ಯುಎಸ್‌ಎಎವರೆಸ್ಟ್ ಬೇಸ್ ಕ್ಯಾಂಪ್ ಆರೋಹಣ ಮಾಡಿದ ಅಮೇರಿಕದಲ್ಲಿರುವ ಭಾರತೀಯ...

ಎವರೆಸ್ಟ್ ಬೇಸ್ ಕ್ಯಾಂಪ್ ಆರೋಹಣ ಮಾಡಿದ ಅಮೇರಿಕದಲ್ಲಿರುವ ಭಾರತೀಯ ಮೂಲದ ವೀರ ಮಹಿಳೆಯರು!

ಬಹಳಷ್ಟು ಜನ ಮಹಿಳೆಯರು ಮನೆಗೆಲಸ, ಗಂಡ ಮತ್ತು ಮಕ್ಕಳನ್ನು ನೋಡಿಕೊಳ್ಳುವ ಕೆಲಸದಲ್ಲಿ ತೃಪ್ತಿ ಕಾಣುತ್ತಾರೆ. ಮತ್ತೆ ಕೆಲವು ಮಹಿಳೆಯರು ಈ ಕೆಲಸಗಳ ಜೊತೆಗೆ ಆಫೀಸಲ್ಲಿ ಫುಲ್ ಟೈಮ್ ಜಾಬ್ ಮಾಡುತ್ತಾರೆ. ಆದರೆ ಕೆಲವೇ ಕೆಲವು ಮಹಿಳೆಯರು ಇನ್ನೂ ಮುಂದೆ ಹೋಗಿ ಜೀವನದಲ್ಲಿ ಮಹಾನ್ ಸಾಧನೆ ಮಾಡುತ್ತಾರೆ.

ಅಂತಹ ವಿರಳ ಮಹಿಳೆಯರಲ್ಲಿ ಇತ್ತೀಚಿಗೆ ಅಮೇರಿಕದಲ್ಲಿರುವ ಆರು ಜನ ಭಾರತಿಯ ವೀರ ನಾರಿಯರು “ಎವರೆಸ್ಟ್ ಬೇಸ್ ಕ್ಯಾಂಪ್ ” ಆರೋಹಣ ಮಾಡಿ ಬಂದಿದ್ದಾರೆ. ವಾಪಾಸ್ ಬರುವಾಗ ಅತ್ಯಂತ ಕಷ್ಟಕರ ಹಿಮಾಲಯದ ಪರ್ವತ ಮಾರ್ಗಗಳಲ್ಲಿ ಟ್ರೆಕ್ ಮಾಡಿದ್ದಾರೆ.

ಈ ತಂಡದಲ್ಲಿ ಆಲ್ಬನಿ, ನ್ಯೂಯಾರ್ಕ್‌ನಿಂದ ಡಾ.ಶೈಲಜ ಶೆಟ್ಟಿ, ಉಮಾ ಬೆಂಕಿ, ರಾಣಿ ಮುಪ್ಪಿಡಿ ಮತ್ತು ಸುಗುಣ ಶ್ರೀನಿವಾಸನ್, ಡಲ್ಲಾಸ್, ಟೆಕ್ಸಾಸ್‌ನಿಂದ ಸರಸ್ವತಿ ಕಾಕಿಲೇಟಿ ಹಾಗೂ ಮಿಚಿಗನ್‌ನಿಂದ ಶ್ರೀದೇವಿ ಮನೇಪಳ್ಳಿ ಜೊತೆ ಇದ್ದರು.

ಈ ಆರು ಜನ ತಾಯಂದಿರು. ಒಂದು ವರ್ಷಕ್ಕೂ ಹೆಚ್ಚು ಕಾಲ ಅಮೇರಿಕದಲ್ಲಿರುವ ಬೇರೆ ಬೇರೆ ಪರ್ವತಗಳನ್ನು ಏರಿ ತಯಾರಿ ನಡೆಸಿದ್ದರು. ಅವುಗಳಲ್ಲಿ ಕೋಲೊರಾಡೋ ರಾಜ್ಯದ ಅತ್ಯಂತ ಎತ್ತರದ ಪರ್ವತಗಳ ಆರೋಹಣ ಇವರಿಗೆ ತುಂಬಾ ಸಹಾಯ ಮಾಡಿತು.

ಅಮೇರಿಕದಿಂದ ನೇಪಾಳಕ್ಕೆ ಬಂದು ಇಳಿದ ಇವರು, ಟ್ರೆಕ್ ಆರಂಭಕ್ಕೂ ಮೊದಲು ಕಠ್ಮಂಡುವಿನ ಸ್ವಯಂಭುನಾಥ ಮತ್ತು ಪಶುಪತಿನಾಥ ದೇವಾಲಯಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆದರು.

