ಬಹರೈನ್ಬಹರೈನ್ ಕನ್ನಡ ಸಂಘದಿಂದ 79ನೇ ಸ್ವಾತಂತ್ರ್ಯ ದಿನಾಚರಣೆ

ಬಹರೈನ್ ಕನ್ನಡ ಸಂಘದಿಂದ 79ನೇ ಸ್ವಾತಂತ್ರ್ಯ ದಿನಾಚರಣೆ

ಬಹರೈನ್: ಭಾರತದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಗಸ್ಟ್ 15ರಂದು ಬೆಳಗ್ಗೆ 8:30ಕ್ಕೆ ಮನಾಮದ ಕನ್ನಡ ಭವನ ಸಮುಚ್ಛಯದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.

ಕಾರ್ಯಕ್ರಮವು ಸಂಘದ ಅಧ್ಯಕ್ಷ ಅಜಿತ್ ಬಂಗೇರ ಅವರು ಧ್ವಜಾರೋಹಣ ಮಾಡುವುದರ ಮೂಲಕ ಆರಂಭಗೊಂಡಿತು. ನಂತರ ಉಪಾಧ್ಯಕ್ಷರು ನಿತಿನ್ ಶೆಟ್ಟಿ ಅವರು ಬಹರೈನ್ ರಾಷ್ಟ್ರಧ್ವಜರೋಹಣಗೈದರು. ನೆರೆದಿದ್ದ ನೂರಾರು ಸದಸ್ಯರು ಧ್ವಜಕ್ಕೆ ವಂದನೆ ಸಲ್ಲಿಸಿ, ರಾಷ್ಟ್ರಗೀತೆಯನ್ನು ಹಾಡಿದರು.
ಸಮಾರಂಭದ ಅತಿಥಿಗಳಾಗಿ ಜಯಶಂಕರ್, ಮೊಹಮ್ಮದ್ ಮನ್ಸೂರ್, ಸಿಎ ಅಜಯ್, ನಿಕಟಪೂರ್ವ ಅಧ್ಯಕ್ಷ ಅಮರನಾಥ ರೈ ಹಾಗೂ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದು, ಸ್ವಾತಂತ್ರ್ಯ ದಿನದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಅಧ್ಯಕ್ಷ ಅಜಿತ್ ಬಂಗೇರ ಅವರು ಸ್ವಾತಂತ್ರ್ಯ ದಿನದ ಸಂದೇಶ ನೀಡಿದರು.

ಸ್ವಾತಂತ್ರ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳ ಭಾಗವಾಗಿ ಕನ್ನಡ ಭವನ ಸಭಾಂಗಣದಲ್ಲಿ ವಿಶೇಷ ಛದ್ಮವೇಷ ಸ್ಪರ್ಧೆ ಮತ್ತು ಸಂಘದ ಸದಸ್ಯರ ಪರಿವಾರದಿಂದ ಮನರಂಜನಾತ್ಮಕ ನೃತ್ಯ ಪ್ರದರ್ಶನ ನಡೆಯಿತು.

ಛದ್ಮವೇಷ ಸ್ಪರ್ಧೆಯ ಫಲಿತಾಂಶ
ವರ್ಗ A (1–4 ವಯಸ್ಸು)
ಪ್ರಥಮ: ಜೈಶ್ನಿ ಜಯರಾಜ್
ದ್ವಿತೀಯ: ಸಾಯಂಶ್ ರೂಪೇಶ್
ತೃತೀಯ: ಮೇಗನ್ ಮ್ಯಾಥ್ಯೂ

ವರ್ಗ B (4–8 ವಯಸ್ಸು)
ಪ್ರಥಮ: ರಿದ್ಧಿ ನಿತೇಶ್ ಶೆಟ್ಟಿ
ದ್ವಿತೀಯ: ಶೌರ್ಯ ಪ್ರವೀಣ್ ಶೆಟ್ಟಿ
ತೃತೀಯ: ಆಯಾನ್ ಸತೀಶ್ ಶೆಟ್ಟಿ

ವರ್ಗ C (8–15 ವಯಸ್ಸು)
ಪ್ರಥಮ: ಪ್ರಕೃತಿ ಗೋಪಾಲ್ ಶೆಟ್ಟಿ
ದ್ವಿತೀಯ: ಶ್ರೇಯಾ ಹರೀಶ್ ಗೌಡ
ತೃತೀಯ: ಕ್ಷಿತಿ ಸುನಿಲ್

ಸೌರವ್ ರಾಕೇಶ್ ಹಾಗೂ ಫೆಲ್ಸಿ ಫಿಲೊಮೇನಾ ಫರ್ನಾಂಡಿಸ್ ತೀರ್ಪುಗಾರರಾಗಿ ಸಹಕರಿಸಿದರು. ಈ ವೇಳೆ ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದ ಅಂತ್ಯದಲ್ಲಿ ರುಚಿಕರ ಉಪಹಾರ ಮತ್ತು ಸಿಹಿತಿಂಡಿಗಳನ್ನು ಎಲ್ಲರಿಗೂ ನೀಡಲಾಯಿತು. ಕಾರ್ಯಕ್ರಮವನ್ನು ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಹರಿಣಿ ಶೆಟ್ಟಿ, ಸಾಂಸ್ಕೃತಿಕ ಜೊತೆ ಕಾರ್ಯದರ್ಶಿ ಹರೀಶ್ ಗೌಡ ಮತ್ತು ಪ್ರಭಾರ ಕಾರ್ಯದರ್ಶಿ ಹರಿನಾಥ್ ಸುವರ್ಣ ಅವರ ಸಮನ್ವಯದಲ್ಲಿ ಯಶಸ್ವಿಯಾಗಿ ನೆರವೇರಿಸಲಾಯಿತು.

Hot this week

ಕುವೈತ್‌ನ ನೇರಂಬಳ್ಳಿ ಸುರೇಶ್ ರಾವ್​​ಗೆ ‘ಸಮಾಜ ಸೇವಾ ರತ್ನ ಪ್ರಶಸ್ತಿ–2026’

ಕುವೈತ್: ಸಂಘಟಕ, ಕಲಾವಿದ, ಲೇಖಕ, ಸಮಾಜಸೇವಕ, ಕೋವಿಡ್ ವಾರಿಯರ್ ಆಗಿ ಸೇವೆ...

ದುಬೈನಲ್ಲಿ ಫೆಬ್ರವರಿ 22ರಂದು ‘ಯುಎಇ ಬಂಟ್ಸ್’ನಿಂದ ವಾರ್ಷಿಕ ‘ಸ್ಪೋರ್ಟ್ಸ್ ಡೇ-2026’

ದುಬೈ: ಯುಎಇ ಬಂಟ್ಸ್ ನ ವಾರ್ಷಿಕ "ಸ್ಪೋರ್ಟ್ಸ್ ಡೇ-2026" ಫೆಬ್ರವರಿ 22ರಂದು...

Moolur Jumma Masjid representatives felicitated in Dubai; community backs renovation project

Dubai: Representatives of the historic Moolur Jumma Masjid were...

Related Articles

Popular Categories