ಯುಎಇಯುಎಇ ಕುಲಾಲ ಫ್ಯಾಮಿಲಿಯಿಂದ ಶ್ರೀಸತ್ಯನಾರಾಯಣ ಪೂಜೆ

ಯುಎಇ ಕುಲಾಲ ಫ್ಯಾಮಿಲಿಯಿಂದ ಶ್ರೀಸತ್ಯನಾರಾಯಣ ಪೂಜೆ

ದುಬೈ: ಇಲ್ಲಿನ ಗ್ಲೆಂಡೆಲ್ ಅಂತಾರಾಷ್ಟ್ರೀಯ ಶಾಲಾ ಸಭಾಂಗಣದಲ್ಲಿ ರವಿವಾರ ಸುಬ್ರಹ್ಮಣ್ಯ ಭಟ್ ಹಾಗೂ ಕೆ.ವಿ.ಅಡಿಗ ಇವರ ಪೌರೋಹಿತ್ಯದಲ್ಲಿ ಕುಲಾಲ ಫ್ಯಾಮಿಲಿ ಯುಎಇ ಆಯೋಜನೆಯ ಶ್ರೀ ಸತ್ಯನಾರಾಯಣ ಪೂಜೆ ಸಂಪನ್ನಗೊಂಡಿತು.

ಪದ್ಮರಾಜ್ ಕುಲಾಲ್ ಎಕ್ಕಾರ್ ಇವರ ನೇತ್ರತ್ವದಲ್ಲಿ ಹಾಗೂ ಅವರ ಜೊತೆಗೆ ಕೈ ಜೋಡಿಸಿದ ಕುಲಾಲ ಫ್ಯಾಮಿಲಿ ಅಡ್ಮಿನ್ ಬಳಗ ಆಯೋಜಿಸಿದ ಪೂಜಾ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನೆರವೇರಿತು.

ಕುಲಾಲ ಫ್ಯಾಮಿಲಿಯ ಸುಮಂಗಲಿಯರು, ದೀಪ ಪ್ರಜ್ವಲನೆ ಮಾಡುವ ಮೂಲಕ ಪೂಜಾ ವಿಧಿ ವಿಧಾನಗಳು ಆರಂಭಗೊಂಡಿತು. ಸುಜಾತ ಹಾಗೂ ಕಿರಣ್ ಕುಲಾಲ್ ದಂಪತಿಗಳು ಪೂಜೆಯ ಸಂಕಲ್ಪದಲ್ಲಿ ಪಾಲುಗೊಂಡರು. ಪದ್ಮರಾಜ್ ಎಕ್ಕಾರ್, ರಾಜೇಶ್ ಶೆಣೈ ಹಾಗೂ ಸಚಿನ್ ಕುಲಾಲ್ ‘ಶ್ರೀ ವಿಷ್ಣು ಸಹಸ್ರನಾಮಾವಳಿ’ ಪಠಣ ಮಾಡಿದರು.

ಶ್ರೀ ಓಂ ಶ್ರೀ ಭಕ್ತ ವೃಂದ ಶಾರ್ಜಾ ಇವರಿಂದ ಭಜನೆ ಸಂಕೀರ್ತನೆ ನಡೆಯಿತು. ಕುಲಾಲ ಸಮಾಜದ ಬಾಂಧವರು ನಡೆಸಿಕೊಟ್ಟ ಕುಣಿತ ಭಜನೆ ಸೇರಿದ ಭಕ್ತ ಜನರ ಮೆಚ್ಚುಗೆಗೆ ಪಾತ್ರವಾಯಿತು. ವಿದುಷಿ ಮಧುರಾ ವಿಶ್ವನಾಥ್ ಗಾಯನದ ಮುಖೇನ ನಡೆಸಿಕೊಟ್ಟ ಸತ್ಯನಾರಾಯಣ ದೇವರ ಕಥಾ ಕಾಲಕ್ಷೇಪಕ್ಕೆ ಸೇರಿದ ಭಕ್ತ ಸಮೂಹ ಭಾವ ಪರವಶರಾದರು. ಮಹಾಮಂಗಳಾರತಿ ಬಳಿಕ ದಾನಿಗಳನ್ನು ಗೌರವಿಸಿ, ಶ್ರೀ ದೇವರ ಪ್ರಸಾದ ನೀಡಲಾಯಿತು. ಭಕ್ತಾದಿಗಳು ಎಲ್ಲರೂ ಅನ್ನಸಂತರ್ಪಣೆಯ ಪ್ರಸಾದ ಸ್ವೀಕರಿಸಿ ಸಂತುಷ್ಟರಾದರು. ದುಬೈಯ ಹಲವು ಸಮಾಜದ ಗಣ್ಯರು ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಆರತಿ ಅಡಿಗ ಕಾರ್ಯಕ್ರಮ ನಿರೂಪಿಸಿದರು.

Hot this week

ಕರ್ನಾಟಕ ಸಂಘ ಖತರ್‌ಗೆ ನೂತನ ಆಡಳಿತ ಸಮಿತಿ ಆಯ್ಕೆ; 2026–2028 ಅವಧಿಗೆ 15ನೇ ಅಧ್ಯಕ್ಷರಾಗಿ ಸುಬ್ರಮಣ್ಯ ಹೆಬ್ಬಾಗಿಲು ಅವಿರೋಧ ಆಯ್ಕೆ

ದೋಹಾ: ಭಾರತೀಯ ಸಾಂಸ್ಕೃತಿಕ ಕೇಂದ್ರ (ICC) ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಮುಖ ಭಾರತೀಯ...

ಖತರ್‌ ಕರ್ನಾಟಕ ಸಂಘದಿಂದ ‘ತಾಯಂದಿರ ದಿನ 2026’ ಆಚರಣೆ

ದೋಹಾ(ಖತರ್‌): ಕರ್ನಾಟಕ ಸಂಘ ಖತರ್‌ (KSQ), ಭಾರತೀಯ ಸಾಂಸ್ಕೃತಿಕ ಕೇಂದ್ರ (ICC)...

ಮೇ 15ರಂದು ಬಹರೈನ್ ಕನ್ನಡ ಸಂಘದ ಆಶ್ರಯದಲ್ಲಿ ಉಚಿತ ವೈದ್ಯಕೀಯ ಶಿಬಿರ

ಕನ್ನಡ ಸಂಘ ಬಹರೈನ್ ಆಶ್ರಯದಲ್ಲಿ ಅಲ್ ಹಿಲಾಲ್ ಹೆಲ್ತ್ ಕೇರ್ ಗ್ರೂಪ್...

KCWA holds General Body Meeting in Kuwait, announces major cultural event in December

Kuwait City: Kuwait Canara Welfare Association (KCWA) held its...

ನ್ಯೂಯಾರ್ಕ್; ಆಲ್ಬನಿ ಕನ್ನಡಿಗರಿಂದ ಮಸಾಲ ದೋಸೆ ಬ್ರಂಚ್: ಹಿಂದೂ ದೇವಾಲಯಕ್ಕೆ ಧನ ಸಹಾಯ

ನ್ಯೂಯಾರ್ಕ್ ರಾಜ್ಯದ ರಾಜಧಾನಿ ಅಲ್ಬನಿಯಲ್ಲಿರುವ ಕನ್ನಡಿಗರು, ಇತ್ತೀಚೆಗೆ ಇಲ್ಲಿರುವ ಹಿಂದೂ ದೇವಸ್ಥಾನದಲ್ಲಿ...

Related Articles

Popular Categories