ನಂತರ ಲುಕ್ಲಾಕ್ಕೆ ಪುಟ್ಟ ವಿಮಾನದಲ್ಲಿ ಹೋಗಿ, ಅಲ್ಲಿಂದ ಟ್ರೆಕ್ಕಿಂಗ್ ಶುರು ಮಾಡಿದರು. ನಾಮ್ಚೆ ಬಜಾರ್, ತೆಂಗ್ಬೊಚೆ ಮತ್ತು ಡಿಂಗ್ಬೊಚೆ ಮೂಲಕ ಅವರು ಕೊನೆಗೆ ಎವರೆಸ್ಟ್ ಬೇಸ್ ಕ್ಯಾಂಪ್ ತಲುಪಿದರು. ಆಗ ಅವರಿಗೆ ಆದ ಆನಂದ ವರ್ಣನಾತೀತ. ಅಲ್ಲಿ ಸಂತೋಷದಿಂದ ಕುಣಿದು ಕುಪ್ಪಳಿಸಿದರು.

ಈ ಪ್ರಯಾಣದಲ್ಲಿ ಶೇರ್ಪಾಗಳ ಸಹಾಯ ಬಹಳ ಮುಖ್ಯವಾಗಿತ್ತು. ಅವರು ಆಹಾರ, ಸಾಮಾನು ಮತ್ತು ಆಮ್ಲಜನಕವನ್ನು ಪರ್ವತ ಮಾರ್ಗಗಳಲ್ಲಿ ಸಾಗಿಸಿದರು. ಯಾಕ್‌ಗಳು ಮತ್ತು ಕತ್ತೆಗಳು ಕೂಡ ತಂಡಕ್ಕೆ ಸಹಾಯ ಮಾಡಿವೆ.

ಎತ್ತರದ ಪರ್ವತಗಳಲ್ಲಿ ಆರೋಗ್ಯ ಸಮಸ್ಯೆಗಳು ಸಹಜ. ಪ್ರತಿದಿನ ಆಮ್ಲಜನಕ ಮಟ್ಟ ಪರೀಕ್ಷಿಸಲಾಯಿತು. ಸರಸ್ವತಿ ಕಾಕಿಲೇಟಿಯ ಆಮ್ಲಜನಕ ಮಟ್ಟ ಕಡಿಮೆಯಾದಾಗ ತಂಡ ಎಚ್ಚರಿಕೆಯಿಂದ ಕ್ರಮ ಕೈಗೊಂಡಿತು. ಪ್ರಾಣಾಯಾಮ ಮತ್ತು ತಂಡದ ಬೆಂಬಲದಿಂದ ಅವರು ಚೇತರಿಸಿಕೊಂಡರು.

ಎವರೆಸ್ಟ್ ಬೇಸ್ ಕ್ಯಾಂಪ್ ತಲುಪಿದ ಬಳಿಕ ಡಾ.ಶೈಲಜ ಶೆಟ್ಟಿ ಮತ್ತು ಉಮಾ ಬೆಂಕಿ ಇನ್ನೂ ಕಠಿಣ ಹಂತವಾದ ಚೋಲಾ ಪಾಸ್ ಕಡೆಗೆ ಹೋಗಲು ಮುಂದಾದರು. ಆದರೆ ಮಾರ್ಗ ಮಧ್ಯದಲ್ಲಿ ಉಮಾ ಬೆಂಕಿ ಆಸ್ವಸ್ಥರಾದರು. ಅವರನ್ನು ಹೆಲಿಕ್ಯಾಪ್ಟರ್ ಮೂಲಕ ಏರ್ ಲಿಫ್ಟ್ ಮಾಡಲು ನಿರ್ಧರಿಸಿದರು. ಆದರೆ ಇದನ್ನು ನಿರಾಕರಿಸಿ ಅನಾರೋಗ್ಯದ ಮಧ್ಯದಲ್ಲಿಯೇ ಉಮಾ ಬೆಂಕಿ ತುಂಬಾ ಕಷ್ಟಪಟ್ಟು ಕಾಲ್ನಡಿಗೆಯಲ್ಲಿಯೇ ವಾಪಾಸು ಬಂದರು.

ಹೀಗಾಗಿ ಡಾ.ಶೈಲಜ ಶೆಟ್ಟಿ ಒಬ್ಬರೇ ಚೋಲಾಪಾಸ್ ದಾಟಿ ಅತ್ಯಂತ ಸುಂದರವಾದ ಗೋಖ್ಯೋ ಸರೋವರ ಮತ್ತು ನಂತರ ರೆಂಜೋ ಲಾ ಪಾಸ್ ತಲುಪಿದರು. ಈ ಟ್ರೆಕ್‌ಗೆ ಅರವಿಂದ್ ತಮಾಂಗ್ ಮತ್ತು ನಿಮಾ ತಮಾಂಗ್ ಮಾರ್ಗದರ್ಶನ ನೀಡಿದರು. ಪೆಂಬಾ ಮತ್ತು ಅರ್ಜುನ್ ಸೇರಿದಂತೆ ಪೋರ್ಟರ್‌ಗಳು ಸಹಾಯ ಮಾಡಿದರು.

