ಯುಎಸ್‌ಎಫ್ಲೋರಿಡಾದ ಟಲ್ಲಾಹಾಸ್ಸಿಯಲ್ಲಿ ದೀಪಾವಳಿ ಹಬ್ಬ ಆಚರಣೆ; ಶ್ರಿಗಂಧ ಕನ್ನಡ...

ಫ್ಲೋರಿಡಾದ ಟಲ್ಲಾಹಾಸ್ಸಿಯಲ್ಲಿ ದೀಪಾವಳಿ ಹಬ್ಬ ಆಚರಣೆ; ಶ್ರಿಗಂಧ ಕನ್ನಡ ಕೂಟದ ಪದಾಧಿಕಾರಿಗಳು ಭಾಗಿ

ಬೆಂಕಿ ಬಸಣ್ಣ, ನ್ಯೂಯಾರ್ಕ್‌

ಫ್ಲೋರಿಡಾ: ಅಮೆರಿಕದ ಫ್ಲೋರಿಡಾ ರಾಜ್ಯದ ರಾಜಧಾನಿ ಟಲ್ಲಾಹಾಸ್ಸಿಯಲ್ಲಿ ಸರಕಾರದ ಮಟ್ಟದಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಲಾಯಿತು.

ಟಲ್ಲಾಹಾಸ್ಸಿಯಲ್ಲಿರುವ ರಾಜ್ಯ ವಿಧಾನಸಭಾ ಭವನದಲ್ಲಿ ಮೊದಲ ಬಾರಿಗೆ ಆಯೋಜಿಸಲಾದ ದೀಪಾವಳಿ ಆಚರಣೆಯಲ್ಲಿ ಶಿಕ್ಷಣ ವಿಭಾಗದ ಕೌನ್ಸಲ್ ಹಾಗೂ ದೂತಾವಾಸದ ಆಡಳಿತ ವಿಭಾಗದ ಮುಖ್ಯಸ್ಥರು ಭಾಗವಹಿಸಿದ್ದರು.

ರಾಜ್ಯದಲ್ಲಿ ಆಯ್ಕೆಯಾದ ಶಾಸಕರು, ಅಧಿಕಾರಿಗಳು, ಗಣ್ಯರು ಹಾಗೂ ಭಾರತೀಯ ವಲಸಿಗ ಸಮುದಾಯದ ಪ್ರಮುಖ ಸದಸ್ಯರು, ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಈ ಬೆಳಕಿನ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಫ್ಲೋರಿಡಾ ರಾಜ್ಯ ಸೆನೇಟರ್ ಫೆಂಟ್ರಿಸ್ ಡ್ರಿಸ್ಕೆಲ್ ಅವರ ಮಾರ್ಗದರ್ಶನದಲ್ಲಿ ನಡೆದ ಈ ದೀಪಾವಳಿ ಆಚರಣೆಯಲ್ಲಿ ಟಾಂಪ ಶ್ರಿಗಂಧ ಕನ್ನಡ ಕೂಟದ ಚೇರ್ಮ್ಯಾನ್, ಪದಾಧಿಕಾರಿಗಳು, ಸದಸ್ಯರು ಕನ್ನಡ ಸಮುದಾಯದ ಪರವಾಗಿ ಭಾಗವಹಿಸಿ, ಬೆಳಕಿನ ಹಬ್ಬದ ದೀಪ ಬೆಳಗಿಸುವ ಮೂಲಕ ಸಂಭ್ರಮಿಸಿದರು. ಚೇರ್ಮ್ಯಾನ್ ಪದ್ಮನಾಭ ಬೇಡರಹಳ್ಳಿ, ಟ್ರಸ್ಟಿ ಗಂಗಾಧರ ಗಂಗಾ, ಉಪಾಧ್ಯಕ್ಷ ಹರ್ಷಿತ್ ಗೌಡ, ವೀಣಾ ಗೌಡ, ರೂಪಾ ಗಂಗಾಧರ, ನವನೀತಾ ಗೌಡ ಪಾಲ್ಗೊಂಡಿದ್ದರು.

