ಸಂದೇಶʼಗ್ಲೋಬಲ್‌ ಕನ್ನಡಿಗʼಗೆ ಶುಭಕೋರಿದ ಅನಿವಾಸಿ ಕನ್ನಡಿಗ ಕೆ.ಆರ್.ಶ್ರೀನಾಥ್

ʼಗ್ಲೋಬಲ್‌ ಕನ್ನಡಿಗʼಗೆ ಶುಭಕೋರಿದ ಅನಿವಾಸಿ ಕನ್ನಡಿಗ ಕೆ.ಆರ್.ಶ್ರೀನಾಥ್

ವಾರ್ತಾಭಾರತಿ ಸುದ್ದಿ ಸಂಸ್ಥೆಯು ಅನಿವಾಸಿ ಕನ್ನಡಿಗರಿಗಾಗಿಯೇ ಜಾಗತಿಕ ವೇದಿಕೆಯಾಗಿ ‘globalkannadiga.com’ ವೆಬ್ ಸೈಟ್ ಪ್ರಾರಂಭಿಸುತ್ತಿರುವುದು ಅತಿ ಸಂತೋಷದ ಸಮಾಚಾರ. ಇದು ಕನ್ನಡ ಪತ್ರಿಕೋದ್ಯಮದಲ್ಲಿ ವಿನೂತನ ಪ್ರಯತ್ನ.

‘ವಾರ್ತಾಭಾರತಿ’ ಕನ್ನಡ ದಿನಪತ್ರಿಕೆ ಕರ್ನಾಟಕದ ಜನಪ್ರಿಯ ಪತ್ರಿಕೆಗಳಲ್ಲೊಂದು.  ಪ್ರತಿದಿನದ ತತ್ ಕ್ಷಣದ ಸುದ್ದಿಯನ್ನು Varthabharati.in ನಲ್ಲಿ ಕನ್ನಡದಲ್ಲಿ ಓದಬಹುದು. ಯೂಟ್ಯೂಬ್ ನಲ್ಲೂ ವಾರ್ತಾಭಾರತಿ ಚಾನಲ್ ನಲ್ಲಿ ವೀಡಿಯೊಗಳನ್ನು ನೋಡಬಹುದು. ಇಂಗ್ಲಿಷ್ ಭಾಷೆಯಲ್ಲಿ english.varthabharati.in ನಲ್ಲಿ ಓದಬಹುದು.

ಜಾಗತೀಕರಣ ಪ್ರಪಂಚದಲ್ಲಿ ತಮ್ಮ ವೃತ್ತಿ ಹಾಗೂ ವ್ಯಾಪಾರಗಳನ್ನು ಅರಸಿ ಅಸಂಖ್ಯಾತ ಕನ್ನಡಿಗರು ಇಂದು ವಿದೇಶಗಳಲ್ಲಿ ನೆಲಸಿದ್ದಾರೆ. ಅವರೆಲ್ಲರಿಗೂ ಎಂದೆಂದೂ ತಮ್ಮ ಮಾತೃಭಾಷೆ ಹಾಗೂ ತಾಯ್ನಾಡಿನ ಮೇಲಿನ ಪ್ರೇಮ ಪ್ರತಿಕ್ಷಣವೂ ಮಿಡಿಯುತ್ತಿರುತ್ತದೆ. ಇಂತಹ ಅನಿವಾಸಿ ಕನ್ನಡಿಗರ ಹಂಬಲವನ್ನು ಒಂದೇ ವೇದಿಕೆಯಲ್ಲಿ ಹಂಚಿಕೊಳ್ಳಲು globalkannadiga.com ವೆಬ್ ಸೈಟ್ ಕೊಂಡಿಯಾಗಲಿದೆ.