ಜೀವನದಲ್ಲಿ ಶಿಸ್ತು ಮತ್ತು ಧೈರ್ಯ ಇದ್ದರೆ, ಜೊತೆಗೆ ಗಂಡ ಮತ್ತು ಮನೆಯವರ ಸಪೋರ್ಟ್ ಇದ್ದರೆ ಯಾವುದೇ ಕನಸನ್ನೂ ಸಾಧಿಸಬಹುದು ಎಂಬುದಕ್ಕೆ ಈ ಮಹಿಳೆಯರ ಕಥೆ ಈ ಸಂದೇಶ ನೀಡುತ್ತದೆ.

ಲೇಖನ: ಬೆಂಕಿ ಬಸಣ್ಣ, ನ್ಯೂಯಾರ್ಕ್

Hot this week

ಕನ್ನಡ ಸಂಘ ಬಹರೈನ್ ನ ಸಂಭ್ರಮದ 48ನೇ ವಾರ್ಷಿಕೋತ್ಸವ ಆಚರಣೆ

ಬಹರೈನ್: ಕನ್ನಡ ಸಂಘ ಬಹರೈನ್ ನ 48ನೇ ವಾರ್ಷಿಕೋತ್ಸವವನ್ನು ಕನ್ನಡ ಭವನದ...

ತುಳುನಾಡಿನ ಆಚರಣೆಗಳಲ್ಲಿ ಮೂಡನಂಬಿಕೆ ವೈಭವೀಕರಣಕ್ಕೆ ಕಳವಳ ವ್ಯಕ್ತಪಡಿಸಿದ ಡಾ.ಸಂತೋಷ್ ಗುರೂಜಿ

ದುಬೈ: ಅರಬ್ ಸಂಯುಕ್ತ ಸಂಸ್ಥಾನದ ವಾಣಿಜ್ಯ ನಗರಿ ದುಬೈಯಲ್ಲಿ ಯುಎಇ ಬಂಟ್ಸ್...

ಹಾಂಗ್ ಕಾಂಗ್‌ನಲ್ಲಿ ಕನ್ನಡ ಶಾಲೆ ಆರಂಭಿಸಲು ಕರ್ನಾಟಕ ಸರಕಾರ ನೆರವು ಅಗತ್ಯ: ‘ಕನ್ನಡ ಸಂಘ ಹಾಂಗ್ ಕಾಂಗ್’ ಅಧ್ಯಕ್ಷೆ ವಾಣಿ ರಮೇಶ್ ಬಾಬು

ವಿಶೇಷ ಸಂದರ್ಶನ: ಎಂ.ಇಕ್ಬಾಲ್ ಉಚ್ಚಿಲ, ದುಬೈ ಜಗತ್ತಿನ ಅತೀ ಹೆಚ್ಚು ಶ್ರೀಮಂತರನ್ನು ಹೊಂದಿರುವ...

ದುಬೈ; ಫೆಬ್ರವರಿ 28ರಂದು ‘ಬ್ಯಾರೀಸ್ ಕಲ್ಚರಲ್ ಫೋರಮ್( BCF)’ನಿಂದ ‘ಇಫ್ತಾರ್ ಮೀಟ್ 2026’

ದುಬೈ: ಕಳೆದ 28 ವರ್ಷಗಳಿಂದ ಸಾಮುದಾಯಿಕ ಸೇವಾ ಕಾರ್ಯದಲ್ಲಿ ತೊಡಗಿ ಕೊಂಡಿರುವ...

ಶಾರ್ಜಾ ರೋಲ್ಲಾದಲ್ಲಿ ‘ಮ್ಯಾಕ್ಸ್‌ಕೇರ್ ಕ್ಲಿನಿಕ್ಸ್’ನ ಹೊಸ ಶಾಖೆ ಆರಂಭ; ಕಡಿಮೆ ವೆಚ್ಚದ ಆರೋಗ್ಯ ಸೇವೆಗೆ ಹೆಚ್ಚಿನ ಪ್ರವೇಶ

ಶಾರ್ಜಾ: ಯುಎಇಯಲ್ಲಿ ವೇಗವಾಗಿ ಬೆಳೆಯುತ್ತಿರುವ ಪ್ರಾಥಮಿಕ ಆರೋಗ್ಯ ಸೇವಾ ಸಂಸ್ಥೆಗಳಲ್ಲೊಂದಾದ ಮ್ಯಾಕ್ಸ್‌ಕೇರ್...

Related Articles

Popular Categories