ಯುಎಸ್‌ಎ'ಬಿಗ್ ಬಾಸ್ ಸೀಸನ್ 12'ನ್ನು ಗೆದ್ದ ಗಿಲ್ಲಿ; ಅಮೇರಿಕದಲ್ಲಿ...

‘ಬಿಗ್ ಬಾಸ್ ಸೀಸನ್ 12’ನ್ನು ಗೆದ್ದ ಗಿಲ್ಲಿ; ಅಮೇರಿಕದಲ್ಲಿ ವಿಜಯೋತ್ಸವ ಆಚರಿಸಿದ ಕನ್ನಡಿಗರು!

ನ್ಯೂಯಾರ್ಕ್: ಬಿಗ್ ಬಾಸ್ ಸೀಸನ್ 12ನ್ನು ದಾಖಲೆ ಓಟುಗಳಿಂದ ಗೆದ್ದ ಹಳ್ಳಿ ಹುಡುಗ ಗಿಲ್ಲಿಯ ವಿಜಯೋತ್ಸವವನ್ನು ಅಮೇರಿಕದ ನ್ಯೂಯಾರ್ಕ್ ರಾಜಧಾನಿ ಅಲ್ಪನಿಯಲ್ಲಿ ಬೆಂಕಿ ಬಸಣ್ಣ ನೇತೃತ್ವದಲ್ಲಿ ಆಲ್ಬನಿಯ ಕನ್ನಡಿಗರು ಸಂಭ್ರಮದಿಂದ ಆಚರಿಸಿದ್ದಾರೆ.

ಸಕಲಕಲಾವಲ್ಲಭ ಹಳ್ಳಿ ಹುಡುಗ ಗಿಲ್ಲಿಗೆ ಭಾರತದಲ್ಲಿ ಮಾತ್ರವಲ್ಲ ಅಮೇರಿಕದಲ್ಲಿಯೂ ಕೂಡ ಬಹಳಷ್ಟು ಅಭಿಮಾನಿಗಳ ವರ್ಗವಿದೆ, ಫ್ಯಾನ್ ಬೇಸ್ ಇದೆ. ಬಿಗ್ ಬಾಸ್ ಸೀಸನ್ ಕ್ರೇಜು ಅಮೇರಿಕದಲ್ಲಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ತುಂಬಾ ಜಾಸ್ತಿ ಇತ್ತು.ಇದಕ್ಕೆ ಮುಖ್ಯ ಕಾರಣ ಗಿಲ್ಲಿ. ಇಷ್ಟು ವರ್ಷ ಬಿಗ್ ಬಾಸ್ ನಿಂದ ಸ್ಪರ್ಧಾಳುಗಳು ಫೇಮಸ್ ಆಗುತ್ತಿದ್ದರೆ ಈ ವರ್ಷ ಅದು ಉಲ್ಟಾ ಆಗಿದೆ. ಗಿಲ್ಲಿಯಿಂದಾಗಿ ಅಮೆರಿಕದಲ್ಲಿ ಬಿಗ್ ಬಾಸ್ ತುಂಬಾ ಜನಪ್ರಿಯವಾಗಿದೆ” ಎಂದು ಕನ್ನಡಿಗರ ಮುಖಂಡ ಬೆಂಕಿ ಬಸಣ್ಣ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಮನು, ನಮ್ಮ ಚಿಕ್ಕ ಮಕ್ಕಳಾದ ದಿಯಾ ಮತ್ತು ವಿಹಾನ್ ರಿಗೆ ಗಿಲ್ಲಿ ಕಂಡರೆ ಬಹಳ ಇಷ್ಟ. ಅವನ ಡೈಲಾಗ್ ಗಳನ್ನು ಹೇಳುತ್ತಾರೆ. ಅವನ ಡಾನ್ಸ್ ಗಳನ್ನು ಮಾಡುತ್ತಾರೆ ಎಂದು ಸಂತೋಷವನ್ನು ಹಂಚಿಕೊಂಡರು.

