ಸೌದಿ ಅರೇಬಿಯಾಸೌದಿ ಅರೇಬಿಯಾದಲ್ಲಿ ಪಡುಬಿದ್ರಿಯ 'ಮಡುಮಾನ್ ಎನ್‌ಆರ್‌ಐ ಗ್ರೂಪ್'ನಿಂದ ರಕ್ತದಾನ...

ಸೌದಿ ಅರೇಬಿಯಾದಲ್ಲಿ ಪಡುಬಿದ್ರಿಯ ‘ಮಡುಮಾನ್ ಎನ್‌ಆರ್‌ಐ ಗ್ರೂಪ್’ನಿಂದ ರಕ್ತದಾನ ಶಿಬಿರ

ಜುಬೈಲ್‌: ಪಡುಬಿದ್ರಿಯ ಹೆಮ್ಮೆಯ ಕುಟುಂಬ ‘ಮಟ್ಟು ಮಡುಮಾನ್ ಎನ್‌ಆರ್‌ಐ ಗ್ರೂಪ್’ ಸೌದಿ ಅರೇಬಿಯಾದ ಜುಬೈಲ್‌ನ ಅಲ್ ಮನಾ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಿತ್ತು.

ಮಡುಮಾನ್ ಕುಟುಂಬದ 100ಕ್ಕೂ ಹೆಚ್ಚು ಸದಸ್ಯರು ಸದಾ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಸದ್ಭಾವನೆಯ ಹಾದಿಯಲ್ಲಿ ತಮ್ಮ ಕೊಡುಗೆಯನ್ನು ನೀಡುತ್ತಿದ್ದಾರೆ. ಈ ರಕ್ತದಾನ ಶಿಬಿರದಲ್ಲಿ ಸೌದಿ ಅರೇಬಿಯಾದಲ್ಲಿ ನೆಲೆಸಿರುವ ಅನೇಕ ಭಾರತೀಯರು ಉತ್ಸಾಹದಿಂದ ಭಾಗವಹಿಸಿ, ರೋಗಿಗಳಿಗೆ ನೆರವಾಗುವ ನಿಟ್ಟಿನಲ್ಲಿ ರಕ್ತದಾನ ಮಾಡಿದರು.

ಈ ಕಾರ್ಯಕ್ರಮದ ಆಯೋಜಕರೂ ಹಾಗೂ ಮಡುಮಾನ್ ಎನ್‌ಆರ್‌ಐ ಗ್ರೂಪ್‌ನ ಪ್ರತಿನಿಧಿಯಾದ ನೌಫಲ್ ಮುಲ್ಕಿ ಈ ಸಂದರ್ಭ ಮಾತನಾಡಿ, ನಾವು ಕುಟುಂಬವಾಗಿ ಎಂದಿಗೂ ಒಟ್ಟಾಗಿ ನಿಂತು, ಮಹತ್ವಪೂರ್ಣ ಕಾರ್ಯಗಳಿಗೆ ನೆರವು ನೀಡುತ್ತೇವೆ. ರಕ್ತದಾನವು ನಮಗೆ ನೀಡಬಹುದಾದ ಅತ್ಯಂತ ದೊಡ್ಡ ಕೊಡುಗೆಗಳಲ್ಲಿ ಒಂದಾಗಿದೆ, ಮತ್ತು ನಾವು ನಮ್ಮ ಸಹಾಯ, ಸಹಕಾರವನ್ನು ಮುಂದುವರಿಸುತ್ತಿದ್ದೇವೆ ಎಂದರು.

ಈ ಶಿಬಿರವನ್ನು ಅಲ್ ಮನಾ ಆಸ್ಪತ್ರೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದು, ಆಸ್ಪತ್ರೆಯ ವೈದ್ಯರು ಈ ಕಾರ್ಯಕ್ರಮವನ್ನು ಶ್ಲಾಘಿಸಿ, ‘ರಕ್ತದಾನವು ಹಲವರ ಪ್ರಾಣ ಉಳಿಸಬಲ್ಲ ದೊಡ್ಡ ಸೇವೆ. ಮಡುಮಾನ್ ಗ್ರೂಪ್ ಈ ಹಿತಕಾರ್ಯವನ್ನು ಮಾಡಿರುವುದು ಶ್ಲಾಘನೀಯ’ ಎಂದರು.

ಈ ಸೇವಾ ಕಾರ್ಯದ ಯಶಸ್ಸು ಮಡುಮಾನ್ ಎನ್‌ಆರ್‌ಐ ಗ್ರೂಪ್‌ನ ಸಮಾಜಮುಖಿ ಕಾರ್ಯಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡಿದ್ದು, ಮುಂದಿನ ದಿನಗಳಲ್ಲಿ ಭಾರತ ಮತ್ತು ವಿದೇಶಗಳಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜನೆ ಹಾಕಿಕೊಳ್ಳಲಾಗಿದೆ. ಪಡುಬಿದ್ರಿಯಲ್ಲಿರುವ ಕುಟುಂಬದ ಹಿರಿಯರು ಮತ್ತು ಸದಸ್ಯರು ಈ ಮಹತ್ವದ ಸೇವೆಯನ್ನು ಶ್ಲಾಘಿಸಿ, ‘ನಮ್ಮ ಕುಟುಂಬದವರು ಈ ರೀತಿಯ ಸಮಾಜ ಸೇವೆಯಲ್ಲಿ ತೊಡಗಿರುವುದು ನಮಗೆ ಹೆಮ್ಮೆಯ ವಿಚಾರ’ ಎಂದಿದ್ದಾರೆ.

Hot this week

ಬಹರೈನ್ ಕನ್ನಡ ಸಂಘದಿಂದ 79ನೇ ಸ್ವಾತಂತ್ರ್ಯ ದಿನಾಚರಣೆ

ಬಹರೈನ್: ಭಾರತದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಗಸ್ಟ್ 15ರಂದು ಬೆಳಗ್ಗೆ 8:30ಕ್ಕೆ...

ಬಹರೈನ್ ರೇಡಿಯೋ ಆರ್ ಜೆ ಕಮಲಾಕ್ಷ ಅಮೀನ್​ಗೆ ‘ಗೋಲ್ಡನ್ ಐಕಾನಿಕ್ ಅವಾರ್ಡ್’ ಗೌರವ ಪ್ರಶಸ್ತಿ

ಮಂಗಳೂರು: ಬಹರೈನ್ ನ ಕಸ್ತೂರಿ ಕನ್ನಡ ಎಫ್ಎಂ ರೇಡಿಯೋ ಆರ್ ಜೆ...

ಮಸ್ಕತ್‌ನಲ್ಲಿ ‘ಕನ್ನಡ ಭವನ’ ನಿರ್ಮಾಣಕ್ಕೆ ಕರ್ನಾಟಕ ಸರಕಾರದಿಂದ ಆರ್ಥಿಕ ನೆರವು ಬೇಕು: ‘ಮಸ್ಕತ್ ಕನ್ನಡ ಸಂಘ’ದ ಅಧ್ಯಕ್ಷ ಮಂಜುನಾಥ್ ಸಂಗಟಿ

ವಿಶೇಷ ಸಂದರ್ಶನ; ಎಂ.ಇಕ್ಬಾಲ್ ಉಚ್ಚಿಲ, ದುಬೈ ನಿಸರ್ಗ ನಿರ್ಮಿತ ರಮ್ಯ ಮನೋಹರ ತಾಣವಾಗಿರುವ...

Related Articles

Popular Categories