ಬಹರೈನ್ಬಹರೈನ್‌; ದ.ಕನ್ನಡ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್‌ನಿಂದ ಅದ್ದೂರಿಯಾಗಿ ನಡೆದ...

ಬಹರೈನ್‌; ದ.ಕನ್ನಡ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್‌ನಿಂದ ಅದ್ದೂರಿಯಾಗಿ ನಡೆದ ಕಬಡ್ಡಿ ಟೂರ್ನಮೆಂಟ್; ತುಳುನಾಡು ತಂಡಕ್ಕೆ ಚಾಂಪಿಯನ್ ಪಟ್ಟ; ಫ್ರೆಂಡ್ಸ್ ಬಹರೈನ್ ರನ್ನರ್ ಅಫ್

ಬಹರೈನ್: ಇಲ್ಲಿನ ಕರ್ನಾಟಕ ಮೂಲದ ಅನಿವಾಸಿ ಮುಸ್ಲಿಂ ಸಮುದಾಯದ ಒಕ್ಕೊಟವಾಗಿರುವ “ದಕ್ಷಿಣ ಕನ್ನಡ ಮುಸ್ಲಿಂ ಅಸೋಸಿಯೇಷನ್ ” ಸ್ಥಳೀಯ ಇಂಡಿಯನ್ ಕ್ಲಬ್ ನ ಹೊರಾಂಗಣ ಕ್ರೀಡಾಂಗಣದಲ್ಲಿ ಕಬಡ್ಡಿ ಪಂದ್ಯಾಟವೊಂದನ್ನು ಏರ್ಪಡಿಸಿದ್ದು, ದ್ವೀಪ(ಬಹರೈನ್)ದ ಎಂಟು ಬಲಿಷ್ಠ ಕಬಡ್ಡಿ ತಂಡಗಳು ಈ ಪಂದ್ಯಾಟದಲ್ಲಿ ಪಾಲ್ಗೊಂಡು ನೆರೆದ ನೂರಾರು ಕ್ರೀಡಾಪ್ರೇಮಿಗಳನ್ನು ಬೆಳಗಿನಿಂದ ತಡರಾತ್ರಿಯವರೆಗೂ ರಂಜಿಸುವಲ್ಲಿ ಸಫಲವಾಯಿತು.

ದಕ್ಷಿಣ ಕನ್ನಡ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ನ ಸದಸ್ಯರಾಗಿದ್ದು, ಸಂಘಟನೆಗೆ ಅನನ್ಯ ಕೊಡುಗೆ ನೀಡಿ ಮರೆಯಾದ ದಿವಂಗತ ಅಬೂಬಕರ್ ಕೋಯಾ ಹಾಗು ದಿವಂಗತ ಅಬೂಬಕರ್ ಖಾದರ್ ಹೊಳೆಬದಿ ಅವರ ಸ್ಮರಣಾರ್ಥ ಈ ಪಂದ್ಯಾಟವನ್ನು ಏರ್ಪಡಿಸಲಾಗಿತ್ತು.

ಸಂಘಟನೆಯ ಅಧ್ಯಕ್ಷರಾಗಿ ಬಹರೈನ್‌ನ ಹಾಗು ನಾಡಿನ ಮುಸ್ಲಿಮ್ ಸಮುದಾಯದ ಕಷ್ಟ ನಷ್ಟಗಳಿಗೆ ಸ್ಪಂದಿಸುತ್ತ ಕಳೆದ 33 ವರುಷಗಳಿಂದ ಸಂಘಟನೆಯನ್ನು ಮುನ್ನಡೆಸಿಕೊಂಡು ಬರುತ್ತಿರುವ ಸಂಘಟನೆಯ ಅಧ್ಯಕ್ಷರಾದ ಹಾಜಿ ಅಬ್ದುಲ್ ರಝಾಕ್ ಅವರ ನೇತೃತ್ವದಲ್ಲಿ ಈ ಪಂದ್ಯಾವಳಿಯು ಯಶಸ್ವಿಯಾಗಿ ಜರುಗಿತು.

ಇಲ್ಲಿನ ಕಬಡ್ಡಿ ಫೆಡರೇಷನ್ ನ ಸಹಯೋಗದಲ್ಲಿ ಅಂತಾರಾಷ್ಟ್ರೀಯ ನೀತಿ ನಿಯಮಾವಳಿಯಂತೆ ಈ ಪಂದ್ಯಾಟವನ್ನು ಆಯೋಜಿಸಿದ್ದು ,ಕಬಡ್ಡಿ ಫೆಡರೇಷನ್ ನ ಅಧಿಕಾರಿಗಳು ಈ ಪಂದ್ಯಾಟದ ಆಯೋಜನೆಯಲ್ಲಿ ಹಾಗು ತೀರ್ಪುಗಾರರಾಗಿ ಸಹಕರಿಸಿದರು.