ಅಮೇರಿಕಾದ ಅಟ್ಲಾಂಟ ನಗರದ ಬಹು ವರ್ಷದ ನಿವಾಸಿಯಾಗಿ ಹಾಗೂ ವಾರ್ತಾಭಾರತಿಯ ಪ್ರಾರಂಭದ ದಿನಗಳಿಂದಲೂ ಓದುಗನಾಗಿ ನಾನು globalkannadiga.com ವೆಬ್ ಸೈಟ್ ಪ್ರಾರಂಭಕ್ಕೆ ನನ್ನ ಹೃತ್ಪೂರ್ವಕ ಶುಭಕಾಮನೆಗಳನ್ನು ಹರಸುತ್ತಿದ್ದೇನೆ. ನಿಮ್ಮ ಈ ಹೊಸ ಪ್ರಯತ್ನ ಅನಿವಾಸಿ ಕನ್ನಡಿಗರ ಮುಖವಾಣಿಯಾಗಲೆಂದು ಕೋರುತ್ತಿದ್ದೇನೆ.

ಕೆ.ಆರ್.ಶ್ರೀನಾಥ್

ಅಟ್ಲಾಂಟ, ಯು ಎಸ್ ಎ

Hot this week

ಬ್ಯಾರೀಸ್ ಕಲ್ಚರಲ್ ಫೋರಮ್ (ಬಿಸಿಎಫ್) ವಾರ್ಷಿಕ ಮಹಾಸಭೆ

ದುಬೈ: ಬ್ಯಾರೀಸ್ ಕಲ್ಚರಲ್ ಫೋರಮ್ (ಬಿಸಿಎಫ್) ಇದರ 28ನೇ ವಾರ್ಷಿಕ ಮಹಾಸಭೆ...

ದುಬೈಯಲ್ಲಿ ಕನ್ನಡ ಭಾಷೆಯನ್ನು ಎತ್ತಿ ಹಿಡಿದ ಕ್ರಿಯಾತ್ಮಕ ಕಲಾ ನಿರ್ದೇಶಕ ಬಿ.ಕೆ.ಗಣೇಶ್ ರೈ

ಜಗತ್ತಿನ ನಾನಾ ಮೂಲೆಗಳಲ್ಲಿ ನೆಲೆಸಿರುವ ಕನ್ನಡಿಗರು ಕನ್ನಡ ನಾಡು-ನುಡಿ, ಸಂಸ್ಕೃತಿ, ಪರಂಪರೆಗಾಗಿ...

ಜರ್ಮನಿ; ನಾಟ್ಯಫೆಸ್ಟ್ 2026: ಸಂಸ್ಕೃತಿ ಮತ್ತು ಸೃಜನಾತ್ಮಕತೆಯ ರಂಜಕ ವೇದಿಕೆ

ಫ್ರಾಂಕ್‌ಫರ್ಟ್‌ (ಜರ್ಮನಿ): ಇತ್ತೀಚೆಗೆ ಮ್ಯೂನಿಕ್‌ನ ಐನ್‌ಸ್ಟೈನ್ ಕಲ್ಚರ್ ವೇದಿಕೆ ನಾಟ್ಯಫೆಸ್ಟ್ 2026...

ಕರ್ನಾಟಕ ಸಂಘ ಖತರ್‌ನಿಂದ ಯಶಸ್ವಿಯಾಗಿ ನಡೆದ ರಕ್ತದಾನ ಶಿಬಿರ

ದೋಹಾ(ಖತರ್‌): ಭಾರತೀಯ ಸಾಂಸ್ಕೃತಿಕ ಕೇಂದ್ರ (ICC) ಹಾಗೂ ಭಾರತೀಯ ರಾಯಭಾರ ಕಚೇರಿ...

ಜರ್ಮನಿಯಲ್ಲಿ ಅದ್ಧೂರಿಯಾಗಿ ನೆರವೇರಿದ ಜಾನಪದ ವೈಭವ; ಸಂಸ್ಕೃತಿಯ ಗತ ವೈಭವ ಸೃಷ್ಟಿ

ಜರ್ಮನಿ: ರೈನ್ ಮೈನ್ ಕನ್ನಡ ಸಂಘದಿಂದ ಇದೇ ಮೊದಲ ಬಾರಿಗೆ ಶನಿವಾರ...

Related Articles

Popular Categories