ಯುಎಇ'ಅನಿವಾಸಿಗಳ ಕಾರ್ಯಕ್ರಮಕ್ಕೆ, ಸಾಧನಶೀಲರ ಪರಿಚಯಕ್ಕೆ, ಕಾರ್ಮಿಕರ ಸುಖ ದುಃಖಗಳಿಗೆ...

‘ಅನಿವಾಸಿಗಳ ಕಾರ್ಯಕ್ರಮಕ್ಕೆ, ಸಾಧನಶೀಲರ ಪರಿಚಯಕ್ಕೆ, ಕಾರ್ಮಿಕರ ಸುಖ ದುಃಖಗಳಿಗೆ ವೇದಿಕೆಯಾಗಲಿ’

globalkannadiga.comಗೆ ಇರ್ಷಾದ್ ಮೂಡಬಿದ್ರೆ ಶುಭ ಹಾರೈಕೆ

ಹೊಸ ಪ್ರಯೋಗ…
ಇಂದು ಸಮಸ್ತ ಗಲ್ಫ್ ವಾಸಿಗಳ ಹೆಚ್ಚಿನ ಮೊಬೈಲ್’ಗಳನ್ನು ಅವಲೋಕಿಸಿದರೆ ಅದರಲ್ಲಿ ಕಾಣಸಿಗುವ ಪತ್ರಿಕೆ ಎಂದರೆ ವಾರ್ತಾ ಭಾರತಿ. ಮುಂಜಾನೆ ನಾವು ಎದ್ದೇಳುವ ಮುನ್ನವೇ ಬಿಸಿಬಿಸಿ ಚಹಾದಂತೆ ಸಿದ್ಧವಾಗಿರುವ ಈ ಪತ್ರಿಕೆಯು ಎಲ್ಲರಿಗೂ ಅಚ್ಚುಮೆಚ್ಚು. ಊರಿನ, ರಾಜ್ಯದ, ದೇಶ-ವಿದೇಶಗಳ ಸುದ್ದಿಯನ್ನು ಇಡೀ ದಿನ ಬಿತ್ತರಿಸುವ ಅದು ಎಲ್ಲರ ಆಪ್ತ ಸಂಗಾತಿ. ಆಗಾಗ ‘ವಿಬಿ'(ವಾರ್ತಾ ಭಾರತಿ) ಮೇಲೆ ಕಣ್ಣಾಡಿಸದಿದ್ದರೆ ಸಮಾಧಾನವೇ ಇಲ್ಲ. ಈಗ ಒಂದು ಹೆಜ್ಜೆ ಮುಂದಿಟ್ಟಿರುವ ಅದು ಕನ್ನಡಿಗರಿಗಾಗಿ globalkannadiga.com ಎಂಬ ಹೊಸ ವೆಬ್ ಸೈಟನ್ನು ಆರಂಭಿಸುವ ಸಿಹಿ ಸುದ್ದಿಯನ್ನು ನೀಡಿದೆ. ಆರಂಭದ ದಿನಗಳಿಂದಲೇ ಅದು ವಿದೇಶ ಭಾಗದಲ್ಲಿ ಗಲ್ಫ್ ರಾಷ್ಟ್ರಗಳ ಮುಖ್ಯ ಸುದ್ದಿಗಳಿಗೆ ಪ್ರಾಮುಖ್ಯತೆ ನೀಡುತ್ತಾ ಇತ್ತು. ಅಂದಿನ ದಿನಗಳಲ್ಲಿ ಅದು ಯಾವ ಪತ್ರಿಕೆಯು ಮಾಡದ ಹೊಸ ಹಾಗು ಉಪಯುಕ್ತ ಪ್ರಯೋಗವಾಗಿತ್ತು. ಇದರಿಂದ ನಾಡಿನ ಜನತೆಗೆ ಹಲವು ವಿಚಾರಗಳು ತಿಳಿಯುವ ಅವಕಾಶ ದೊರೆಯಿತು. ಮುಂದೆ ಗಲ್ಫ್ ನಾಡಿನ ಅನಿವಾಸಿಗಳ ಆಗುಹೋಗುಗಳ ಕುರಿತಾಗಿ ದುಬೈಯಿಂದ ನಾನು ಅದರಲ್ಲಿ ‘ಮರಳ ಹೆಜ್ಜೆಗಳು’ ಎನ್ನುವ ಅಂಕಣವನ್ನೂ ಬರೆಯುತ್ತಿದ್ದೆ. ಈಗ ಜಗತ್ತಿನಾದ್ಯಂತ ಇರುವ ಸಮಸ್ತ ಅನಿವಾಸಿ ಕನ್ನಡಿಗರಿಗೆ ಹೊಸ ವೇದಿಕೆ ನೀಡುವ globalkannadiga.com ವೆಬ್ ಸೈಟ್ ಬರಲಿದೆ ಎಂದು ಕೇಳಿದೆ. ತುಂಬಾ ಸಂತೋಷಕರ ಸುದ್ದಿ. ಇದು ಅನಿವಾಸಿಗಳ ಕಾರ್ಯಕ್ರಮಗಳಿಗೆ, ಸಾಧನಶೀಲರ ಪರಿಚಯಕ್ಕೆ, ಕಾರ್ಮಿಕರ ಸುಖ ದುಃಖಗಳಿಗೆ, ಸಭೆ-ಸಮಾರಂಭಗಳ ಮುನ್ನೋಟಕ್ಕೆ ವೇದಿಕೆಯಾಗಲಿ. ವಿಬಿ ಇದರಲ್ಲೂ ಜಾಗತಿಕ ಯಶಸ್ಸು ಕಾಣಲಿ, ಎಲ್ಲರ ಮನಸ್ಸು ಗೆಲ್ಲಲಿ, ನನ್ನ ಶುಭ ಹಾರೈಕೆಗಳು.

