ಯುಎಇದುಬೈ; ಫೆಬ್ರವರಿ 28ರಂದು 'ಬ್ಯಾರೀಸ್ ಕಲ್ಚರಲ್ ಫೋರಮ್( BCF)'ನಿಂದ...

ದುಬೈ; ಫೆಬ್ರವರಿ 28ರಂದು ‘ಬ್ಯಾರೀಸ್ ಕಲ್ಚರಲ್ ಫೋರಮ್( BCF)’ನಿಂದ ‘ಇಫ್ತಾರ್ ಮೀಟ್ 2026’

ದುಬೈ: ಕಳೆದ 28 ವರ್ಷಗಳಿಂದ ಸಾಮುದಾಯಿಕ ಸೇವಾ ಕಾರ್ಯದಲ್ಲಿ ತೊಡಗಿ ಕೊಂಡಿರುವ ಅತೀ ಜನಪ್ರಿಯ ಸೇವಾ ಸಂಸ್ಥೆಯಾಗಿರುವ ‘ಬ್ಯಾರೀಸ್ ಕಲ್ಚರಲ್ ಫೋರಮ್( BCF)’ ವತಿಯಿಂದ ‘ಗ್ರ್ಯಾಂಡ್ BCF ಇಫ್ತಾರ್ ಮೀಟ್ 2026’ ಇಫ್ತಾರ್ ಕಾರ್ಯಕ್ರಮ ಫೆಬ್ರವರಿ 28ರಂದು ದುಬೈಯ ಮಂಝರ್ ನಲ್ಲಿರುವ ಝಹಿಯ್ಯಾ ಸಭಾಂಗಣದಲ್ಲಿ ನಡೆಯಲಿದೆ.

BCF ಅಧ್ಯಕ್ಷರಾದ ಡಾ.ಬಿ.ಕೆ.ಯೂಸುಫ್ ಅವರ ಮುಂದಾಳುತನದಲ್ಲಿ BCF ಸ್ಥಾಪಕ ಗೌರವ ಪೋಷಕರಾದ ಡಾ.ತುಂಬೆ ಮೊಹಿದಿನ್ ಅವರ ಸಹಯೋಗದೊಂದಿಗೆ, BCF ಗೌರವ ಸಲಹೆಗಾರರಾದ ಇಬ್ರಾಹಿಂ ಗಡಿಯಾರ್ ಮತ್ತು ಅಬೂಸಾಲಿಹ್ ಮತ್ತು ಇತರ BCF ನಾಯಕರು ಮತ್ತು ಹಿತೈಷಿಗಳ ಸಹಕಾರದೊಂದಿಗೆ ನೆರವೇರಲಿದೆ.

UAEಯಿಂದ, ಇತರ GCC ದೇಶಗಳಿಂದ ಮತ್ತು ಕರ್ನಾಟಕದ ಹಲವಾರು ವಿಶೇಷ ಅತಿಥಿಗಳು, ಉಲೇಮಾಗಳು, ಇಲಾಖಾ ಪ್ರತಿನಿಧಿಗಳು, ಮಂತ್ರಿಗಳು ಮತ್ತು UAE ಯಿಂದ ವಿಶೇಷ ಆಮಂತ್ರಿತ ಅತಿಥಿಗಳು ಭಾಗವಹಿಸಲಿದ್ದಾರೆ.

ಇಫ್ತಾರ್ ಗೆ ಮೊದಲು, ಧಾರ್ಮಿಕ ಪಂಡಿತರುಗಳಿಂದ ದೀನೀ ಉಪನ್ಯಾಸಗಳು, ದುವಾ, ಮತ್ತು ವಿಶೇಷವಾಗಿ ಮಕ್ಕಳಿಗೆ ಮತ್ತು ಇತರರಿಗೆ ಇಸ್ಲಾಮ್ ರಸ ಸ್ಪರ್ಧೆ, ಕಿರಾತ್ ಸ್ಪರ್ಧೆ ಕೂಡಾ ಇದೆ. ಈ ಇಫ್ತಾರಿಗೆ ಆಗಮಿಸುವ ಎಲ್ಲ BCF ಅಭಿಮಾನಿಗಳು ಈ ಎಲ್ಲ ಸ್ಪರ್ಧಾವಳಿಯಲ್ಲಿ ಪಾಲ್ಗೊಳ್ಳಲು ಅಥವಾ ವೀಕ್ಷಿಸಲು ಸಂಜೆ 4.30ಕ್ಕೆ ಆಗಮಿಸುವಂತೆ BCF IFTAAR COMMITEEಯ ಚೇರ್ಮ್ಯಾನ್ ಅಬ್ದುಲ್ ಲತೀಫ್ ಮುಲ್ಕಿ ಮತ್ತು ಸಹ ಚೇರ್ಮ್ಯಾನ್ ಅಫೀಕ್ ಹುಸೈನ್ BCF ಕಾರ್ಯಕಾರಿ ಸಮಿತಿಯ ಪರವಾಗಿ ವಿನಂತಿಸಿದ್ದಾರೆ.

Hot this week

ದುಬೈ; ‘ಬ್ಯಾರೀಸ್ ಪ್ರೀಮಿಯರ್ ಲೀಗ್-2026’ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಕ್ರೌನ್ ಹೊನ್ನಾವರ; ನಫೀಸ್ ಗ್ರೂಪ್ ರನ್ನರ್ ಅಪ್

ದುಬೈ: ಶಾರ್ಜಾದ ಬಿಜೋಯ್ಸ್ ಕ್ರಿಕೆಟ್ ಕ್ರೀಡಾಗಂಣದಲ್ಲಿ ರವಿವಾರ ನಡೆದ 'ಬ್ಯಾರೀಸ್ ಪ್ರೀಮಿಯರ್...

ಕರ್ನಾಟಕ ಸಂಘ ಶಾರ್ಜಾದ ನೂತನ ಅಧ್ಯಕ್ಷರಾಗಿ ವಿಶ್ವನಾಥ್ ಶೆಟ್ಟಿ ಆಯ್ಕೆ

ದುಬೈ: ಕರ್ನಾಟಕ ಸಂಘ ಶಾರ್ಜಾ ಇದರ ನೂತನ ಅಧ್ಯಕ್ಷರಾಗಿ ವಿಶ್ವನಾಥ್ ಶೆಟ್ಟಿ...

ರಮಝಾನ್-ಈದುಲ್ ಫಿತ್ರ್ ಅಂಗವಾಗಿ ಕನ್ನಡ ಸಂಘ ಬಹರೈನ್ ವತಿಯಿಂದ ಆಹಾರ ವಸ್ತುಗಳ ಕಿಟ್ ವಿತರಣೆ

ಬಹರೈನ್: ಪವಿತ್ರ ರಮಝಾನ್ ಮತ್ತು ಈದುಲ್ ಫಿತ್ರ್ ಹಬ್ಬದ ಅಂಗವಾಗಿ ಪ್ರಸ್ತುತ...

400 ಭಾರತೀಯರನ್ನು ತಾಯ್ನಾಡಿಗೆ ಕಳುಹಿಸಿದ ಬಹರೈನ್ ಕನ್ನಡ ಸಂಘ!

ಬಹರೈನ್: ತಾಯ್ನಾಡಿಗೆ ಮರಳಲು ಬಯಸಿದ ಸುಮಾರು 400 ಭಾರತೀಯರಿಗೆ ಕನ್ನಡ ಸಂಘ...

Related Articles

Popular Categories