ಬೆಳಗ್ಗೆ 10 ಗಂಟೆಗೆ ಸರಿಯಾಗಿ ಈ ಪಂದ್ಯಾಟವು ವಿದ್ಯುಕ್ತ ಚಾಲನೆಯನ್ನು ಕಂಡಿದ್ದು, ಇಲ್ಲಿನ ಸೆಂಟ್ರಲ್ ಕೆಫೆ ಸಮೂಹ ಹೋಟೆಲ್ ಸಂಸ್ಥೆಯ ಆಡಳಿತ ನಿರ್ದೇಶಕ ಪ್ರಕಾಶ್ ಶೆಟ್ಟಿ ಅವರು ಪಂದ್ಯಾಟಕ್ಕೆ ಚಾಲನೆ ನೀಡಿದರು. ಕನ್ನಡ ಸಂಘದ ಅಧ್ಯಕ್ಷ ಅಜಿತ್ ಬಂಗೇರ ಉಪಸ್ಥಿತರಿದ್ದರು.

ಲೀಗ್ ಹಂತದಲ್ಲಿ ಎಂಟು ಬಲಿಷ್ಠ ತಂಡಗಳಲ್ಲಿ ತೀವ್ರ ಪೈಪೋಟಿ ನಡೆದು, ಸೆಮಿಫೈನಲ್ ನಲ್ಲಿ ಪಟ್ಟುಕೊಟ್ಟೈ ತಂಡವನ್ನು ಮಣಿಸಿದ ತುಳುನಾಡು ತಂಡ ಅಂತಿಮ ಹಂತಕ್ಕೆ ಏರಿದರೆ, ಬಹರೈನ್ ಬ್ಯಾರೀಸ್ ತಂಡವನ್ನು ಸೋಲಿಸಿ ಫ್ರೆಂಡ್ಸ್ ಬಹರೈನ್ ತಂಡವು ಅಂತಿಮ ಹಂತಕ್ಕೇರಿತು. ಫೈನಲ್ ಪಂದ್ಯಾಟದಲ್ಲಿ ತೀವ್ರ ಪೈಪೋಟಿಯಿದ್ದರೂ ಕೂಡ ತುಳುನಾಡು ತಂಡವು ಗ್ರ್ಯಾಂಡ್ ಕಬಡ್ಡಿ ಪಂದ್ಯಾಟದ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಫ್ರೆಂಡ್ಸ್ ಬಹರೈನ್ ತಂಡ ರನ್ನರ್ ಅಫ್ ಸ್ಥಾನವನ್ನು ತನ್ನದಾಗಿಸಿಕೊಂಡಿತು.

ತಡರಾತ್ರಿ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬಹರೈನ್‌ನ ಯುನೀಕೋ ಸಮೂಹ ಸಂಸ್ಥೆಗಳ ಸಿ .ಓ .ಓ ಜಯಶಂಕರ್ ವಿಶ್ವನಾಥನ್, ಇಲ್ಲಿನ ಕಬಡ್ಡಿ ಫೆಡರೇಷನ್ ನ ಅಧ್ಯಕ್ಷರಾದ ಸಾಮಿ ಆಲಿ, ಕನ್ನಡ ಸಂಘದ ಅಧ್ಯಕ್ಷ ಅಜಿತ್ ಬಂಗೇರ, ಮಾಜಿ ಅಧ್ಯಕ್ಷರಾದ ಅಮರನಾಥ್ ರೈ, ಪ್ರದೀಪ್ ಶೆಟ್ಟಿ, ಸೆಂಟ್ರಲ್ ಕೆಫೆ ಸಮೂಹ ಹೋಟೆಲ್ ಸಂಸ್ಥೆಯ ಆಡಳಿತ ನಿರ್ದೇಶಕ ಪ್ರಕಾಶ್ ಶೆಟ್ಟಿ, ಉಡುಪಿಯ ಉದ್ಯಮಿ ಹಾಗು ಸಮಾಜಸೇವಕ ಮುಬಾರಕ್, ಬಿ.ಕೆ.ಉಮ್ಮೆರ್ ಸಾಹೇಬ್, ಸಯ್ಯದ್ ಹೆಜಮಾಡಿ, ನಾಸರ್ ಮುಂತಾದವರು ಉಪಸ್ಥಿತರಿದ್ದರು.

ದಕ್ಷಿಣ ಕನ್ನಡ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ನ ಅಧ್ಯಕ್ಷರಾದ ಹಾಜಿ ಅಬ್ದುಲ್ ರಝಾಕ್ ಅವರು ಮಾತನಾಡಿ, ಕಬಡ್ಡಿ ಪಂದ್ಯಾಟದ ಯಶಸ್ಸಿಗಾಗಿ ದುಡಿದ ಎಲ್ಲರಿಗೂ ಕೃತಜ್ಞತೆಗಳನ್ನು ಅರ್ಪಿಸುತ್ತ, ಇಂತಹ ಕ್ರೀಡೆಗಳು ನಮ್ಮೆಲ್ಲರನ್ನೂ ಒಂದುಗೂಡಿಸುವ ಕೆಲಸವನ್ನು ಮಾಡುತ್ತದೆ. ನಮ್ಮನ್ನು ಅಗಲಿದ ಅಬೂಬಕರ್ ಕೋಯಾ ಹಾಗು ಅಬೂಬಕರ್ ಖಾದರ್ ಹೊಳೆಬದಿಯವರನ್ನು ಈ ಕಬಡ್ಡಿ ಪಂದ್ಯಾಟದ ಮೂಲಕ ಸ್ಮರಿಸುವ ಜೊತೆಗೆ ಎಲ್ಲಾ ಜಾತಿ, ಧರ್ಮಗಳನ್ನು ಮೀರಿ ನಾವೆಲ್ಲರೂ ಒಂದು ಎನ್ನುವ ಸಂದೇಶವನ್ನು ಸಾರುವುದೇ ಈ ಪಂದ್ಯಾಟದ ಉದ್ದೇಶ ಎಂದರು.

