ಯುಎಇದುಬೈಯ ಕರಾನಿ ಇಂಟೀರಿಯರ್'ನಲ್ಲಿ ಕಾರ್ಮಿಕ ಜಾಗೃತಿ ಅಭಿಯಾನ

ದುಬೈಯ ಕರಾನಿ ಇಂಟೀರಿಯರ್’ನಲ್ಲಿ ಕಾರ್ಮಿಕ ಜಾಗೃತಿ ಅಭಿಯಾನ

ದುಬೈ: ದುಬೈಯ ಭಾರತೀಯ ರಾಯಭಾರಿ ಕಚೇರಿ ಮತ್ತು ಏಮ್ ಇಂಡಿಯಾ ಫೋರಂ ಸಂಯುಕ್ತ ಆಶ್ರಯದಲ್ಲಿ ದುಬೈಯ ಕರಾನಿ ಇಂಟೀರಿಯರ್ ಎಲ್‌ಎಲ್‌ಸಿಯಲ್ಲಿ ಕಾರ್ಮಿಕರ ಜಾಗೃತಿ ಅಭಿಯಾನ ಇತ್ತೀಚಿಗೆ ಆಯೋಜಿಸಲಾಗಿತ್ತು.

ಕಾರ್ಯಕ್ರಮವು ಯೋಗಾದೊಂದಿಗೆ ಪ್ರಾರಂಭವಾಯಿತು. ನಂತರ ದುಬೈನ PBSK ವತಿಯಿಂದ ಕಲ್ಯಾಣ ಯೋಜನೆಗಳು ಮತ್ತು ದೂರು ಪರಿಹಾರ ವ್ಯವಸ್ಥೆಗಳ ಕುರಿತು ಮಾಹಿತಿ ನೀಡಲಾಯಿತು. ಆರ್ಥಿಕ ವಂಚನೆಗಳ ಕುರಿತು ICAI ದುಬೈ ಶಾಖೆಯವರು ಉಪನ್ಯಾಸ ನೀಡಿದರು.

ಭಾರತೀಯ ರಾಯಭಾರಿ ಕಚೇರಿಯಿಂದ ಕಾರ್ಮಿಕ ಮತ್ತು ಮದದ್ ವಿಭಾಗದ ಕಾನ್ಸುಲ್ ಪಬಿತ್ರ ಮಜುಂದರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾರ್ಮಿಕ ವಿಭಾಗದ ಉಪ ಕಾನ್ಸುಲ್ ದೀಪಕ್ ದಾಗರ್, ಗುರೂಜಿ ರಾಜರಾಮಜಿ, ಸಂತ್ ಕೃಪರಾಮಜಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಏಮ್ ಇಂಡಿಯಾ ಫೋರಂನ ಸಂಸ್ಥಾಪಕ ಅಧ್ಯಕ್ಷ ಶಿರಾಲಿ ಶೈಖ್ ಮುಝಫರ್ ಅವರ ನೇತೃತ್ವದಲ್ಲಿ, ಸಮನ್ವಯಕರಾದ ಮೊಹಮ್ಮದ್ ಅಝೀಮ್ ಮತ್ತು ಉಪಾಧ್ಯಕ್ಷ ಮೊಹಮ್ಮದ್ ನಿಯಾಝ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಆರ್ಥಿಕ ವಂಚನೆಗಳು, ಸೈಬರ್ ಅಪರಾಧಗಳು, ನಕಲಿ ಉದ್ಯೋಗ ಏಜೆನ್ಸಿಗಳು, ಸಿಮ್ ಕಾರ್ಡ್ ವಂಚನೆ ಸೇರಿದಂತೆ ಹಲವಾರು ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಿದರು.

