ಬಹರೈನ್ಕನ್ನಡ ಸಂಘ ಬಹರೈನ್; ಸೆಪ್ಟೆಂಬರ್ 5ರಂದು ನೂತನ ಕಾರ್ಯಕಾರಿ...

ಕನ್ನಡ ಸಂಘ ಬಹರೈನ್; ಸೆಪ್ಟೆಂಬರ್ 5ರಂದು ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭ

ಬಹರೈನ್: ಬಹರೈನ್‌ನಲ್ಲಿರುವ ಕನ್ನಡ ಸಮುದಾಯವನ್ನು ಕನ್ನಡ ಸಂಘ ಬಹರೈನ್‌ನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭವು ಸೆಪ್ಟೆಂಬರ್ 5ರ ಶುಕ್ರವಾರದಂದು ಬಹರೈನ್‌ ಕಲ್ಚರಲ್ ಹಾಲ್ ನಲ್ಲಿ ಅದ್ಧೂರಿಯಾಗಿ ನಡೆಯಲಿದೆ.

ನೂತನವಾಗಿ ಆಯ್ಕೆಯಾದ 12 ಸಮರ್ಪಿತ ಸದಸ್ಯರನ್ನೊಳಗೊಂಡ ಕಾರ್ಯಕಾರಿ ಸಮಿತಿಗೆ ಅಜಿತ್ ಬಂಗೇರ ಅವರು ಅಧ್ಯಕ್ಷರಾಗಿ ಚುಕ್ಕಾಣಿಯನ್ನು ಹಿಡಿದಿದ್ದು ನಾಡಿನ ಹಾಗೂ ದ್ವೀಪದ ಗಣ್ಯ ಅತಿಥಿಗಳು ಈ ಸುಂದರ ಸಂಜೆಗೆ ವಿಶೇಷ ಮೆರುಗು ನೀಡಲಿದ್ದಾರೆ

ಮುಖ್ಯ ಅತಿಥಿಗಳಾಗಿ ಬಹರೈನ್ ದ್ವೀಪರಾಷ್ಟ್ರದ ಸಂಸದ ಯೂಸುಫ್ ಹುಸೈನ್ ಅಲ್ಹರ್ಮಿ, ಗೌರವ ಅತಿಥಿಗಳಾಗಿ ಕರ್ನಾಟಕ ವಿಧಾನ ಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕರ್ನಾಟಕ ಅನಿವಾಸಿ ಭಾರತೀಯರ ವೇದಿಕೆ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಸೇರಿದಂತೆ ಬಹರೈನ್ ಮತ್ತು ಭಾರತದ ಪ್ರಮುಖ ಉದ್ಯಮಿಗಳು, ಸಮುದಾಯ ಮುಖಂಡರು ಮತ್ತು ಸಮಾಜ ಸೇವಕರು ಭಾಗವಹಿಸಲಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ತಮ್ಮ ಅದ್ಭುತ ಮ್ಯಾಜಿಕ್, ಬುದ್ಧಿಮತ್ತೆ ಮತ್ತು ನಿಗೂಢ ಕಲೆಗಳ ಪ್ರದರ್ಶನದಿಂದ ಜಗತ್ತಿನಾದ್ಯಂತ ಖ್ಯಾತಿ ಗಳಿಸಿರುವ ಕುದ್ರೋಳಿ ಗಣೇಶ್ ಅವರಿಂದ ಮೋಡಿಮಾಡುವ ಪ್ರದರ್ಶನ, ದೇವಿ ಕಿರಣ್ ಗಣೇಶಪುರ ಅವರಿಂದ ನೇರ ಕಲಾ ಪ್ರದರ್ಶನ, ಕನ್ನಡ ಸಂಘದ ಸದಸ್ಯರಿಂದ ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಸಾಂಪ್ರದಾಯಿಕ ನೃತ್ಯ, ಸಂಗೀತ ಮತ್ತು ಜಾನಪದ ಪ್ರದರ್ಶನಗಳು ವೇದಿಕೆಯಲ್ಲಿ ಅನಾವರಣ ಗೊಳ್ಳಲಿದೆ.

