೆರಪಿ ಕೂಡಾ ವ್ಯವಸ್ಥೆ ಮಾಡಿದ ಪರಿಣಾಮ ಖಾಲಿದ್ ನಡೆಯುವಂತಾದರು. ಮಧ್ಯಪ್ರಾಚ್ಯದ ಅಗ್ರಗಣ್ಯ ವಿಜ್ಞಾನಿಗಳ ನೆರವಿನಿಂದಾಗಿ ಖಾಲಿದ್ ನಂಬಲಸಾಧ್ಯ ಫಲಿತಾಂಶ ಪಡೆಯಲು ಸಾಧ್ಯವಾಗಿದೆ. ಕೇವಲ ಆರು ತಿಂಗಳಲ್ಲಿ ದೇಹತೂಕವನ್ನು ಅರ್ಧದಷ್ಟು ಇಳಿಸಿಕೊಳ್ಳಲು ಸಾಧ್ಯವಾಯಿತು.

2023ರ ವೇಳೆಗೆ 542 ಕೆ.ಜಿ ತೂಕ ಕಳೆದುಕೊಂಡ ಖಾಲೀದ್ ಈಗ ಕೇವಲ 63.5 ಕೆ.ಜಿಯೊಂದಿಗೆ ಆರೋಗ್ಯವಂತ ದೇಹತೂಕ ಹೊಂದಿದ್ದಾರೆ. ಅವರ ದೈಹಿಕ ಪರಿವರ್ತನೆ ಎಷ್ಟರ ಮಟ್ಟಿಗೆ ನಾಟಕೀಯವಾಗಿತ್ತು ಎಂದರೆ ದೇಹ ಹೊಸ ಆಕಾರಕ್ಕೆ ಹೊಂದಿಕೊಳ್ಳಲು ಅನುವಾಗುವಂತೆ ಹಲವು ಚರ್ಮ ಹೊರತೆಗೆಯುವ ಶಸ್ತ್ರಚಿಕಿತ್ಸೆಗಳೂ ಬೇಕಾದವು. ಈ ಪವಾಡ ಸದೃಶ ಬದಲಾವಣೆಗೆ ಕಾರಣರಾದ ಇವರಿಗೆ ವೈದ್ಯರು “ದ ಸ್ಮೈಲಿಂಗ್ ಮ್ಯಾನ್” ಎಂಬ ಹೆಸರಿಟ್ಟಿದ್ದಾರೆ.

Hot this week

ದುಬೈನಲ್ಲಿ ‘ಗಂಧರ್ವ ಗಮಕ ಶಾಲೆ’ ಉದ್ಘಾಟನೆ

ದುಬೈ: ಪದ್ಮಶ್ರೀ ಹೊಸಹಳ್ಳಿ ಕೇಶವಮೂರ್ತಿ ಅವರ ಶಿಷ್ಯ ಪರಂಪರೆಯನ್ನು ಮುಂದುವರಿಸುವ ಮಹತ್ವದ...

ದುಬೈಯಲ್ಲಿ ಸಂಪನ್ನಗೊಂಡ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ವೈಭವ

ದುಬೈ: ಅರಬ್ ಸಂಯುಕ್ತ ಸಂಸ್ಥಾನ ವಾಣಿಜ್ಯ ನಗರಿ ದುಬೈಯಲ್ಲಿ ಸಾಮೂಹಿಕ ಶ್ರೀ...

ಸಲಾಲದಲ್ಲಿ ಅದ್ದೂರಿಯಾಗಿ ನಡೆದ ಕನ್ನಡಿಗರ ‘ಸ್ನೇಹ ಸಂಗಮ’ ಕಾರ್ಯಕ್ರಮ

ಸಲಾಲ(ಒಮಾನ್): ಇಲ್ಲಿನ ಅನಿವಾಸಿ ಕನ್ನಡಿಗರ ಅನ್ನೂರ್ ಎಜುಕೇಶನಲ್ ಸೆಂಟರ್ ವತಿಯಿಂದ 'ಸ್ನೇಹ...

ವಿಶ್ವದಲ್ಲೇ ಮೊದಲ ಬಾರಿ ಜರ್ಮನ್ ಭಾಷೆಯಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಸಿದ್ಧತೆ

ವಿಶೇಷ ಸಂದರ್ಶನ: ಎಂ.ಇಕ್ಬಾಲ್ ಉಚ್ಚಿಲ, ದುಬೈ ಕರಾವಳಿ ಕರ್ನಾಟಕದ ಜನಪ್ರಿಯ ಕಲೆಯಾಗಿರುವ ಯಕ್ಷಗಾನವು...

ಫೆಬ್ರವರಿ 1ರಂದು ಶಾರ್ಜಾದಲ್ಲಿ ‘ಮಾರ್ಗದೀಪ ಪ್ರೀಮಿಯರ್ ಲೀಗ್-4’ ಕ್ರಿಕೆಟ್ ಟೂರ್ನಮೆಂಟ್; ಜರ್ಸಿ ಬಿಡುಗಡೆ

ದುಬೈ: ಮಾರ್ಗದೀಪ ಸಾಂಸ್ಕೃತಿಕ ಸಮಿತಿಯ ವತಿಯಿಂದ ದಿವಂಗತ ವಸಂತ್ ಬೇಕಲ್ ಸ್ಮರಣಾರ್ಥ...

Related Articles

Popular Categories