ಸಂದೇಶದುಬೈನ ಅನಿವಾಸಿ ಉದ್ಯಮಿ ಅತೀಕುರ‍್ರಹ್ಮಾನ್ ಮುನೀರಿ ಅವರಿಂದ  ʼಗ್ಲೋಬಲ್‌...

ದುಬೈನ ಅನಿವಾಸಿ ಉದ್ಯಮಿ ಅತೀಕುರ‍್ರಹ್ಮಾನ್ ಮುನೀರಿ ಅವರಿಂದ  ʼಗ್ಲೋಬಲ್‌ ಕನ್ನಡಿಗʼಗೆ ಶುಭಹಾರೈಕೆ

ವಾರ್ತಾ ಭಾರತಿ ಮಧ್ಯಮ ಸಂಸ್ಥೆ ಅನಿವಾಸಿ ಕನ್ನಡಿಗರಿಗಾಗಿಯೇ  ಮೀಸಲಾದ ವಿಶೇಷ ವೆಬ್ ಸೈಟ್ globalkannadiga.com ಅನ್ನು ಪ್ರಾರಂಭಿಸುತ್ತಿರುವುದು ಸಂತಸದ ಸಮಾಚಾರ. ಅನಿವಾಸಿ ಕನ್ನಡಿಗರ ಕುರಿತ ವಾರ್ತಾ ಭಾರತಿಯ ಈ ಕಾಳಜಿ ಶ್ಲಾಘನೀಯ.

ವಾರ್ತಾ ಭಾರತಿ ಸತ್ಯ ಹೇಳುವ ಪತ್ರಿಕೆ.   ಅನಿವಾಸಿ ಕನ್ನಡಿಗರ ಬಗ್ಗೆ ವಾರ್ತಾ ಭಾರತಿ ಈ ಹಿಂದಿನಿಂದಲೂ ತನ್ನ ಪತ್ರಿಕೆ, ಡಿಜಿಟಲ್ ಮಾಧ್ಯಮಗಳ ಮೂಲಕ ಸಾಕಷ್ಟು ಆದ್ಯತೆ ನೀಡುತ್ತಾ ಬಂದಿದೆ. ಕರ್ನಾಟಕದ ಉದ್ದಗಲಗಳಲ್ಲಿ ಇರುವಂತೆ ವಿದೇಶಗಳಲ್ಲೂ ವಾರ್ತಾ ಭಾರತಿಗೆ ದೊಡ್ಡ ಸಂಖ್ಯೆಯ ಓದುಗರು, ವೀಕ್ಷಕರು, ಅಭಿಮಾನಿಗಳು ಇದ್ದಾರೆ. ಈಗ ಅವರಿಗಾಗಿ ವಾರ್ತಾ ಭಾರತಿ ಒಂದು ಹೊಸ ವೆಬ್ ಸೈಟ್ ಅನ್ನೇ ಮೀಸಲಾಗಿಟ್ಟಿರುವುದು ವಿಶೇಷವಾಗಿದೆ. ಈ ವೆಬ್ ಸೈಟ್ ಎಲ್ಲ ರೀತಿಯಲ್ಲೂ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ.

ಅತೀಕುರ‍್ರಹ್ಮಾನ್ ಮುನೀರಿ,

ಖ್ಯಾತ ಅನಿವಾಸಿ ಉದ್ಯಮಿ, ದುಬೈ

ಪ್ರಧಾನ ಕಾರ್ಯದರ್ಶಿ, ರಾಬಿತಾ ಸೊಸೈಟಿ

Hot this week

ಬಹರೈನ್ ಕನ್ನಡ ಸಂಘದಿಂದ 79ನೇ ಸ್ವಾತಂತ್ರ್ಯ ದಿನಾಚರಣೆ

ಬಹರೈನ್: ಭಾರತದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಗಸ್ಟ್ 15ರಂದು ಬೆಳಗ್ಗೆ 8:30ಕ್ಕೆ...

ಬಹರೈನ್ ರೇಡಿಯೋ ಆರ್ ಜೆ ಕಮಲಾಕ್ಷ ಅಮೀನ್​ಗೆ ‘ಗೋಲ್ಡನ್ ಐಕಾನಿಕ್ ಅವಾರ್ಡ್’ ಗೌರವ ಪ್ರಶಸ್ತಿ

ಮಂಗಳೂರು: ಬಹರೈನ್ ನ ಕಸ್ತೂರಿ ಕನ್ನಡ ಎಫ್ಎಂ ರೇಡಿಯೋ ಆರ್ ಜೆ...

ಮಸ್ಕತ್‌ನಲ್ಲಿ ‘ಕನ್ನಡ ಭವನ’ ನಿರ್ಮಾಣಕ್ಕೆ ಕರ್ನಾಟಕ ಸರಕಾರದಿಂದ ಆರ್ಥಿಕ ನೆರವು ಬೇಕು: ‘ಮಸ್ಕತ್ ಕನ್ನಡ ಸಂಘ’ದ ಅಧ್ಯಕ್ಷ ಮಂಜುನಾಥ್ ಸಂಗಟಿ

ವಿಶೇಷ ಸಂದರ್ಶನ; ಎಂ.ಇಕ್ಬಾಲ್ ಉಚ್ಚಿಲ, ದುಬೈ ನಿಸರ್ಗ ನಿರ್ಮಿತ ರಮ್ಯ ಮನೋಹರ ತಾಣವಾಗಿರುವ...

Related Articles

Popular Categories