ಫ್ಲೋರಿಡಾ ರಾಜಧಾನಿಯ ಉನ್ನತ ಸಾಂಸ್ಥಿಕ ಕೇಂದ್ರದಲ್ಲಿ ಆಯೋಜಿಸಲಾಗದ ದೀಪಾವಳಿ ಆಚರಣೆಯು ದಶಕಗಳ ಹಿಂದಿನಿಂದ ಅಮೇರಿಕದಲ್ಲಿ ಬೆಳೆದು ಬಂದ ಭಾರತೀಯ ಸಮುದಾಯದ ದುಡಿಮೆ, ಕೊಡುಗೆ ಮತ್ತು ನಿಷ್ಠೆಗೆ ನೀಡಲಾದ ಗೌರವವಾಗಿದ್ದು, ನಮ್ಮ ಅಸ್ತಿತ್ವಕ್ಕೆ ದೊರೆತ ಘನತೆಯ ಸಂಕೇತವಾಗಿದೆ ಎಂದು ಅನಿವಾಸಿ ಕನ್ನಡಿಗರು ಈ ವೇಳೆ ಸಂತಸ ವ್ಯಕ್ತಪಡಿಸಿದ್ದಾರೆ.

Hot this week

ಜರ್ಮನಿ; ನಾಟ್ಯಫೆಸ್ಟ್ 2026: ಸಂಸ್ಕೃತಿ ಮತ್ತು ಸೃಜನಾತ್ಮಕತೆಯ ರಂಜಕ ವೇದಿಕೆ

ಫ್ರಾಂಕ್‌ಫರ್ಟ್‌ (ಜರ್ಮನಿ): ಇತ್ತೀಚೆಗೆ ಮ್ಯೂನಿಕ್‌ನ ಐನ್‌ಸ್ಟೈನ್ ಕಲ್ಚರ್ ವೇದಿಕೆ ನಾಟ್ಯಫೆಸ್ಟ್ 2026...

ಕರ್ನಾಟಕ ಸಂಘ ಖತರ್‌ನಿಂದ ಯಶಸ್ವಿಯಾಗಿ ನಡೆದ ರಕ್ತದಾನ ಶಿಬಿರ

ದೋಹಾ(ಖತರ್‌): ಭಾರತೀಯ ಸಾಂಸ್ಕೃತಿಕ ಕೇಂದ್ರ (ICC) ಹಾಗೂ ಭಾರತೀಯ ರಾಯಭಾರ ಕಚೇರಿ...

ಜರ್ಮನಿಯಲ್ಲಿ ಅದ್ಧೂರಿಯಾಗಿ ನೆರವೇರಿದ ಜಾನಪದ ವೈಭವ; ಸಂಸ್ಕೃತಿಯ ಗತ ವೈಭವ ಸೃಷ್ಟಿ

ಜರ್ಮನಿ: ರೈನ್ ಮೈನ್ ಕನ್ನಡ ಸಂಘದಿಂದ ಇದೇ ಮೊದಲ ಬಾರಿಗೆ ಶನಿವಾರ...

ಕನ್ನಡ ಸಂಘ ಬಹರೈನ್‌ನಿಂದ ಆರೋಗ್ಯ ದಿನ; ಉಚಿತ ವೈದ್ಯಕೀಯ ಶಿಬಿರ

ಬಹರೈನ್: ಕನ್ನಡ ಸಂಘ ಬಹರೈನ್ ವತಿಯಿಂದ ಅಲ್ ಹಿಲಾಲ್ ಹೆಲ್ತ್ ಕೇರ್...

ಕರ್ನಾಟಕ ಸಂಘ ಖತರ್‌ಗೆ ನೂತನ ಆಡಳಿತ ಸಮಿತಿ ಆಯ್ಕೆ; 2026–2028 ಅವಧಿಗೆ 15ನೇ ಅಧ್ಯಕ್ಷರಾಗಿ ಸುಬ್ರಮಣ್ಯ ಹೆಬ್ಬಾಗಿಲು ಅವಿರೋಧ ಆಯ್ಕೆ

ದೋಹಾ: ಭಾರತೀಯ ಸಾಂಸ್ಕೃತಿಕ ಕೇಂದ್ರ (ICC) ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಮುಖ ಭಾರತೀಯ...

Related Articles

Popular Categories