ಕಾರ್ಯಕ್ರಮದ ಅಂತ್ಯದಲ್ಲಿ ದುಬೈಯ ಭಾರತೀಯ ರಾಯಭಾರಿ ಕಚೇರಿಯವರು ಕಾರ್ಮಿಕರ ಹಿತಾಸಕ್ತಿಗಾಗಿ ಏಮ್ ಇಂಡಿಯಾ ಫೋರಂ ಕೈಗೊಂಡಿರುವ ಮಹತ್ವದ ಕಾರ್ಯಗಳಿಗಾಗಿ ಪ್ರಶಂಸೆ ವ್ಯಕ್ತಪಡಿಸಿದರು.

Hot this week

ಕನ್ನಡ ಸಂಘ ಬಹರೈನ್ ನ ಸಂಭ್ರಮದ 48ನೇ ವಾರ್ಷಿಕೋತ್ಸವ ಆಚರಣೆ

ಬಹರೈನ್: ಕನ್ನಡ ಸಂಘ ಬಹರೈನ್ ನ 48ನೇ ವಾರ್ಷಿಕೋತ್ಸವವನ್ನು ಕನ್ನಡ ಭವನದ...

ತುಳುನಾಡಿನ ಆಚರಣೆಗಳಲ್ಲಿ ಮೂಡನಂಬಿಕೆ ವೈಭವೀಕರಣಕ್ಕೆ ಕಳವಳ ವ್ಯಕ್ತಪಡಿಸಿದ ಡಾ.ಸಂತೋಷ್ ಗುರೂಜಿ

ದುಬೈ: ಅರಬ್ ಸಂಯುಕ್ತ ಸಂಸ್ಥಾನದ ವಾಣಿಜ್ಯ ನಗರಿ ದುಬೈಯಲ್ಲಿ ಯುಎಇ ಬಂಟ್ಸ್...

ಹಾಂಗ್ ಕಾಂಗ್‌ನಲ್ಲಿ ಕನ್ನಡ ಶಾಲೆ ಆರಂಭಿಸಲು ಕರ್ನಾಟಕ ಸರಕಾರ ನೆರವು ಅಗತ್ಯ: ‘ಕನ್ನಡ ಸಂಘ ಹಾಂಗ್ ಕಾಂಗ್’ ಅಧ್ಯಕ್ಷೆ ವಾಣಿ ರಮೇಶ್ ಬಾಬು

ವಿಶೇಷ ಸಂದರ್ಶನ: ಎಂ.ಇಕ್ಬಾಲ್ ಉಚ್ಚಿಲ, ದುಬೈ ಜಗತ್ತಿನ ಅತೀ ಹೆಚ್ಚು ಶ್ರೀಮಂತರನ್ನು ಹೊಂದಿರುವ...

ದುಬೈ; ಫೆಬ್ರವರಿ 28ರಂದು ‘ಬ್ಯಾರೀಸ್ ಕಲ್ಚರಲ್ ಫೋರಮ್( BCF)’ನಿಂದ ‘ಇಫ್ತಾರ್ ಮೀಟ್ 2026’

ದುಬೈ: ಕಳೆದ 28 ವರ್ಷಗಳಿಂದ ಸಾಮುದಾಯಿಕ ಸೇವಾ ಕಾರ್ಯದಲ್ಲಿ ತೊಡಗಿ ಕೊಂಡಿರುವ...

ಶಾರ್ಜಾ ರೋಲ್ಲಾದಲ್ಲಿ ‘ಮ್ಯಾಕ್ಸ್‌ಕೇರ್ ಕ್ಲಿನಿಕ್ಸ್’ನ ಹೊಸ ಶಾಖೆ ಆರಂಭ; ಕಡಿಮೆ ವೆಚ್ಚದ ಆರೋಗ್ಯ ಸೇವೆಗೆ ಹೆಚ್ಚಿನ ಪ್ರವೇಶ

ಶಾರ್ಜಾ: ಯುಎಇಯಲ್ಲಿ ವೇಗವಾಗಿ ಬೆಳೆಯುತ್ತಿರುವ ಪ್ರಾಥಮಿಕ ಆರೋಗ್ಯ ಸೇವಾ ಸಂಸ್ಥೆಗಳಲ್ಲೊಂದಾದ ಮ್ಯಾಕ್ಸ್‌ಕೇರ್...

Related Articles

Popular Categories