Lead Newsಗಾಝಾ ಮಕ್ಕಳ ನರಮೇಧವನ್ನು ಕಟುವಾಗಿ ಖಂಡಿಸಿದ ಪೋಪ್‌ ಫ್ರಾನ್ಸಿಸ್‌

ಗಾಝಾ ಮಕ್ಕಳ ನರಮೇಧವನ್ನು ಕಟುವಾಗಿ ಖಂಡಿಸಿದ ಪೋಪ್‌ ಫ್ರಾನ್ಸಿಸ್‌

ವ್ಯಾಟಿಕನ್‌ ಸಿಟಿ: ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಿಂದಾಗಿ ಒಂದೇ ಕುಟುಂಬದ ಏಳು ಮಕ್ಕಳು ಮರಣ ಹೊಂದಿದ್ದಾರೆ ಎಂದು ಗಾಝಾದ ರಕ್ಷಣಾ ಸಂಸ್ಥೆಯೊಂದು ಹೇಳಿಕೆ ನೀಡಿದ ಒಂದು ದಿನದ ಬಳಿಕ ಈ ದಾಳಿಯನ್ನು ಕ್ರೈಸ್ತರ ಪರಮೋಚ್ಛ ನಾಯಕ ಪೋಪ್‌ ಫ್ರಾನ್ಸಿಸ್‌ ಕಟುವಾಗಿ ಖಂಡಿಸಿದ್ದಾರೆ. ಇದೊಂದು ಕ್ರೌರ್ಯವಾಗಿದೆ ಎಂದು ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇಸ್ರೇಲಿ ವೈಮಾನಿಕ ದಾಳಿಯು ಶುಕ್ರವಾರ ಗಾಝಾದ ಉತ್ತರ ಭಾಗದಲ್ಲಿ ಏಳು ಮಕ್ಕಳು ಸೇರಿದಂತೆ ಒಂದು ಕುಟುಂಬದ 10 ಸದಸ್ಯರನ್ನು ಕೊಂದಿದೆ ಎಂದು ಗಾಝಾ ನಾಗರಿಕ ರಕ್ಷಣಾ ಸಂಸ್ಥೆಯು ವರದಿಯಲ್ಲಿ ತಿಳಿಸಿದೆ.

“ನಿನ್ನೆ ಅವರು ಈ ಹಿಂದೆ ವಾಗ್ದಾನ ಮಾಡಿದಂತೆ ಜನರನ್ನು ಗಾಝಾಕ್ಕೆ ಅನುಮತಿಸಲಿಲ್ಲ ಮಾತ್ರವಲ್ಲದೇ ಅವರು ಮಕ್ಕಳ ಮೇಲೆ ಬಾಂಬ್‌ ದಾಳಿ ನಡೆಸಿದ್ದಾರೆ. ಇದು ಯುದ್ಧವಲ್ಲ ಕ್ರೌರ್ಯ” ಎಂದು ಹೇಳಿದ ಪೋಪ್‌ ಫ್ರಾನ್ಸಿಸ್‌, “ಇದು ನನ್ನ ಹೃದಯವನ್ನು ಚುಚ್ಚುತ್ತದೆ, ಆದ್ದರಿಂದ ಈ ಮಾತನ್ನು ನಾನು ಹೇಳುತ್ತಿದ್ದೇನೆ” ಎಂದೂ ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.

ಇಸ್ರೇಲ್‌ ಸೈನ್ಯ ಮತ್ತು ಫ್ಯಾಲೆಸ್ತೀನ್‌ ನ ಹಮಾಸ್‌ ನಡುವೆ ಕದನ ವಿರಾಮ ತರುವ ಕುರಿತಾದಂತೆ ಹಲವು ಅಂತಾರಾಷ್ಟ್ರೀಯ ಮಧ್ಯವರ್ತಿಗಳು ಮಾತುಕತೆಗಳನ್ನು ನಡೆಸುತ್ತಿರುವ ಮಧ್ಯೆಯೇ ಈ ಬಾಂಬ್‌ ದಾಳಿ ನಡೆದಿದೆ.

Hot this week

ಜರ್ಮನಿ; ನಾಟ್ಯಫೆಸ್ಟ್ 2026: ಸಂಸ್ಕೃತಿ ಮತ್ತು ಸೃಜನಾತ್ಮಕತೆಯ ರಂಜಕ ವೇದಿಕೆ

ಫ್ರಾಂಕ್‌ಫರ್ಟ್‌ (ಜರ್ಮನಿ): ಇತ್ತೀಚೆಗೆ ಮ್ಯೂನಿಕ್‌ನ ಐನ್‌ಸ್ಟೈನ್ ಕಲ್ಚರ್ ವೇದಿಕೆ ನಾಟ್ಯಫೆಸ್ಟ್ 2026...

ಕರ್ನಾಟಕ ಸಂಘ ಖತರ್‌ನಿಂದ ಯಶಸ್ವಿಯಾಗಿ ನಡೆದ ರಕ್ತದಾನ ಶಿಬಿರ

ದೋಹಾ(ಖತರ್‌): ಭಾರತೀಯ ಸಾಂಸ್ಕೃತಿಕ ಕೇಂದ್ರ (ICC) ಹಾಗೂ ಭಾರತೀಯ ರಾಯಭಾರ ಕಚೇರಿ...

ಜರ್ಮನಿಯಲ್ಲಿ ಅದ್ಧೂರಿಯಾಗಿ ನೆರವೇರಿದ ಜಾನಪದ ವೈಭವ; ಸಂಸ್ಕೃತಿಯ ಗತ ವೈಭವ ಸೃಷ್ಟಿ

ಜರ್ಮನಿ: ರೈನ್ ಮೈನ್ ಕನ್ನಡ ಸಂಘದಿಂದ ಇದೇ ಮೊದಲ ಬಾರಿಗೆ ಶನಿವಾರ...

ಕನ್ನಡ ಸಂಘ ಬಹರೈನ್‌ನಿಂದ ಆರೋಗ್ಯ ದಿನ; ಉಚಿತ ವೈದ್ಯಕೀಯ ಶಿಬಿರ

ಬಹರೈನ್: ಕನ್ನಡ ಸಂಘ ಬಹರೈನ್ ವತಿಯಿಂದ ಅಲ್ ಹಿಲಾಲ್ ಹೆಲ್ತ್ ಕೇರ್...

ಕರ್ನಾಟಕ ಸಂಘ ಖತರ್‌ಗೆ ನೂತನ ಆಡಳಿತ ಸಮಿತಿ ಆಯ್ಕೆ; 2026–2028 ಅವಧಿಗೆ 15ನೇ ಅಧ್ಯಕ್ಷರಾಗಿ ಸುಬ್ರಮಣ್ಯ ಹೆಬ್ಬಾಗಿಲು ಅವಿರೋಧ ಆಯ್ಕೆ

ದೋಹಾ: ಭಾರತೀಯ ಸಾಂಸ್ಕೃತಿಕ ಕೇಂದ್ರ (ICC) ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಮುಖ ಭಾರತೀಯ...

Related Articles

Popular Categories