ಸಂದೇಶರಾಬಿತಾ ಸೊಸೈಟಿಯಿಂದ globalkannadiga.comಗೆ ಶುಭಾಶಯ

ರಾಬಿತಾ ಸೊಸೈಟಿಯಿಂದ globalkannadiga.comಗೆ ಶುಭಾಶಯ

ವಾರ್ತಾ ಭಾರತಿ ಮಾಧ್ಯಮ ಸಂಸ್ಥೆ ಅನಿವಾಸಿ ಕನ್ನಡಿಗರಿಗಾಗಿ ವಿಶೇಷ ವೆಬ್ ಸೈಟ್ globalkannadiga.com ಪ್ರಾರಂಭಿಸುತ್ತಿರುವುದು ಅಪಾರ ಸಂತೋಷ ತಂದಿದೆ. ಅನಿವಾಸಿ ಕನ್ನಡಿಗರ ಹಿತಚಿಂತನೆಯಲ್ಲಿ ವಾರ್ತಾ ಭಾರತಿ ಕೈಗೊಂಡಿರುವ ಈ ಕ್ರಮ ಶ್ಲಾಘನೀಯವಾಗಿದೆ.

ವಾರ್ತಾ ಭಾರತಿ ಸದಾ ಜನಪರವಾಗಿ ಯೋಚಿಸುವ, ಕಾರ್ಯ ನಿರ್ವಹಿಸುತ್ತಾ ಬಂದಿರುವ ಪತ್ರಿಕೆ. ಸತ್ಯವನ್ನು ಎಲ್ಲೆಡೆಗೆ ತಲುಪಿಸುವ, ಜನರ ಧ್ವನಿಯಾಗಿ ಎರಡು ದಶಕಗಳಿಂದ ಸೇವೆ ಸಲ್ಲಿಸುತ್ತಾ ಬಂದಿರುವ ಹೆಗ್ಗಳಿಕೆ ವಾರ್ತಾಭಾರತಿ ಮಾಧ್ಯಮ ಸಮೂಹಕ್ಕಿದೆ.

ಅನಿವಾಸಿ ಕನ್ನಡಿಗರ ಪ್ರಾಮುಖ್ಯತೆಯನ್ನು ವಾರ್ತಾ ಭಾರತಿ ತನ್ನ ಪತ್ರಿಕೆ ಮತ್ತು ಡಿಜಿಟಲ್ ಮಾಧ್ಯಮಗಳ ಮೂಲಕ ಸದಾ ಪರಿಗಣಿಸುತ್ತಾ ಬಂದಿದೆ.

ವಿದೇಶಗಳಲ್ಲೂ ಬಹಳ ದೊಡ್ಡ ಸಂಖ್ಯೆಯ ಕನ್ನಡಿಗರು ವಾರ್ತಾ ಭಾರತಿಯ ನಿಷ್ಠಾವಂತ ಓದುಗರು, ವೀಕ್ಷಕರೂ ಆಗಿದ್ದಾರೆ. ಅವರಿಗಾಗಿಯೇ ಮೀಸಲಾಗಿರುವ ಈ ಹೊಸ ವೆಬ್ ಸೈಟ್ ಅನಿವಾಸಿ ಕನ್ನಡಿಗರ ಜೊತೆಗೆ ಕರ್ನಾಟಕದ ಬಂಧವನ್ನು ಮತ್ತಷ್ಟು ಬೆಸೆಯಲು ಸಹಕಾರಿ ಆಗುತ್ತದೆ. ಈ ಯೋಜನೆ ಯಶಸ್ವಿಯಾಗಲಿ ಎಂದು  ಹಾರೈಸುತ್ತೇನೆ.

ಉಮರ್ ಫಾರೂಖ್ ಮುಸ್ಬಾ,

ಅಧ್ಯಕ್ಷರು, ರಾಬಿತಾ ಸೊಸೈಟಿ.

Hot this week

ಅಬುಧಾಬಿಗೆ ಸಚಿವ ಡಾ.ಜೈಶಂಕರ್ ಭೇಟಿ; ಕನ್ನಡಿಗರ ಕೂಟ ದುಬೈ-ಅಬುಧಾಬಿ ಕರ್ನಾಟಕ ಸಂಘ ಪ್ರತಿನಿಧಿತ್ವ

ಅಬುಧಾಬಿ: ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು...

ದುಬೈ; ‘ಬ್ಯಾರೀಸ್ ಪ್ರೀಮಿಯರ್ ಲೀಗ್-2026’ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಕ್ರೌನ್ ಹೊನ್ನಾವರ; ನಫೀಸ್ ಗ್ರೂಪ್ ರನ್ನರ್ ಅಪ್

ದುಬೈ: ಶಾರ್ಜಾದ ಬಿಜೋಯ್ಸ್ ಕ್ರಿಕೆಟ್ ಕ್ರೀಡಾಗಂಣದಲ್ಲಿ ರವಿವಾರ ನಡೆದ 'ಬ್ಯಾರೀಸ್ ಪ್ರೀಮಿಯರ್...

ಕರ್ನಾಟಕ ಸಂಘ ಶಾರ್ಜಾದ ನೂತನ ಅಧ್ಯಕ್ಷರಾಗಿ ವಿಶ್ವನಾಥ್ ಶೆಟ್ಟಿ ಆಯ್ಕೆ

ದುಬೈ: ಕರ್ನಾಟಕ ಸಂಘ ಶಾರ್ಜಾ ಇದರ ನೂತನ ಅಧ್ಯಕ್ಷರಾಗಿ ವಿಶ್ವನಾಥ್ ಶೆಟ್ಟಿ...

ರಮಝಾನ್-ಈದುಲ್ ಫಿತ್ರ್ ಅಂಗವಾಗಿ ಕನ್ನಡ ಸಂಘ ಬಹರೈನ್ ವತಿಯಿಂದ ಆಹಾರ ವಸ್ತುಗಳ ಕಿಟ್ ವಿತರಣೆ

ಬಹರೈನ್: ಪವಿತ್ರ ರಮಝಾನ್ ಮತ್ತು ಈದುಲ್ ಫಿತ್ರ್ ಹಬ್ಬದ ಅಂಗವಾಗಿ ಪ್ರಸ್ತುತ...

Related Articles

Popular Categories