ನೂತನ ಕಾರ್ಯಕಾರಿ ಸಮಿತಿ

ಅಜಿತ್ ಬಂಗೇರ – ಅಧ್ಯಕ್ಷರು
ನಿತಿನ್ ಶೆಟ್ಟಿ – ಉಪಾಧ್ಯಕ್ಷರು
ರಾಮಪ್ರಸಾದ್ ಅಮ್ಮೇನಡ್ಕ – ಪ್ರಧಾನ ಕಾರ್ಯದರ್ಶಿ
ಹರಿನಾಥ್ ಸುವರ್ಣ – ಜಂಟಿ ಕಾರ್ಯದರ್ಶಿ
ಈಶ್ವರ್ ಅಂಚನ್ – ಕೋಶಾಧಿಕಾರಿ
ಪುಲಿಕೇಶಿ ಗದಗ ಶರಣಪ್ಪ – ಸಹಾಯಕ ಕೋಶಾಧಿಕಾರಿ
ಹರಿಣಿ ಉತ್ಕರ್ಷ್ ಶೆಟ್ಟಿ – ಸಾಂಸ್ಕೃತಿಕ ಕಾರ್ಯದರ್ಶಿ
ಹರೀಶ ಗೌಡ – ಸಹಾಯಕ ಸಾಂಸ್ಕೃತಿಕ ಕಾರ್ಯದರ್ಶಿ
ಪುರುಷೋತ್ತಮ ಜೋಗಿ – ಸಮಿತಿ ಸದಸ್ಯರು
ಲೋಕೇಶ್ ಸಾಮ್ಯ – ಸಮಿತಿ ಸದಸ್ಯರು
ಹರೀಶ್ಚಂದ್ರ ಗೌಡ – ಸಮಿತಿ ಸದಸ್ಯರು
ಪ್ರವೀಣ್ ಶೆಟ್ಟಿ ಕಿನ್ನಿಗೋಳಿ – ಆಂತರಿಕ ಲೆಕ್ಕಪರಿಶೋಧಕ

ವರದಿ: ಕಮಲಾಕ್ಷ ಅಮೀನ್

Hot this week

ಕೊಲ್ಲಿ ಯುದ್ಧ; ಗಲ್ಫ್ ರಾಷ್ಟ್ರಗಳಲ್ಲಿ ಅಗತ್ಯವಸ್ತುಗಳ ಮೇಲೆ ಬೀರುತ್ತಿದೆ ಪರಿಣಾಮ!

ಸೌದಿ ಅರೇಬಿಯಾ: ಅಮೇರಿಕ-ಇಸ್ರೇಲ್ ಹಾಗೂ ಇರಾನ್ ಮಧ್ಯೆ ನಡುಯುತ್ತಿರುವ ಸಂಘರ್ಷವು ಮುಂದುವರಿಯುತ್ತಿರುವುದರಿಂದ...

ಸೌದಿ: ಅಲ್ ಖಮರ್ ವೆಲ್ಫೇರ್ ಅಸೋಸಿಯೇಷನ್‌ನಿಂದ ಇಫ್ತಾರ್ ಕೂಟ

ಸೌದಿ ಅರೇಬಿಯಾ: ರಮಝಾನ್ ಪವಿತ್ರ ತಿಂಗಳ ಅಂಗವಾಗಿ ಅಲ್ ಖಮರ್ ವೆಲ್ಫೇರ್...

Yakshagana staged in German for first time in Munich, children from Europe perform

Munich: In a significant moment for coastal Karnataka’s traditional...

ದುಬೈಯಲ್ಲಿ ಸಂಕಷ್ಟಕ್ಕೀಡಾಗಿರುವ ಪ್ರವಾಸಿ ಕನ್ನಡಿಗರಿಗೆ ಧೈರ್ಯ ತುಂಬಿದ ಎಂ.ಎ.ಗಫೂರ್

ದುಬೈ: ಅಮೇರಿಕ-ಇಸ್ರೇಲ್ ಹಾಗು ಇರಾನ್ ಮಧ್ಯೆಗಿನ ಸಂಘರ್ಷದಿಂದ ದುಬೈಯಲ್ಲಿ ಸಂಕಷ್ಟಕ್ಕೀಡಾಗಿರುವ ಕನ್ನಡಿಗ...

Related Articles

Popular Categories