ಇರ್ಷಾದ್ ಮೂಡಬಿದ್ರೆ ದುಬೈ,(ಬರಹಗಾರ)

Hot this week

ಅಜ್ಮಾನ್; ತುಂಬೆ ಸಮೂಹ ಸಂಸ್ಥೆಯಿಂದ BCF ಅಧ್ಯಕ್ಷ ಡಾ.ಬಿ.ಕೆ.ಯೂಸುಫ್​ಗೆ ʼLIFE TIME ACHIEVEMENT AWARDʼ

ಅಜ್ಮಾನ್: ತುಂಬೆ ಸಂಸ್ಥೆಯ 28ನೇ ವಾರ್ಷಿಕ ಅನಿವಾಸಿ ಕನ್ನಡಿಗರ ಸ್ನೇಹ ಸಮ್ಮಿಳನ...

ದುಬೈ; ‘ಬದ್ರಿಯಾ ಪ್ರೀಮಿಯರ್ ಲೀಗ್(BPL)-ಸೀಸನ್ 8’; ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಅಲ್ ದನಾ XI ತಂಡ; ರಾಯಲ್ ಥಂಡರ್ ಕುಡ್ಲ ರನ್ನರ್ ಅಪ್

ದುಬೈ: ಅನಿವಾಸಿ ಕನ್ನಡಿಗರ ಸಾಮಾಜಿಕ ಸಂಘಟನೆಯಾದ ‘ಬದ್ರಿಯಾ ಫ್ರೆಂಡ್ಸ್ ಯುಎಇ’ ಆಶ್ರಯದಲ್ಲಿ...

ಶೀಘ್ರವೇ ಅನಿವಾಸಿ ಕನ್ನಡಿಗರಿಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪನೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ

ಬೆಳಗಾವಿ: ಅನಿವಾಸಿ ಕನ್ನಡಿಗರ ಬಹುಕಾಲದ ಅತ್ಯಂತ ಪ್ರಮುಖ ಬೇಡಿಕೆಯಾಗಿರುವ ಪ್ರತ್ಯೇಕ ಸಚಿವಾಲಯವನ್ನು...

ಡಿ.12ರಂದು ಬಹರೈನ್ ಕನ್ನಡ ಸಂಘದಿಂದ ‘ಕನ್ನಡ ವೈಭವ’ ಸಾಂಸ್ಕೃತಿಕ ಕಾರ್ಯಕ್ರಮ; ಮುತ್ತುಗಳ ದ್ವೀಪದಲ್ಲಿ ಹಾಡು, ಹಾಸ್ಯ, ನೃತ್ಯಗಳ ಮಹಾ ಸಂಗಮ

ಬಹರೈನ್: ಇಲ್ಲಿನ ರಾಜ್ಯಪ್ರಶಸ್ತಿ ಪುರಸ್ಕೃತ ಕನ್ನಡ ಸಂಘದ ವಾರ್ಷಿಕ ಕಾರ್ಯಕ್ರಮವಾದ "ಕನ್ನಡ...

Related Articles

Popular Categories