ಇದೇ ಸಂದರ್ಭದಲ್ಲಿ ಕಬಡ್ಡಿ ಫೆಡರೇಷನ್ ನ ಅಧಿಕಾರಿಗಳಿಗೆ ಪ್ರಶಂಸಾ ಪತ್ರಗಳೊಂದಿಗೆ ಉಡುಗೊರೆಗಳನ್ನು ನೀಡಲಾಯಿತು. ಅಲ್ಲದೆ ಕಬಡಿ ಫೆಡರೇಷನ್ ನ ಅಧ್ಯಕ್ಷರಾದ ಸಾಮಿ ಅಲಿ, ಮುಖ್ಯ ಅತಿಥಿ ಜಯಶಂಕರ್, ಗೌರವಾನ್ವಿತ ಅತಿಥಿ ಮುಬಾರಕ್, ಕಾರ್ಯಕ್ರಮದ ನಿರೂಪಕರಾದ ಕಮಲಾಕ್ಷ ಅಮೀನ್ ರವರಿಗೆ ಸ್ಮರಣಿಕೆಗಳನ್ನು ನೀಡಿ ಸಮ್ಮಾನಿಸಲಾಯಿತು.

ವಿಜೇತ ಹಾಗು ದ್ವಿತೀಯ ಸ್ಥಾನದ ತಂಡಗಳಿಗೆ ಟ್ರೋಫಿಗಳನೊಂದಿಗೆ ನಗದು ಬಹುಮಾನ, ಸೆಮಿಫೈನಲ್ ತಲುಪಿರುವ ತಂಡಗಳಿಗೆ ಟ್ರೋಫಿಗಳು ಹಾಗು ಬೆಸ್ಟ್ ರೈಡರ್, ಬೆಸ್ಟ್ ಕ್ಯಾಚರ್, ಪಂದ್ಯಾಟದ ಉದಯೋನ್ಮುಖ ಆಟಗಾರ, ಅತ್ಯುತ್ತಮ ಸವ್ಯಸಾಚಿ ಹೀಗೆ ವೈಯಕ್ತಿಕ ವಿಭಾಗದಲ್ಲೂ ಟ್ರೋಫಿಗಳನ್ನು ನೀಡಲಾಯಿತು.

ವರದಿ: ಕಮಲಾಕ್ಷ ಅಮೀನ್

Hot this week

ಯುರೋಪಿನಾದ್ಯಂತ ಭಾರತೀಯ ಕಲಾಪ್ರಕಾರಗಳಿಗೆ ಆಸರೆಯಾಗಿರುವ ‘ಬೆಲ್ಜಿಯಂ ಕಲಾ ವೇದಿಕೆ’

ವಿಶೇಷ ಸಂದರ್ಶನ: ಎಂ.ಇಕ್ಬಾಲ್ ಉಚ್ಚಿಲ, ದುಬೈ ದೂರದ ಯುರೋಪಿನ ನೆಲದಲ್ಲಿ ಭಾರತೀಯ ಕಲಾಪ್ರಕಾರಗಳನ್ನು,...

55th International Cultural Fest and Cultural Exchange Programme concludes in Dubai

Dubai, July 26: The 55th International Cultural Fest and...

ಖತರ್‌ನಲ್ಲಿ ಭಾರತೀಯ ರಾಯಭಾರಿ ವಿಪುಲ್ ಗೆ ಭಾವಪೂರ್ಣ ಬೀಳ್ಕೊಡುಗೆ

ದೋಹಾ: ಖತರ್‌ನಲ್ಲಿ ಮೂರು ವರ್ಷಗಳ ಯಶಸ್ವಿ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ಭಾರತದ ರಾಯಭಾರಿ...

ಯಕ್ಷಗಾನ ಕಲಾವಿದ ವಾಸು ಬಾಯರುಗೆ ‘ವಿಶೇಷ ಯಕ್ಷ ಶ್ರೀ ರಕ್ಷಾ ಗೌರವ ಪ್ರಶಸ್ತಿ’

ದುಬೈ : ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ (YAKU)ಯು ತವರೂರು ತಿರುಗಾಟದಲ್ಲಿ...

Related Articles

Popular Categories