ಇನ್ನೋರ್ವ ಕನ್ನಡಿಗ ಅಭಿಷೇಕ್ ಅವರು ಮಾತನಾಡಿ, ಅವರು, ಎರಡನೇ ಸ್ಥಾನವನ್ನು ಮುಗ್ಧ ಮನಸ್ಸಿನ, ಒಳ್ಳೆ ಹೃದಯದ, ಸಾಮಾನ್ಯ ಕುಟುಂಬದ ಹುಡುಗಿ ರಕ್ಷಿತಾ ಗೆದ್ದದ್ದು ತುಂಬಾ ಖುಷಿಯಾಗಿದೆ. ಗಿಲ್ಲಿ ಮತ್ತು ರಕ್ಷಿತಾ ಇಬ್ಬರೂ ಹಳ್ಳಿ ಮೂಲದಿಂದ ಬಂದು ತಮ್ಮ ಸ್ವಪ್ರತಿಭೆಯಿಂದ ಇಷ್ಟು ದೊಡ್ಡ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಇದಕ್ಕೆ ನಮ್ಮ ಕನ್ನಡ ಜನತೆಯ ಬೆಂಬಲವೇ ಕಾರಣ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಆಲ್ಬನಿ ಕನ್ನಡ ಸಂಘದಲ್ಲಿ ಇಂದು ಕರೋಕೆ ನೈಟ್ ಆಯೋಜಿಸಿ ಎಲ್ಲಾ ಸದಸ್ಯರು ಹಾಡಿ ಕುಣಿದು ಕುಪ್ಪಳಿಸಿ ಆನಂದ ಪಟ್ಟರು. ಜೊತೆಗೆ ಪಾಟ್ ಲಾಕ್ ಮೃಷ್ಟಾನ್ನ ಭೋಜನವನ್ನು ಆಯೋಜಿಸಲಾಗಿತ್ತು.

Hot this week

ಖತರ್‌ ಕರ್ನಾಟಕ ಸಂಘದಿಂದ ‘ತಾಯಂದಿರ ದಿನ 2026’ ಆಚರಣೆ

ದೋಹಾ(ಖತರ್‌): ಕರ್ನಾಟಕ ಸಂಘ ಖತರ್‌ (KSQ), ಭಾರತೀಯ ಸಾಂಸ್ಕೃತಿಕ ಕೇಂದ್ರ (ICC)...

ಮೇ 15ರಂದು ಬಹರೈನ್ ಕನ್ನಡ ಸಂಘದ ಆಶ್ರಯದಲ್ಲಿ ಉಚಿತ ವೈದ್ಯಕೀಯ ಶಿಬಿರ

ಕನ್ನಡ ಸಂಘ ಬಹರೈನ್ ಆಶ್ರಯದಲ್ಲಿ ಅಲ್ ಹಿಲಾಲ್ ಹೆಲ್ತ್ ಕೇರ್ ಗ್ರೂಪ್...

KCWA holds General Body Meeting in Kuwait, announces major cultural event in December

Kuwait City: Kuwait Canara Welfare Association (KCWA) held its...

ನ್ಯೂಯಾರ್ಕ್; ಆಲ್ಬನಿ ಕನ್ನಡಿಗರಿಂದ ಮಸಾಲ ದೋಸೆ ಬ್ರಂಚ್: ಹಿಂದೂ ದೇವಾಲಯಕ್ಕೆ ಧನ ಸಹಾಯ

ನ್ಯೂಯಾರ್ಕ್ ರಾಜ್ಯದ ರಾಜಧಾನಿ ಅಲ್ಬನಿಯಲ್ಲಿರುವ ಕನ್ನಡಿಗರು, ಇತ್ತೀಚೆಗೆ ಇಲ್ಲಿರುವ ಹಿಂದೂ ದೇವಸ್ಥಾನದಲ್ಲಿ...

ದ್ವೀಪ ರಾಷ್ಟ್ರ ಬಹರೈನ್‌ನಲ್ಲಿ ಸಾರ್ಥಕೆತೆಯನ್ನು ಕಂಡ ಮಂಗಳೂರಿನ ಹೃದಯವಂತ ಅಮರನಾಥ್ ರೈ!

ಬಹರೈನ್‌: ಪ್ರಾಮಾಣಿಕತೆ ಮತ್ತು ದುಡಿಮೆ—ಈ ಎರಡು ಮೌಲ್ಯಗಳು ಒಬ್ಬನ ಬದುಕನ್ನು ಎಷ್ಟು...

Related Articles

Popular Categories