ಇತರೆಇಟಲಿ; ಡಾ.ಆರತಿ ಕೃಷ್ಣರೊಂದಿಗೆ ಟುರಿನ್‌ನ ಉಪ ಮೇಯರ್​ರನ್ನು ಭೇಟಿಯಾದ...

ಇಟಲಿ; ಡಾ.ಆರತಿ ಕೃಷ್ಣರೊಂದಿಗೆ ಟುರಿನ್‌ನ ಉಪ ಮೇಯರ್​ರನ್ನು ಭೇಟಿಯಾದ ಹೇಮೇಗೌಡ-ಇರ್ಷತ್: ಕರ್ನಾಟಕ- ಇಟಲಿ ಬಗ್ಗೆ ಚರ್ಚೆ

ಇಟಲಿ: ಯುರೋಪ್‌ ಪ್ರವಾಸದಲ್ಲಿರುವ ಕರ್ನಾಟಕ ವಿಧಾನ ಪರಿಷತ್‌ ಸದಸ್ಯೆ, ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಅವರು ಇಟಲಿ ಕನ್ನಡ ಸಂಘದ ಅಧ್ಯಕ್ಷ ಹೇಮೇಗೌಡ ಮತ್ತು ಐಒಸಿ ಯುರೋಪ್‌ನ ಕಾರ್ಯದರ್ಶಿ ಇರ್ಷತ್ ಅವರೊಂದಿಗೆ ಟುರಿನ್‌ನ ಉಪ ಮೇಯರ್ ಮೈಕೆಲಾ ಫವಾರೊ ಅವರನ್ನು ಭೇಟಿಯಾಗಿ ಕರ್ನಾಟಕ- ಇಟಲಿಯ ಸಂಬಂಧಗಳ ಪ್ರಮುಖ ಅಂಶಗಳನ್ನು ಚರ್ಚಿಸಿದರು.

ಇಟಲಿಯಲ್ಲಿ ಭಾರತೀಯ ಶುಶ್ರೂಶಕರ ನೇಮಕಾತಿಗೆ ಅವಕಾಶಗಳು, ಭಾರತೀಯ ವಿದ್ಯಾರ್ಥಿಗಳಿಗೆ ಯುರೋಪಿಯನ್- ಇಟಾಲಿಯನ್ ಭಾಷಾ ತರಬೇತಿ ಕಾರ್ಯಕ್ರಮಗಳು ಮತ್ತು ಎರಡೂ ದೇಶಗಳ ನಡುವಿನ ಶೈಕ್ಷಣಿಕ ಮತ್ತು ವೃತ್ತಿಪರ ಸಹಯೋಗಕ್ಕಾಗಿ ವಿಶಾಲ ಮಾರ್ಗಗಳ ಕುರಿತು ಚರ್ಚಿಸಲಾಯಿತು.

ಸಭೆಯಲ್ಲಿ ಮಾಡೆರಾಟಿ ಕೌನ್ಸಿಲ್ ಅಧ್ಯಕ್ಷ ಸಿಮೋನ್ ಫಿಸ್ಸೊಲೊ, ಮಾರಿಯಾ ಬೊಟೊಗ್ಲಿಯೇರಿ ಮತ್ತು ಫ್ರಾನ್ಸೆಸ್ಕೊ ಟೋರ್ಟೊರೆಲ್ಲಾ ಕೂಡ ಭಾಗವಹಿಸಿದ್ದರು.

Hot this week

ಅಬುಧಾಬಿಗೆ ಸಚಿವ ಡಾ.ಜೈಶಂಕರ್ ಭೇಟಿ; ಕನ್ನಡಿಗರ ಕೂಟ ದುಬೈ-ಅಬುಧಾಬಿ ಕರ್ನಾಟಕ ಸಂಘ ಪ್ರತಿನಿಧಿತ್ವ

ಅಬುಧಾಬಿ: ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು...

ದುಬೈ; ‘ಬ್ಯಾರೀಸ್ ಪ್ರೀಮಿಯರ್ ಲೀಗ್-2026’ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಕ್ರೌನ್ ಹೊನ್ನಾವರ; ನಫೀಸ್ ಗ್ರೂಪ್ ರನ್ನರ್ ಅಪ್

ದುಬೈ: ಶಾರ್ಜಾದ ಬಿಜೋಯ್ಸ್ ಕ್ರಿಕೆಟ್ ಕ್ರೀಡಾಗಂಣದಲ್ಲಿ ರವಿವಾರ ನಡೆದ 'ಬ್ಯಾರೀಸ್ ಪ್ರೀಮಿಯರ್...

ಕರ್ನಾಟಕ ಸಂಘ ಶಾರ್ಜಾದ ನೂತನ ಅಧ್ಯಕ್ಷರಾಗಿ ವಿಶ್ವನಾಥ್ ಶೆಟ್ಟಿ ಆಯ್ಕೆ

ದುಬೈ: ಕರ್ನಾಟಕ ಸಂಘ ಶಾರ್ಜಾ ಇದರ ನೂತನ ಅಧ್ಯಕ್ಷರಾಗಿ ವಿಶ್ವನಾಥ್ ಶೆಟ್ಟಿ...

ರಮಝಾನ್-ಈದುಲ್ ಫಿತ್ರ್ ಅಂಗವಾಗಿ ಕನ್ನಡ ಸಂಘ ಬಹರೈನ್ ವತಿಯಿಂದ ಆಹಾರ ವಸ್ತುಗಳ ಕಿಟ್ ವಿತರಣೆ

ಬಹರೈನ್: ಪವಿತ್ರ ರಮಝಾನ್ ಮತ್ತು ಈದುಲ್ ಫಿತ್ರ್ ಹಬ್ಬದ ಅಂಗವಾಗಿ ಪ್ರಸ್ತುತ...

Related Articles

Popular Categories